ನನ್ನನ್ನು ಬೆಂಬಲಿಸುವಂತೆ ಯಾವುದೇ ಶಾಸಕರಿಗೆ ಬಲವಂತ ಮಾಡಿಲ್ಲ: ಏಕನಾಥ್ ಶಿಂಧೆ

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಕ್ಕೆ ಕಾರಣವಾದ ಬಂಡಾಯದ ಬಗ್ಗೆ ಮಾತನಾಡಿದ ಶಿಂಧೆ, ಸಚಿವರು ಸೇರಿದಂತೆ ಹಲವು ಶಾಸಕರು ಸರ್ಕಾರವನ್ನು ತೊರೆದಿರುವುದು ಸಾಮಾನ್ಯ ಕಾರ್ಯಕರ್ತರಿಗೆ ದೊಡ್ಡ ವಿಷಯವಾಗಿದೆ ಎಂದಿದ್ದಾರೆ

ನನ್ನನ್ನು ಬೆಂಬಲಿಸುವಂತೆ ಯಾವುದೇ ಶಾಸಕರಿಗೆ ಬಲವಂತ ಮಾಡಿಲ್ಲ: ಏಕನಾಥ್ ಶಿಂಧೆ
ಏಕನಾಥ್ ಶಿಂಧೆ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jul 03, 2022 | 5:11 PM

ಮುಂಬೈ: ಸ್ಪೀಕರ್ ಚುನಾವಣೆಯ ನಂತರ ವಿಧಾನಸಭೆಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು, ಬಿಜೆಪಿ (BJP) ನಾಯಕ ದೇವೇಂದ್ರ ಫಡ್ನವಿಸ್ (Devendra Fadnavis) ಮುಖ್ಯಮಂತ್ರಿಯಾಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರೂ ನಾನು ವೈಯಕ್ತಿಕವಾಗಿ ಈ ಹುದ್ದೆಯನ್ನು ಬಯಸಲಿಲ್ಲ. ಇದು ನನ್ನ ಹಣೆಬರಹ. “ಇಲ್ಲಿಯವರೆಗೆ ಜನರು ವಿರೋಧ ಪಕ್ಷದಿಂದ ಸರ್ಕಾರವನ್ನು ಬದಲಾಯಿಸುವುದನ್ನು ನಾವು ನೋಡಿದ್ದೇವೆ ಆದರೆ ಈ ಬಾರಿ ಸರ್ಕಾರದ ನಾಯಕರು ವಿರೋಧ ಪಕ್ಷದತ್ತ ಹೋಗಿದ್ದಾರೆ” ಎಂದು ಶಿಂಧೆ ಹೇಳಿದರು. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಕ್ಕೆ ಕಾರಣವಾದ ಬಂಡಾಯದ ಬಗ್ಗೆ ಮಾತನಾಡಿದ ಶಿಂಧೆ, ಸಚಿವರು ಸೇರಿದಂತೆ ಹಲವು ಶಾಸಕರು ಸರ್ಕಾರವನ್ನು ತೊರೆದಿರುವುದು ಸಾಮಾನ್ಯ ಕಾರ್ಯಕರ್ತರಿಗೆ ದೊಡ್ಡ ವಿಷಯವಾಗಿದೆ ಎಂದಿದ್ದಾರೆ. “ಬಾಳಾಸಾಹೇಬ್ ಠಾಕ್ರೆ ಮತ್ತು ಆನಂದ್ ದಿಘೆ ಅವರ ಸಿದ್ಧಾಂತಕ್ಕೆ ಮೀಸಲಾದ ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಇದು ದೊಡ್ಡ ವಿಷಯವಾಗಿದೆ.ಅನೇಕ ಬಂಡಾಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದ ಉದ್ಧವ್ ಶಿಬಿರವನ್ನು ಗುರಿಯಾಗಿಸಿಕೊಂಡು ಶಿಂಧೆ ಹೇಳಿದ್ದಾರೆ. ನಾವು ಕೆಲವು ಶಾಸಕರೊಂದಿಗೆ ಸಂಪರ್ಕದಲ್ಲಿದ್ದೆವು ಎಂದು ಕೆಲವರು ಹೇಳಿದ್ದರು. ಕೆಲವೊಮ್ಮೆ ಅದು 5, ನಂತರ 10, 20 ಮತ್ತು 25. ಅವರ ಹೆಸರು ಹೇಳಿ ಎಂದು ನಾನು ಹೇಳಿದೆ . ಗ್ರಹಿಕೆ ಅಥವಾ ನಿರೀಕ್ಷೆ ಏನೇ ಇರಲಿ, ಅದು ತಪ್ಪಾಗಿದೆ ಎಂದು ಶಿಂಧೆ ಹೇಳಿದರು.

