AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಕೆಲವು ವಿಷಯಗಳು ನಿಮಗೆ ಲಭಿಸುತ್ತಿದ್ದರೆ ನೀವು ನಿಜವಾಗಿಯೂ ಅದೃಷ್ಟವಂತರು- ಚಾಣಕ್ಯ ನೀತಿ

ಚಾಣಕ್ಯ ನೀತಿ: ಕೇಲವ ಹಣವೊಂದೇ ಅಲ್ಲ ಇತರ ಸಂಗತಿಗಳೂ ಸಹ ಮನುಷ್ಯರ ಅದೃಷ್ಟಕ್ಕೆ ಸಹಾಯವಾಗುತ್ತದೆ. ಓರ್ವ ವ್ಯಕ್ತಿ ಈ ಗುಣಗಳನ್ನು ಪಡೆದರೆ ನಿಜವಾಗಿಯೂ ಅದೃಷ್ಟವಂತನಾಗಿರುತ್ತಾನೆ.

Chanakya Niti: ಈ ಕೆಲವು ವಿಷಯಗಳು ನಿಮಗೆ ಲಭಿಸುತ್ತಿದ್ದರೆ ನೀವು ನಿಜವಾಗಿಯೂ ಅದೃಷ್ಟವಂತರು- ಚಾಣಕ್ಯ ನೀತಿ
ಚಾಣಕ್ಯ
TV9 Web
| Edited By: |

Updated on:Jul 18, 2021 | 11:27 AM

Share

ಈಗಿನ ಕಾಲದ ಜನರು ಹಣವನ್ನು ಮಾತ್ರ ಅದೃಷ್ಟವೆಂದು ಪರಿಗಣಿಸುತ್ತಾರೆ. ಆಚಾರ್ಯ ಚಾಣಕ್ಯರೂ(Chanakya) ಸಹ ಹಣ ಮುಖ್ಯ ಎಂದು ಹೇಳಿದ್ದಾರೆ. ಕಷ್ಟದ ಸಮಯದಲ್ಲೂ ವ್ಯಕ್ತಿಯನ್ನು ಬೆಂಬಲಿಸುವ ಏಕೈಕ ಸ್ನೇಹಿತ ಹಣ ಎಂದು ಅವರು ನಂಬಿದ್ದರು. ಕೇಲವ ಹಣವೊಂದೇ(Money) ಅಲ್ಲ ಇತರ ಸಂಗತಿಗಳೂ ಸಹ ಮನುಷ್ಯರ ಅದೃಷ್ಟಕ್ಕೆ ಸಹಾಯವಾಗುತ್ತದೆ. ಓರ್ವ ವ್ಯಕ್ತಿ ಈ ಗುಣಗಳನ್ನು ಪಡೆದರೆ ನಿಜವಾಗಿಯೂ ಅದೃಷ್ಟವಂತನಾಗಿರುತ್ತಾನೆ.

ಆಚಾರ್ಯ ಚಾಣಕ್ಯರು ಶ್ರೇಷ್ಠ ವಿದ್ವಾಂಸರು. ಜತೆಗೆ ತಮ್ಮ ಅನುಭವದ ಮೂಲಕ ಪ್ರಸ್ತುತ ಕಾಲಕ್ಕೂ ಸರಿ ಹೊಂದುವಂತೆ ನೀತಿಯನ್ನು ಸಾರಿದ್ದಾರೆ. ಇಂದಿಗೂ ಸಹ ಅವರ ಮಾತುಗಳನ್ನು ಕ್ಲುಲ್ಲಕ ಎಂದು ಭಾವಿಸುವುದಿಲ್ಲ. ಆಚಾರ್ಯರ ಮಾತುಗಳನ್ನು ಅನುಸರಿಸುವ ಮೂಲಕ ಏನೂ ಬೇಕಾದರೂ ಸಾಧಿಸಬಹುದು ಜತೆಗೆ ಜೀವನವನ್ನು ತುಂಬಾ ಸುಲಭದಲ್ಲಿ ನಡೆಸಿಕೊಂಡು ಹೋಗಬಹುದು. ಹಾಗಿರುವಾಗ ನೀವು ಇವುಗಳನ್ನು ಹೊಂದಿದ್ದರೆ ನಿಜವಾಗಿಯೂ ಅದೃಷ್ಟವಂತರಾಗಿದ್ದೀರಿ ಎಂದೇ ಅರ್ಥ.

