AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drawing Day 2023: ಭಾರತೀಯ ಕಲಾ ಇತಿಹಾಸದ ಶ್ರೇಷ್ಠ ವರ್ಣಚಿತ್ರಕಾರ ರಾಜಾ ರವಿವರ್ಮನ ಕುಂಚದಲ್ಲಿ ಅರಳಿದ ಚಿತ್ರಗಳು ಇಲ್ಲಿವೆ

ಭಾರತೀಯ ಮತ್ತು ಯುರೋಪಿಯನ್ ಸೌಂದರ್ಯಶಾಸ್ತ್ರವನ್ನು ಬೆರೆಸುವ ಹೊಸ ತಂತ್ರಗಳು ಮತ್ತು ಶೈಲಿಗಳನ್ನು ಪರಿಚಯಿಸುವ ಮೂಲಕ ಭಾರತೀಯ ಕಲೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಕೀರ್ತಿ ರಾಜಾ ರವಿವರ್ಮರಿಗೆ ಸಲ್ಲುತ್ತದೆ.

ಆಯೇಷಾ ಬಾನು
|

Updated on: May 16, 2023 | 1:02 PM

Share
ರಾಜಾ ರವಿವರ್ಮ, ಭಾರತೀಯ ಕಲಾ ಇತಿಹಾಸದ ಶ್ರೇಷ್ಠ ವರ್ಣಚಿತ್ರಕಾರ. ದೇವರು ಹೇಗೆ ಕಾಣುತ್ತಾರೆ ಎಂಬುವುದನ್ನು ಜನರಿಗೆ ಪರಿಚಯಿಸಿದ ಕಲಾವಿಧ. ಭಾರತೀಯ ಪಾರಂಪರಿಕ ಚಿತ್ರಕಲೆಗೆ ವಿದೇಶಿ ವರ್ಣರಂಜಿತ ಚಮತ್ಕಾರವನ್ನು ಬೆರೆಸಿದವರು ರವಿವರ್ಮ.

ರಾಜಾ ರವಿವರ್ಮ, ಭಾರತೀಯ ಕಲಾ ಇತಿಹಾಸದ ಶ್ರೇಷ್ಠ ವರ್ಣಚಿತ್ರಕಾರ. ದೇವರು ಹೇಗೆ ಕಾಣುತ್ತಾರೆ ಎಂಬುವುದನ್ನು ಜನರಿಗೆ ಪರಿಚಯಿಸಿದ ಕಲಾವಿಧ. ಭಾರತೀಯ ಪಾರಂಪರಿಕ ಚಿತ್ರಕಲೆಗೆ ವಿದೇಶಿ ವರ್ಣರಂಜಿತ ಚಮತ್ಕಾರವನ್ನು ಬೆರೆಸಿದವರು ರವಿವರ್ಮ.

1 / 10
ಟ್ರಾವಂಕೂರು ಸಂಸ್ಥಾನಕ್ಕೆ ಸೇರಿದ ರವಿವರ್ಮರು ಜನಿಸಿದ್ದು ಎಪ್ರಿಲ್ 29, 1848ರಲ್ಲಿ. ಅವರ ತಂದೆ ಎಜುಮಾವಿಲ್ ನೀಲಕಂಠನ್ ಭತ್ತಾದ್ರಿಪಾದ್ ಮಹಾನ್ ವಿದ್ವಾಂಸರು. ಅವರ ತಾಯಿ ಉಮಯಾಂಬ ಥಂಪುರತ್ತಿ ಮಹಾನ್ ಕವಯತ್ರಿ. ಅವರ ಕೃತಿ ‘ಪಾರ್ವತಿ ಸ್ವಯಂವರಂ’ ಎಂಬ ಕೃತಿಯನ್ನು ಅವರ ಕಾಲಾನಂತರದಲ್ಲಿ ರವಿವರ್ಮರು ಪ್ರಕಟಿಸಿದರು.

ಟ್ರಾವಂಕೂರು ಸಂಸ್ಥಾನಕ್ಕೆ ಸೇರಿದ ರವಿವರ್ಮರು ಜನಿಸಿದ್ದು ಎಪ್ರಿಲ್ 29, 1848ರಲ್ಲಿ. ಅವರ ತಂದೆ ಎಜುಮಾವಿಲ್ ನೀಲಕಂಠನ್ ಭತ್ತಾದ್ರಿಪಾದ್ ಮಹಾನ್ ವಿದ್ವಾಂಸರು. ಅವರ ತಾಯಿ ಉಮಯಾಂಬ ಥಂಪುರತ್ತಿ ಮಹಾನ್ ಕವಯತ್ರಿ. ಅವರ ಕೃತಿ ‘ಪಾರ್ವತಿ ಸ್ವಯಂವರಂ’ ಎಂಬ ಕೃತಿಯನ್ನು ಅವರ ಕಾಲಾನಂತರದಲ್ಲಿ ರವಿವರ್ಮರು ಪ್ರಕಟಿಸಿದರು.

2 / 10
ರವಿವರ್ಮರು ರಾಮಸ್ವಾಮಿ ನಾಯ್ಡು ಅವರಿಂದ ಜಲಚಿತ್ರಕಲೆಯನ್ನೂ ಡಚ್ ಕಲಾವಿದ ಥಿಯೋಡರ್ ಜೆನ್ಸನ್ ಅವರಿಂದ ತೈಲ ವರ್ಣಚಿತ್ರ ಕಲೆಯನ್ನೂ ಕಲಿತರು ಎಂದು ಕೆಲ ಕಡೆ ಹೇಳಲಾಗಿದೆ. ಆದ್ರೆ ಇವರು ಸ್ವಯಂ-ಕಲಿಕೆಯ ಕಲಾವಿದರು ಎಂದು ಕೆಲವರು ಹೇಳುತ್ತಾರೆ.

ರವಿವರ್ಮರು ರಾಮಸ್ವಾಮಿ ನಾಯ್ಡು ಅವರಿಂದ ಜಲಚಿತ್ರಕಲೆಯನ್ನೂ ಡಚ್ ಕಲಾವಿದ ಥಿಯೋಡರ್ ಜೆನ್ಸನ್ ಅವರಿಂದ ತೈಲ ವರ್ಣಚಿತ್ರ ಕಲೆಯನ್ನೂ ಕಲಿತರು ಎಂದು ಕೆಲ ಕಡೆ ಹೇಳಲಾಗಿದೆ. ಆದ್ರೆ ಇವರು ಸ್ವಯಂ-ಕಲಿಕೆಯ ಕಲಾವಿದರು ಎಂದು ಕೆಲವರು ಹೇಳುತ್ತಾರೆ.

3 / 10
ಭಾರತೀಯ ಮತ್ತು ಯುರೋಪಿಯನ್ ಸೌಂದರ್ಯಶಾಸ್ತ್ರವನ್ನು ಬೆರೆಸುವ ಹೊಸ ತಂತ್ರಗಳು ಮತ್ತು ಶೈಲಿಗಳನ್ನು ಪರಿಚಯಿಸುವ ಮೂಲಕ ಭಾರತೀಯ ಕಲೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಕೀರ್ತಿ ರವಿ ವರ್ಮರಿಗೆ ಸಲ್ಲುತ್ತದೆ.

ಭಾರತೀಯ ಮತ್ತು ಯುರೋಪಿಯನ್ ಸೌಂದರ್ಯಶಾಸ್ತ್ರವನ್ನು ಬೆರೆಸುವ ಹೊಸ ತಂತ್ರಗಳು ಮತ್ತು ಶೈಲಿಗಳನ್ನು ಪರಿಚಯಿಸುವ ಮೂಲಕ ಭಾರತೀಯ ಕಲೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಕೀರ್ತಿ ರವಿ ವರ್ಮರಿಗೆ ಸಲ್ಲುತ್ತದೆ.

