ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗವಾಗಿರುತ್ತದೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಮಿತ್ ಶಾ

ದೇಶದಲ್ಲಿ ತುಷ್ಟೀಕರಣ, ವಂಶಾಡಳಿತ ಮತ್ತು ಜಾತೀಯತೆಯ ರಾಜಕೀಯ ಕೊನೆಗೊಂಡಾಗ ಭಾರತವು "ವಿಶ್ವ ಗುರು" ಆಗುವತ್ತ ಸಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗವಾಗಿರುತ್ತದೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಮಿತ್ ಶಾ
ಅಮಿತ್ ಶಾ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jul 03, 2022 | 8:31 PM

ವಿರೋಧ ಪಕ್ಷಗಳ ನೇತೃತ್ವದ ಸರ್ಕಾರಗಳು ನಡೆಸುತ್ತಿರುವ ತುಷ್ಟೀಕರಣ ರಾಜಕಾರಣವು ದೇಶದಲ್ಲಿ ಕೋಮುವಾದ ಮತ್ತು ಮೂಲಭೂತವಾದಕ್ಕೆ ಕಾರಣವಾಗಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ (Amit Shah) ಭಾನುವಾರ ಹೇಳಿದ್ದಾರೆ. ದೇಶದಲ್ಲಿ ತುಷ್ಟೀಕರಣ, ವಂಶಾಡಳಿತ ಮತ್ತು ಜಾತೀಯತೆಯ ರಾಜಕೀಯ ಕೊನೆಗೊಂಡಾಗ ಭಾರತವು “ವಿಶ್ವ ಗುರು” (Vishwa Guru) ಆಗುವತ್ತ ಸಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ (BJP national executive meet) ಸಮಾರೋಪ ದಿನದಂದು ಮುಂಬರುವ ಚುನಾವಣೆಯ ಗುರಿಯನ್ನು ನಿಗದಿಪಡಿಸುವ ರಾಜಕೀಯ ನಿರ್ಣಯವನ್ನು ಮಂಡಿಸಿದ ಶಾ, ಮುಂಬರುವ 30-40 ವರ್ಷಗಳು ಬಿಜೆಪಿಯ ಯುಗ. ಇದು ಅಭಿವೃದ್ದಿ ಮತ್ತು ಕಾರ್ಯಕ್ಷಮತೆಯನ್ನು ಕೇಂದ್ರೀಕರಿಸಿದೆ ಎಂದು ಅವರು ಹೇಳಿದ್ದಾರೆ. 2002ರ ಗುಜರಾತ್ ಗಲಭೆಯ ಹಿಂದೆ ಯಾವುದೇ “ದೊಡ್ಡ ಪಿತೂರಿ” ಇಲ್ಲ ಎಂದು ನೇಮಿಸಿದ ವಿಶೇಷ ತನಿಖಾ ತಂಡದ ಸಂಶೋಧನೆಗಳೊಂದಿಗೆ ಸಮ್ಮತಿಸಿರುವ ಗುಜರಾತ್ ಕುರಿತು ಇತ್ತೀಚಿನ ಸುಪ್ರೀಂಕೋರ್ಟ್ ತೀರ್ಪನ್ನು ಎತ್ತಿ ತೋರಿಸುತ್ತಾ ಶಾ ತಮ್ಮ ಭಾಷಣವನ್ನು ಪ್ರಾರಂಭಿಸಿದ್ದಾರೆ. ಗುಜರಾತ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ಅಮಿತ್ ಶಾ ನಾಯಕರ ಗಮನ ಸೆಳೆದಿದ್ದಾರೆ. ಪ್ರಧಾನಿ ಮೇಲೆ ಏನೇ ಆರೋಪಗಳಿದ್ದರೂ ಅದು ತಪ್ಪು ಎಂದು ಸಾಬೀತಾಗಿದೆ ಎಂದರು.

