Shravana Masa 2021: ಶ್ರಾವಣ ವಿಶೇಷ; 12 ಜ್ಯೋತಿರ್ಲಿಂಗಗಳ ದರ್ಶನ ಹಾಗೂ ಅದರ ವಿಶೇಷತೆಗಳು

12 jyotirlinga: ಪುರಾಣಗಳು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಸಾಮಾನ್ಯರು ಸಹ ಆರಾಧಿಸಲು ಸಾಧ್ಯವಾಗುವಂತೆ ಶಿವನು ಲಿಂಗರೂಪ ಧರಿಸಿದ. 12 ಸ್ಥಳಗಳಲ್ಲಿರುವ ಶಿವ ಲಿಂಗದಲ್ಲಿ ಶಿವನು ಸ್ವತಃ ಜ್ಯೋತಿಯಾಗಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ಅವುಗಳನ್ನು ಜ್ಯೋತಿರ್ಲಿಂಗಗಳು(Jyotirlinga) ಎಂದು ಕರೆಯಲಾಗುತ್ತದೆ. ಈ ಜ್ಯೋತಿರ್ಲಿಂಗಗಳ ದರ್ಶನದಿಂದ ಭಕ್ತರ ಪಾಪಗಳು ನಿವಾರಣೆಯಾಗುತ್ತದೆ. ಶಿವನ ಮಾಸವಾದ ಶ್ರಾವಣದಂದು ನಾವು ನಿಮಗೆ ಜ್ಯೋತಿರ್ಲಿಂಗಗಳ ದರ್ಶನ ಮಾಡಿಸುತ್ತೇವೆ.

| Updated By: ಆಯೇಷಾ ಬಾನು

Updated on:Aug 11, 2021 | 7:24 AM

1. ಸೋಮನಾಥ ಜ್ಯೋತಿರ್ಲಿಂಗ, ಗುಜರಾತ್ (Somnath Jyotirlinga, Gujarat): ದೇಶದ ಒಟ್ಟು 12 ಜ್ಯೋತಿರ್ಲಿಂಗಗಳಲ್ಲಿ ಇದು ಮೊದಲನೆಯದು. ಸೋಮನಾಥ ಜ್ಯೋತಿರ್ಲಿಂಗವು ಗುಜರಾತ್‌ನ ಸೌರಾಷ್ಟ್ರದ ಅರೇಬಿಯನ್ ಸಮುದ್ರದ ದಡದಲ್ಲಿದೆ. ಶಿವ ಪುರಾಣದ ಪ್ರಕಾರ, ಪ್ರಜಾಪತಿ ದಕ್ಷನು ಚಂದ್ರನಿಗೆ ಕ್ಷಯರೋಗದ ಶಾಪ ನೀಡಿದಾಗ ಈ ಸ್ಥಳದಲ್ಲಿ, ಶಿವನನ್ನು ಆರಾಧಿಸುವ ಮತ್ತು ಧ್ಯಾನ ಮಾಡುವ ಮೂಲಕ, ಚಂದ್ರನಿಗೆ ಶಾಪದಿಂದ ಮುಕ್ತಿ ಸಿಕ್ಕಿತು. ಚಂದ್ರ ದೇವನೇ ಈ ಜ್ಯೋತಿರ್ಲಿಂಗವನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ. ಹಾಗೂ ಈ ಕ್ಷೇತ್ರವನ್ನು ದರ್ಶಿಸಿದ ಶ್ರೀ ಕೃಷ್ಣ ತನ್ನ ಲೀಲೆಯಿಂದ ಬೆಳಗಿದ ದೀಪ ಇಂದಿಗೂ ಇಲ್ಲಿ ಉರಿಯುತ್ತಿದೆ ಎಂಬ ನಂಬಿಕೆ ಇದೆ.

Shravana Masa 2021 Special Know all About 12 jyotirlingas lord shiva

1 / 12
2. ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಆಂಧ್ರಪ್ರದೇಶ (Mallikarjuna Jyotirlinga, Andhra Pradesh) : ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಆಂಧ್ರಪ್ರದೇಶದ ಕೃಷ್ಣ ನದಿಯ (Krishna River) ದಡದಲ್ಲಿರುವ ಶ್ರೀಶೈಲ ಬೆಟ್ಟದ ಮೇಲಿದೆ. ಇದನ್ನು ದಕ್ಷಿಣದ ಕೈಲಾಸ ಎಂದೂ ಸಹ ಕರೆಯುತ್ತಾರೆ ಮತ್ತು ಈ ಜ್ಯೋತಿರ್ಲಿಂಗದ ದರ್ಶನದಿಂದ ಎಂತಹದೇ ಕಷ್ಟ, ಕಾರ್ಪಣ್ಯ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಇಲ್ಲಿ ಪರಮೇಶ್ವರನ ಪತ್ನಿ ಗೌರಿದೇವಿ ಜೊತೆಗೆ ಶ್ರೀ ಭ್ರಮರಾಂಬ ಸಮೇತ ಮಲ್ಲಿಕಾರ್ಜುನನಾಗಿ ನೆಲೆಸಿದ್ದಾನೆ.

Shravana Masa 2021 Special Know all About 12 jyotirlingas lord shiva

2 / 12
3. ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶ (Mahakaleshwar Jyotirlinga, Madhya Pradesh): ಮಹಾಕಾಳೇಶ್ವರ ಜ್ಯೋತಿರ್ಲಿಂಗ ಮಧ್ಯಪ್ರದೇಶದ ಉಜ್ಜಯಿನಿಯ ಕ್ಷಿಪ್ರ ನದಿಯ ದಡದಲ್ಲಿದೆ. ದೈನಂದಿನ ಭಾಷ್ಮ ಆರತಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಏಕೈಕ ದಕ್ಷಿಣ ಮುಖಿ ಜ್ಯೋತಿರ್ಲಿಂಗ ಇದು. ಹಾಗೂ ಕ್ಷಿಪ್ರ ನದಿ ತೀರದಲ್ಲಿ ಮಂತ್ರ ಶಕ್ತಿಯಿಂದ ಉದ್ಭವಿಸಿದ ಏಕೈಕ ಸ್ವಯಂಭೂ ಜ್ಯೋತಿರ್ಲಿಂಗ. ಇಲ್ಲಿನ ಕಾಲಭೈರವನಿಗೆ ಮದ್ಯದ ನೈವೇದ್ಯ ಅರ್ಪಿಸಲಾಗುತ್ತೆ.

3. ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶ (Mahakaleshwar Jyotirlinga, Madhya Pradesh): ಮಹಾಕಾಳೇಶ್ವರ ಜ್ಯೋತಿರ್ಲಿಂಗ ಮಧ್ಯಪ್ರದೇಶದ ಉಜ್ಜಯಿನಿಯ ಕ್ಷಿಪ್ರ ನದಿಯ ದಡದಲ್ಲಿದೆ. ದೈನಂದಿನ ಭಾಷ್ಮ ಆರತಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಏಕೈಕ ದಕ್ಷಿಣ ಮುಖಿ ಜ್ಯೋತಿರ್ಲಿಂಗ ಇದು. ಹಾಗೂ ಕ್ಷಿಪ್ರ ನದಿ ತೀರದಲ್ಲಿ ಮಂತ್ರ ಶಕ್ತಿಯಿಂದ ಉದ್ಭವಿಸಿದ ಏಕೈಕ ಸ್ವಯಂಭೂ ಜ್ಯೋತಿರ್ಲಿಂಗ. ಇಲ್ಲಿನ ಕಾಲಭೈರವನಿಗೆ ಮದ್ಯದ ನೈವೇದ್ಯ ಅರ್ಪಿಸಲಾಗುತ್ತೆ.

3 / 12
4. ಓಂಕಾರೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶ (Omkareshwar Jyotirlinga, Madhya Pradesh): ಓಂಕಾರೇಶ್ವರ ಜ್ಯೋತಿರ್ಲಿಂಗ ಮಧ್ಯಪ್ರದೇಶದ ಖಾಂಡ್ವಾ ಪ್ರದೇಶದಲ್ಲಿದೆ ಮತ್ತು ಇದು ವಿಂದ್ಯ ಪರ್ವತಗಳ ನರ್ಮದಾ ನದಿಯ ತೀರದಲ್ಲಿದೆ. ಯಾತ್ರಾರ್ಥಿಗಳು ಎಲ್ಲಾ ತೀರ್ಥಯಾತ್ರೆಗಳಿಗೆ ನೀರನ್ನು ತಂದು ಓಂಕಾರೇಶ್ವರದಲ್ಲಿ ಅರ್ಪಿಸುತ್ತಾರೆ ಎಂದು ನಂಬಲಾಗಿದೆ, ನಂತರ ಅವರ ಎಲ್ಲಾ ತೀರ್ಥಯಾತ್ರೆಗಳನ್ನು ಸಂಪೂರ್ಣವೆಂದು ಪರಿಗಣಿಸಲಾಗುತ್ತದೆ. ಇನ್ನು ವಿಶೇಷವೆಂದರೆ ಇಲ್ಲಿನ ಎರಡು ಬೆಟ್ಟಗಳ ನಡುವೆ ಇರುವ ನರ್ಮದಾ ನದಿ, ಈ ದಿವ್ಯ ಕ್ಷೇತ್ರವನ್ನು ಬಾನೆತ್ತರದಿಂದ ನೋಡಿದರೆ ಸಂಸ್ಕೃತದ ಓಂ ಆಕಾರದಲ್ಲಿ ಕಾಣಿಸುತ್ತದೆ.

4. ಓಂಕಾರೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶ (Omkareshwar Jyotirlinga, Madhya Pradesh): ಓಂಕಾರೇಶ್ವರ ಜ್ಯೋತಿರ್ಲಿಂಗ ಮಧ್ಯಪ್ರದೇಶದ ಖಾಂಡ್ವಾ ಪ್ರದೇಶದಲ್ಲಿದೆ ಮತ್ತು ಇದು ವಿಂದ್ಯ ಪರ್ವತಗಳ ನರ್ಮದಾ ನದಿಯ ತೀರದಲ್ಲಿದೆ. ಯಾತ್ರಾರ್ಥಿಗಳು ಎಲ್ಲಾ ತೀರ್ಥಯಾತ್ರೆಗಳಿಗೆ ನೀರನ್ನು ತಂದು ಓಂಕಾರೇಶ್ವರದಲ್ಲಿ ಅರ್ಪಿಸುತ್ತಾರೆ ಎಂದು ನಂಬಲಾಗಿದೆ, ನಂತರ ಅವರ ಎಲ್ಲಾ ತೀರ್ಥಯಾತ್ರೆಗಳನ್ನು ಸಂಪೂರ್ಣವೆಂದು ಪರಿಗಣಿಸಲಾಗುತ್ತದೆ. ಇನ್ನು ವಿಶೇಷವೆಂದರೆ ಇಲ್ಲಿನ ಎರಡು ಬೆಟ್ಟಗಳ ನಡುವೆ ಇರುವ ನರ್ಮದಾ ನದಿ, ಈ ದಿವ್ಯ ಕ್ಷೇತ್ರವನ್ನು ಬಾನೆತ್ತರದಿಂದ ನೋಡಿದರೆ ಸಂಸ್ಕೃತದ ಓಂ ಆಕಾರದಲ್ಲಿ ಕಾಣಿಸುತ್ತದೆ.

4 / 12
5. ಕೇದಾರನಾಥ ಜ್ಯೋತಿರ್ಲಿಂಗ, ಉತ್ತರಾಖಂಡ (Kedarnath Jyotirlinga, Uttarakhand): ಕೇದಾರನಾಥ ಜ್ಯೋತಿರ್ಲಿಂಗ ಉತ್ತರಖಂಡದ ಅಲ್ಖಾನಂದ ಮತ್ತು ಮಂದಕಿನಿ ನದಿಗಳ ತೀರದಲ್ಲಿ ಕೇದಾರ ಎಂಬ ಶಿಖರದಲ್ಲಿದೆ. ಇಲ್ಲಿಂದ ಪೂರ್ವ ದಿಕ್ಕಿನಲ್ಲಿ ಶ್ರೀ ಬದ್ರಿ ವಿಶಾಲ್‌ನ ಬದ್ರಿನಾಥಮ್ ದೇವಾಲಯವಿದೆ. ಕೇದಾರನಾಥ ಭಗವಂತನನ್ನು ನೋಡದೆ ಬದ್ರಿನಾಥಕ್ಕೆ ಭೇಟಿ ಅಪೂರ್ಣ ಮತ್ತು ಫಲಪ್ರದವಲ್ಲ ಎಂದು ನಂಬಲಾಗಿದೆ.

