ಮಹಿಳಾ ಮೀಸಲಾತಿ ಮಸೂದೆ ಮಂಡನೆ; ಸೋನಿಯಾ, ರಾಜೀವ್​ ಗಾಂಧಿ ಅವರ ಫಲ ಎಂದ ಮಾಜಿ ಸಚಿವೆ ಜಯಮಾಲಾ

ಈ ಕುರಿತು ಬಿಜೆಪಿ, ಕಾಂಗ್ರೆಸ್ ಎಂದು ಬೊಟ್ಟು ಮಾಡಲ್ಲ. ಕಾಂಗ್ರೆಸ್ ಮಾಡಲು ಹೊರಟಾಗ, ಬಿಜೆಪಿ‌ ನಿಲ್ಲಿಸಿತ್ತು. ಅವರು ಮಾಡಿದ ತಪ್ಪನ್ನು ಸರಿ ಪಡಿಸಿಕೊಳ್ಳಲಿ. ಅಂದು ಯಾರು ವಿರೋಧಿಸದರೊ, ಇಂದು ಅವರೇ ಮಂಡನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ಜಯಮಾಲ ಹೇಳಿದರು.

ಮಹಿಳಾ ಮೀಸಲಾತಿ ಮಸೂದೆ ಮಂಡನೆ; ಸೋನಿಯಾ, ರಾಜೀವ್​ ಗಾಂಧಿ ಅವರ ಫಲ ಎಂದ ಮಾಜಿ ಸಚಿವೆ ಜಯಮಾಲಾ
ಮಾಜಿ ಸಚಿವೆ ಜಯಮಾಲ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 19, 2023 | 3:32 PM

ಬೆಂಗಳೂರು, ಸೆ.19: ಭಾರತದ ನೂತನ ಸಂಸತ್​ನಲ್ಲಿ ಇಂದು(ಸೆ.19) ಮೊದಲ ಕಲಾಪ ನಡೆದಿದ್ದು, ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಿದೆ. ಈ ಕುರಿತು ‘ಮೂರು ದಶಕಗಳಿಂದ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಲಿ ಎಂದು ಕಾಯುತ್ತಿದ್ದೇವೂ ಎಂದು ಮಾಜಿ ಸಚಿವೆ ಜಯಮಾಲಾ(Jayamala)ಹೇಳಿದ್ದಾರೆ. ಇಂದಿರಾ ಗಾಂಧಿ ಅವರು ರಾಷ್ಟ್ರವನ್ನು ಆಳಿದ್ದಾರೆ. ಅವರ ಹಾಗೆಯೇ ಮಹಿಳೆಯರಿಗೆ ಅವಕಾಶ ಸಿಗಬೇಕು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ನಮಗೆ ಖುಷಿಯಾಗುತ್ತಿದೆ ಎಂದರು.

ಸೋನಿಯಾ, ರಾಜೀವ್​ ಗಾಂಧೀಜಿ ಅವರ ಫಲ ಇದು

ಹೌದು, ಇದು ಸೋನಿಯಾ ಹಾಗೂ ರಾಜೀವ್​ ಗಾಂಧೀಜಿ ಅವರ ಫಲ. ಇದು ಕರ್ನಾಟಕದ 224 ಕ್ಷೇತ್ರಗಳಲ್ಲಿ ಒಬ್ಬರಿಗೋ, ಇಬ್ಬರಿಗೂ ಸಿಗುತ್ತದೆ. ಟಿಕೆಟ್ ಪಡೆಯಲು ಸಾಕಷ್ಟು ಕಷ್ಟ ಪಡುತ್ತಾಳೆ. ಆ ಹೆಣ್ಣು ‌ಮಕ್ಕಳನ್ನು ಸೋಲಿಸುವ ಪ್ರಯತ್ನ ಕೂಡ ಮಾಡುತ್ತಾರೆ. ಯಾವ ಕೆಲಸ ಕೊಟ್ಟರು ಮಾಡಿ ತೋರಿಸುತ್ತಿದ್ದಾಳೆ. ನಾಳೆ‌ ಪಂಚಮಿ ದಿನ ಇದ್ದು ಒಳ್ಳೆಯದಾಗಲಿ, ಪುರುಷ‌ ಮನಸ್ಸು ಮೀಸಲಾತಿ ಕೊಡಲು ಇಷ್ಟಪಡುತ್ತಿರಲಿಲ್ಲ. ತಂದೆ- ಮಕ್ಕಳಲ್ಲೂ ಸಹ ಅಧಿಕಾರಕ್ಕೆ ಬಂದಾಗ ಮಗಳಿಗೆ ಅವಕಾಶ ಕೊಡುತ್ತಿರಲಿಲ್ಲ.

ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಬೇಷರತ್ ಬೆಂಬಲ ನೀಡಿದ ರಾಹುಲ್​ ಗಾಂಧಿ

ಸಂಕಲ್ಪ ಯಾರದ್ದೋ, ಒಳ್ಳೆಯದು

ಇನ್ನು ಈ ಕುರಿತು ಬಿಜೆಪಿ- ಕಾಂಗ್ರೆಸ್ ಎಂದು ಬೊಟ್ಟು ಮಾಡಲ್ಲ. ಕಾಂಗ್ರೆಸ್ ಮಾಡಲು ಹೊರಟಾಗ, ಬಿಜೆಪಿ‌ ನಿಲ್ಲಿಸಿತ್ತು. ಅವರು ಮಾಡಿದ ತಪ್ಪನ್ನು ಸರಿ ಪಡಿಸಿಕೊಳ್ಳಲಿ. ಅಂದು ಯಾರು ವಿರೋಧಿಸದರೊ, ಇಂದು ಅವರೇ ಮಂಡನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ಜಯಮಾಲ ಹೇಳಿದರು.

ಕಾಂಗ್ರೆಸ್​ನವರಿಗೆ ಬಹಳ ಸಂತೋಷ; ಉಮಾಶ್ರೀ

ಮಹಿಳಾ ಮೀಸಲಾತಿ ಮಸೂದೆ ಮಂಡನೆ ವಿಚಾರ ಕುರಿತು ‘ಮಹಿಳೆಯರ ರಾಜಕೀಯ ಭವಿಷ್ಯ ನಿರ್ಮಾಣ ‌ಮಾಡುವ ವಿಧೇಯಕ ಇದಾಗಿದೆ. ಕೇಂದ್ರ ಸರ್ಕಾರ ಮಂಡನೆ ಮಾಡುತ್ತಿರುವುದನ್ನು ನಾವು ಸ್ವಾಗತ ಮಾಡುತ್ತೇನೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು. ಮಹಿಳಾ ಮೀಸಲಾತಿ ಬಗ್ಗೆ ದೇಶಾದ್ಯಂತ ಸಾಕಷ್ಟು ಜನ ಮುಖಂಡರು ಒತ್ತಡ ಹಾಕುತ್ತಿದ್ದರು. ರಾಜೀವ ಗಾಂಧಿ ಅವರು ಮಹಿಳಾ ಮೀಸಲಾತಿ ಪರವಾಗಿ ಇದ್ದವರು. ಕಾಂಗ್ರೆಸ್​ನವರಿಗೆ ಬಹಳ ಸಂತೋಷವಾಗಿದೆ ಎಂದರು.

ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಕೇಂದ್ರ ಸಂಪುಟ ಅಸ್ತು, ಐತಿಹಾಸಿಕ ನಿರ್ಣಯ ಕೈಗೊಂಡ ಮೋದಿ ಸರ್ಕಾರ

ಇನ್ನು ನಾನು ಕ್ರೆಡಿಟ್ ಬಗ್ಗೆ ಮಾತಾಡಲ್ಲ. ಆದರೆ, ಚುನಾವಣೆ ಕ್ರೆಡಿಟ್​ಗಾಗಿ ಅವರು ಮಾಡಿದ್ರೆ, ನಾವು ಹಿಂದೇಯೇ ಮಾಡಿದ್ದೇವೆ. ದೇವೇಗೌಡರ ಕಾಲದಲ್ಲಿ ಆಯಿತು. ಸಿಪಿಎಂ ನಾಯಕಿಯೊಬ್ಬರು ಮೂವ್ ಮಾಡಿದ್ರು, ಹಾಗಾಗಿ ಇದಕ್ಕಾಗಿ ಹೋರಾಟ, ಪ್ರಯತ್ನ ಮಾಡಿದವರಿಗೆ ಕ್ರೆಡಿಟ್ ಸಿಗಬೇಕು. ನಾವು ಮಾಡಿದನ್ನು ಇವರು ಮುಂದುವರೆಸಿಕೊಂಡು ಬಂದಿದ್ದಾರೆ. ಇವರು ಕಾಂಗ್ರೆಸ್ ನವರು ಮಾಡಿದನ್ನು ಟೀಕೆ, ಗದ್ದಲ ಮಾಡುತ್ತಾರೆ. ಅಧಿಕಾರ ಬಂದ ಮೇಲೆ ಈ ಸರ್ಕಾರ ಅವುಗಳನ್ನು ಒಪ್ಪಿಕೊಳ್ಳುತ್ತಾ ಹೋಗುತ್ತದೆ.

ಲೋಕಸಭೆ ಚುನಾವಣೆಗೆ ಅಳವಡಿಸಿದರೆ ಒಳ್ಳೆಯದು

ಇನ್ನು ಇದನ್ನು ಲೋಕಸಭೆ ಚುನಾವಣೆಗೆ ಅಳವಡಿಸಿದ್ರೆ, ಒಳ್ಳೆಯದಾಗುತ್ತದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಶಾಸಕರು,‌ ಸಂಸದರಾಗಲು ಸಾಧ್ಯ. ಪರಿಷತ್​ನಲ್ಲೂ ಮುಂದೆ ಅವಕಾಶ ಸಿಗಲಿದೆ ಎಂದು ಮಾಜಿ ಸಚಿವೆ ಉಮಾಶ್ರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ ಇದೇ ವೇಳೆ ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ‘ಕೆ.ಎನ್‌ ರಾಜಣ್ಣ ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ, ತೀರ್ಮಾನ ಹೈಕಮಾಂಡ್ ಮಾಡುತ್ತಾರೆ. ಈ ಹಿಂದೆ ಕಾರ್ಯಾಧ್ಯಕ್ಷರನ್ನ ಮಾಡಿದ್ರು, ಹಾಗಾಗಿ ಹೇಳಿರಬಹುದು. ಮಹಿಳೆಯರಿಗೆ ಕಾರ್ಯಾಧ್ಯಕ್ಷ, ಡಿಸಿಎಂ ಹುದ್ದೆ ಕೊಡಲಿ‌ಬಿಡಿ ಎಲ್ಲರಿಗೂ ಅವಕಾಶ ಸಿಗಲಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Tue, 19 September 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್