ಈ ತೀರ್ಪು ಸೈದ್ಧಾಂತಿಕ-ಆಧಾರಿತ ಮಾಧ್ಯಮದವರು ಮತ್ತು ಎನ್‌ಜಿಒಗಳ ಪಿತೂರಿಗಳನ್ನು ಬಹಿರಂಗಪಡಿಸಿದೆ. ವರ್ಷಗಳಲ್ಲಿ ಅವರು (ಮೋದಿ) ಭಗವಾನ್ ನೀಲಕಂಠ (ಶಿವ) ನಂತೆ ಮೌನವಾಗಿ ವಿಷವನ್ನು ನುಂಗಿ ಅದನ್ನು ತಮ್ಮ ಗಂಟಲಿನಲ್ಲಿ ಇಟ್ಟುಕೊಂಡಿದ್ದಾರೆ. “ತನಿಖಾ ಸಂಸ್ಥೆಯಿಂದ ವಿಚಾರಣೆಗೆ ಕರೆದಾಗ ಒಬ್ಬ ನಾಯಕ ಮಾಡಿದಂತಹ ರಾಜಕೀಯ ನಾಟಕವನ್ನು ಮೋದಿ ಮಾಡಿಲ್ಲ ಎಂದು ಗೃಹ ಸಚಿವರು ಹೇಳಿರುವುದಾಗಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಶರ್ಮಾ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರೂ ನಿರ್ಣಯವನ್ನು ಅನುಮೋದಿಸಿದರು. ಶರ್ಮಾ ಅವರು ಬಿಜೆಪಿಯ ಸಾಧನೆಗಳನ್ನು ಉಲ್ಲೇಖಿಸಿದರೆ ಮತ್ತು ಈಶಾನ್ಯದತ್ತ ಗಮನಹರಿಸಿದರೆ, ಬೊಮ್ಮಾಯಿ ದಕ್ಷಿಣ ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿವರಿಸಿದರು. ಅವರು ಹೆಚ್ಚುತ್ತಿರುವ ಮೂಲಭೂತವಾದಿಗಳು ಮತ್ತು ಅವರ ಸಂಘಟನೆಯ ಬಗ್ಗೆ ಮಾತನಾಡಿದರು. ಕಾಂಗ್ರೆಸ್ ಜಾತಿ ರಾಜಕಾರಣ ಮಾಡುತ್ತದೆ. ಅವರಿಗೆ ಜಾತಿಯೊಳಗೆ ಜಾತಿ ಇದೆ. ಆದರೆ ಶೀಘ್ರದಲ್ಲೇ ದಕ್ಷಿಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಬಿಜೆಪಿಯ ಮುಂದಿನ ಬೆಳವಣಿಗೆಯ ಕ್ಷೇತ್ರ ದಕ್ಷಿಣದಿಂದ ಬರಲಿದೆ. ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಹಾಗೂ ಪೂರ್ವ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ
Image
ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗವಾಗಿರುತ್ತದೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಮಿತ್ ಶಾ
Image
ಸಮಾಜವಾದಿ ಪಕ್ಷದ ಎಲ್ಲಾ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಸ್ಥೆಗಳನ್ನು ವಿಸರ್ಜಿಸಿದ ಅಖಿಲೇಶ್ ಯಾದವ್
Image
ರಾಹುಲ್ ಗಾಂಧಿ ಬಗ್ಗೆ ತಪ್ಪಾದ ಸುದ್ದಿಯ ವಿಡಿಯೊ ಶೇರ್ ಮಾಡಿರುವ ಬಿಜೆಪಿ ಕ್ಷಮೆ ಕೇಳಬೇಕು: ಕಾಂಗ್ರೆಸ್ ಒತ್ತಾಯ

ಕೇಂದ್ರ ಗೃಹ ಸಚಿವರು ಈಶಾನ್ಯ ಪ್ರದೇಶದ ಬಗ್ಗೆ ಹೇಳಿದ್ದು ಮೋದಿ ಅವರು ಅಲ್ಲಿನ ಬೆಳವಣಿಗೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಶಾ ಅವರನ್ನು ಉಲ್ಲೇಖಿಸಿ ಶರ್ಮಾ ಹೇಳಿದರು. ನಾಗಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಲ್ಲಿನ ವಿಳಂಬದ ಬಗ್ಗೆ ಕೇಳಲಾದ ಪ್ರಶ್ನೆಗೆ, ಶರ್ಮಾ 2024 ರ ವೇಳೆಗೆ, ಯಾವುದೇ ತಪ್ಪು ರೇಖೆ ಇರುವುದಿಲ್ಲ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು.

ಕಾಂಗ್ರೆಸ್‌ಗೆ “ಮೋದಿ ಫೋಬಿಯಾ” ಇದೆ. ಸರ್ಜಿಕಲ್ ಸ್ಟ್ರೈಕ್, ತ್ರಿವಳಿ ತಲಾಖ್, ಯೋಗ ದಿನ, ರಾಮಮಂದಿರ ಮತ್ತು ಕೊವಿಡ್ ಲಸಿಕೆಯನ್ನು ಸಹ ವಿರೋಧಿಸುತ್ತದೆ ಎಂದು ಶಾ ತಮ್ಮ ಭಾಷಣದಲ್ಲಿ ಹೇಳಿದರು. “ಈ ಸರ್ಕಾರವು ಬಡವರಿಗಾಗಿ ಪ್ರಾರಂಭಿಸಿದ ಪ್ರತಿಯೊಂದು ನೀತಿಯನ್ನು ಅವರು ವಿರೋಧಿಸಿದರು” ಎಂದು ಶರ್ಮಾ ಹೇಳಿದರು. ಕಾಂಗ್ರೆಸ್ ಒಂದು ಕುಟುಂಬದ ಪಕ್ಷ. ಆಂತರಿಕ ಚುನಾವಣೆಗೆ ಬೇಡಿಕೆಗಳಿದ್ದವು ಆದರೆ ಅವರು ಅದನ್ನು ಮಾಡುತ್ತಿಲ್ಲ,” ಎಂದು ಶರ್ಮಾ ಹೇಳಿದರು, ಬಿಜೆಪಿ “ರಾಜಕೀಯವನ್ನು ಜನರಿಗೆ ಸೇವೆ ಮಾಡುವ ಮಾರ್ಗವೆಂದು ಪರಿಗಣಿಸುತ್ತದೆ” ಎಂದು ಹೇಳಿದರು.

Published On - 7:36 pm, Sun, 3 July 22

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್