AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನ ಮೊಟ್ಟಮೊದಲ ಲಸಿಕೆಯ ಪ್ರಚಾರಕ್ಕಾಗಿ ಪಣತೊಟ್ಟ ಮೈಸೂರು ಮಹಾರಾಣಿ

ಮೈಸೂರು: ಕೊರೊನಾ ಮಹಾಮಾರಿ ಇಡೀ ವಿಶ್ವದಲ್ಲಿ ಸಾಕಷ್ಟು ಸಾವು ನೋವಿಗೆ ಕಾರಣವಾಗಿ ಪರಿಣಮಿಸಿದೆ. ಜಗತ್ತಿನಾದ್ಯಂತ ದಾಪುಗಾಲಿಡುತ್ತಾ ಸಾಗುತ್ತಿರುವ ಈ ಹೆಮ್ಮಾರಿಯನ್ನ ಬಗ್ಗುಬಡಿಯಲು ಹಲವಾರು ದೇಶಗಳು ಲಸಿಕೆಯ ಹುಡುಕಾಟದಲ್ಲಿ ತೊಡಗಿವೆ. ಕೆಲವರು ಕೊಂಚ ಯಶಸ್ಸು ಕಂಡರೆ ಮತ್ತೆ ಹಲವರು ಯತ್ನ ನಡೆಸುತ್ತಲ್ಲೇ ಇದ್ದಾರೆ. ಆದರೆ, ಬಹಳಷ್ಟು ವರ್ಷಗಳ ಹಿಂದೆ ಕೊರೊನಾದಂತೆ ಮಾನವಕುಲವನ್ನು ಮತ್ತೊಂದು ಸಾಂಕ್ರಾಮಿಕ ರೋಗ ಬೆನ್ನು ಬಿಡದೆ ಕಾಡಿತ್ತು. ಅದೇ ಸಣ್ಣ ಸಿಡುಬು ಅಥವಾ ಮೈಲಿ ಬೇನೆ ರೋಗ (ಸ್ಮಾಲ್​ ಪಾಕ್ಸ್​). ಸಾವಿರಾರು ವರ್ಷಗಳಿಂದ ಮನುಕುಲವನ್ನು ಬಾಧಿಸುತ್ತಾ […]

ಜಗತ್ತಿನ ಮೊಟ್ಟಮೊದಲ ಲಸಿಕೆಯ ಪ್ರಚಾರಕ್ಕಾಗಿ ಪಣತೊಟ್ಟ ಮೈಸೂರು ಮಹಾರಾಣಿ
KUSHAL V
|

Updated on:Sep 20, 2020 | 8:45 PM

Share

ಮೈಸೂರು: ಕೊರೊನಾ ಮಹಾಮಾರಿ ಇಡೀ ವಿಶ್ವದಲ್ಲಿ ಸಾಕಷ್ಟು ಸಾವು ನೋವಿಗೆ ಕಾರಣವಾಗಿ ಪರಿಣಮಿಸಿದೆ. ಜಗತ್ತಿನಾದ್ಯಂತ ದಾಪುಗಾಲಿಡುತ್ತಾ ಸಾಗುತ್ತಿರುವ ಈ ಹೆಮ್ಮಾರಿಯನ್ನ ಬಗ್ಗುಬಡಿಯಲು ಹಲವಾರು ದೇಶಗಳು ಲಸಿಕೆಯ ಹುಡುಕಾಟದಲ್ಲಿ ತೊಡಗಿವೆ. ಕೆಲವರು ಕೊಂಚ ಯಶಸ್ಸು ಕಂಡರೆ ಮತ್ತೆ ಹಲವರು ಯತ್ನ ನಡೆಸುತ್ತಲ್ಲೇ ಇದ್ದಾರೆ. ಆದರೆ, ಬಹಳಷ್ಟು ವರ್ಷಗಳ ಹಿಂದೆ ಕೊರೊನಾದಂತೆ ಮಾನವಕುಲವನ್ನು ಮತ್ತೊಂದು ಸಾಂಕ್ರಾಮಿಕ ರೋಗ ಬೆನ್ನು ಬಿಡದೆ ಕಾಡಿತ್ತು. ಅದೇ ಸಣ್ಣ ಸಿಡುಬು ಅಥವಾ ಮೈಲಿ ಬೇನೆ ರೋಗ (ಸ್ಮಾಲ್​ ಪಾಕ್ಸ್​). ಸಾವಿರಾರು ವರ್ಷಗಳಿಂದ ಮನುಕುಲವನ್ನು ಬಾಧಿಸುತ್ತಾ ಬಂದಿದ್ದ ಈ ರೋಗಕ್ಕೆ ಹಲವು ಪ್ರಯತ್ನಗಳ ನಂತರ 1796ರಲ್ಲಿ ಎಡ್ವರ್ಡ್​ ಜೆನ್ನರ್​ ಎಂಬ ಬ್ರಿಟಿಷ್​ ವೈದ್ಯ ಮೊದಲ ಲಸಿಕೆ ಕಂಡುಹಿಡಿದಿದ್ದ. ಇಡೀ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಸಾಂಕ್ರಾಮಿಕ ರೋಗವೊಂದರ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾದ ಲಸಿಕೆಯೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು.