4 / 10
‘ದಮಯಂತಿಯ ಹಂಸ ಸಂಭಾಷಣೆ’, ‘ಕೃಷ್ಣನ ರಾಯಭಾರ’, ‘ಜಟಾಯು ಸಂಹಾರ’, ‘ಅರ್ಜುನನಲ್ಲಿ ಸುಭದ್ರೆಯ ಕುರಿತಾದ ಮೋಹ’, ‘ಶ್ರೀರಾಮಚಂದ್ರನಿಗೆ ಸಮುದ್ರರಾಜನ ಮೇಲುಂಟಾದ ಕೋಪ’, ‘ಶಂತನು ಮತ್ತು ಮತ್ಸ್ಯಗಂಧಿ’,  ‘ಹಳ್ಳಿಯ ಹುಡುಗಿ’, ಸಂಗೀತ-ನಾಟ್ಯ-ಸಾಂಸ್ಕೃತಿಕ-ಪ್ರೇಮಭರಿತ ಔನ್ನತ್ಯ ಭಾವಗಳನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.

‘ದಮಯಂತಿಯ ಹಂಸ ಸಂಭಾಷಣೆ’, ‘ಕೃಷ್ಣನ ರಾಯಭಾರ’, ‘ಜಟಾಯು ಸಂಹಾರ’, ‘ಅರ್ಜುನನಲ್ಲಿ ಸುಭದ್ರೆಯ ಕುರಿತಾದ ಮೋಹ’, ‘ಶ್ರೀರಾಮಚಂದ್ರನಿಗೆ ಸಮುದ್ರರಾಜನ ಮೇಲುಂಟಾದ ಕೋಪ’, ‘ಶಂತನು ಮತ್ತು ಮತ್ಸ್ಯಗಂಧಿ’, ‘ಹಳ್ಳಿಯ ಹುಡುಗಿ’, ಸಂಗೀತ-ನಾಟ್ಯ-ಸಾಂಸ್ಕೃತಿಕ-ಪ್ರೇಮಭರಿತ ಔನ್ನತ್ಯ ಭಾವಗಳನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.

5 / 10
ಕಲೆಗೆ ನೀಡಿದ ಕೊಡುಗೆಗಾಗಿ 1904ರಲ್ಲಿ ಬ್ರಿಟಿಷ್ ಸರ್ಕಾರವು ಅವರಿಗೆ ಕೈಸರ್-ಇ-ಹಿಂದ್ ಚಿನ್ನದ ಪದಕವನ್ನು ನೀಡಿತು. ರಾಜಾ ರವಿವರ್ಮ ಅವರು ನುರಿತ ಛಾಯಾಗ್ರಾಹಕರಾಗಿದ್ದರು ಮತ್ತು ಮುಂಬೈನಲ್ಲಿ ಛಾಯಾಗ್ರಹಣ ಸ್ಟುಡಿಯೋವನ್ನು ಸ್ಥಾಪಿಸಿದರು.

ಕಲೆಗೆ ನೀಡಿದ ಕೊಡುಗೆಗಾಗಿ 1904ರಲ್ಲಿ ಬ್ರಿಟಿಷ್ ಸರ್ಕಾರವು ಅವರಿಗೆ ಕೈಸರ್-ಇ-ಹಿಂದ್ ಚಿನ್ನದ ಪದಕವನ್ನು ನೀಡಿತು. ರಾಜಾ ರವಿವರ್ಮ ಅವರು ನುರಿತ ಛಾಯಾಗ್ರಾಹಕರಾಗಿದ್ದರು ಮತ್ತು ಮುಂಬೈನಲ್ಲಿ ಛಾಯಾಗ್ರಹಣ ಸ್ಟುಡಿಯೋವನ್ನು ಸ್ಥಾಪಿಸಿದರು.

6 / 10
ರವಿವರ್ಮ ಮಹಿಳೆಯರ ಸೌಂದರ್ಯದ ದೊಡ್ಡ ಅಭಿಮಾನಿಯಾಗಿದ್ದರು ಮತ್ತು ಆಗಾಗ್ಗೆ ತಮ್ಮ ಕೃತಿಗಳಲ್ಲಿ ಅವುಗಳನ್ನು ಚಿತ್ರಿಸುತ್ತಿದ್ದರು. ಅವು ಇಂದಿಗೂ ಪ್ರಸಿದ್ಧಿಯನ್ನು ಪಡೆದಿದೆ.

