Akshaya Tritiya 2022: ಅಕ್ಷಯ ತೃತೀಯದಲ್ಲಿ ಆಭರಣ ಖರೀದಿಸಲು ಇಲ್ಲಿದೆ ಶುಭ ಮುಹೂರ್ತ

Akshaya Tritiya Festival 2022: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಇಂದು ಆಭರಣಕೊಂಡರೆ ಅದೃಷ್ಟ, ಸಮೃದ್ಧಿ ತರುತ್ತದೆ ಎಂಬ ನಂಬಿಕೆ ಇದೆ.

Akshaya Tritiya 2022: ಅಕ್ಷಯ ತೃತೀಯದಲ್ಲಿ ಆಭರಣ ಖರೀದಿಸಲು ಇಲ್ಲಿದೆ ಶುಭ ಮುಹೂರ್ತ
ಚಿನ್ನದ ಬೆಲೆ
Follow us
| Updated By: Digi Tech Desk

Updated on:May 03, 2022 | 9:12 AM

ಈ ಬಾರಿ ಇಂದು (ಮೇ 03) ಅಕ್ಷಯ ತೃತೀಯವನ್ನು (Akshaya Tritiya) ಆಚರಿಸಲಾಗುತ್ತಿದೆ. ಈ ದಿನದಂದು ಆಭರಣ ಕೊಳ್ಳುವುದೇ ಸಂಪ್ರದಾಯವಾಗಿ ಬಿಟ್ಟಿದೆ. ಈ ದಿನದಂದೆ ಚಿನ್ನ (Gold), ಬೆಳ್ಳಿ (Silver) ಖರೀದಿ ಮಾಡಬೇಕು ಅಂತ ಕಾದು ಕೂತು ಖರೀದಿಸುತ್ತಾರೆ. ಆಭರಣ ಕೊಳ್ಳುವುದಕ್ಕೆ ಇಂದು ಶುಭವಾದ ದಿನ. ಹೀಗಾಗಿ ಆಭರಣ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿರುತ್ತದೆ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಇಂದು ಆಭರಣಕೊಂಡರೆ ಅದೃಷ್ಟ, ಸಮೃದ್ಧಿ ತರುತ್ತದೆ ಎಂಬ ನಂಬಿಕೆ ಇದೆ.

ಸಂಸ್ಕೃತದಲ್ಲಿ ಅಕ್ಷಯ ಅಂದರೆ ಸಂತೋಷ, ಯಶಸ್ಸು, ಮತ್ತು ಸಮೃದ್ಧಿ ಎಂದಿಗೂ ಕಡಿಮೆಯಾಗಲ್ಲ ಅಂತ. ತೃತೀಯ ಅಂದರೆ ಮೂರು. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಹಬ್ಬವನ್ನು ತೃತೀಯ ತಿಥಿ ಅಥವಾ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ತೃತೀಯ ದಿನದಂದು ಏನನ್ನೂ ಖರೀದಿಸಿದರೂ ಶಾಶ್ವತವಾಗಿ ಉಳಿಯುತ್ತದೆ ಎಂಬ ನಂಬಿಕೆ ಹೆಚ್ಚಿದೆ. ಇದೇ ಕಾರಣಕ್ಕೆ ಅಕ್ಷಯ ತೃತೀಯದಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿಸುವುದು ಸಂಪ್ರಾಯವಾಗಿದೆ. ಜೊತೆಗೆ ಹಲವರು ಈ ದಿನದಂದು ಆಸ್ತಿ, ವಾಹನಗಳನ್ನ ಖರೀದಿಸಲು ಮುಂದಾಗುತ್ತಾರೆ.

ಅಕ್ಷಯ ತೃತೀಯ ಇತಿಹಾಸ ಮತ್ತು ಮಹತ್ವ: ಈ ಶುಭ ದಿನದ ಹಿಂದೆ ಹಲವಾರು ಕಥೆಗಳು ಇವೆ. ಹಿಂದೂ ಪುರಾಣಗಳ ಪ್ರಕಾರ, ಇಂದು ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಜನ್ಮದಿನ. ಈ ದಿನದಂದು ಸುದಾಮನು ತನ್ನ ಸ್ನೇಹಿತನಾದ ಶ್ರೀಕೃಷ್ಣನನ್ನು ಭೇಟಿಯಾದನೆಂದು ನಂಬಲಾಗಿದೆ.

ವಿವಿಧ ನಗರಗಳಲ್ಲಿ ಚಿನ್ನವನ್ನು ಖರೀದಿಸಲು ಶುಭ ಸಮಯಗಳು: ಇಂದು ಆಭರಣಕೊಳ್ಳುವವರು ಈ ಶುಭ ಮುಹೂರ್ತದಲ್ಲಿ ಖರೀದಿಸಿ. ಬೆಳ್ಳಿಗೆ 5.39 ರಿಂದ ಮಧ್ಯಾಹ್ನ 12.18ರ ವರೆಗೆ ಆಭರಣ ಖರೀದಿ ಮಾಡಲು ಒಳ್ಳೆಯ ಮುಹೂರ್ತ ಇದೆ. ಇಂದು 6 ಗಂಟೆ 39 ನಿಮಿಷಗಳು ಕಾಲವಿದೆ. ಈ ಅವಧಿಯಲ್ಲೆ ಚಿನ್ನ, ಬೆಳ್ಳಿ ಕೊಳ್ಳಿ. ವಿವಿಧ ನಗರಗಳಲ್ಲಿ ಆಭರಣಕೊಳ್ಳಲು ಇರುವ ಶುಭ ಗಳಿಗೆಯನ್ನು ಇಲ್ಲಿ ತಿಳಿಸಲಾಗಿದೆ.

* ಬೆಂಗಳೂರು: ಬೆಳ್ಳಿಗ್ಗೆ 5.58ರಿಂದ ಮಧ್ಯಾಹ್ನ 12.17

* ದೆಹಲಿ: ಬೆಳ್ಳಿಗ್ಗೆ 5.39ರಿಂದ ಮಧ್ಯಾಹ್ನ 12.18

* ಮುಂಬೈ: ಬೆಳಿಗ್ಗೆ 6.10ರಿಂದ ಮಧ್ಯಾಹ್ನ 12.35

* ಕೋಲ್ಕತ್ತಾ: ಬೆಳಗ್ಗೆ 5.10ರಿಂದ ಬೆಳಿಗ್ಗೆ 11.34

* ಚೆನ್ನೈ: ಬೆಳಿಗ್ಗೆ 5.48ರಿಂದ ಮಧ್ಯಾಹ್ನ 12.06

* ಹೈದರಾಬಾದ್: ಬೆಳಿಗ್ಗೆ 5.49ರಿಂದ ಮಧ್ಯಾಹ್ನ 12.13

* ಪುಣೆ: ಬೆಳಿಗ್ಗೆ 6.06ರಿಂದ ಮಧ್ಯಾಹ್ನ 12.32

ಇದನ್ನೂ ಓದಿ

Shreyas Iyer: ಸತತ 5 ಸೋಲುಗಳ ಬಳಿಕ ಗೆಲುವು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು ಕೇಳಿ

ಬರ್ತ್​ಡೇಗೂ ಒಂದು ದಿನ ಮೊದಲು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮೇಘನಾ ರಾಜ್

Published On - 8:53 am, Tue, 3 May 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