AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಿಗೆ ತಂಪು ದೇಹಕ್ಕೆ ಸೊಂಪು! ದೀಪಾವಳಿಗಷ್ಟೇ ಅಲ್ಲ.. ನಿತ್ಯವೂ ಮಾಡಿ ಎಣ್ಣೆ ಸ್ನಾನ

ಹಬ್ಬಗಳ ರಾಜ ದೀಪಾವಳಿಯಲ್ಲಿ ರಾಜ್ಯದ ಒಂದಲ್ಲಾ ಒಂದು ಭಾಗದಲ್ಲಿ ಹಲವು ರೀತಿಯ ವಿಶಿಷ್ಟ ಆಚರಣೆಗಳು ಕಾಣಸಿಗುತ್ತವೆ. ಇಂದು ದೀಪಾವಳಿಯ ನರಕ ಚತುರ್ದಶಿ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಅಭ್ಯಂಗ ಸ್ನಾನ ಮಾಡುವ ಪದ್ಧತಿಯಿದೆ. ಕೊಬ್ಬರಿ ಎಣ್ಣೆಯನ್ನು ಕಿವಿಗೆ, ಮೈಗೆ ಹಚ್ಚಿಕೊಂಡು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವ ಈ ಸಂಪ್ರದಾಯಕ್ಕೆ ವೈದ್ಯಕೀಯ, ಪೌರಾಣಿಕ ಹಿನ್ನೆಲೆಯೂ ಇದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗವನ್ನು ತಡೆಯುವ ಶಕ್ತಿಯೂ ಅಭ್ಯಂಜನ (ಅಭ್ಯಂಗ) ಸ್ನಾನಕ್ಕಿದೆ. ಅಭ್ಯಂಜನ ಸ್ನಾನದ ಪೌರಾಣಿಕ ಹಿನ್ನೆಲೆಯೇನು? ನರಕಾಸುರನ ಹಾವಳಿಯಿಂದ ಜನಸಾಮಾನ್ಯರು ಕಂಗೆಟ್ಟಿರುತ್ತಾರೆ. […]

ಕಣ್ಣಿಗೆ ತಂಪು ದೇಹಕ್ಕೆ ಸೊಂಪು! ದೀಪಾವಳಿಗಷ್ಟೇ ಅಲ್ಲ.. ನಿತ್ಯವೂ ಮಾಡಿ ಎಣ್ಣೆ ಸ್ನಾನ
ಸಾಧು ಶ್ರೀನಾಥ್​
| Edited By: |

Updated on:Nov 14, 2020 | 1:58 PM

Share

ಹಬ್ಬಗಳ ರಾಜ ದೀಪಾವಳಿಯಲ್ಲಿ ರಾಜ್ಯದ ಒಂದಲ್ಲಾ ಒಂದು ಭಾಗದಲ್ಲಿ ಹಲವು ರೀತಿಯ ವಿಶಿಷ್ಟ ಆಚರಣೆಗಳು ಕಾಣಸಿಗುತ್ತವೆ. ಇಂದು ದೀಪಾವಳಿಯ ನರಕ ಚತುರ್ದಶಿ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಅಭ್ಯಂಗ ಸ್ನಾನ ಮಾಡುವ ಪದ್ಧತಿಯಿದೆ. ಕೊಬ್ಬರಿ ಎಣ್ಣೆಯನ್ನು ಕಿವಿಗೆ, ಮೈಗೆ ಹಚ್ಚಿಕೊಂಡು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವ ಈ ಸಂಪ್ರದಾಯಕ್ಕೆ ವೈದ್ಯಕೀಯ, ಪೌರಾಣಿಕ ಹಿನ್ನೆಲೆಯೂ ಇದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗವನ್ನು ತಡೆಯುವ ಶಕ್ತಿಯೂ ಅಭ್ಯಂಜನ (ಅಭ್ಯಂಗ) ಸ್ನಾನಕ್ಕಿದೆ.

ಅಭ್ಯಂಜನ ಸ್ನಾನದ ಪೌರಾಣಿಕ ಹಿನ್ನೆಲೆಯೇನು? ನರಕಾಸುರನ ಹಾವಳಿಯಿಂದ ಜನಸಾಮಾನ್ಯರು ಕಂಗೆಟ್ಟಿರುತ್ತಾರೆ. 16 ಸಾವಿರ ಸ್ತ್ರೀಯರನ್ನು ಬಂಧಿಸಿರುತ್ತಾನೆ ನರಕಾಸುರ. ಶ್ರೀಕೃಷ್ಣ ನರಕಾಸುರನ ಮೇಲೆ ಯುದ್ಧ ಹೂಡುತ್ತಾನೆ. ಅವನ ವಧೆ ಮಾಡುವ ಮೂಲಕ ಜನರ ಕಷ್ಟಗಳನ್ನು ಪರಿಹರಿಸುತ್ತಾನೆ. ಯುದ್ಧದ ವೇಳೆ ರಕ್ತದಲ್ಲಿ ತೊಯ್ದ ಕೃಷ್ಣನ ಹೆಂಗಳೆಯರು ಮೈಗೆ ಎಣ್ಣೆ ಹಚ್ಚಿ ಅಭ್ಯಂಗ ಸ್ನಾನ ಮಾಡಿಸಿ ಖುಷಿಪಡುತ್ತಾರೆ. ಅಂದಿನಿಂದ ಈ ದಿನವನ್ನು ನರಕ ಚತುರ್ದಶಿಯೆಂದೇ ಅಚರಿಸುತ್ತ್ತಾರೆ. ಬಲೀಂದ್ರನ ಚಿತ್ರವನ್ನು ಸೌತೆಕಾಯಿಯ ಮೇಲೆ ಬಿಡಿಸುತ್ತಾರೆ. ನಂತರ ಮಹಿಳೆಯರು ಮನೆಯ ಪುರುಷರಿಗೆ ಅಭ್ಯಂಜನ ಮಾಡಿಸುತ್ತಾರೆ ಎಂದು ಶಿರಸಿಯ ಗಣೇಶ್ ನೆಲೆಮಾಂವ್ ಟಿವಿ9 ಡಿಜಿಟಲ್​ಗೆ ವಿವರಿಸಿದರು.

ಆಯುರ್ವೇದದಲ್ಲೂ ಇದೆ ಮಹತ್ವ ಅಭ್ಯಂಜನ ಸ್ನಾನಕ್ಕೆ ಆಯುರ್ವೇದ ತುಂಬಾ ಮಹತ್ವ ನೀಡುತ್ತದೆ. ಇದು ಶರದ್ ಋತು ಮುಗಿದು ಹೇಮಂತ ಋತುವಿಗೆ ಪ್ರವೇಶಿಸುವ ಕಾಲ. ಈಕಾಲದಲ್ಲಿ ಬೀಸುವ ತಂಪು ಗಾಳಿ ದೇಹವನ್ನು ಒಣಗಿಸುತ್ತದೆ. ದೇಹ ಹಸಿಹಸಿಯಾಗಿರಲು ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಕೊಳ್ಳಬೇಕು ಎನ್ನುತ್ತದೆ ಪುರಾತನ ವೈದ್ಯ ಪದ್ಧತಿ.

ಎಣ್ಣೆ ಸ್ನಾನ ದಿನಚರಿಯಾಗಲಿ.. ಅಭ್ಯಂಗ ಸ್ನಾನ ನರಕ ಚತುರ್ದಶಿಗಷ್ಟೇ ಸೀಮಿತವಾದಿರಲಿ ಎಂದು ಹೇಳುತ್ತಾರೆ ಆಯುರ್ವೇದ ವೈದ್ಯೆ ಸುಚೇತಾ ಮದ್ಗುಣಿ. ಪ್ರತಿದಿನ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದರೆ ಒಳ್ಳೆಯದು. ಚರ್ಮದ ಆರೋಗ್ಯವನ್ನು ಇದು ಕಾಪಾಡುತ್ತದೆ. ಸಿಕ್ಕ ಸಿಕ್ಕ ಕ್ರೀಂಗಳನ್ನು ಬಳಸುವುದಕ್ಕಿಂತ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಬಳಸಲು ಅವರು ಸೂಚಿಸುತ್ತಾರೆ.

ಕಣ್ಣಿಗೂ ಒಳ್ಳೆಯದು ಕೊಬ್ಬರಿ ಎಣ್ಣೆ ಕೊಬ್ಬರಿ ಎಣ್ಣೆಯ ಬಳಕೆ ಕಣ್ಣಿಗೆ ಬಹಳ ಒಳ್ಳೆಯದು. ಅಲ್ಲದೇ ದೇಹದ ಶ್ರಮವನ್ನು ಅದು ಕಡಿಮೆ ಮಾಡುತ್ತದೆ. ಅಲ್ಲದೇ ತ್ವಚೆಯನ್ನು ಕೋಮಲಗೊಳಿಸುತ್ತದೆ. ಕಾಂತಿಯಿಂದ ಹೊಳೆಯುವಂತೆ ಕಾಡುತ್ತದೆ. ಚರ್ಮರೋಗಗಳಿಂದಲೂ ದೂರವಿಡುತ್ತದೆ. ದಿನನಿತ್ಯ ತಲೆಗೆ ಎಣ್ಣೆ ಹಾಕುವುದರಿಂದ ಕೂದಲು ಸದೃಢವಾಗುತ್ತದೆ.

ಈ ಸಂದರ್ಭಗಳಲ್ಲಿ ಅಭ್ಯಂಜನ ವರ್ಜ್ಯ.. ಗಂಟಲು ನೋವು,ಜ್ವರ, ಕಫ ಇದ್ದರೆ ಅಭ್ಯಂಜನ ಮಾಡಬೇಡಿ. ಅಜೀರ್ಣ ಕಾಡುತ್ತಿದ್ದರೆ ದೂರವಿರಿ. ತಿಂಡಿ, ಊಟ ನಂತರ ಅಭ್ಯಂಗ ಸ್ನಾನ ಮಾಡಬೇಡಿ.

“ಎಷ್ಟೋ ಜನ ಇಂದು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ನಿದ್ರಿಸುವ ಮುನ್ನ ತಲೆಗೆ ಕೊಬ್ಬರಿ ಅಥವಾ ಎಳ್ಳೆಣ್ಣೆ ಬಳಿದುಕೊಳ್ಳುವದರಿಂದ ಚೆನ್ನಾಗಿ ನಿದ್ರಿಸಬಹುದು. ಅಲ್ಲದೇ ಪ್ರತಿನಿತ್ಯ ಅಭ್ಯಂಜನ ಸ್ನಾನ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೋನಾ ವೈರಸ್​ನಂತಹ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.” -ಸುಚೇತಾ ಮದ್ಗುಣಿ, ಆಯುರ್ವೇದ ತಜ್ಞರು

Published On - 1:57 pm, Sat, 14 November 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