ಸಣ್ಣ ಸಿಡುಬಿನ ವಿರುದ್ಧ ಪರಿಣಾಮಕಾರಿಯಾಗಿದ್ದ ಈ ಲಸಿಕೆಯ ಮಹತ್ವವನ್ನು ಅರಿತ ಇಂಗ್ಲೆಂಡ್​ ತನ್ನ ಇಡೀ ಸಾಮ್ರಾಜ್ಯದ ಪ್ರಜೆಗಳಿಗೆ ಅದನ್ನು ನೀಡಲು ಮುಂದಾಯಿತು. ಆದರೆ, ಭಾರತದಲ್ಲಿ ಈ ಲಸಿಕೆಯ ಬಗ್ಗೆ ಸಾಕಷ್ಟು ವಿರೋಧ ಹಾಗೂ ಅನುಮಾನ ವ್ಯಕ್ತವಾಗಿತ್ತು. ಹಾಗಾಗಿ, ಭಾರತೀಯರಿಗೆ ಲಸಿಕೆಯನ್ನು ಹಾಕಿಸಲು ಅಂದಿನ ಬ್ರಿಟಿಷ್​ ಸರ್ಕಾರ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಏನು ಮಾಡುವುದು ಎಂಬ ಯೋಚನೆಯಲ್ಲಿದ್ದ ಬ್ರಿಟಿಷ್​ ಸರ್ಕಾರದ ನೆರವಿಗೆ ಆಗ ಬಂದಿದ್ದು ಮೈಸೂರಿನ ಒಡೆಯರ್​ ರಾಜಮನೆತನ. ಅದರಲ್ಲೂ ಅಂದಿನ ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್​ರವರ ನೂತನ ವಧು ಮಹಾರಾಣಿ ದೇವಜಾ ಅಮ್ಮಣ್ಣಿ ಅವರು. ಮಹಾರಾಣಿಯ ಭಾವಚಿತ್ರದಲ್ಲಿದೆ ವಿಶೇಷ ಸಂಗತಿ 1806ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್​ರವರನ್ನು ವರಿಸಿದ್ದ ಮಹಾರಾಣಿ ದೇವಜಾ ಅಮ್ಮಣ್ಣಿಯವರು ಲಸಿಕೆಯನ್ನು ಸ್ವೀಕರಿಸಲು ಒಪ್ಪಿಕೊಂಡರು. ಹಾಗಾಗಿ, ದೇಶದಲ್ಲಿ ಸಣ್ಣ ಸಿಡುಬಿನ ಮೊದಲ ಲಸಿಕೆಯನ್ನು ದೇವಜಾ ಅಮ್ಮಣ್ಣಿಯವರು ಪಡೆದರು. ಅಷ್ಟೇ ಅಲ್ಲದೆ, ತಾವು ಲಸಿಕೆ ಪಡೆದಿರುವ ಸಂಕೇತವಾಗಿ ಒಂದು ಭಾವಚಿತ್ರವನ್ನು ಸಹ ಮಾಡಿಸಿಕೊಂಡಿದ್ದರು. ಭಾವಚಿತ್ರದಲ್ಲಿ ರೂಪದರ್ಶಿಯಾಗಿ ಕಾಣುವ ದೇವಜಾ ಅಮ್ಮಣ್ಣಿಯವರು ಬಿಳಿ ಸೀರೆಯನ್ನು ಉಟ್ಟಿರುವುದು ಕಂಡು ಬರುತ್ತದೆ. ಮತ್ತೊಂದು ವಿಶೇಷ ಸಂಗತಿಯೆಂದರೆ ಮಹಾರಾಣಿ ತಮ್ಮ ಎಡ ತೋಳನ್ನು ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ. ಲಸಿಕೆಯನ್ನು ಮಹಾರಾಣಿಯ ಎಡ ತೋಳಿಗೆ ನೀಡಿದ್ದ ಸಂಕೇತವಾಗಿ ಅವರು ಹೀಗೆ ಕಂಡು ಬರುತ್ತಾರೆ ಎಂದು ತಿಳಿದುಬಂದಿದೆ.

ಈ ಭಾವಚಿತ್ರವನ್ನು ಲಸಿಕೆಯ ಜಾಹೀರಾತಿನ ಹಾಗೆ ಪ್ರಚಾರಕ್ಕಾಗಿ ಬಳಸಿದ ಬ್ರಿಟಿಷ್​​ ಸರ್ಕಾರ ತದನಂತರ ಭಾರತೀಯರನ್ನು ಲಸಿಕೆ ತೆಗೆದುಕೊಳ್ಳುವಂತೆ ಒಪ್ಪಿಸುವಲ್ಲಿ ಯಶಸ್ವಿಯಾಗಿತ್ತು. ಈ ಭಾವಚಿತ್ರ ಕಾಲಕ್ರಮೇಣ ಕಣ್ಮರೆಯಾಗಿದ್ದು ಬಳಿಕ 2007ರಲ್ಲಿ ಪತ್ತೆಯಾಯಿತು. ಹಾಗಾಗಿ, ಹಲವು ವರ್ಷಗಳ ಕಾಲ ಜನರ ನೆನಪಿನಿಂದ ಮರೆಯಾಗಿದ್ದ ಈ ಘಟನೆ ಇದೀಗ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಭಾರತೀಯರ ಆರೋಗ್ಯದ ಹಿತದೃಷ್ಟಿಯಿಂದ ಲಸಿಕೆಯ ಪ್ರಚಾರಕ್ಕಾಗಿ ಪಣತೊಟ್ಟ ಮಹಾರಾಣಿ ದೇವಜಾ ಅಮ್ಮಣ್ಣಿಯವರ ಕೊಡುಗೆ ನಿಜಕ್ಕೂ ಅವಿಸ್ಮರಣೀಯ.

Published On - 8:43 pm, Sun, 20 September 20

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