5. ಕೇದಾರನಾಥ ಜ್ಯೋತಿರ್ಲಿಂಗ, ಉತ್ತರಾಖಂಡ (Kedarnath Jyotirlinga, Uttarakhand): ಕೇದಾರನಾಥ ಜ್ಯೋತಿರ್ಲಿಂಗ ಉತ್ತರಖಂಡದ ಅಲ್ಖಾನಂದ ಮತ್ತು ಮಂದಕಿನಿ ನದಿಗಳ ತೀರದಲ್ಲಿ ಕೇದಾರ ಎಂಬ ಶಿಖರದಲ್ಲಿದೆ. ಇಲ್ಲಿಂದ ಪೂರ್ವ ದಿಕ್ಕಿನಲ್ಲಿ ಶ್ರೀ ಬದ್ರಿ ವಿಶಾಲ್‌ನ ಬದ್ರಿನಾಥಮ್ ದೇವಾಲಯವಿದೆ. ಕೇದಾರನಾಥ ಭಗವಂತನನ್ನು ನೋಡದೆ ಬದ್ರಿನಾಥಕ್ಕೆ ಭೇಟಿ ಅಪೂರ್ಣ ಮತ್ತು ಫಲಪ್ರದವಲ್ಲ ಎಂದು ನಂಬಲಾಗಿದೆ.

5 / 12
6. ಭೀಮಶಂಕರ್ ಜ್ಯೋತಿರ್ಲಿಂಗ, ಮಹಾರಾಷ್ಟ್ರ (Bhimashankar Jyotirlinga, Maharashtra): ಭೀಮಶಂಕರ್ ಜ್ಯೋತಿರ್ಲಿಂಗ ಮಹಾರಾಷ್ಟ್ರದ ಪುಣೆಯಿಂದ 100 ಕಿ.ಮೀ ದೂರದಲ್ಲಿರುವ ಡಕಿನಿಯಲ್ಲಿದೆ. ಇಲ್ಲಿರುವ ಶಿವಲಿಂಗವು ಸಾಕಷ್ಟು ದಪ್ಪವಾಗಿದೆ, ಆದ್ದರಿಂದ ಇದನ್ನು ಮೋಟೆಶ್ವರ ಮಹಾದೇವ್ ಎಂದೂ ಕರೆಯುತ್ತಾರೆ. ಕುಂಭಕರ್ಣನ ಮಗ ರಾಕ್ಷಸ ಭೀಮನನ್ನು ಸಂಹಾರ ಮಾಡುವ ಈಶ್ವರನ ರೂಪದಲ್ಲಿ ಈ ಲಿಂಗವಿದೆ.

6. ಭೀಮಶಂಕರ್ ಜ್ಯೋತಿರ್ಲಿಂಗ, ಮಹಾರಾಷ್ಟ್ರ (Bhimashankar Jyotirlinga, Maharashtra): ಭೀಮಶಂಕರ್ ಜ್ಯೋತಿರ್ಲಿಂಗ ಮಹಾರಾಷ್ಟ್ರದ ಪುಣೆಯಿಂದ 100 ಕಿ.ಮೀ ದೂರದಲ್ಲಿರುವ ಡಕಿನಿಯಲ್ಲಿದೆ. ಇಲ್ಲಿರುವ ಶಿವಲಿಂಗವು ಸಾಕಷ್ಟು ದಪ್ಪವಾಗಿದೆ, ಆದ್ದರಿಂದ ಇದನ್ನು ಮೋಟೆಶ್ವರ ಮಹಾದೇವ್ ಎಂದೂ ಕರೆಯುತ್ತಾರೆ. ಕುಂಭಕರ್ಣನ ಮಗ ರಾಕ್ಷಸ ಭೀಮನನ್ನು ಸಂಹಾರ ಮಾಡುವ ಈಶ್ವರನ ರೂಪದಲ್ಲಿ ಈ ಲಿಂಗವಿದೆ.

6 / 12
7. ವಿಶ್ವನಾಥ ಜ್ಯೋತಿರ್ಲಿಂಗ, ಉತ್ತರ ಪ್ರದೇಶ (Vishwanath Jyotirlinga, Uttar Pradesh): ಉತ್ತರ ಪ್ರದೇಶದ ವಾರಣಾಸಿ ನಗರವು ಧರ್ಮ ನಗರಿಯನ್ನು ಕಾಶಿ (Kashi) ಎಂದೂ ಕರೆಯಲಾಗುತ್ತದೆ. ಇದು ಗಂಗಾ ನದಿಯ ದಡದಲ್ಲಿದೆ. ಶಿವನು ಕೈಲಾಸ ತೊರೆದು ಇಲ್ಲಿ ತನ್ನ ಶಾಶ್ವತ ನಿವಾಸವನ್ನು ಮಾಡಿಕೊಂಡಿದ್ದಾನೆ ಎಂದು ನಂಬಲಾಗಿದೆ.

7. ವಿಶ್ವನಾಥ ಜ್ಯೋತಿರ್ಲಿಂಗ, ಉತ್ತರ ಪ್ರದೇಶ (Vishwanath Jyotirlinga, Uttar Pradesh): ಉತ್ತರ ಪ್ರದೇಶದ ವಾರಣಾಸಿ ನಗರವು ಧರ್ಮ ನಗರಿಯನ್ನು ಕಾಶಿ (Kashi) ಎಂದೂ ಕರೆಯಲಾಗುತ್ತದೆ. ಇದು ಗಂಗಾ ನದಿಯ ದಡದಲ್ಲಿದೆ. ಶಿವನು ಕೈಲಾಸ ತೊರೆದು ಇಲ್ಲಿ ತನ್ನ ಶಾಶ್ವತ ನಿವಾಸವನ್ನು ಮಾಡಿಕೊಂಡಿದ್ದಾನೆ ಎಂದು ನಂಬಲಾಗಿದೆ.

7 / 12
8. ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಮಹಾರಾಷ್ಟ್ರ (Trimbakeshwar Jyotirlinga, Maharashtra): ತ್ರಿಂಬಕೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರದ ನಾಸಿಕ್‌ನಿಂದ ಪಶ್ಚಿಮಕ್ಕೆ 30 ಕಿ.ಮೀ ದೂರದಲ್ಲಿದೆ. ಗೋದಾವರಿ ನದಿಯ ದಡದಲ್ಲಿರುವ ಈ ದೇವಾಲಯವು ಕಪ್ಪು ಕಲ್ಲುಗಳಿಂದ ಮಾಡಲ್ಪಟ್ಟಿದೆ. ಗೌತಮ ಋಷಿ ಮತ್ತು ಗೋದಾವರಿಯ ಪ್ರಾರ್ಥನೆಯ ಮೇರೆಗೆ ಶಿವನು ಈ ಸ್ಥಳದಲ್ಲಿ ವಾಸಿಸಲು ನಿರ್ಧರಿಸಿದನು ಮತ್ತು ತ್ರಯಂಬಕೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧನಾದನು ಎಂದು ಶಿವಪುರಾಣದಲ್ಲಿ ವಿವರಿಸಲಾಗಿದೆ.

8. ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಮಹಾರಾಷ್ಟ್ರ (Trimbakeshwar Jyotirlinga, Maharashtra): ತ್ರಿಂಬಕೇಶ್ವರ ಜ್ಯೋತಿರ್ಲಿಂಗ ಮಹಾರಾಷ್ಟ್ರದ ನಾಸಿಕ್‌ನಿಂದ ಪಶ್ಚಿಮಕ್ಕೆ 30 ಕಿ.ಮೀ ದೂರದಲ್ಲಿದೆ. ಗೋದಾವರಿ ನದಿಯ ದಡದಲ್ಲಿರುವ ಈ ದೇವಾಲಯವು ಕಪ್ಪು ಕಲ್ಲುಗಳಿಂದ ಮಾಡಲ್ಪಟ್ಟಿದೆ. ಗೌತಮ ಋಷಿ ಮತ್ತು ಗೋದಾವರಿಯ ಪ್ರಾರ್ಥನೆಯ ಮೇರೆಗೆ ಶಿವನು ಈ ಸ್ಥಳದಲ್ಲಿ ವಾಸಿಸಲು ನಿರ್ಧರಿಸಿದನು ಮತ್ತು ತ್ರಯಂಬಕೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧನಾದನು ಎಂದು ಶಿವಪುರಾಣದಲ್ಲಿ ವಿವರಿಸಲಾಗಿದೆ.

8 / 12
9. ವೈದ್ಯನಾಥ ಜ್ಯೋತಿರ್ಲಿಂಗ, ಜಾರ್ಖಂಡ್ (Vaidyanath Jyotirlinga, Jharkhand): ವೈದ್ಯನಾಥ ಜ್ಯೋತಿರ್ಲಿಂಗ ಜಾರ್ಖಂಡ್‌ನ ದಿಯೋಘರ್‌ನಲ್ಲಿದೆ. ಒಮ್ಮೆ ರಾವಣನು ಶಿವನನ್ನು ಲಂಕಾಕ್ಕೆ ಕರೆದೊಯ್ಯಲು ಪ್ರಯತ್ನಿಸಿದನು ಎಂದು ಹೇಳಲಾಗುತ್ತದೆ, ಆದರೆ ದಾರಿಯಲ್ಲಿನ ಅಡ್ಡಿ ಕಾರಣ, ಷರತ್ತಿನ ಪ್ರಕಾರ ಶಿವನನ್ನು ಇಲ್ಲಿ ಸ್ಥಾಪಿಸಲಾಯಿತು ಎಂದು ಹೇಳಲಾಗುತ್ತದೆ.

9. ವೈದ್ಯನಾಥ ಜ್ಯೋತಿರ್ಲಿಂಗ, ಜಾರ್ಖಂಡ್ (Vaidyanath Jyotirlinga, Jharkhand): ವೈದ್ಯನಾಥ ಜ್ಯೋತಿರ್ಲಿಂಗ ಜಾರ್ಖಂಡ್‌ನ ದಿಯೋಘರ್‌ನಲ್ಲಿದೆ. ಒಮ್ಮೆ ರಾವಣನು ಶಿವನನ್ನು ಲಂಕಾಕ್ಕೆ ಕರೆದೊಯ್ಯಲು ಪ್ರಯತ್ನಿಸಿದನು ಎಂದು ಹೇಳಲಾಗುತ್ತದೆ, ಆದರೆ ದಾರಿಯಲ್ಲಿನ ಅಡ್ಡಿ ಕಾರಣ, ಷರತ್ತಿನ ಪ್ರಕಾರ ಶಿವನನ್ನು ಇಲ್ಲಿ ಸ್ಥಾಪಿಸಲಾಯಿತು ಎಂದು ಹೇಳಲಾಗುತ್ತದೆ.

9 / 12
10. ಶ್ರೀ ನಾಗನಾಥೇಶ್ವರ ಜ್ಯೋತಿರ್ಲಿಂಗ, ಗುಜರಾತ್ (Nageshwal Jyotirlinga, Gujarat): ನಾಗೇಶ್ವರ ದೇವಸ್ಥಾನವು ಗುಜರಾತ್‌ನ ಬರೋಡಾ ಪ್ರದೇಶದ ಗೋಮತಿ ದ್ವಾರಕಾಗೆ ಹತ್ತಿರದಲ್ಲಿದೆ. ಧಾರ್ಮಿಕ ಪುರಾಣಗಳಲ್ಲಿ, ಶಿವನನ್ನು ಸರ್ಪಗಳ ದೇವರು ಮತ್ತು ನಾಗೇಶ್ವರ ಎಂದರೆ ಸರ್ಪಗಳ ದೇವರು ಎಂದು ವರ್ಣಿಸಲಾಗಿದೆ. ಶಿವನ ಆಶಯದಂತೆ ಈ ಜ್ಯೋತಿರ್ಲಿಂಗಕ್ಕೆ ಹೆಸರಿಡಲಾಗಿದೆ ಎಂದು ಹೇಳಲಾಗುತ್ತದೆ. ಮತ್ತೊಂದು ಕಡೆ ಇದು ಪಾಂಡವರು ದಾರುಕಾ ವನದಲ್ಲಿ ಇದ್ದಾಗ ನಿರ್ಮಿಸಿದ ಆಲಯ ಎಂದೂ ಸಹ ಹೇಳಲಾಗುತ್ತೆ.

10. ಶ್ರೀ ನಾಗನಾಥೇಶ್ವರ ಜ್ಯೋತಿರ್ಲಿಂಗ, ಗುಜರಾತ್ (Nageshwal Jyotirlinga, Gujarat): ನಾಗೇಶ್ವರ ದೇವಸ್ಥಾನವು ಗುಜರಾತ್‌ನ ಬರೋಡಾ ಪ್ರದೇಶದ ಗೋಮತಿ ದ್ವಾರಕಾಗೆ ಹತ್ತಿರದಲ್ಲಿದೆ. ಧಾರ್ಮಿಕ ಪುರಾಣಗಳಲ್ಲಿ, ಶಿವನನ್ನು ಸರ್ಪಗಳ ದೇವರು ಮತ್ತು ನಾಗೇಶ್ವರ ಎಂದರೆ ಸರ್ಪಗಳ ದೇವರು ಎಂದು ವರ್ಣಿಸಲಾಗಿದೆ. ಶಿವನ ಆಶಯದಂತೆ ಈ ಜ್ಯೋತಿರ್ಲಿಂಗಕ್ಕೆ ಹೆಸರಿಡಲಾಗಿದೆ ಎಂದು ಹೇಳಲಾಗುತ್ತದೆ. ಮತ್ತೊಂದು ಕಡೆ ಇದು ಪಾಂಡವರು ದಾರುಕಾ ವನದಲ್ಲಿ ಇದ್ದಾಗ ನಿರ್ಮಿಸಿದ ಆಲಯ ಎಂದೂ ಸಹ ಹೇಳಲಾಗುತ್ತೆ.

10 / 12
11. ರಾಮೇಶ್ವರ ಜ್ಯೋತಿರ್ಲಿಂಗ, ತಮಿಳುನಾಡು (Rameshwar Jyotirlinga, Tamil Nadu): ಶಿವನ 11 ನೇ ಜ್ಯೋತಿರ್ಲಿಂಗ ತಮಿಳುನಾಡಿನ ರಾಮನಾಥಂ ಎಂಬ ಸ್ಥಳದಲ್ಲಿದೆ. ರಾವಣನು ಲಂಕಾಕ್ಕೆ ಬರುವ ಮೊದಲು ರಾಮನು ಸ್ಥಾಪಿಸಿದ ಶಿವಲಿಂಗವು ರಾಮೇಶ್ವರನ ಹೆಸರಿನಲ್ಲಿ ವಿಶ್ವ ಪ್ರಸಿದ್ಧವಾಯಿತು ಎಂದು ನಂಬಲಾಗಿದೆ.

11. ರಾಮೇಶ್ವರ ಜ್ಯೋತಿರ್ಲಿಂಗ, ತಮಿಳುನಾಡು (Rameshwar Jyotirlinga, Tamil Nadu): ಶಿವನ 11 ನೇ ಜ್ಯೋತಿರ್ಲಿಂಗ ತಮಿಳುನಾಡಿನ ರಾಮನಾಥಂ ಎಂಬ ಸ್ಥಳದಲ್ಲಿದೆ. ರಾವಣನು ಲಂಕಾಕ್ಕೆ ಬರುವ ಮೊದಲು ರಾಮನು ಸ್ಥಾಪಿಸಿದ ಶಿವಲಿಂಗವು ರಾಮೇಶ್ವರನ ಹೆಸರಿನಲ್ಲಿ ವಿಶ್ವ ಪ್ರಸಿದ್ಧವಾಯಿತು ಎಂದು ನಂಬಲಾಗಿದೆ.

11 / 12
12. ಘೃಷ್ಣೇಶ್ವರ ಜ್ಯೋತಿರ್ಲಿಂಗ, ಮಹಾರಾಷ್ಟ್ರ (Grishneshwar Jyotirlinga, Maharashtra): ಘೃಷ್ಣೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಜೌರಂಗಬಾದ್ ನಗರದಿಂದ 30ಕಿ.ಮೀ ದೂರದಲ್ಲಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಇದು ಕೊನೆಯದು. ಈ ಜ್ಯೋತಿರ್ಲಿಂಗವನ್ನು ಘುಷ್ಮೇಶ್ವರ ಎಂದೂ ಕರೆಯುತ್ತಾರೆ.

12. ಘೃಷ್ಣೇಶ್ವರ ಜ್ಯೋತಿರ್ಲಿಂಗ, ಮಹಾರಾಷ್ಟ್ರ (Grishneshwar Jyotirlinga, Maharashtra): ಘೃಷ್ಣೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ಜೌರಂಗಬಾದ್ ನಗರದಿಂದ 30ಕಿ.ಮೀ ದೂರದಲ್ಲಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಇದು ಕೊನೆಯದು. ಈ ಜ್ಯೋತಿರ್ಲಿಂಗವನ್ನು ಘುಷ್ಮೇಶ್ವರ ಎಂದೂ ಕರೆಯುತ್ತಾರೆ.