“ಬಿಜೆಪಿಯಲ್ಲಿ 115 ಶಾಸಕರಿದ್ದು, ನನ್ನ ಬಳಿ 50 ಶಾಸಕರಿದ್ದಾರೆ. ಆದರೆ ಇನ್ನೂ ಬಿಜೆಪಿ ದೊಡ್ಡ ಮನಸ್ಸು ಮಾಡಿ ನನಗೆ ಸಿಎಂ ಸ್ಥಾನ ನೀಡಿದೆ. ನಾನು ಪ್ರಧಾನಿ ಮೋದಿ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಸಿಎಂ ಸ್ಥಾನದ ನಿರೀಕ್ಷೆ ಇರಲಿಲ್ಲ” ಎಂದು ಶಿಂಧೆ ಹೇಳಿದರು.

ಇದೀಗ ಬಾಳಾಸಾಹೇಬ್ ಠಾಕ್ರೆಯವರ ನಂಬಿಕೆಗಳ ಆಧಾರದ ಮೇಲೆ ಬಿಜೆಪಿ-ಶಿವಸೇನಾ ಸರ್ಕಾರ ಅಧಿಕಾರ ವಹಿಸಿಕೊಂಡಿದೆ. ಬಾಳಾಸಾಹೇಬರ ಸೈನಿಕರು ಸಿಎಂ ಆಗಿದ್ದಾರೆ ಎಂದು ಶಿಂಧೆ ಹೇಳಿದರು.

ಇದನ್ನೂ ಓದಿ
Image
Maharashtra Speaker Election Result: ಮಹಾರಾಷ್ಟ್ರ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನರ್ವೇಕರ್​​ ಆಯ್ಕೆ
Image
Viral Video: ಮಂಜುಗಡ್ಡೆಯ ಆಕಾರಕ್ಕೆ ತಿರುಗಿದ ಶಿವಲಿಂಗ, ಪವಾಡ ಕಣ್ತುಂಬಿಕೊಳ್ಳಲು ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಭಕ್ತರು
Image
ಮಹಾರಾಷ್ಟ್ರದಲ್ಲಿ ಅಂಗಡಿ ಮಾಲೀಕನ ಹತ್ಯೆ ಪ್ರಕರಣ: ಎನ್ಐಎ ತನಿಖೆಗೆ ಆದೇಶಿಸಿದ ಅಮಿತ್ ಶಾ

ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಏಕನಾಥ್ ಶಿಂಧೆ ಎದುರಿಸಿದ ಮೊದಲ ನಂಬರ್ ಗೇಮ್ ಸ್ಪೀಕರ್ ಚುನಾವಣೆ. ಮೊದಲ ಬಾರಿಗೆ ಶಾಸಕ, ಬಿಜೆಪಿಯ ಅಭ್ಯರ್ಥಿಯಾಗಿದ್ದ ಬಿಜೆಪಿಯ ರಾಹುಲ್ ನರ್ವೇಕರ್ 288 ಸದಸ್ಯರ ಸದನದಲ್ಲಿ 164 ಮತಗಳನ್ನು ಗಳಿಸುವ ಮೂಲಕ ಜಯಗಳಿಸಿದ್ದರು. ನಾರ್ವೇಕರ್ ವಿರುದ್ಧ, ಉದ್ಧವ್ ಸೇನಾ-ಎನ್‌ಸಿಪಿ ಮತ್ತು ಕಾಂಗ್ರೆಸ್ ಸಂಯೋಜನೆಯು ರಾಜನ್ ಸಾಲ್ವಿ ಅವರನ್ನು ಕಣಕ್ಕಿಳಿಸಿತು. ಅವರು 106 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಸಮಾಜವಾದಿ ಪಕ್ಷ ಮತ್ತು ಎಐಎಂಐಎಂ ಮತದಾನದಿಂದ ದೂರ ಉಳಿದಿವೆ.

ಇದೀಗ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಸರ್ಕಾರ ಮಹಾರಾಷ್ಟ್ರದ ಜನರಿಗಾಗಿ ಕೆಲಸ ಮಾಡಲಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ರಾಹುಲ್ ನರ್ವೇಕರ್ ಅವರನ್ನು ಅಭಿನಂದಿಸುತ್ತಾ, “ನೀವು ಕಠಿಣ ಪರಿಶ್ರಮಿ. ನೀವು ಬಹು ಭಾಷೆಗಳನ್ನು ಸಹ ತಿಳಿದಿದ್ದೀರಿ. ನೀವು ಉತ್ತಮ ಕೆಲಸ ಮಾಡುತ್ತೀರಿ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದರು.

Published On - 5:10 pm, Sun, 3 July 22