AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೂ ಮುಗಿದಿಲ್ಲ ನೋಟ್​ ಬ್ಯಾನ್​ ಗೋಳು..

ಚೆನ್ನೈ: ನವಂಬರ್​ 8, 2016. ಆ ಒಂದು ದಿನ ಭಾರತೀಯರ ನೆನಪಿನಿಂದ ಎಂದೂ ಮಾಸದ ದಿನ. ಆ ಒಂದು ದಿನ ಪ್ರಧಾನಿ ಮೋದಿ ಮಾಡಿದ ಘೋಷಣೆ ಇಡೀ ದೇಶದ ಆರ್ಥಿಕ ಚಿತ್ರಣವನ್ನೇ ಬದಲಿಸಿಬಿಟ್ಟಿತ್ತು. ಆದರೆ, ಇಡೀ ದೇಶದಲ್ಲೇ ತಲ್ಲಣ ಉಂಟುಮಾಡಿದ ಆ ಒಂದು ದಿನ ತಮಿಳುನಾಡಿನ ಈ ದಂಪತಿಗೆ ಗೊತ್ತೇ ಇಲ್ಲವಂತೆ. ಹೌದು, ಇದು ನಂಬೋಕೆ ಸ್ವಲ್ಪ ಕಷ್ಟವಾದ್ರೂ ತಮಿಳುನಾಡಿನ ಪೋತಿಯಾ ಮೂಪನೂರೆ ಎಂಬ ಕುಗ್ರಾಮದಿಂದ ವರದಿಯಾಗಿರೋ ರಿಯಲ್​ ಸ್ಟೋರಿ ಇದು. ಜೀವನೋಪಾಯಕ್ಕಾಗಿ ಊದುಬತ್ತಿ ತಯಾರಿಸುತ್ತಿದ್ದ ಗ್ರಾಮದ […]

ಇನ್ನೂ ಮುಗಿದಿಲ್ಲ ನೋಟ್​ ಬ್ಯಾನ್​ ಗೋಳು..
KUSHAL V
| Updated By: ಸಾಧು ಶ್ರೀನಾಥ್​|

Updated on: Jul 13, 2020 | 3:30 PM

Share

ಚೆನ್ನೈ: ನವಂಬರ್​ 8, 2016. ಆ ಒಂದು ದಿನ ಭಾರತೀಯರ ನೆನಪಿನಿಂದ ಎಂದೂ ಮಾಸದ ದಿನ. ಆ ಒಂದು ದಿನ ಪ್ರಧಾನಿ ಮೋದಿ ಮಾಡಿದ ಘೋಷಣೆ ಇಡೀ ದೇಶದ ಆರ್ಥಿಕ ಚಿತ್ರಣವನ್ನೇ ಬದಲಿಸಿಬಿಟ್ಟಿತ್ತು. ಆದರೆ, ಇಡೀ ದೇಶದಲ್ಲೇ ತಲ್ಲಣ ಉಂಟುಮಾಡಿದ ಆ ಒಂದು ದಿನ ತಮಿಳುನಾಡಿನ ಈ ದಂಪತಿಗೆ ಗೊತ್ತೇ ಇಲ್ಲವಂತೆ. ಹೌದು, ಇದು ನಂಬೋಕೆ ಸ್ವಲ್ಪ ಕಷ್ಟವಾದ್ರೂ ತಮಿಳುನಾಡಿನ ಪೋತಿಯಾ ಮೂಪನೂರೆ ಎಂಬ ಕುಗ್ರಾಮದಿಂದ ವರದಿಯಾಗಿರೋ ರಿಯಲ್​ ಸ್ಟೋರಿ ಇದು.

ಜೀವನೋಪಾಯಕ್ಕಾಗಿ ಊದುಬತ್ತಿ ತಯಾರಿಸುತ್ತಿದ್ದ ಗ್ರಾಮದ ನಿವಾಸಿ 58 ವರ್ಷದ ಸೋಮು ಹಾಗೂ ಪಳನಿ ಅಮ್ಮಾಳ್​ ದಂಪತಿಗೆ ನೋಟ್​ ಬ್ಯಾನ್​ ಬಗ್ಗೆ ತಿಳಿದುಬಂದಿದ್ದೇ ಕಳೆದ ಶುಕ್ರವಾರ. ಅದು ತಮ್ಮ ಬಳಿಯಿದ್ದ ಹಳೇ 500 ಮತ್ತು 1,000 ಮೌಲ್ಯದ ನೋಟ್​ಗಳನ್ನ ಬ್ಯಾಂಕ್​ಗೆ ಕಟ್ಟಲು ಹೋದ ವೇಳೆ.

ಅಷ್ಟಕ್ಕೂ, ಇವರಿಗೆ ನೋಟ್ ಬ್ಯಾನ್​ ಬಗ್ಗೆ ಯಾಕೆ ತಿಳಿಯಲಿಲ್ಲ ಎಂಬುದೇ ಕುತೂಹಲಕಾರಿ ಸಂಗತಿ. ಕಳೆದ 10  ವರ್ಷಗಳಿಂದ ಊದುಬತ್ತಿ ಮತ್ತು ಕರ್ಪೂರ ತಯಾರಿಸಿ ಅಕ್ಕಪಕ್ಕದ ಹಳ್ಳಿಗಳಲ್ಲಿ ಈ ದಂಪತಿ ಮಾರುತ್ತಿದ್ದರು. ಬಂದ ಸಂಪಾದನೆಯ ಒಂದು ಭಾಗವನ್ನ ಸೋಮು ತಮ್ಮ ತಾಯಿಗೆ ನೀಡುತ್ತಿದ್ದರಂತೆ. ಜೊತೆಗೆ, ಆಗಾಗ ತಮ್ಮ ತಾಯಿ ಬಳಿಯಿದ್ದ 500 ಮತ್ತು 1,000 ನೋಟುಗಳಿಗೆ ಚಿಲ್ಲರೆ ಮಾಡಿಸಿ ಬಳಸಿಕೊಳ್ಳುತ್ತಿದ್ದರಂತೆ. ಆದರೆ, ಈ ಮಧ್ಯೆ ಅದರ ಅವಶ್ಯಕತೆ ಬೀಳದೆ ಕೆಲವು ವರ್ಷಗಳಿಂದ ತಮ್ಮ ಅನಕ್ಷರಸ್ಥ ತಾಯಿ ಬಳಿ ಕೇಳಿರಲಿಲ್ಲವಂತೆ.

ಕೊರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಂಪಾದನೆಗೆ ಕಲ್ಲುಬಿದ್ದಾಗ.. ಆದರೆ, ಇತ್ತೀಚೆಗೆ ಕೊರೊನಾ ಹರಡುವಿಕೆಯನ್ನ ತಡೆಯಲು ಕೇಂದ್ರ ಘೋಷಿಸಿದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಂಪಾದನೆಯ ದಾರಿಗೆ ಕಲ್ಲುಬಿತ್ತಂತೆ. ಜೀವನ ನಡೆಸಲು ಕಷ್ಟವಾದಾಗ ಸೋಮುಗೆ ನೆನಪಾಗಿದ್ದು ಆತನ ತಾಯಿಯ ಬಳಿ ಕೊಟ್ಟಿದ್ದ ಹಣ. ಅದನ್ನು ಪಡೆದು ಬ್ಯಾಂಕ್​ನಲ್ಲಿ ಜಮಾ ಮಾಡಲು ಹೋದ ಸೋಮುಗೆ ಆಗಲೇ ತಿಳಿದಿದ್ದು ಆ ನೋಟುಗಳನ್ನ ಸರ್ಕಾರ ಬಹಳ ಹಿಂದೆಯೇ ಅಮಾನ್ಯೀಕರಣ ಮಾಡಿತ್ತು ಎಂದು.

ಸುದ್ದಿ ಕೇಳಿ ಸ್ವಲ್ಪ ಶಾಕ್​ ಆದ ಸೋಮು ಇದೀಗ ಸಿಎಂ ಪಳನಿಸ್ವಾಮಿಗೆ ನೆರವು ಕೋರಿ ಪತ್ರ ಬರೆದಿದ್ದಾರೆ. ಜೊತೆಗೆ, ಪೊಲೀಸರ ಸಹಾಯ ಕೇಳಿದ್ದಾರೆ. ಆದರೆ, ಇವರಿಗೆ ಎಷ್ಟರ ಮಟ್ಟಿಗೆ ಸರ್ಕಾರ ನೆರವು ನೀಡಲು ಸಾಧ್ಯ ಎಂಬುದು ಕಾದು ನೋಡಬೇಕಿದೆ.

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು