AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವ ವಿಶೇಷ | ಸಂವಿಧಾನದ ಮೊದಲ ಪ್ರತಿ ಮುದ್ರಿಸಿದ್ದ ಮೆಷಿನ್​ಗಳು ಗುಜರಿ ಪಾಲು

1,45,000 ಪದಗಳು ಮತ್ತು 230 ಹಾಳೆಗಳಿರುವ ಸಂವಿಧಾನದ ಮೊದಲ (ಕೈಬರಹದ) ಕರಡಿನ 1000 ಪ್ರತಿಗಳು ಡೆಹ್ರಾಡೂನ್​ನ ಹಾಥಿಬಡಕಲಾ ಪ್ರದೇಶದಲ್ಲಿರುವ ಸರ್ವೇ ಆಫ್ ಇಂಡಿಯಾದ ನಾರ್ತನ್ ಗ್ರೂಪ್ ಕಚೇರಿಯಲ್ಲಿ ಮುದ್ರಣಗೊಂಡಿದ್ದವು.

ಗಣರಾಜ್ಯೋತ್ಸವ ವಿಶೇಷ | ಸಂವಿಧಾನದ ಮೊದಲ ಪ್ರತಿ ಮುದ್ರಿಸಿದ್ದ ಮೆಷಿನ್​ಗಳು ಗುಜರಿ ಪಾಲು
ಸಂವಿಧಾನದ ಮೊದಲ ಪ್ರತಿ ಮುದ್ರಿಸಿದ ಮೆಷಿನ್
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 24, 2021 | 8:53 PM

ಭಾರತದ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುವವರಿಗೆ ಅದು ಮೊದಲ ಬಾರಿಗೆ ಮುದ್ರಣಗೊಂಡ ವಿಚಾರವೂ ಆಸಕ್ತಿದಾಯಕ ಎನಿಸುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಭಾರತದ ಸಂವಿಧಾನವು ಮೊದಲ ಬಾರಿ ಮುದ್ರಣಗೊಂಡಿದ್ದು 1949ರಲ್ಲಿ.

1,45,000 ಪದಗಳು ಮತ್ತು 230 ಹಾಳೆಗಳಿರುವ ಸಂವಿಧಾನದ ಮೊದಲ (ಕೈಬರಹದ) ಕರಡಿನ 1000 ಪ್ರತಿಗಳು ಡೆಹ್ರಾಡೂನ್​ನ ಹಾಥಿಬಡಕಲಾ ಪ್ರದೇಶದಲ್ಲಿರುವ ಸರ್ವೇ ಆಫ್ ಇಂಡಿಯಾದ ನಾರ್ತನ್ ಗ್ರೂಪ್ ಕಚೇರಿಯಲ್ಲಿ ಮುದ್ರಣಗೊಂಡಿದ್ದವು. ಬ್ರಿಟನ್​ನ ಆರ್​ಡಬ್ಲ್ಯು ಕ್ರಾಬ್ ಟ್ರೀ ಆ್ಯಂಡ್ ಸನ್ಸ್ ತಯಾರಿಸಿದ್ದ ಎರಡು ಪ್ರಿಂಟಿಂಗ್ ಮೆಷಿನ್​ಗಳನ್ನು ಸಂವಿಧಾನದ ಮೊದಲ ಪ್ರತಿ ಮುದ್ರಿಸಲು ಬಳಸಲಾಯಿತು. ಇದಕ್ಕೆ ಬೇಕಿದ್ದ ಕಾಗದವನ್ನು ಆಂಡ್ರ್ಯೂ ಯೂಲ್ (Andrew Yule) ಅವರ ಇಂಡಿಯನ್ ಪೇಪರ್ ಆ್ಯಂಡ್ ಪಲ್ಪ್ (ಐಪಿಪಿ) ಸಂಸ್ಥೆ ಒದಗಿಸಿತ್ತು. ಆನಂತರ 1950ರಲ್ಲಿ ಹೂಗ್ಲಿ ಪ್ರಿಂಟಿಂಗ್ ಕಂಪನಿಯಲ್ಲಿ ಹೆಚ್ಚಿನ ಪ್ರತಿಗಳನ್ನು ಮುದ್ರಿಸಲಾಯಿತು.

ಹೇಗಿತ್ತು ಮೊದಲ ಪ್ರತಿ? ಕೈ ಬರಹದಲ್ಲಿ ಬರೆದ ಸಂವಿಧಾನದ ಎರಡು ಪ್ರತಿಗಳನ್ನು ಲಿಥೋಗ್ರಾಫ್ ಪ್ರಿಂಟಿಂಗ್ (ಕಲ್ಲಚ್ಚು ಮುದ್ರಣ) ಬಳಸಿ ಮುದ್ರಿಸಲಾಗಿತ್ತು. ಕ್ಯಾಲಿಗ್ರಾಫರ್ ಪ್ರೇಮ್ ಬೆಹಾರಿ ನರೇನ್ ರೈಜಾದಾ (ಸಕ್ಸೇನಾ) ಅವರು ಸಂವಿಧಾನವನ್ನು ಇಂಗ್ಲಿಷ್​ನಲ್ಲಿ ಬರೆದಿದ್ದು, ವಸಂತ್ ಕೃಷ್ಣ ವೈದ್ಯ ಅವರು ಹಿಂದಿಯಲ್ಲಿ ಬರೆದಿದ್ದರು. ಈ ಹಸ್ತಪ್ರತಿಗಳಿಗೆ ಶಾಂತಿನಿಕೇತನದ ಕಲಾವಿದರಾದ ನಂದಲಾಲ್ ಬೋಸ್, ಬೋಹರ್ ರಾಮಮನೋಹರ್ ಸಿನ್ಹಾ ಅವರು ಚಿತ್ರಾಲಂಕಾರ (ಇಲಸ್ಟ್ರೇಷನ್) ಮಾಡಿದ್ದರು. ಮೊದಲ ಮುದ್ರಿತ ಪ್ರತಿ ನಾರ್ಥರ್ನ್ ಪ್ರಿಂಟಿಂಗ್ ಡಿವಿಷನ್​ನ ಕಪಾಟಿನಲ್ಲಿ ಸುರಕ್ಷಿತವಾಗಿದೆ.

ಆ ಪ್ರಿಂಟಿಂಗ್ ಮೆಷೀನ್ ಈಗಿಲ್ಲ ಸಂವಿಧಾನದ ಮೊದಲ ಪ್ರತಿ ಮುದ್ರಿಸಲು ಬಳಸಿದ್ದ ಸಾವರಿನ್ ಮತ್ತು ಮೊನಾರ್ಕ್ ಮಾದರಿಯ ಮೆಷಿನ್​ಗಳನ್ನು ಗುಜರಿ ಅಂಗಡಿಗೆ ಮಾರಲಾಗಿದೆ. ಸರ್ವೇ ಆಫ್ ಇಂಡಿಯಾ ಅಧಿಕಾರಿಗಳ ಪ್ರಕಾರ ಹಳೇ ವಸ್ತುಗಳನ್ನು ಖರೀದಿ ಮಾಡುವವರಿಗೆ ತುಂಬಾ ವರ್ಷಗಳ ಹಿಂದೆಯೇ ಇದನ್ನು ಹರಾಜು ಮಾಡಲಾಗಿತ್ತು. 2019ರಲ್ಲಿ ಇದನ್ನು 1.5 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು.

ಎರಡು ಲಿಥೊಗ್ರಾಫಿಕ್ ಪ್ರಿಂಟಿಂಗ್ ಮೆಷಿನ್​ಗಳ ನಿರ್ವಹಣೆ ವೆಚ್ಚವೂ ಜಾಸ್ತಿ ಮತ್ತು ಅಲ್ಲಿ ಬಳಸಿರುವ ತಂತ್ರಜ್ಞಾನವೂ ಹಳೆಯದು. ಹಾಗಾಗಿಯೇ ಅದನ್ನು ಮಾರಾಟ ಮಾಡಲಾಯಿತು. ಸರ್ವೇ ಆಫ್ ಇಂಡಿಯಾ 253 ವರ್ಷಗಳನ್ನು ಪೂರೈಸಿದೆ. ನಮಗೆ ಐತಿಹಾಸಿಕ ಪರಂಪರೆ ಇದೆ. ನಾವು ಎಲ್ಲವನ್ನೂ ಇದೇ ರೀತಿ ಸಂರಕ್ಷಿಸುತ್ತಾ ಹೋದರೆ ಆಮೇಲೆ ಈ ಇಲಾಖೆಯೇ ಪೂರ್ತಿ ಪುರಾತನ ವಸ್ತುಗಳಿಂದ ತುಂಬಿರುತ್ತದೆ ಅಂತಾರೆ ಸರ್ವೇಯರ್ ಜನರಲ್ ಆಫ್ ಇಂಡಿಯಾದ ನಿವೃತ್ತ ಲೆಫ್ಟಿನೆಂಟ್ ಜನರಲ್ ಗಿರೀಶ್ ಕುಮಾರ್.