ರವಿವರ್ಮ ಮಹಿಳೆಯರ ಸೌಂದರ್ಯದ ದೊಡ್ಡ ಅಭಿಮಾನಿಯಾಗಿದ್ದರು ಮತ್ತು ಆಗಾಗ್ಗೆ ತಮ್ಮ ಕೃತಿಗಳಲ್ಲಿ ಅವುಗಳನ್ನು ಚಿತ್ರಿಸುತ್ತಿದ್ದರು. ಅವು ಇಂದಿಗೂ ಪ್ರಸಿದ್ಧಿಯನ್ನು ಪಡೆದಿದೆ.

7 / 10
ರಾಜಾ ರವಿವರ್ಮ ಯುರೋಪಿನಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಿದ ಮೊದಲ ಭಾರತೀಯ ಕಲಾವಿದ, ಅಲ್ಲಿ ಅವರು ವ್ಯಾಪಕವಾಗಿ ಮೆಚ್ಚುಗೆ ಪಡೆದರು.

ರಾಜಾ ರವಿವರ್ಮ ಯುರೋಪಿನಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಿದ ಮೊದಲ ಭಾರತೀಯ ಕಲಾವಿದ, ಅಲ್ಲಿ ಅವರು ವ್ಯಾಪಕವಾಗಿ ಮೆಚ್ಚುಗೆ ಪಡೆದರು.

8 / 10
ರಾಜಾ ರವಿವರ್ಮ ಅವರು ತಮ್ಮ ಜೀವಿತಾವಧಿಯಲ್ಲಿ 7,000 ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ರಚಿಸಿದ್ದಾರೆ. ಅವರು ಲಂಡನ್ನ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್ನ ಸದಸ್ಯರಾಗಿದ್ದರು, ಈ ಗೌರವವನ್ನು ಪಡೆದ ಮೊದಲ ಭಾರತೀಯ ಕಲಾವಿದರಾದರು.

ರಾಜಾ ರವಿವರ್ಮ ಅವರು ತಮ್ಮ ಜೀವಿತಾವಧಿಯಲ್ಲಿ 7,000 ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ರಚಿಸಿದ್ದಾರೆ. ಅವರು ಲಂಡನ್ನ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್ನ ಸದಸ್ಯರಾಗಿದ್ದರು, ಈ ಗೌರವವನ್ನು ಪಡೆದ ಮೊದಲ ಭಾರತೀಯ ಕಲಾವಿದರಾದರು.

9 / 10
ಸುಮಾರು 58 ವರ್ಷಗಳು ಮಾತ್ರ ಬಾಳಿದ ರವಿವರ್ಮರು ಅಕ್ಟೋಬರ್ 2, 1906ರ ವರ್ಷದಲ್ಲಿ ನಿಧನರಾದರು. ರಾಜಾ ರವಿವರ್ಮರು ರೂಪದರ್ಶಿಯೋರ್ವರನ್ನು ತಮ್ಮ ಚಿತ್ರಕಲೆಗಳಿಗೆ ಸ್ಪೂರ್ತಿಯಾಗಿ ಬಳಸಿದ್ದರೆಂದು ಹಲವು ಕಥಾನಕಗಳಿವೆ.

ಸುಮಾರು 58 ವರ್ಷಗಳು ಮಾತ್ರ ಬಾಳಿದ ರವಿವರ್ಮರು ಅಕ್ಟೋಬರ್ 2, 1906ರ ವರ್ಷದಲ್ಲಿ ನಿಧನರಾದರು. ರಾಜಾ ರವಿವರ್ಮರು ರೂಪದರ್ಶಿಯೋರ್ವರನ್ನು ತಮ್ಮ ಚಿತ್ರಕಲೆಗಳಿಗೆ ಸ್ಪೂರ್ತಿಯಾಗಿ ಬಳಸಿದ್ದರೆಂದು ಹಲವು ಕಥಾನಕಗಳಿವೆ.

10 / 10
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