*ನಿಮಗೆ ಎರಡು ಹೊತ್ತಿನ ಊಟ ಸಿಗುತ್ತಿದೆ ಎಂದಾದರೆ ನೀವೇ ಅದೃಷ್ಟವಂತರು. ಏಕೆಂದರೆ ನಿಮ್ಮ ಸುತ್ತಮುತ್ತಲು ಕಣ್ಬಿಟ್ಟು ನೋಡಿ. ಜಗತ್ತಿನಲ್ಲಿ ಅದೆಷ್ಟೋ ಜನರಿಗೆ ಆಹಾರವೇ ಸಿಗುತ್ತಿಲ್ಲ. ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದಾರೆ. ಅದೆಷ್ಟೋ ಜನ ಹಸಿವಿನಿಂದಲೇ ದಿನ ಕಳೆಯುತ್ತಿದ್ದಾರೆ. ಹಾಗಿರುವಾಗ ನಿಮಗೆ ದಿನದ ಊಟ ಸಿಗುತ್ತಿದೆ ಅಂದಾದರೆ ನೀವು ನಿಜವಾಗಿಯೂ ಅದೃಷ್ಟವಂತರು.

*ನೀವು ತಿಂದ ಆಹಾರ ನಿಮಗೆ ಒಗ್ಗುತ್ತಿದೆ ಎಂದಾದರೆ ನೀವೇ ಅದೃಷ್ಟವಂತರು. ಏಕೆಂದರೆ ಆಹಾರ ಕೊರತೆಯಿಲ್ಲದೆ ಅನೇಕರು ಜನರು ಜೀವನ ನಡೆಸುತ್ತಿರಬಹುದು. ಆದರೆ ಕೆಲವು ಕಾರಣಗಳಿಂದ ಆಹಾರವನ್ನು ತಿನ್ನಲು ಸಾಧ್ಯವಾಗುತ್ತಿಲ್ಲ. ಆಹಾರವನ್ನು ಸೇವಿಸಿದರೂ ಸಹ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

*ನೀವು ಶಾಂತಿಯಿಂದಿರುವ ಅಥವಾ ಸೌಮ್ಯ ಗುಣದ ಹೆಂಡತಿಯನ್ನು ಪಡೆದಿದ್ದರೆ ಅದೃಷ್ಟವಂತರು. ಏಕೆಂದರೆ ಅವಳ ಮನಸ್ಸು ಮತ್ತು ಯೋಚನೆ ಇಡೀ ಕುಟುಂಬವನ್ನು ನಡೆಸಿಕೊಂಡು ಹೋಗುತ್ತದೆ. ಹೆಂಡತಿ ಜನಳವಾಡಿದರೆ ಮನೆಯಲ್ಲಿನ ಅಶಾಂತಿಯಿಂದ ಎಲ್ಲರ ಮನಸ್ಸು ಕೆಡುತ್ತದೆ.

*ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿದ್ದರೆ ನೀವು ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮನುಷ್ಯನು ಶ್ರಮ ಪಟ್ಟು ದುಡಿಯುವುದು ಮುಖ್ಯ.

*ನೀವು ದಾನ-ಧರ್ಮದಲ್ಲಿ ತೊಡಗಿದ್ದರೆ ನಿಜವಾಗಿಯೂ ಅದೃಷ್ಟವಂತರಾಗಿರುತ್ತೀರಿ. ದಾನಿಯು ಇತರರ ಜೀವನವನ್ನು ಸುಂದರಗೊಳಿಸುವುದಲ್ಲದೇ ಗೌರವವನ್ನು, ಅರ್ಹತೆಯನ್ನು ಗಳಿಸಿಕೊಳ್ಳುತ್ತಾನೆ. ಆತನು ತನ್ನ ಕುಟುಂಬವನ್ನು ಮತ್ತು ಜೀವನವನ್ನು ಸಮೃದ್ಧಗೊಳಿಸುತ್ತಾನೆ. ಅದಕ್ಕಾಗಿಯೇ ಧರ್ಮಗ್ರಂಥಗಳಲ್ಲಿ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಇದನ್ನೂ ಓದಿ:

Chanakya Niti: ಕೈಯಲ್ಲಿ ಹಣವಿಲ್ಲವೆಂದು ಚಿಂತಿಸುತ್ತಿದ್ದೀರಾ? ದೇವಿ ಲಕ್ಷ್ಮಿಯನ್ನು ಮೆಚ್ಚಿಸಲು ಈ 3 ಮಾರ್ಗಗಳನ್ನು ತಿಳಿದುಕೊಳ್ಳಿ – ಚಾಣಕ್ಯ ನೀತಿ

Chanakya Niti: ಗಂಡ-ಹೆಂಡತಿ ಬಾಂಧವ್ಯದಲ್ಲಿ ಈ ಕೊರತೆಗಳು ಸಂಬಂಧವನ್ನು ಹದಗೆಡಿಸುತ್ತವೆ – ಚಾಣಕ್ಯ ನೀತಿ

Published On - 11:25 am, Sun, 18 July 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು