Ganesh Chaturthi: ಗಣೇಶ ಚತುರ್ಥಿ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿವಾರಿಸಲು ಕೇಂದ್ರ ರೈಲ್ವೆಯಿಂದ 156 ವಿಶೇಷ ರೈಲುಗಳ ವ್ಯವಸ್ಥೆ

ಗಣೇಶ ಚತುರ್ಥಿ(Ganesh Chaturthi)ಯ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 156 ವಿಶೇಷ ರೈಲು(Special Train)ಗಳನ್ನು ಓಡಿಸಲು ಕೇಂದ್ರ ರೈಲ್ವೆ ಸಿದ್ಧತೆ ನಡೆಸಿದೆ.

Ganesh Chaturthi: ಗಣೇಶ ಚತುರ್ಥಿ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿವಾರಿಸಲು ಕೇಂದ್ರ ರೈಲ್ವೆಯಿಂದ 156 ವಿಶೇಷ ರೈಲುಗಳ ವ್ಯವಸ್ಥೆ
ರೈಲು
Follow us
| Updated By: Digi Tech Desk

Updated on:Sep 12, 2023 | 10:48 AM

ಗಣೇಶ ಚತುರ್ಥಿ(Ganesh Chaturthi)ಯ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 156 ವಿಶೇಷ ರೈಲು(Special Train)ಗಳನ್ನು ಓಡಿಸಲು ಕೇಂದ್ರ ರೈಲ್ವೆ ಸಿದ್ಧತೆ ನಡೆಸಿದೆ. ಈ ರೈಲುಗಳ ಬುಕಿಂಗ್ ಜೂನ್ 27 ರಿಂದ ಪ್ರಾರಂಭವಾಗಲಿದೆ. ಗಣೇಶ ಚತುರ್ಥಿಯಂದು ಓಡುವ ಎಲ್ಲಾ ರೈಲುಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಪ್ರಯಾಣಿಕರು ತಮ್ಮ ಟಿಕೆಟ್​ಗಳನ್ನು ರಿಸರ್ವೇಷನ್ ಕೌಂಟರ್​ಗಳಲ್ಲಿ ಮತ್ತು ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ಬುಕ್ ಮಾಡಬಹುದು. ಈ ರೈಲುಗಳು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT), ಮುಂಬೈ, ಪನ್ವೆಲ್, ಮತ್ತು ಸಾವಂತವಾಡಿ, ರತ್ನಾಗಿರಿ, ಪುಣೆ, ಕರ್ಮಾಲಿ, ಕುಡಾಲ್ ನಡುವಿನ ನಿಲ್ದಾಣಗಳು ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಚಲಿಸಲಿದೆ.

ವಿಶೇಷ ರೈಲುಗಳ ವೇಳಾಪಟ್ಟಿ ಮತ್ತು ವಿವರಗಳು CSMT-ಸಾವಂತವಾಡಿ ರಸ್ತೆ ದೈನಂದಿನ ವಿಶೇಷ (40 ಸೇವೆಗಳು)

ರೈಲು ಸಂಖ್ಯೆ 01171

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ ಮುಂಬೈ: ಸೆಪ್ಟೆಂಬರ್ 13, 2023 ರಿಂದ ಅಕ್ಟೋಬರ್ 2, 2023 (20 ಟ್ರಿಪ್‌ಗಳು) ವರೆಗೆ ಪ್ರತಿದಿನ 12.20 ಕ್ಕೆ ಹೊರಡುತ್ತದೆ. ಅದೇ ದಿನ ಮಧ್ಯಾಹ್ನ 02:20 ಕ್ಕೆ ಸಾವಂತವಾಡಿ ರಸ್ತೆ ತಲುಪಲಿದೆ.

