AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel Plan : ಮಳೆಗಾಲದ ಪ್ರವಾಸಕ್ಕೆ ಈ ಸ್ಥಳಗಳು ನಿಮಗಾಗಿ ಕಾಯುತ್ತಿವೆ

Resorts : ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ... ಎಂಥ ಆಹ್ಲಾದಕರ ವಾತಾವರಣ!

Travel Plan : ಮಳೆಗಾಲದ ಪ್ರವಾಸಕ್ಕೆ ಈ ಸ್ಥಳಗಳು ನಿಮಗಾಗಿ ಕಾಯುತ್ತಿವೆ
TV9 Web
| Edited By: |

Updated on: Jun 14, 2022 | 7:18 PM

Share

Travel Plan for Rainy Season : ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡು ಓಡುವ ಕುದುರೆಯಂತೆ ನಾವು ನಿತ್ಯವೂ ಓಡುತ್ತಲೇ ಇದ್ಧೇವೆ. ಸಿಗುವ ಒಂದು ಭಾನುವಾರವೂ ಸಾಲದೆ, ಮತ್ತೆ ಸೋಮವಾರ ಬಂತೇ ಎಂಬ ಬೇಸರದಲ್ಲೇ ಆಫೀಸುಗಳಿಗೆ ತೆರಳುತ್ತಿದ್ದೇವೆ. ಮಕ್ಕಳಿಗೆ ಶಾಲೆ ಶುರುವಾಗಿ ಯಂತ್ರದಂತೆ ಅವೂ ಓಡುತ್ತಿವೆ. ಇದೆಲ್ಲದಕ್ಕೆ ಮುಕುಟವಿಟ್ಟಂತೆ ಸೂರ್ಯ ನಿಗಿನಿಗಿಯಾಗುತ್ತಲೇ ಇದ್ಧಾನೆ. ಇನ್ನು ಸಾಧ್ಯವೇ ಇಲ್ಲ ಎಂದಾಗ ಆಗಾಗ ಚೂರು ಮಳೆಸೆಳಕು ಬೀಳಿಸಿ ಸಮಾಧನ ಹೇಳುತ್ತಿದೆ ಆಕಾಶ. ಕಾಲ ಹೀಗೇ ನಿಂತೀತೆ? ಬಂದೇ ಬರುತ್ತದೆ ಮಳೆಗಾಲ ಚಳಿಗಾಲ ಮತ್ತೆ ಬೇಸಿಗೆಕಾಲ. ಈಗಿನಿಂದಲೇ ನೀವು ಮಳೆಗಾಲದ ಪ್ರವಾಸಕ್ಕೆ ತಯಾರಿ ಮಾಡಿಕೊಳ್ಳಿ. ಅಂಡಮಾನ್​ ನಿಕೋಬಾರ್, ಗೋವಾ, ಊಟಿ, ಮಹಾಬಲೇಶ್ವರ, ಲೋನಾವಳ, ಮನಾಲಿ ರೆಸಾರ್ಟ್​​​ಗಳು ನಿಮ್ಮ ಬರುವಿಕೆಗಾಗಿ ಸಿದ್ಧಗೊಂಡಿವೆ. ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ… ಎಂಥ ಆಹ್ಲಾದಕರ ವಾತಾವರಣ! ಈಗಲೇ ಯೋಜಿಸಿ. ಮುಂಜೋಹ್ ಐಲ್ಯಾಂಡ್ ಹೌಸ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳೂ ನಿಮಗಾಗಿ ಕಾಯುತ್ತಿವೆ.

ಸ್ಟರ್ಲಿಂಗ್, ಊಟಿ ಅದೆಷ್ಟು ಸಲ ಹೋದರೂ ಊಟಿಯ ರಮ್ಯತಾಣದ ಸೊಬಗನ್ನು ಅನುಭವಿಸುವುದು ಮುಗಿಯುವುದೇ ಇಲ್ಲ.  ಊಟಿಯ ಪರ್ವತಗಳುದ್ದಕ್ಕೂ ಹಸಿರು ಚಾದರದಂತೆ ಹಾಸಿರುವ ಸಸ್ಯರಾಶಿ, ಆಳ ಕಣಿವೆಯಲ್ಲಿ ಆಕಾಶ ನೋಡುತ್ತ ನಿಂತ ಪೈನ್​ ಕಾಡುಗಳು, ನವಿರಾದ ಹಸಿರು ಶಾಲನ್ನು ಹೊದಿಸಿದಂತೆ ಕಾಣುವ  ಟೀ ಎಸ್ಟೇಟ್​ಗಳು ಮತ್ತೆ ಮತ್ತೆ ನಿಮ್ಮನ್ನು ಕರೆಯುತ್ತಲೇ ಇರುತ್ತವೆ. ಬೆಳಗಿನ ಮಂಜು ನಿಮ್ಮನ್ನು ಕನಸಿನಲೋಕಕ್ಕೆ ಕರೆದೊಯ್ಯಲು ನಿಮಗಾಗಿಯೇ  ಕಾಯುತ್ತಿರುವಂತೆ ತೋರುತ್ತಿರುತ್ತವೆ.

ಇದನ್ನೂ ಓದಿ : Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಅಲ್ಲಲ್ಲಿ ಹರಿಯುವ ತೊರೆಗಳು, ಅಪರೂಪಕ್ಕೆ ಕಾಣುವ ಕಾಡುಪ್ರಾಣಿಗಳು, ಸುಗಂಧಿತ ಸಸ್ಯಗಳು ಇನ್ನೂ ಏನೆಲ್ಲ ಇದೆ ಇಲ್ಲಿ. ಇನ್ನು ಈ ರೆಸಾರ್ಟ್​ನಲ್ಲಿ ಪೇಂಟ್‌ಬಾಲ್, ಲೈಬ್ರರಿ ಮತ್ತು ಮನಸೋಲ್ಲಾಸ ನೀಡುವ ಅನೇಕ ಚಟುವಟಿಕೆಗಳ ನಡುವೆಯೂ ಆರಾಮದಾಯಕವಾಗಿ ನೀವು ಕಳೆದುಹೋಗಬಹುದು.

ಸ್ಟೇವಿಸ್ಟಾ, ಲೋನಾವಾಲಾ ಇಲ್ಲಿ ನೀವು ಕುಟುಂಬದೊಂದಿಗೆ ಸ್ನೇಹಿತರೊಂದಿಗೆ ಅಥವಾ ಸಹೋದ್ಯೋಗಿಗಳೊಂದಿಗೆ ವಿಹಾರಕ್ಕಾಗಿ ಗುಂಪಿನಲ್ಲಿಯೂ ಬರಬಹುದು. ವಿವಿಧ ಕಾರ್ಯಕ್ರಮ, ಪಾರ್ಟಿಗಳನ್ನು ಹಮ್ಮಿಕೊಳ್ಳಬಹುದು. ಅದಕ್ಕಾಗಿ ಪೂರಕವಾಗುವಂತೆ ಸುಸಜ್ಜಿತವಾದ ಕೊಠಡಿ, ಹಾಲ್​, ಊಟೋಪಚಾರ, ವಸತಿ ವ್ಯವಸ್ಥೆ, ಆಹ್ಲಾದಕರ ಹವಾಮಾನ ಇಲ್ಲಿರುತ್ತದೆ. ಸುತ್ತಮುತ್ತಲೂ ಇರುವ ಪ್ರವಾಸಿ ತಾಣಗಳಿಗೂ ಭೇಟಿಕೊಡಬಹುದು. ಖಂಡೇಲಾ, ಸಿಂಹಗಡ, ಮಹಾಬಲೇಶ್ವರಗಳಿಗೂ ಭೇಟಿ ನೀಡಬಹುದು.

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು