AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel Plan : ಮಳೆಗಾಲದ ಪ್ರವಾಸಕ್ಕೆ ಈ ಸ್ಥಳಗಳು ನಿಮಗಾಗಿ ಕಾಯುತ್ತಿವೆ

Resorts : ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ... ಎಂಥ ಆಹ್ಲಾದಕರ ವಾತಾವರಣ!

Travel Plan : ಮಳೆಗಾಲದ ಪ್ರವಾಸಕ್ಕೆ ಈ ಸ್ಥಳಗಳು ನಿಮಗಾಗಿ ಕಾಯುತ್ತಿವೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 14, 2022 | 7:18 PM

Travel Plan for Rainy Season : ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡು ಓಡುವ ಕುದುರೆಯಂತೆ ನಾವು ನಿತ್ಯವೂ ಓಡುತ್ತಲೇ ಇದ್ಧೇವೆ. ಸಿಗುವ ಒಂದು ಭಾನುವಾರವೂ ಸಾಲದೆ, ಮತ್ತೆ ಸೋಮವಾರ ಬಂತೇ ಎಂಬ ಬೇಸರದಲ್ಲೇ ಆಫೀಸುಗಳಿಗೆ ತೆರಳುತ್ತಿದ್ದೇವೆ. ಮಕ್ಕಳಿಗೆ ಶಾಲೆ ಶುರುವಾಗಿ ಯಂತ್ರದಂತೆ ಅವೂ ಓಡುತ್ತಿವೆ. ಇದೆಲ್ಲದಕ್ಕೆ ಮುಕುಟವಿಟ್ಟಂತೆ ಸೂರ್ಯ ನಿಗಿನಿಗಿಯಾಗುತ್ತಲೇ ಇದ್ಧಾನೆ. ಇನ್ನು ಸಾಧ್ಯವೇ ಇಲ್ಲ ಎಂದಾಗ ಆಗಾಗ ಚೂರು ಮಳೆಸೆಳಕು ಬೀಳಿಸಿ ಸಮಾಧನ ಹೇಳುತ್ತಿದೆ ಆಕಾಶ. ಕಾಲ ಹೀಗೇ ನಿಂತೀತೆ? ಬಂದೇ ಬರುತ್ತದೆ ಮಳೆಗಾಲ ಚಳಿಗಾಲ ಮತ್ತೆ ಬೇಸಿಗೆಕಾಲ. ಈಗಿನಿಂದಲೇ ನೀವು ಮಳೆಗಾಲದ ಪ್ರವಾಸಕ್ಕೆ ತಯಾರಿ ಮಾಡಿಕೊಳ್ಳಿ. ಅಂಡಮಾನ್​ ನಿಕೋಬಾರ್, ಗೋವಾ, ಊಟಿ, ಮಹಾಬಲೇಶ್ವರ, ಲೋನಾವಳ, ಮನಾಲಿ ರೆಸಾರ್ಟ್​​​ಗಳು ನಿಮ್ಮ ಬರುವಿಕೆಗಾಗಿ ಸಿದ್ಧಗೊಂಡಿವೆ. ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ… ಎಂಥ ಆಹ್ಲಾದಕರ ವಾತಾವರಣ! ಈಗಲೇ ಯೋಜಿಸಿ. ಮುಂಜೋಹ್ ಐಲ್ಯಾಂಡ್ ಹೌಸ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳೂ ನಿಮಗಾಗಿ ಕಾಯುತ್ತಿವೆ.

ಸ್ಟರ್ಲಿಂಗ್, ಊಟಿ ಅದೆಷ್ಟು ಸಲ ಹೋದರೂ ಊಟಿಯ ರಮ್ಯತಾಣದ ಸೊಬಗನ್ನು ಅನುಭವಿಸುವುದು ಮುಗಿಯುವುದೇ ಇಲ್ಲ.  ಊಟಿಯ ಪರ್ವತಗಳುದ್ದಕ್ಕೂ ಹಸಿರು ಚಾದರದಂತೆ ಹಾಸಿರುವ ಸಸ್ಯರಾಶಿ, ಆಳ ಕಣಿವೆಯಲ್ಲಿ ಆಕಾಶ ನೋಡುತ್ತ ನಿಂತ ಪೈನ್​ ಕಾಡುಗಳು, ನವಿರಾದ ಹಸಿರು ಶಾಲನ್ನು ಹೊದಿಸಿದಂತೆ ಕಾಣುವ  ಟೀ ಎಸ್ಟೇಟ್​ಗಳು ಮತ್ತೆ ಮತ್ತೆ ನಿಮ್ಮನ್ನು ಕರೆಯುತ್ತಲೇ ಇರುತ್ತವೆ. ಬೆಳಗಿನ ಮಂಜು ನಿಮ್ಮನ್ನು ಕನಸಿನಲೋಕಕ್ಕೆ ಕರೆದೊಯ್ಯಲು ನಿಮಗಾಗಿಯೇ  ಕಾಯುತ್ತಿರುವಂತೆ ತೋರುತ್ತಿರುತ್ತವೆ.

ಇದನ್ನೂ ಓದಿ : Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಅಲ್ಲಲ್ಲಿ ಹರಿಯುವ ತೊರೆಗಳು, ಅಪರೂಪಕ್ಕೆ ಕಾಣುವ ಕಾಡುಪ್ರಾಣಿಗಳು, ಸುಗಂಧಿತ ಸಸ್ಯಗಳು ಇನ್ನೂ ಏನೆಲ್ಲ ಇದೆ ಇಲ್ಲಿ. ಇನ್ನು ಈ ರೆಸಾರ್ಟ್​ನಲ್ಲಿ ಪೇಂಟ್‌ಬಾಲ್, ಲೈಬ್ರರಿ ಮತ್ತು ಮನಸೋಲ್ಲಾಸ ನೀಡುವ ಅನೇಕ ಚಟುವಟಿಕೆಗಳ ನಡುವೆಯೂ ಆರಾಮದಾಯಕವಾಗಿ ನೀವು ಕಳೆದುಹೋಗಬಹುದು.

ಸ್ಟೇವಿಸ್ಟಾ, ಲೋನಾವಾಲಾ ಇಲ್ಲಿ ನೀವು ಕುಟುಂಬದೊಂದಿಗೆ ಸ್ನೇಹಿತರೊಂದಿಗೆ ಅಥವಾ ಸಹೋದ್ಯೋಗಿಗಳೊಂದಿಗೆ ವಿಹಾರಕ್ಕಾಗಿ ಗುಂಪಿನಲ್ಲಿಯೂ ಬರಬಹುದು. ವಿವಿಧ ಕಾರ್ಯಕ್ರಮ, ಪಾರ್ಟಿಗಳನ್ನು ಹಮ್ಮಿಕೊಳ್ಳಬಹುದು. ಅದಕ್ಕಾಗಿ ಪೂರಕವಾಗುವಂತೆ ಸುಸಜ್ಜಿತವಾದ ಕೊಠಡಿ, ಹಾಲ್​, ಊಟೋಪಚಾರ, ವಸತಿ ವ್ಯವಸ್ಥೆ, ಆಹ್ಲಾದಕರ ಹವಾಮಾನ ಇಲ್ಲಿರುತ್ತದೆ. ಸುತ್ತಮುತ್ತಲೂ ಇರುವ ಪ್ರವಾಸಿ ತಾಣಗಳಿಗೂ ಭೇಟಿಕೊಡಬಹುದು. ಖಂಡೇಲಾ, ಸಿಂಹಗಡ, ಮಹಾಬಲೇಶ್ವರಗಳಿಗೂ ಭೇಟಿ ನೀಡಬಹುದು.

ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