Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರುಕುರಾಮಯ್ಯನ ಗ್ಯಾರಂಟಿಗಳು ಉಳಿಯಲ್ಲ, ಅವುಗಳು ಸುಳ್ಳು: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಅನಂತ್​ ಕುಮಾರ್ ಹೆಗಡೆ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ, ಇಂದು ಸಿದ್ದರಾಮಯ್ಯ ಶೈಲಿಯಲ್ಲೇ ಮಿಮಿಕ್ರಿ ಮಾಡಿ ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಮುರುಕುರಾಮಯ್ಯನ ಗ್ಯಾರಂಟಿಗಳು ಏನೂ ಉಳಿಯುವುದಿಲ್ಲ. ಕೊನೆಗೆ ಉಳಿಯೋದು ಮೋದಿ ಗ್ಯಾರಂಟಿನೇ ಎಂದಿದ್ದಾರೆ.

ಮುರುಕುರಾಮಯ್ಯನ ಗ್ಯಾರಂಟಿಗಳು ಉಳಿಯಲ್ಲ, ಅವುಗಳು ಸುಳ್ಳು: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಅನಂತ್​ ಕುಮಾರ್ ಹೆಗಡೆ
ಸಿದ್ದಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅನಂತ್ ಕುಮಾರ್ ಹೆಗಡೆ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: Rakesh Nayak Manchi

Updated on: Jan 20, 2024 | 10:58 PM

ಕಾರವಾರ, ಜ.20: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಮತ್ತೆ ಗುಡುಗಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde), ಮುರುಕುರಾಮಯ್ಯನ ಗ್ಯಾರಂಟಿಗಳು ಏನೂ ಉಳಿಯುವುದಿಲ್ಲ. ಕೊನೆಗೆ ಉಳಿಯೋದು ಮೋದಿ ಗ್ಯಾರಂಟಿನೇ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಶೈಲಿಯಲ್ಲೇ ಮಿಮಿಕ್ರಿ ಮಾಡಿ ಹರಿಹಾಯ್ದ ಹೆಗಡೆ, ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳು ಸುಳ್ಳು ಎಂದರು. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು ಕೇಳಿದ್ದೀರಾ? ಚುನಾವಣೆ ಸಂದರ್ಭದಲ್ಲಿ ಹೇಳ್ತಿವಪ್ಪ, ಹೇಳಿದ್ದೆಲ್ಲಾ ಮಾಡಕಾಯ್ತದಾ? ದುಡ್ಡು ಎಲ್ಲಿಂದ ತರೋದು? ಇದೇ ಭಾಷೆಲೀ ಹೇಳಿದ್ದು ನೆನಪಿದ್ಯಾ ಎಂದು ಕಾರ್ಯಕರ್ತರನ್ನು ಕೇಳಿದರು. ಅಲ್ಲದೆ, ಬುದ್ಧಿವಂತರು ಇದನ್ನು ಅರ್ಥಮಾಡಿಕೊಳ್ಳಬೇಕು. ಅವರ ನಾಟಕದ ಭಾಷಣಕ್ಕೆ ಮರುಳಾಗಬಾರದು ಎಂದರು.

ಇದನ್ನೂ ಓದಿ: ಅಪ್ಪ ಅಮ್ಮ ಗೊತ್ತಿಲ್ಲದವರು ತಮ್ಮ ಧರ್ಮ ಜಾತ್ಯತೀತ ಎಂದು ಹೇಳ್ತಾರೆ, ಸಿದ್ದರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ಪರೋಕ್ಷ ವಾಗ್ದಾಳಿ

ಲೋಕಸಭೆ ಚುನಾವಣೆ ಮುಗಿದರೆ ಹೊಸ ಅಧ್ಯಾಯ ಶುರುವಾಗುತ್ತದೆ. ಕಾಂಗ್ರೆಸ್ ಮುರಿದ ಮನೆ ಆಗುತ್ತದೆ ಎಂದ ಹೆಗಡೆ, ಸುಪ್ರೀಂಕೋರ್ಟ್​ ತೀರ್ಪು ಬಂತು, ರಾಮಮಂದಿರ ನಿರ್ಮಾಣವಾಯ್ತು. ನಮಗೆ ಆಹ್ವಾನ ಬಂದಿಲ್ಲ, ಬಂದರೂ ನಾವು ಹೋಗಲ್ಲ ಅಂತ ಹೇಳುತ್ತಿದ್ದಾರೆ. ಆಮೇಲೆ ನಾವು ಹೋಗುತ್ತೇವೆ, ಇಷ್ಟ ಬಂದಾಗ ಹೋಗುತ್ತೇವೆ ಅಂದರು. ಜನರ ತಲೆ ಕೆಡಿಸುವುದೇ ಸಿದ್ದರಾಮಯ್ಯ ಅವರ ಅಜೆಂಡಾ, ಇದೇ ಅವರ ರಾಜಕಾರಣ ಎಂದರು.

