Sanatana Culture: ಮುತ್ತೈದೆಯರು ಕೊಟ್ಟ ಅರಿಶಿನ-ಕುಂಕುಮ, ಮಂಗಳ ದ್ರವ್ಯಗಳನ್ನು ಬೇರೆಯವರಿಗೆ ನೀಡಬಾರದು ಏಕೆ? ಶಾಸ್ತ್ರ ಹೇಳುವುದೇನು?

ಸನಾತನ ಸಂಸ್ಕೃತಿಯಲ್ಲಿ ಮುತ್ತೈದೆಯರಿಗೆ ದೇವತಾ ಸ್ವರೂಪದ ಸ್ಥಾನವಿದೆ. ಅವರು ಆಶೀರ್ವಾದವಾಗಿ ನೀಡುವ ಮಂಗಳ ದ್ರವ್ಯಗಳು ದೈವಿಕ ಶಕ್ತಿಯನ್ನು ಹೊಂದಿರುತ್ತವೆ. ಅರಿಶಿನ-ಕುಂಕುಮ, ತಾಂಬೂಲ ಹಾಗೂ ಇತರ ಪವಿತ್ರ ವಸ್ತುಗಳನ್ನು ಏಕೆ ಹಸ್ತಾಂತರಿಸಬಾರದು ಅಥವಾ ಬೇರೆಯವರಿಗೆ ಮರುಹಂಚಿಕೆ (Re-gift) ಮಾಡಬಾರದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

Sanatana Culture: ಮುತ್ತೈದೆಯರು ಕೊಟ್ಟ ಅರಿಶಿನ-ಕುಂಕುಮ, ಮಂಗಳ ದ್ರವ್ಯಗಳನ್ನು ಬೇರೆಯವರಿಗೆ ನೀಡಬಾರದು ಏಕೆ? ಶಾಸ್ತ್ರ ಹೇಳುವುದೇನು?
ಅರಿಶಿನ-ಕುಂಕುಮ
Image Credit source: Adobe Stock

Updated on: Jul 31, 2026 | 4:20 PM

ನಮ್ಮ ದಿನನಿತ್ಯದ ಜೀವನದಲ್ಲಿ ಧಾರ್ಮಿಕ ಆಚಾರ-ವಿಚಾರಗಳಿಗೆ ಅತ್ಯಂತ ಮಹತ್ವವಿದೆ. ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವುದು, ಹಿರಿಯರಿಗೆ ಗೌರವ ನೀಡುವುದು ನಮ್ಮ ಹಿಂದೂ ಸನಾತನ ಸಂಸ್ಕೃತಿಯ ಮೂಲ ತತ್ವ. ಅದರಲ್ಲೂ ವಿಶೇಷವಾಗಿ ಮನೆಗೆ ಬಂದ ಮುತ್ತೈದೆಯರಿಗೆ (ಸುಮಂಗಲಿಯರಿಗೆ) ಅರಿಶಿನ-ಕುಂಕುಮ, ತಾಂಬೂಲ, ರವಿಕೆ, ಹಣ್ಣು-ಕಾಯಿ ನೀಡಿ ಗೌರವಿಸುವುದು ಕಾಲಕಾಲದಿಂದ ಬೆಳೆದುಬಂದ ಶ್ರೇಷ್ಠ ಪದ್ಧತಿ.

ಆದರೆ, ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಮೂಡಿರುವ ಒಂದು ದೊಡ್ಡ ಗೊಂದಲವೆಂದರೆ— ಬೇರೆಯವರ ಮನೆಯಿಂದ ನಮಗೆ ಸಿಕ್ಕ ಅರಿಶಿನ, ಕುಂಕುಮ, ತೆಂಗಿನಕಾಯಿ ಅಥವಾ ಮಂಗಳ ದ್ರವ್ಯಗಳನ್ನು ನಮ್ಮ ಮನೆಗೆ ಬಂದ ಬೇರೆಯವರಿಗೆ ಯಥಾವತ್ತಾಗಿ ಕೊಡಬಹುದೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ದೇವತಾ ಭಾವನೆಯಿಂದ ನೀಡುವ ಮಂಗಳ ದ್ರವ್ಯಗಳು:

ಮನೆಗೆ ಬಂದ ಮುತ್ತೈದೆಗೆ ಅರಿಶಿನ-ಕುಂಕುಮ ನೀಡುವಾಗ, ಅವರನ್ನು ಕೇವಲ ಸಾಧಾರಣ ವ್ಯಕ್ತಿಯಾಗಿ ನೋಡದೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಹಾಗೂ ಪಾರ್ವತಿ ದೇವಿಯ ಸ್ವರೂಪ ಎಂದು ಭಾವಿಸಲಾಗುತ್ತದೆ. “ನಿಮ್ಮ ಪಾದಸ್ಪರ್ಶದಿಂದ ನಮ್ಮ ಮನೆಗೆ ಶುಭವಾಗಲಿ” ಎಂಬ ಪವಿತ್ರ ಭಾವನೆಯಿಂದ ಆ ವಸ್ತುಗಳನ್ನು ಅರ್ಪಿಸಲಾಗಿರುತ್ತದೆ. ಆದ್ದರಿಂದ ಬೇರೆಯವರಿಂದ ಆಶೀರ್ವಾದ ರೂಪದಲ್ಲಿ ಪಡೆದ ವಸ್ತುಗಳನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವುದು ಶುಭವಲ್ಲ.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

ಯಾವ ದೇವತಾ ಭಾವನೆಯಿಂದ ವಸ್ತುಗಳನ್ನು ನೀಡಲಾಗಿದೆಯೋ, ಅದನ್ನು ಬೇರೆಯವರಿಗೆ ಕೊಡುವುದರಿಂದ ಆ ಭಾವನೆಗೆ ಹಾಗೂ ದೇವಿಗೆ ಅಪಚಾರವೆಸಗಿದಂತಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಧನನಾಶ, ಅನಾರೋಗ್ಯ, ಕೈಗೊಂಡ ಕೆಲಸಗಳಲ್ಲಿ ನಷ್ಟ-ಕಷ್ಟಗಳು ಹಾಗೂ ಕುಟುಂಬದಲ್ಲಿ ಅಶಾಂತಿ ಅಥವಾ ಕಲಹಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಜ್ಯೋತಿಷ್ಯ ತಜ್ಞರು ಎಚ್ಚರಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us