12 / 12

Published On - 7:23 am, Wed, 11 August 21

Follow us
ತಮ್ಮ ಆದಾಯಕ್ಕೆ ಮೀರಿದ ಪ್ರಕರಣ ಈಗ ರಾಷ್ಟ್ರೀಯ ವಿಷಯವೆಂದ ಶಿವಕುಮಾರ್
ತಮ್ಮ ಆದಾಯಕ್ಕೆ ಮೀರಿದ ಪ್ರಕರಣ ಈಗ ರಾಷ್ಟ್ರೀಯ ವಿಷಯವೆಂದ ಶಿವಕುಮಾರ್
ಗೃಹ ಸಚಿವ ಪರಮೇಶ್ವರ್​ ತವರು ಜಿಲ್ಲೆಯಲ್ಲಿ ಸೋರುತಿಹುದು ಪೊಲೀಸ್​ ಠಾಣೆ
ಗೃಹ ಸಚಿವ ಪರಮೇಶ್ವರ್​ ತವರು ಜಿಲ್ಲೆಯಲ್ಲಿ ಸೋರುತಿಹುದು ಪೊಲೀಸ್​ ಠಾಣೆ
ಟೀಮ್ ಇಂಡಿಯಾದ ಸೋಲಿನ ಬೆನ್ನಲ್ಲೇ ಕೀರ್ತನೆಯಲ್ಲಿ ಕಾಣಿಸಿಕೊಂಡ ಕೊಹ್ಲಿ
ಟೀಮ್ ಇಂಡಿಯಾದ ಸೋಲಿನ ಬೆನ್ನಲ್ಲೇ ಕೀರ್ತನೆಯಲ್ಲಿ ಕಾಣಿಸಿಕೊಂಡ ಕೊಹ್ಲಿ
ಸಿಎಂ ಮಗನ ಸಾವಿಗೆ ಭೈರತಿ ಕಾರಣ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ: ಶೋಭಾ
ಸಿಎಂ ಮಗನ ಸಾವಿಗೆ ಭೈರತಿ ಕಾರಣ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ: ಶೋಭಾ
ರಾತ್ರಿ ತಂಗಿದ್ದ ಗುಡಿ ನಡುಗಡ್ಡೆಯಾಗಿದ್ದು ಭಕ್ತರಿಗೆ ಬೆಳಗ್ಗೆ ಗೊತ್ತಾಗಿದೆ
ರಾತ್ರಿ ತಂಗಿದ್ದ ಗುಡಿ ನಡುಗಡ್ಡೆಯಾಗಿದ್ದು ಭಕ್ತರಿಗೆ ಬೆಳಗ್ಗೆ ಗೊತ್ತಾಗಿದೆ
ಎರಡು ಬಸ್​ಗಳ ನಡುವೆ ಡಿಕ್ಕಿ, ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರು
ಎರಡು ಬಸ್​ಗಳ ನಡುವೆ ಡಿಕ್ಕಿ, ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರು
ಬಿಜೆಪಿ-ಜೆಡಿಎಸ್ ಮೈತ್ರಿಗೆ ನಾವು ಹುಳಿ ಹಿಂಡುತ್ತಿಲ್ಲವೆಂದ ಚಲುವರಾಯಸ್ವಾಮಿ
ಬಿಜೆಪಿ-ಜೆಡಿಎಸ್ ಮೈತ್ರಿಗೆ ನಾವು ಹುಳಿ ಹಿಂಡುತ್ತಿಲ್ಲವೆಂದ ಚಲುವರಾಯಸ್ವಾಮಿ
ಇಂದು ಸುರಿದ ಮಳೆಗೆ ಬೆಂಗಳೂರು ಡಬಲ್ ರೋಡಲ್ಲಿ ಸಿಂಗಲ್ ರೋಡೂ ಕಾಣಿಸ್ತಿಲ್ಲ
ಇಂದು ಸುರಿದ ಮಳೆಗೆ ಬೆಂಗಳೂರು ಡಬಲ್ ರೋಡಲ್ಲಿ ಸಿಂಗಲ್ ರೋಡೂ ಕಾಣಿಸ್ತಿಲ್ಲ
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
ಮೆಕ್​ಡೊನಾಲ್ಡ್​ನಲ್ಲಿ ಫ್ರೆಂಚ್​ಫ್ರೈಸ್ ಮಾಡಿದ ಡೊನಾಲ್ಡ್​ ಟ್ರಂಪ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್
‘ಬರಬಾರದಿತ್ತು’; ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸುಸ್ತಾದ ಹನುಮಂತ್