ಆ ಕಾಲದಲ್ಲಿ ಸರ್ವೇ ಆಫ್ ಇಂಡಿಯಾದ ಡೆಹ್ರಾಡೂನ್ ವಿಭಾಗದಲ್ಲಿ ನೂತನ ಪ್ರಿಂಟಿಂಗ್ ಮೆಷೀನ್​ಗಳಿದ್ದ ಕಾರಣವೇ ಸಂವಿಧಾನದ ಪ್ರತಿಗಳನ್ನು ಮುದ್ರಿಸಲಾಗಿತ್ತು. ಈಸ್ಟರ್ನ್ ಪ್ರಿಂಟಿಂಗ್ ಗ್ರೂಪ್ ಅಥವಾ ಕೊಲ್ಕತ್ತಾ ಶಾಖೆ ಸರ್ವೇ ಆಫ್ ಇಂಡಿಯಾದ ಹಳೇ ಶಾಖೆ. 1840ರಲ್ಲಿ ಇದು ಸ್ಥಾಪನೆಯಾಗಿತ್ತು ಎಂದು ಅನಿಸುತ್ತದೆ. ಭಾರತದ ಮೊದಲ ಪೋಸ್ಟಲ್ ಸ್ಟ್ಯಾಂಪ್ ಇಲ್ಲಿಯೇ ಮುದ್ರಣವಾಗಿತ್ತು. ಸಂವಿಧಾನವನ್ನು ಮುದ್ರಿಸುವ ವಿಷಯ ಬಂದಾಗ ನಾರ್ಥರ್ನ್ ಪ್ರಿಂಟಿಂಗ್ ಗ್ರೂಪ್​ನಲ್ಲಿ ನೂತನ ಮಷಿನ್​ಗಳು ಇರುವ ಕಾರಣ ಅಲ್ಲಿಯೇ ಮುದ್ರಿಸಲು ತೀರ್ಮಾನಿಸಲಾಗಿತ್ತು ಎಂದು ಸರ್ವೇ ಆಫ್ ಇಂಡಿಯಾದ ಸುಪರಿಟೆಂಡಿಂಗ್ ಸರ್ವೇಯರ್ (ಟೆಕ್ನಿಕಲ್ ಸೆಕ್ರೆಟರಿ) ಪಂಕಜ್ ಮಿಶ್ರಾ ಹೇಳಿದ್ದಾರೆ.

ಲಿಥೊಗ್ರಾಫಿಕ್ ಪ್ರಿಂಟಿಂಗ್ ಮೆಷಿನ್​ನಲ್ಲಿ ಒಂದು ಸಲಕ್ಕೆ 8 ಪುಟಗಳನ್ನು ಮುದ್ರಿಸಲಾಗಿತ್ತು. ಆಮೇಲೆ ಅವುಗಳನ್ನು ಪ್ರತ್ಯೇಕ ಪುಟಗಳಾಗಿ ಕತ್ತರಿಸಿ ನಂತರ ಎಲ್ಲ ಪುಟಗಳನ್ನು ಒಗ್ಗೂಡಿಸಿ ಹೊಲಿಯಲಾಗಿತ್ತು. ವಿವಿಧ ರೀತಿಯ ಮ್ಯಾಪ್​ಗಳನ್ನು ಮಾಡಲು ಬಳಸುತ್ತಿರುವ ಜಿಂಕ್ ಮತ್ತು ಅಲ್ಯುಮಿನಿಯಂನಿಂದ ಮಾಡಲಾದ ಲಿಥೊಗ್ರಾಫಿಕ್ ಪ್ಲೇಟ್​ಗಳು ಈಗಲೂ ಈ ಮುದ್ರಣಾಲಯದಲ್ಲಿವೆ. ಆದರೆ ಸಂವಿಧಾನವನ್ನು ಮುದ್ರಿಸಲು ಬಳಸಿದ್ದ ಪ್ಲೇಟ್​ಗಳು ಮಾತ್ರ ಕಾಣಿಸುವುದಿಲ್ಲ.

ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ 2003-04 ಮತ್ತು 2018ರಲ್ಲಿ ದಿ ಸರ್ವೇ ಆಫ್ ಇಂಡಿಯಾ ಸಂವಿಧಾನದ ಪ್ರತಿಗಳನ್ನು ಮತ್ತೆ ಮುದ್ರಿಸಿತ್ತು.

ಗಣರಾಜ್ಯೋತ್ಸವದಂದು ರಾಜ್ಯದಲ್ಲಿ ಮೊಳಗಲಿದೆ ರೈತ ಕಹಳೆ.. ರೈತ ಪರೇಡ್​ನಲ್ಲಿ 10 ಸಾವಿರ ವಾಹನ ಭಾಗಿ

Published On - 8:47 pm, Sun, 24 January 21

ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್