ಜರ್ಮನಿಯ ಉಪ ಪ್ರಧಾನಿ ಭೇಟಿಯಾದ ಪ್ರಲ್ಹಾದ್​ ಜೋಶಿ: ಇಂಧನ ವಲಯದ ಬಗ್ಗೆ ಮಹತ್ವದ ಚರ್ಚೆ

ಜರ್ಮನಿಯ ಉಪ ಪ್ರಧಾನಿ ಹಾಗೂ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆ ಸಚಿವ ಡಾ. ರಾಬರ್ಟ್ ಹಾಬೆಕ್ ಅವರನ್ನು ಇಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಭೇಟಿ ಮಾಡಿ ಸಭೆ ಮಾಡಿದ್ದಾರೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಉಭಯ ದೇಶಗಳ ನಾಯಕರು ಫಲಪ್ರದ ಚರ್ಚೆಯನ್ನು ಮಾಡಿದ್ದಾರೆ.

|

Updated on: Oct 09, 2024 | 6:29 PM

ಜರ್ಮನ್ ಪ್ರವಾಸದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ಇಂದು ಜರ್ಮನಿಯ ಉಪ ಪ್ರಧಾನಿ ಹಾಗೂ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆ ಸಚಿವ ಡಾ. ರಾಬರ್ಟ್ ಹಾಬೆಕ್​ ಅವರನ್ನು ಭೇಟಿ ಮಾಡಿದ್ದಾರೆ.

ಜರ್ಮನ್ ಪ್ರವಾಸದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ಇಂದು ಜರ್ಮನಿಯ ಉಪ ಪ್ರಧಾನಿ ಹಾಗೂ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆ ಸಚಿವ ಡಾ. ರಾಬರ್ಟ್ ಹಾಬೆಕ್​ ಅವರನ್ನು ಭೇಟಿ ಮಾಡಿದ್ದಾರೆ.

1 / 9
ನವೀನ ಮತ್ತು ನವೀಕರಣೀಯ ಊರ್ಜಾ, ಶಕ್ತಿ ಕ್ಷೇತ್ರದಲ್ಲಿ ಉಭಯ ದೇಶಗಳ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ  ಡಾ. ರಾಬರ್ಟ್ ಹಾಬೆಕ್‌ ಅವರು ಜೋಶಿಯವರಿಗೆ ಆತಿಥ್ಯ ನೀಡಿದರು. ಅದರಲ್ಲೂ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗೊತ್ತಿ ತಾವೇ ಸ್ವತಃ ಪ್ರವೇಶ ದ್ವಾರದವರೆಗೆ ಆಗಮಿಸಿ ಜೋಶಿ ಅವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ನವೀನ ಮತ್ತು ನವೀಕರಣೀಯ ಊರ್ಜಾ, ಶಕ್ತಿ ಕ್ಷೇತ್ರದಲ್ಲಿ ಉಭಯ ದೇಶಗಳ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಡಾ. ರಾಬರ್ಟ್ ಹಾಬೆಕ್‌ ಅವರು ಜೋಶಿಯವರಿಗೆ ಆತಿಥ್ಯ ನೀಡಿದರು. ಅದರಲ್ಲೂ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗೊತ್ತಿ ತಾವೇ ಸ್ವತಃ ಪ್ರವೇಶ ದ್ವಾರದವರೆಗೆ ಆಗಮಿಸಿ ಜೋಶಿ ಅವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

2 / 9
ಡಾ. ರಾಬರ್ಟ್ ಹಾಬೆಕ್ ಮತ್ತು ಪ್ರಲ್ಹಾದ್​ ಜೋಶಿ ಉಭಯ ದೇಶಗಳ ನಡುವಣ ಭೇಟಿಗೆ ಆತ್ಮೀಯತೆಯ ಸ್ಪರ್ಶ ನೀಡಿದೆ. ಈ ವೇಳೆ ಸಭೆ ಮಾಡಿದ್ದು, ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗಿದೆ.

ಡಾ. ರಾಬರ್ಟ್ ಹಾಬೆಕ್ ಮತ್ತು ಪ್ರಲ್ಹಾದ್​ ಜೋಶಿ ಉಭಯ ದೇಶಗಳ ನಡುವಣ ಭೇಟಿಗೆ ಆತ್ಮೀಯತೆಯ ಸ್ಪರ್ಶ ನೀಡಿದೆ. ಈ ವೇಳೆ ಸಭೆ ಮಾಡಿದ್ದು, ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗಿದೆ.

3 / 9
ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಅವರು ಫಲಪ್ರದ ಚರ್ಚೆ ಮಾಡಿದ್ದು, ಇದೇ ವೇಳೆ ಹಸಿರು ಜಲಜನಕ, ಕಡಲಾಚೆಯ ಪವನ ಶಕ್ತಿ, ಜೈವಿಕ ಅನಿಲ ಮತ್ತು ಸೌರ ತ್ಯಾಜ್ಯದ ಮರುಬಳಕೆಯ ಅವಕಾಶಗಳ ಕುರಿತು ಕೂಡ ಚರ್ಚೆ ಮಾಡಲಾಗಿದೆ.

ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಅವರು ಫಲಪ್ರದ ಚರ್ಚೆ ಮಾಡಿದ್ದು, ಇದೇ ವೇಳೆ ಹಸಿರು ಜಲಜನಕ, ಕಡಲಾಚೆಯ ಪವನ ಶಕ್ತಿ, ಜೈವಿಕ ಅನಿಲ ಮತ್ತು ಸೌರ ತ್ಯಾಜ್ಯದ ಮರುಬಳಕೆಯ ಅವಕಾಶಗಳ ಕುರಿತು ಕೂಡ ಚರ್ಚೆ ಮಾಡಲಾಗಿದೆ.

4 / 9
ಇಂಧನ ಪರಿವರ್ತನೆಯಲ್ಲಿ ಭಾರತ ಮತ್ತು ಜರ್ಮನಿಯ ಸಹಕಾರವು ಉತ್ತಮವಾಗಿ ಪ್ರಗತಿಯಲ್ಲಿರುವುದು ಸಂತಸದ ವಿಷಯ. ಮುಂಬರುವ ವರ್ಷಗಳಲ್ಲಿ ಭಾರತವು ಜರ್ಮನಿಗೆ ಹಸಿರು ಜಲಜನಕ ವಿಶ್ವಾಸಾರ್ಹ ಮೂಲವಾಗಿ ಹೊರಹೊಮ್ಮಲಿದೆ ಎಂದು  ಪ್ರಲ್ಹಾದ್​ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಧನ ಪರಿವರ್ತನೆಯಲ್ಲಿ ಭಾರತ ಮತ್ತು ಜರ್ಮನಿಯ ಸಹಕಾರವು ಉತ್ತಮವಾಗಿ ಪ್ರಗತಿಯಲ್ಲಿರುವುದು ಸಂತಸದ ವಿಷಯ. ಮುಂಬರುವ ವರ್ಷಗಳಲ್ಲಿ ಭಾರತವು ಜರ್ಮನಿಗೆ ಹಸಿರು ಜಲಜನಕ ವಿಶ್ವಾಸಾರ್ಹ ಮೂಲವಾಗಿ ಹೊರಹೊಮ್ಮಲಿದೆ ಎಂದು ಪ್ರಲ್ಹಾದ್​ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

5 / 9
ಕಳೆದ 10 ವರ್ಷಗಳಲ್ಲಿ ಭಾರತವು ನವೀಕರಣೀಯ ಊರ್ಜಾ ಕ್ಷೇತ್ರದಲ್ಲಿ ಮಾಡಿರುವ ಅಮೋಘ ಬೆಳವಣಿಗೆಯನ್ನು ಶ್ಲಾಘಿಸಿದ ಹಾಬೆಕ್‌ ಅವರು ಮುಂಬರಲಿರುವ ದಿನಗಳಲ್ಲಿ 500 ಗಿಗಾ ವಾಟ್‌ ಗುರಿಯನ್ನು ತಲುಪುವ ದಿಶೆಯಲ್ಲಿ ಭಾರತವು ಜರ್ಮನಿಗೆ ನೀಡಿದ ಅವಕಾಶಗಳ ಬಗ್ಗೆ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಭಾರತವು ನವೀಕರಣೀಯ ಊರ್ಜಾ ಕ್ಷೇತ್ರದಲ್ಲಿ ಮಾಡಿರುವ ಅಮೋಘ ಬೆಳವಣಿಗೆಯನ್ನು ಶ್ಲಾಘಿಸಿದ ಹಾಬೆಕ್‌ ಅವರು ಮುಂಬರಲಿರುವ ದಿನಗಳಲ್ಲಿ 500 ಗಿಗಾ ವಾಟ್‌ ಗುರಿಯನ್ನು ತಲುಪುವ ದಿಶೆಯಲ್ಲಿ ಭಾರತವು ಜರ್ಮನಿಗೆ ನೀಡಿದ ಅವಕಾಶಗಳ ಬಗ್ಗೆ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

6 / 9
ನವೀಕರಣೀಯ ಶಕ್ತಿ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಉಭಯ ದೇಶಗಳ ನಾಯಕರುಗಳು ಫಲಪ್ರದವಾದ ಸಭೆ ನಡೆಸಿದರು. ಹಸಿರು ಜಲಜನಕ (ಗ್ರೀನ್‌ ಹೈಡ್ರೋಜನ್‌), ಕಡಲ ತೀರದ ಪವನ ಶಕ್ತಿ, ಜೈವಿಕ ಅನಿಲ ಮತ್ತು ಸೌರ ತ್ಯಾಜ್ಯಗಳ ಪುನರ್ಬಳಕೆಗಳ ವಿಷಯದಲ್ಲಿ ಇರುವ ಅವಕಾಶಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

ನವೀಕರಣೀಯ ಶಕ್ತಿ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಉಭಯ ದೇಶಗಳ ನಾಯಕರುಗಳು ಫಲಪ್ರದವಾದ ಸಭೆ ನಡೆಸಿದರು. ಹಸಿರು ಜಲಜನಕ (ಗ್ರೀನ್‌ ಹೈಡ್ರೋಜನ್‌), ಕಡಲ ತೀರದ ಪವನ ಶಕ್ತಿ, ಜೈವಿಕ ಅನಿಲ ಮತ್ತು ಸೌರ ತ್ಯಾಜ್ಯಗಳ ಪುನರ್ಬಳಕೆಗಳ ವಿಷಯದಲ್ಲಿ ಇರುವ ಅವಕಾಶಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

7 / 9
ಹ್ಯಾಮ್‌ಬರ್ಗ್‌ ಸಸ್ಟೇನೆಬಿಲಿಟಿ ಶೃಂಗಸಭೆಯ ಸಂದರ್ಭದಲ್ಲಿ ಪ್ರಲ್ಹಾದ್​ ಜೋಶಿ ಮತ್ತು ಡಾ. ರಾಬರ್ಟ್ ಹಾಬೆಕ್‌ ಅವರು ಪರಸ್ಪರ ವ್ಯಕ್ತಪಡಿಸಿದ ಸೌಹಾರ್ದಪೂರ್ಣ ಸ್ನೇಹವು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಗೌರವಕ್ಕೆ ಸಾಕ್ಷಿಯಾಗಿದೆ.

ಹ್ಯಾಮ್‌ಬರ್ಗ್‌ ಸಸ್ಟೇನೆಬಿಲಿಟಿ ಶೃಂಗಸಭೆಯ ಸಂದರ್ಭದಲ್ಲಿ ಪ್ರಲ್ಹಾದ್​ ಜೋಶಿ ಮತ್ತು ಡಾ. ರಾಬರ್ಟ್ ಹಾಬೆಕ್‌ ಅವರು ಪರಸ್ಪರ ವ್ಯಕ್ತಪಡಿಸಿದ ಸೌಹಾರ್ದಪೂರ್ಣ ಸ್ನೇಹವು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಗೌರವಕ್ಕೆ ಸಾಕ್ಷಿಯಾಗಿದೆ.

8 / 9
ಆತಿಥ್ಯಕ್ಕೆ ಪ್ರತಿಯಾಗಿ ಜೋಶಿಯವರು ಹಾಬೆಕ್‌ ಅವರಿಗೆ ಶ್ರೀಗಂಧದ ಮರದ ಸುಂದರ ಆನೆಯ ಕಲಾಕೃತಿಯನ್ನು ನೆನಪಿನ ಉಡುಗೊರೆಯಾಗಿ ನೀಡಿ ಧನ್ಯವಾದ ಹೇಳಿದ್ದಾರೆ.

ಆತಿಥ್ಯಕ್ಕೆ ಪ್ರತಿಯಾಗಿ ಜೋಶಿಯವರು ಹಾಬೆಕ್‌ ಅವರಿಗೆ ಶ್ರೀಗಂಧದ ಮರದ ಸುಂದರ ಆನೆಯ ಕಲಾಕೃತಿಯನ್ನು ನೆನಪಿನ ಉಡುಗೊರೆಯಾಗಿ ನೀಡಿ ಧನ್ಯವಾದ ಹೇಳಿದ್ದಾರೆ.

9 / 9
Follow us
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ಶಿವಕುಮಾರ್​ಗೆ ಮುನ್ನ ಸಿಎಂ ಭೇಟಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಶಿವಕುಮಾರ್​ಗೆ ಮುನ್ನ ಸಿಎಂ ಭೇಟಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು
ರಿಹರ್ಸಲ್​​ನಲ್ಲಿ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಿದ ಧನಂಜಯ
ರಿಹರ್ಸಲ್​​ನಲ್ಲಿ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಿದ ಧನಂಜಯ
ಸಿಎಂ ಹುದ್ದೆ ರೇಸಲ್ಲಿ ಸತೀಶ್ ಜಾರಕಿಹೊಳಿ ಇದ್ದರೆ ಶಿವಕುಮಾರ್ ಎಲ್ಹೋದರು?
ಸಿಎಂ ಹುದ್ದೆ ರೇಸಲ್ಲಿ ಸತೀಶ್ ಜಾರಕಿಹೊಳಿ ಇದ್ದರೆ ಶಿವಕುಮಾರ್ ಎಲ್ಹೋದರು?
ಸಿಎಂ ಹುದ್ದೆಗೆ ಸತೀಶ್ ಹೆಸರು ಪ್ರಸ್ತಾಪ ಯಾಕೆ? ಅವರನ್ನೇ ಕೇಳಿ: ಪರಮೇಶ್ವರ್
ಸಿಎಂ ಹುದ್ದೆಗೆ ಸತೀಶ್ ಹೆಸರು ಪ್ರಸ್ತಾಪ ಯಾಕೆ? ಅವರನ್ನೇ ಕೇಳಿ: ಪರಮೇಶ್ವರ್