AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಿಗೆ ತಂಪು ದೇಹಕ್ಕೆ ಸೊಂಪು! ದೀಪಾವಳಿಗಷ್ಟೇ ಅಲ್ಲ.. ನಿತ್ಯವೂ ಮಾಡಿ ಎಣ್ಣೆ ಸ್ನಾನ

ಹಬ್ಬಗಳ ರಾಜ ದೀಪಾವಳಿಯಲ್ಲಿ ರಾಜ್ಯದ ಒಂದಲ್ಲಾ ಒಂದು ಭಾಗದಲ್ಲಿ ಹಲವು ರೀತಿಯ ವಿಶಿಷ್ಟ ಆಚರಣೆಗಳು ಕಾಣಸಿಗುತ್ತವೆ. ಇಂದು ದೀಪಾವಳಿಯ ನರಕ ಚತುರ್ದಶಿ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಅಭ್ಯಂಗ ಸ್ನಾನ ಮಾಡುವ ಪದ್ಧತಿಯಿದೆ. ಕೊಬ್ಬರಿ ಎಣ್ಣೆಯನ್ನು ಕಿವಿಗೆ, ಮೈಗೆ ಹಚ್ಚಿಕೊಂಡು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವ ಈ ಸಂಪ್ರದಾಯಕ್ಕೆ ವೈದ್ಯಕೀಯ, ಪೌರಾಣಿಕ ಹಿನ್ನೆಲೆಯೂ ಇದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗವನ್ನು ತಡೆಯುವ ಶಕ್ತಿಯೂ ಅಭ್ಯಂಜನ (ಅಭ್ಯಂಗ) ಸ್ನಾನಕ್ಕಿದೆ. ಅಭ್ಯಂಜನ ಸ್ನಾನದ ಪೌರಾಣಿಕ ಹಿನ್ನೆಲೆಯೇನು? ನರಕಾಸುರನ ಹಾವಳಿಯಿಂದ ಜನಸಾಮಾನ್ಯರು ಕಂಗೆಟ್ಟಿರುತ್ತಾರೆ. […]

ಕಣ್ಣಿಗೆ ತಂಪು ದೇಹಕ್ಕೆ ಸೊಂಪು! ದೀಪಾವಳಿಗಷ್ಟೇ ಅಲ್ಲ.. ನಿತ್ಯವೂ ಮಾಡಿ ಎಣ್ಣೆ ಸ್ನಾನ
ಸಾಧು ಶ್ರೀನಾಥ್​
| Edited By: |

Updated on:Nov 14, 2020 | 1:58 PM

Share

ಹಬ್ಬಗಳ ರಾಜ ದೀಪಾವಳಿಯಲ್ಲಿ ರಾಜ್ಯದ ಒಂದಲ್ಲಾ ಒಂದು ಭಾಗದಲ್ಲಿ ಹಲವು ರೀತಿಯ ವಿಶಿಷ್ಟ ಆಚರಣೆಗಳು ಕಾಣಸಿಗುತ್ತವೆ. ಇಂದು ದೀಪಾವಳಿಯ ನರಕ ಚತುರ್ದಶಿ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಅಭ್ಯಂಗ ಸ್ನಾನ ಮಾಡುವ ಪದ್ಧತಿಯಿದೆ. ಕೊಬ್ಬರಿ ಎಣ್ಣೆಯನ್ನು ಕಿವಿಗೆ, ಮೈಗೆ ಹಚ್ಚಿಕೊಂಡು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವ ಈ ಸಂಪ್ರದಾಯಕ್ಕೆ ವೈದ್ಯಕೀಯ, ಪೌರಾಣಿಕ ಹಿನ್ನೆಲೆಯೂ ಇದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗವನ್ನು ತಡೆಯುವ ಶಕ್ತಿಯೂ ಅಭ್ಯಂಜನ (ಅಭ್ಯಂಗ) ಸ್ನಾನಕ್ಕಿದೆ.

ಅಭ್ಯಂಜನ ಸ್ನಾನದ ಪೌರಾಣಿಕ ಹಿನ್ನೆಲೆಯೇನು? ನರಕಾಸುರನ ಹಾವಳಿಯಿಂದ ಜನಸಾಮಾನ್ಯರು ಕಂಗೆಟ್ಟಿರುತ್ತಾರೆ. 16 ಸಾವಿರ ಸ್ತ್ರೀಯರನ್ನು ಬಂಧಿಸಿರುತ್ತಾನೆ ನರಕಾಸುರ. ಶ್ರೀಕೃಷ್ಣ ನರಕಾಸುರನ ಮೇಲೆ ಯುದ್ಧ ಹೂಡುತ್ತಾನೆ. ಅವನ ವಧೆ ಮಾಡುವ ಮೂಲಕ ಜನರ ಕಷ್ಟಗಳನ್ನು ಪರಿಹರಿಸುತ್ತಾನೆ. ಯುದ್ಧದ ವೇಳೆ ರಕ್ತದಲ್ಲಿ ತೊಯ್ದ ಕೃಷ್ಣನ ಹೆಂಗಳೆಯರು ಮೈಗೆ ಎಣ್ಣೆ ಹಚ್ಚಿ ಅಭ್ಯಂಗ ಸ್ನಾನ ಮಾಡಿಸಿ ಖುಷಿಪಡುತ್ತಾರೆ. ಅಂದಿನಿಂದ ಈ ದಿನವನ್ನು ನರಕ ಚತುರ್ದಶಿಯೆಂದೇ ಅಚರಿಸುತ್ತ್ತಾರೆ. ಬಲೀಂದ್ರನ ಚಿತ್ರವನ್ನು ಸೌತೆಕಾಯಿಯ ಮೇಲೆ ಬಿಡಿಸುತ್ತಾರೆ. ನಂತರ ಮಹಿಳೆಯರು ಮನೆಯ ಪುರುಷರಿಗೆ ಅಭ್ಯಂಜನ ಮಾಡಿಸುತ್ತಾರೆ ಎಂದು ಶಿರಸಿಯ ಗಣೇಶ್ ನೆಲೆಮಾಂವ್ ಟಿವಿ9 ಡಿಜಿಟಲ್​ಗೆ ವಿವರಿಸಿದರು.

ಆಯುರ್ವೇದದಲ್ಲೂ ಇದೆ ಮಹತ್ವ ಅಭ್ಯಂಜನ ಸ್ನಾನಕ್ಕೆ ಆಯುರ್ವೇದ ತುಂಬಾ ಮಹತ್ವ ನೀಡುತ್ತದೆ. ಇದು ಶರದ್ ಋತು ಮುಗಿದು ಹೇಮಂತ ಋತುವಿಗೆ ಪ್ರವೇಶಿಸುವ ಕಾಲ. ಈಕಾಲದಲ್ಲಿ ಬೀಸುವ ತಂಪು ಗಾಳಿ ದೇಹವನ್ನು ಒಣಗಿಸುತ್ತದೆ. ದೇಹ ಹಸಿಹಸಿಯಾಗಿರಲು ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಕೊಳ್ಳಬೇಕು ಎನ್ನುತ್ತದೆ ಪುರಾತನ ವೈದ್ಯ ಪದ್ಧತಿ.

ಎಣ್ಣೆ ಸ್ನಾನ ದಿನಚರಿಯಾಗಲಿ.. ಅಭ್ಯಂಗ ಸ್ನಾನ ನರಕ ಚತುರ್ದಶಿಗಷ್ಟೇ ಸೀಮಿತವಾದಿರಲಿ ಎಂದು ಹೇಳುತ್ತಾರೆ ಆಯುರ್ವೇದ ವೈದ್ಯೆ ಸುಚೇತಾ ಮದ್ಗುಣಿ. ಪ್ರತಿದಿನ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದರೆ ಒಳ್ಳೆಯದು. ಚರ್ಮದ ಆರೋಗ್ಯವನ್ನು ಇದು ಕಾಪಾಡುತ್ತದೆ. ಸಿಕ್ಕ ಸಿಕ್ಕ ಕ್ರೀಂಗಳನ್ನು ಬಳಸುವುದಕ್ಕಿಂತ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಬಳಸಲು ಅವರು ಸೂಚಿಸುತ್ತಾರೆ.

ಕಣ್ಣಿಗೂ ಒಳ್ಳೆಯದು ಕೊಬ್ಬರಿ ಎಣ್ಣೆ ಕೊಬ್ಬರಿ ಎಣ್ಣೆಯ ಬಳಕೆ ಕಣ್ಣಿಗೆ ಬಹಳ ಒಳ್ಳೆಯದು. ಅಲ್ಲದೇ ದೇಹದ ಶ್ರಮವನ್ನು ಅದು ಕಡಿಮೆ ಮಾಡುತ್ತದೆ. ಅಲ್ಲದೇ ತ್ವಚೆಯನ್ನು ಕೋಮಲಗೊಳಿಸುತ್ತದೆ. ಕಾಂತಿಯಿಂದ ಹೊಳೆಯುವಂತೆ ಕಾಡುತ್ತದೆ. ಚರ್ಮರೋಗಗಳಿಂದಲೂ ದೂರವಿಡುತ್ತದೆ. ದಿನನಿತ್ಯ ತಲೆಗೆ ಎಣ್ಣೆ ಹಾಕುವುದರಿಂದ ಕೂದಲು ಸದೃಢವಾಗುತ್ತದೆ.

ಈ ಸಂದರ್ಭಗಳಲ್ಲಿ ಅಭ್ಯಂಜನ ವರ್ಜ್ಯ.. ಗಂಟಲು ನೋವು,ಜ್ವರ, ಕಫ ಇದ್ದರೆ ಅಭ್ಯಂಜನ ಮಾಡಬೇಡಿ. ಅಜೀರ್ಣ ಕಾಡುತ್ತಿದ್ದರೆ ದೂರವಿರಿ. ತಿಂಡಿ, ಊಟ ನಂತರ ಅಭ್ಯಂಗ ಸ್ನಾನ ಮಾಡಬೇಡಿ.

“ಎಷ್ಟೋ ಜನ ಇಂದು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ನಿದ್ರಿಸುವ ಮುನ್ನ ತಲೆಗೆ ಕೊಬ್ಬರಿ ಅಥವಾ ಎಳ್ಳೆಣ್ಣೆ ಬಳಿದುಕೊಳ್ಳುವದರಿಂದ ಚೆನ್ನಾಗಿ ನಿದ್ರಿಸಬಹುದು. ಅಲ್ಲದೇ ಪ್ರತಿನಿತ್ಯ ಅಭ್ಯಂಜನ ಸ್ನಾನ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೋನಾ ವೈರಸ್​ನಂತಹ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.” -ಸುಚೇತಾ ಮದ್ಗುಣಿ, ಆಯುರ್ವೇದ ತಜ್ಞರು

Published On - 1:57 pm, Sat, 14 November 20

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್