AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಬಲ ಘೋಷಿಸುವ ಮೂಲಕ ನವೀನ್ ಪಟ್ನಾಯಿಕ್ ರಾಖಿ ಕಟ್ಟಿದ ಸಹೋದರಿಗೆ ಕೊಟ್ಟ ಮಾತು ಉಳಿಸಿದರು: ದ್ರೌಪದಿ ಮುರ್ಮು

ಒಡಿಶಾದ ವಿಧಾನಸಭಾ ಆವರಣದಲ್ಲಿ ಬಿಜೆಡಿ ಶಾಸಕರು ಮತ್ತು ಸಂಸದರೊಂದಿಗೆ ಸಂವಾದ ಮಾಡಿದ ಮುರ್ಮು, ಸಹೋದರಿಯಂತೆ ನಾನು ಜಗನ್ನಾಥ್(ಪಟ್ನಾಯಿಕ್) ಅವರ ಕೈಗೆ ರಾಖಿ ಕಟ್ಟಿದ್ದೆ. ಸಹೋದರಿಯಾಗಿ ನಾನು ಏನಾದರೂ ಕೇಳುವ ಮುನ್ನವೇ ಸಹೋದರ ನನಗೆ ಬೆಂಬಲ ನೀಡಿದ್ದಾರೆ

ಬೆಂಬಲ ಘೋಷಿಸುವ ಮೂಲಕ ನವೀನ್ ಪಟ್ನಾಯಿಕ್ ರಾಖಿ ಕಟ್ಟಿದ ಸಹೋದರಿಗೆ ಕೊಟ್ಟ ಮಾತು ಉಳಿಸಿದರು: ದ್ರೌಪದಿ ಮುರ್ಮು
ನವೀನ್ ಪಟ್ನಾಯಿಕ್ ಜತೆ ದ್ರೌಪದಿ ಮುರ್ಮು
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Jul 08, 2022 | 7:34 PM

Share

ಭುವನೇಶ್ವರ್: ತಮ್ಮ ತವರು ರಾಜ್ಯವಾದ ಒಡಿಶಾದಲ್ಲಿ (Odisha) ಸಿಕ್ಕಿದ ಅಭೂತಪೂರ್ವ ಸ್ವಾಗತಕ್ಕೆ ಭಾವುಕರಾದ ರಾಷ್ಟ್ರಪತಿ ಹುದ್ದೆಗಾಗಿ ಸ್ಪರ್ಧಿಸುತ್ತಿರುವ  ಎನ್​​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು (Droupadi Murmu), ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ರಕ್ಷಾಬಂಧನ ವೇಳೆ ನೀಡಿದ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನವೀನ್ ಪಟ್ನಾಯಿಕ್ (Naveen Patnaik) ಮುರ್ಮು ಅವರಿಗೆ ಬೆಂಬಲ ಘೋಷಿಸಿದ್ದಾರೆ. ಮಯೂರ್ ಭಂಜ್ ಜಿಲ್ಲೆಯ ಬುಡಕಟ್ಟು ನಿವಾಸಿಯಾಗಿರುವ ಮುರ್ಮು ಅವರು ಪ್ರಚಾರಕ್ಕಾಗಿ ಒಡಿಶಾಗೆ ಭೇಟಿ ನೀಡಿದಾಗ ಅವರನ್ನು ರಾಜ್ಯದ ಅತಿಥಿಯಂತೆ ಸತ್ಕರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಒಡಿಶಾದ ವಿಧಾನಸಭಾ ಆವರಣದಲ್ಲಿ ಬಿಜೆಡಿ ಶಾಸಕರು ಮತ್ತು ಸಂಸದರೊಂದಿಗೆ ಸಂವಾದ ಮಾಡಿದ ಮುರ್ಮು, ಸಹೋದರಿಯಂತೆ ನಾನು ಜಗನ್ನಾಥ್(ಪಟ್ನಾಯಿಕ್) ಅವರ ಕೈಗೆ ರಾಖಿ ಕಟ್ಟಿದ್ದೆ. ಸಹೋದರಿಯಾಗಿ ನಾನು ಏನಾದರೂ ಕೇಳುವ ಮುನ್ನವೇ ಸಹೋದರ ನನಗೆ ಬೆಂಬಲ ನೀಡಿದ್ದಾರೆ. ಒಡಿಶಾದ ಮಗಳಿಗೆ ಅವರು ನೀಡಿದ ಗೌರವಕ್ಕೆ ನಾನು ಋಣಿ ಎಂದು ಮುರ್ಮು ಹೇಳಿದ್ದಾರೆ.

ಒಡಿಶಾ ಮುಖ್ಯಮಂತ್ರಿ ಅವರು ತಮ್ಮ ನವೀನ್ ನಿವಾಸದಲ್ಲಿ ಮುರ್ಮ ಅವರಿಗೆ ಮಧ್ಯಾಹ್ನ ಆತಿಥ್ಯ ನೀಡಿದ್ದಾರೆ. ಮಧ್ಯಾಹ್ನದ ಊಟಕ್ಕೆ ಅನ್ನ, ಬೇಳೆ ಸಾರು ಜತೆ ಒಡಿಶಾದ ಖಾದ್ಯಗಳಾದ ಬೈಗನ್ ಭಾಜಾ, ಆಲೂ ಭರ್ತಾ , ಬಡೀ ಚುರಾ ಬಡಿಸಲಾಗಿದೆ ಎಂದು ಮುಖ್ಯಮಂತ್ರಿಯವರ ನಿವಾಸದ ಮೂಲಗಳು ಹೇಳಿವೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಮತ್ತು ಬಿಜೆಡಿಯ ಸಂಸದೀಯ ಪಕ್ಷದ ನಾಯಕ ಪಿನಾಕಿ ಮಿಶ್ರಾ ಕೂಡಾ ನವೀನ್ ನಿವಾಸದಲ್ಲಿ ಮುರ್ಮು ಅವರಿಗೆ ನೀಡಿದ ಭೋಜನಕೂಟದಲ್ಲಿ ಭಾಗಿಯಾಗಿದ್ದರು. ಒಡಿಶಾದಲ್ಲಿ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಮುರ್ಮು(64) ಎಲ್ಲ ಶಾಸಕರು ನನ್ನ ಸಹೋದರ ಸಹೋದರಿಯಾಗಿದ್ದಾರೆ ಎಂದು ಹೇಳಿದ್ದಾರೆ. ನಾನು ಇಲ್ಲಿರುವ ಬಹುತೇಕರ ಜತೆ ಕೆಲಸ ಮಾಡಿದ್ದೇನೆ. ನಾನು ವಿಧಾನಸಭೆಯಿಂದ ಹೊರಹೋದ ನಂತರ ಬಂದವರು ಕೂಡಾ ನನ್ನ ಸಹೋದರ ಸಹೋದರಿಯರು. ನನಗೆ ಅವರನ್ನು ವೈಯಕ್ತಿಕವಾಗಿ ಗೊತ್ತಿಲ್ಲ ಆದರೆ ತಂತ್ರಜ್ಞಾನ ನಮ್ಮೆಲ್ಲರನ್ನೂ ಹತ್ತಿರಕ್ಕೆ ಕರೆತಂದಿದೆ. ನಾನು ಎಲ್ಲ ಸಹೋದರ ಸಹೋದರಿಯರ ಬೆಂಬಲ ಬೇಡುತ್ತಿದ್ದೇನೆ ಎಂದು ಹೇಳಿದ್ದಾರೆ.

ನಾವು ಒಡಿಶಾವನ್ನು ಸುಂದರ ಮತ್ತು ಅಭಿವೃದ್ಧಿ ಹೊಂದಿದ ಪ್ರದೇಶವಾಗಿರಿಸಬೇಕು. ಮುಖ್ಯಮಂತ್ರಿ ಮತ್ತು ಎಲ್ಲ ಶಾಸಕರಲ್ಲಿ ಒಡಿಶಾದ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಮುರ್ಮು ಹೇಳಿದ್ದಾರೆ.

Published On - 7:18 pm, Fri, 8 July 22

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್