Sign In

By signing in or creating an account, you agree with Associated Broadcasting Company's Terms & Conditions and Privacy Policy.

Financial Tasks: ಸೆಪ್ಟೆಂಬರ್​ ತಿಂಗಳಲ್ಲಿ ಪೂರ್ಣ ಮಾಡಲೇ ಬೇಕಾದ 5 ಆರ್ಥಿಕ ಜವಾಬ್ದಾರಿಗಳು ಇವು

ಈ 5 ಆರ್ಥಿಕ ಜವಾಬ್ದಾರಿಗಳನ್ನು ಸೆಪ್ಟೆಂಬರ್ ಕೊನೆಯೊಳಗಾಗಿ ಮಾಡಿ ಮುಗಿಸಿರಬೇಕು. ಇಲ್ಲದಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ.

TV9 Web
| Updated By: Srinivas Mata

Updated on:Sep 01, 2021 | 1:39 PM

ಈ ತಿಂಗಳು, ಅಂದರೆ ಸೆಪ್ಟೆಂಬರ್​ನಲ್ಲಿ ಪೂರ್ಣಗೊಳಿಸಬೇಕಾದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಐದು ಜವಾಬ್ದಾರಿಗಳು ಇಲ್ಲಿವೆ. ಒಂದು ವೇಳೆ ಈ ಗಡುವನ್ನು ಮೀರಿದಲ್ಲಿ ದಂಡ ಪಾವತಿಸಬೇಕಾದ ಸನ್ನಿವೇಶ ಉದ್ಭವಿಸಬಹುದು. ಯಾವುದು ಆ 5 ಜವಾಬ್ದಾರಿಗಳು ಎಂಬ ವಿವರ ನಿಮ್ಮೆದುರು ಇದೆ.

ಈ ತಿಂಗಳು, ಅಂದರೆ ಸೆಪ್ಟೆಂಬರ್​ನಲ್ಲಿ ಪೂರ್ಣಗೊಳಿಸಬೇಕಾದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಐದು ಜವಾಬ್ದಾರಿಗಳು ಇಲ್ಲಿವೆ. ಒಂದು ವೇಳೆ ಈ ಗಡುವನ್ನು ಮೀರಿದಲ್ಲಿ ದಂಡ ಪಾವತಿಸಬೇಕಾದ ಸನ್ನಿವೇಶ ಉದ್ಭವಿಸಬಹುದು. ಯಾವುದು ಆ 5 ಜವಾಬ್ದಾರಿಗಳು ಎಂಬ ವಿವರ ನಿಮ್ಮೆದುರು ಇದೆ.

1 / 6
ಐಟಿಆರ್ ಫೈಲಿಂಗ್
ವಯಕ್ತಿಕ ತೆರಿಗೆದಾರರಿಗೆ 2020-21ರ ಹಣಕಾಸು ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು 30 ಸೆಪ್ಟೆಂಬರ್ 2021 ಕೊನೆಯ ದಿನಾಂಕವಾಗಿದೆ. ಕೊವಿಡ್- 19 ಬಿಕ್ಕಟ್ಟಿನ ನಡುವೆ, ಅದರ ಹಿಂದಿನ ಸಾಮಾನ್ಯ ಗಡುವಾದ 31ನೇ ಜುಲೈನಿಂದ ವಿಸ್ತರಿಸಲಾಗಿತ್ತು. ಐಟಿಆರ್ ಫೈಲಿಂಗ್‌ನ 30ರ ಸೆಪ್ಟೆಂಬರ್ ಗಡುವನ್ನು ನೀವು ತಪ್ಪಿಸಿಕೊಂಡರೆ, 5,000 ರೂಪಾಯಿ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಒಂದು ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು 5 ಲಕ್ಷ ರೂಪಾಯಿಯನ್ನು ಮೀರದಿದ್ದರೆ ವಿಳಂಬ ಶುಲ್ಕವು 1,000 ರೂಪಾಯಿ ಮೀರುವುದಿಲ್ಲ.

ಐಟಿಆರ್ ಫೈಲಿಂಗ್ ವಯಕ್ತಿಕ ತೆರಿಗೆದಾರರಿಗೆ 2020-21ರ ಹಣಕಾಸು ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು 30 ಸೆಪ್ಟೆಂಬರ್ 2021 ಕೊನೆಯ ದಿನಾಂಕವಾಗಿದೆ. ಕೊವಿಡ್- 19 ಬಿಕ್ಕಟ್ಟಿನ ನಡುವೆ, ಅದರ ಹಿಂದಿನ ಸಾಮಾನ್ಯ ಗಡುವಾದ 31ನೇ ಜುಲೈನಿಂದ ವಿಸ್ತರಿಸಲಾಗಿತ್ತು. ಐಟಿಆರ್ ಫೈಲಿಂಗ್‌ನ 30ರ ಸೆಪ್ಟೆಂಬರ್ ಗಡುವನ್ನು ನೀವು ತಪ್ಪಿಸಿಕೊಂಡರೆ, 5,000 ರೂಪಾಯಿ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಒಂದು ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು 5 ಲಕ್ಷ ರೂಪಾಯಿಯನ್ನು ಮೀರದಿದ್ದರೆ ವಿಳಂಬ ಶುಲ್ಕವು 1,000 ರೂಪಾಯಿ ಮೀರುವುದಿಲ್ಲ.

2 / 6
ಆಟೋ ಡೆಬಿಟ್ ವಹಿವಾಟುಗಳು

ಮುಂದಿನ ತಿಂಗಳಿನಿಂದ (1 ಅಕ್ಟೋಬರ್, 2021) ನಿಮ್ಮ ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ ಪಾವತಿಗೆ ಎರಡು ಅಂಶಗಳ ದೃಢೀಕರಣದ ಅಗತ್ಯವಿದೆ. ಹಾಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್​ ದಾಖಲೆಗಳಲ್ಲಿ ಅಪ್‌ಡೇಟ್ ಮಾಡಿರುವುದು ಮುಖ್ಯವಾಗಿದೆ. ಆಟೋ-ಡೆಬಿಟ್ ಆರ್ಡರ್​ ಅನ್ನು ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ SIPಗಳಿಗೆ ನೀಡಲಾಗುತ್ತದೆ. ಅಕ್ಟೋಬರ್ 1ರಿಂದ ಆರ್‌ಬಿಐ ದೃಢೀಕರಣದ ಹೆಚ್ಚುವರಿ ಅಂಶವನ್ನು ಕಡ್ಡಾಯಗೊಳಿಸಿದೆ. ಐದು ದಿನಗಳ ಮುಂಚಿತವಾಗಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಪಾವತಿ ದಿನಾಂಕಕ್ಕೆ ಕನಿಷ್ಠ 24 ಗಂಟೆಗಳ ಮೊದಲು ಬ್ಯಾಂಕ್ ಸಂವಹನವನ್ನು ಕಳುಹಿಸಬೇಕಾಗುತ್ತದೆ.

3 / 6
ಡಿಮ್ಯಾಟ್ ಖಾತೆಯ KYC ಪೂರ್ಣಗೊಳಿಸಬೇಕು

ಡಿಮ್ಯಾಟ್ ಖಾತೆಗಳು ಅಥವಾ ಟ್ರೇಡಿಂಗ್ ಖಾತೆಗಳನ್ನು ಹೊಂದಿರುವ ಹೂಡಿಕೆದಾರರು ಸೆಪ್ಟೆಂಬರ್ 30ರೊಳಗೆ "Know Your Custome"(ಕೆವೈಸಿ) ವಿವರಗಳನ್ನು ಪೂರ್ಣಗೊಳಿಸಲು ಸೂಚಿಸಿದ್ದಾರೆ. ಹಾಗೆ ಮಾಡದಿದ್ದರೆ ಖಾತೆಗಳನ್ನು ನಿಷ್ಕ್ರಿಯಗೊಳಿಸಬಹುದು.

4 / 6
ಆಧಾರ್-ಪ್ಯಾನ್ ಜೋಡಣೆ ಗಡುವು

ಪ್ಯಾನ್ ಕಾರ್ಡ್‌ಗಳನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಲು ಕೊನೆಯ ದಿನಾಂಕ 30 ಸೆಪ್ಟೆಂಬರ್, 2021. ಗಡುವು ಮುಗಿದ ನಂತರ ಆಧಾರ್‌ಗೆ ಜೋಡಣೆ ಮಾಡದ ಎಲ್ಲ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ. ಬ್ಯಾಂಕ್ ಖಾತೆ ತೆರೆಯಲು ಮತ್ತು ಇತರ ಹಣಕಾಸು ವಹಿವಾಟು ನಡೆಸಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.

5 / 6
ಆಧಾರ್-ಪಿಎಫ್ ಜೋಡಣೆ ಕಡ್ಡಾಯ

ಸೆಪ್ಟೆಂಬರ್‌ನಿಂದ ನಿಮ್ಮ ಆಧಾರ್ ಅನ್ನು ಯೂನಿವರ್ಸಲ್ ಅಕೌಂಟ್​ ನಂಬರ್ (UAN)ಗೆ ಜೋಡಣೆ ಮಾಡಿದರೆ ಮಾತ್ರ ಉದ್ಯೋಗದಾತರು ಭವಿಷ್ಯ ನಿಧಿ (PF) ಖಾತೆಗೆ ತಮ್ಮ ಕೊಡುಗೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್‌ಒ) ಸಾಮಾಜಿಕ ಭದ್ರತೆ ಸಂಹಿತೆ 2020ರ ಸೆಕ್ಷನ್ 142ಕ್ಕೆ ತಿದ್ದುಪಡಿ ತಂದಿದ್ದು, ಸೇವೆಗಳನ್ನು ಪಡೆಯಲು, ಇತರ ಅನುಕೂಲಕ್ಕಾಗಿ, ಪಾವತಿ ಪಡೆಯಲು ಇತ್ಯಾದಿಗಳಿಗೆ ಈ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಪಿಎಫ್ ಖಾತೆದಾರರು ತಮ್ಮ ಆಧಾರ್ ಅನ್ನು ತಮ್ಮ ಯುಎಎನ್‌ಗೆ ಜೋಡಣೆ ಮಾಡಿದ್ದರೆ ಮಾತ್ರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ, ಉದ್ಯೋಗಿ ಅಥವಾ ಉದ್ಯೋಗದಾತರ ಕೊಡುಗೆಯನ್ನು ಪಿಎಫ್ ಖಾತೆಗಳಲ್ಲಿ ಜಮಾ ಮಾಡಲಾಗುವುದಿಲ್ಲ.

6 / 6

Published On - 1:37 pm, Wed, 1 September 21

Follow us
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