ಕಳೆದ ನಾಲ್ಕು ವರ್ಷಗಳಲ್ಲಿ ಮನೆಯಲ್ಲೇ ಕುಳಿತಿದ್ದ ಅನಂತ್ ಕುಮಾರ್ ಹೆಗಡೆ ಈಗ ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಟಿಕೆಟ್​ಗಾಗಿ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಹೆಗಡೆ, ಕಳೆದ ನಾಲ್ಕೂವರೆ ವರ್ಷದಿಂದ ಸಂಸದರು ಎಲ್ಲೂ ಬಂದಿಲ್ಲ ಅಂತಾರೆ. ಮೂರು ವರ್ಷದ ಹಿಂದೆ PMJSY ಯೋಜನೆಗಳ ಆರಂಭಕ್ಕೆ ನಾನೇ ಬಂದಿದ್ದು. ಕಳೆದ 2 ವರ್ಷದಿಂದ ಆರೋಗ್ಯ, ವೈಯಕ್ತಿಕ ಸಮಸ್ಯೆಯಿಂದ ಬಂದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಅಭಿವೃದ್ಧಿ ಕಾರ್ಯಕ್ರಮಗಳ ಸಭೆ ನಡೆಸುತ್ತಿದ್ದೇನೆ. ದಿಶಾ ಮೀಟಿಂಗ್ ನಡೆಸಿ ಅಭಿವೃದ್ಧಿ ಕಾರ್ಯ ಪರಿಶೀನೆ ನಡೆಸುತ್ತಿದ್ದೇನೆ. ಸಭೆ ನಡೆಸದಿದ್ದರೆ ಜಿಲ್ಲಾ ಪಂ‌ಚಾಯಿತಿಗೆ ಹಣ ಬರಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸ್ಟಂಪ್‌ಗಳನ್ನು ಹಿಡಿದು ದಾಂಡಿಯಾ ನೃತ್ಯ ಮಾಡಿದ ಕೊಹ್ಲಿ- ರೋಹಿತ್
ಸ್ಟಂಪ್‌ಗಳನ್ನು ಹಿಡಿದು ದಾಂಡಿಯಾ ನೃತ್ಯ ಮಾಡಿದ ಕೊಹ್ಲಿ- ರೋಹಿತ್
ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಎಲ್ಲೆಡೆ ಸಂಭ್ರಮ
ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಎಲ್ಲೆಡೆ ಸಂಭ್ರಮ
ಪ್ರವಾಸಿಗರ ಮೇಲೆ ಅತ್ಯಾಚಾರ ಕೇಸ್​:​ ಇದು ಸರ್ಕಾರದ ವೈಫಲ್ಯ ಎಂದ ಜೋಶಿ
ಪ್ರವಾಸಿಗರ ಮೇಲೆ ಅತ್ಯಾಚಾರ ಕೇಸ್​:​ ಇದು ಸರ್ಕಾರದ ವೈಫಲ್ಯ ಎಂದ ಜೋಶಿ
0.78 ಸೆಕೆಂಡುಗಳಲ್ಲಿ ಗಿಲ್ ಆಟಕ್ಕೆ ಅಂತ್ಯ ಹಾಡಿದ ಫಿಲಿಫ್ಸ್; ವಿಡಿಯೋ ನೋಡಿ
0.78 ಸೆಕೆಂಡುಗಳಲ್ಲಿ ಗಿಲ್ ಆಟಕ್ಕೆ ಅಂತ್ಯ ಹಾಡಿದ ಫಿಲಿಫ್ಸ್; ವಿಡಿಯೋ ನೋಡಿ
ನಿಶ್ವಿಕಾ ನಾಯ್ಡು ಮೇಲೆ ರಾಯಚೂರು ಮಂದಿಗೆ ಸಿಕ್ಕಾಪಟ್ಟೆ ಅಭಿಮಾನ
ನಿಶ್ವಿಕಾ ನಾಯ್ಡು ಮೇಲೆ ರಾಯಚೂರು ಮಂದಿಗೆ ಸಿಕ್ಕಾಪಟ್ಟೆ ಅಭಿಮಾನ
ಶುಭಾಶಯ ತಿಳಿಸಲು ಬಂದ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ತೇಜಸ್ವಿ ಸೂರ್ಯ
ಶುಭಾಶಯ ತಿಳಿಸಲು ಬಂದ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ತೇಜಸ್ವಿ ಸೂರ್ಯ
ಮದುವೆ ಸಂಭ್ರಮದಲ್ಲಿದ್ದ ಮಗನನ್ನು ಹೊಡೆದು ಕೊಂದ ತಂದೆ: ಆಗಿದ್ದೇನು?
ಮದುವೆ ಸಂಭ್ರಮದಲ್ಲಿದ್ದ ಮಗನನ್ನು ಹೊಡೆದು ಕೊಂದ ತಂದೆ: ಆಗಿದ್ದೇನು?
ದಿಗಂತ್ ನಾಪತ್ತೆ ಕೆಸ್​ಗೆ ​ಟ್ವಿಸ್ಟ್​: SP ಬಿಚ್ಚಿಟ್ಟರು ಸ್ಫೋಟಕ ಮಾಹಿತಿ
ದಿಗಂತ್ ನಾಪತ್ತೆ ಕೆಸ್​ಗೆ ​ಟ್ವಿಸ್ಟ್​: SP ಬಿಚ್ಚಿಟ್ಟರು ಸ್ಫೋಟಕ ಮಾಹಿತಿ
ಚಲಿಸುತ್ತಿರುವ ರೈಲಿನಿಂದ ಬೀಳುತ್ತಿದ್ದ ಮಹಿಳೆಯ ರಕ್ಷಣೆ
ಚಲಿಸುತ್ತಿರುವ ರೈಲಿನಿಂದ ಬೀಳುತ್ತಿದ್ದ ಮಹಿಳೆಯ ರಕ್ಷಣೆ
ರಾಜ್​ಕುಮಾರ್ ಹೆಸರನ್ನು ಚಪ್ಪಾಳೆಗಾಗಿ ಮಾತ್ರ ಬಳಸಲಾಗುತ್ತಿದೆ: ಕಿಶೋರ್ ಬೇಸರ
ರಾಜ್​ಕುಮಾರ್ ಹೆಸರನ್ನು ಚಪ್ಪಾಳೆಗಾಗಿ ಮಾತ್ರ ಬಳಸಲಾಗುತ್ತಿದೆ: ಕಿಶೋರ್ ಬೇಸರ