ರೈಲು ಸಂಖ್ಯೆ 01172 13 ಸೆಪ್ಟೆಂಬರ್ ರಿಂದ ಅಕ್ಟೋಬರ್ 2ರವರೆಗೆ (20 ಟ್ರಿಪ್‌ಗಳು)ವರೆಗೆ ಪ್ರತಿದಿನ ಮಧ್ಯಾಹ್ನ 03:10 ಕ್ಕೆ ಸಾವಂತವಾಡಿ ಮmಾರ್ಗವಾಗಿ ತೆರಳುತ್ತದೆ. ಮರುದಿನ 04.35 ಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮೂಲಕ ಮುಂಬೈ ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ ದಾದರ್, ಥಾಣೆ, ಪನ್ವೇಲ್, ಮಂಗಾಂವ್, ವೀರ್, ಖೇಡ್, ಚಿಪ್ಲುನ್, ಸವರ್ದಾ, ಅರಾವಳಿ ರಸ್ತೆ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಾಲಿ, ವಿಲವಡೆ, ರಾಜಾಪುರ ರಸ್ತೆ, ವೈಭವ್ವಾಡಿ ರಸ್ತೆ, ನಂದಗಾಂವ್ ರಸ್ತೆ, ಕಂಕಾವಲಿ, ಸಿಂಧುದುರ್ಗ ಮತ್ತು ಕುಡಾಲ್. LTT-ಕುಡಾಲ್-LTT ವಿಶೇಷ (24 ಸೇವೆಗಳು)

ರೈಲು ಸಂಖ್ಯೆ 01167 13ನೇ, 14ನೇ, 19ನೇ, 20ನೇ, 21ನೇ, 24ನೇ, 25ನೇ, 26ನೇ, 27ನೇ, 28ನೇ ಸೆಪ್ಟೆಂಬರ್ ಮತ್ತು 1ನೇ ಮತ್ತು 2ನೇ ಅಕ್ಟೋಬರ್ (12 ಟ್ರಿಪ್‌ಗಳು) ರಂದು ರಾತ್ರಿ 10.15 ಕ್ಕೆ LTT ಯಿಂದ ನಿರ್ಗಮಿಸುತ್ತದೆ. ಮರುದಿನ ಬೆಳಗ್ಗೆ 09.30ಕ್ಕೆ ಕುಡಾಲ್ ತಲುಪಲಿದೆ.

ರೈಲು ಸಂಖ್ಯೆ 01168 14, 15, 20, 21, 22, 25, 26, 27, 28, 29 ಸೆಪ್ಟೆಂಬರ್ ಮತ್ತು 2 ಮತ್ತು 3 ಅಕ್ಟೋಬರ್, 2023 ರಂದು (12 ಟ್ರಿಪ್‌ಗಳು) ಬೆಳಗ್ಗೆ 10.30 ಕ್ಕೆ ಕುಡಾಲ್‌ನಿಂದ ಹೊರಡಲಿದೆ. ಅದೇ ದಿನ ರಾತ್ರಿ 09:55 ಕ್ಕೆ LTT ತಲುಪುತ್ತದೆ.

ಎಲ್ಲಿ ನಿಲುಗಡೆ

ಥಾಣೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಪ್ಲುನ್, ಸವರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಾಲಿ, ರಾಜಾಪುರ ರಸ್ತೆ, ವೈಭವಾಡಿ ರಸ್ತೆ, ಕಂಕವಾಲಿ ಮತ್ತು ಸಿಂಧುದುರ್ಗ.

ಈ ರೈಲು ಒಂದು ಎಸಿ-2 ಟೈರ್, ಎರಡು ಎಸಿ-3 ಟೈರ್, 10 ಸ್ಲೀಪರ್ ಕ್ಲಾಸ್, 7 ಜನರಲ್ ಸೆಕೆಂಡ್ ಕ್ಲಾಸ್ ಜೊತೆಗೆ 2 ಗಾರ್ಡ್ ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿದೆ.

ಪುಣೆ-ಕರ್ಮಾಲಿ/ಕೂಡಲ್-ಪುಣೆ ವಿಶೇಷ (6 ಸೇವೆಗಳು) ರೈಲು ಸಂಖ್ಯೆ 01169 15, 22 ಮತ್ತು 29 ಸೆಪ್ಟೆಂಬರ್, 2023 ರಂದು 06:45 PM ಕ್ಕೆ ಪುಣೆಯಿಂದ ನಿರ್ಗಮಿಸುತ್ತದೆ. ಮರುದಿನ 10:00 ಗಂಟೆಗೆ ಕುಡಾಲ್ ತಲುಪಲಿದೆ.

ರೈಲು ಸಂಖ್ಯೆ 01170 17, 24 ಸೆಪ್ಟೆಂಬರ್ ಮತ್ತು 1 ಅಕ್ಟೋಬರ್, 2023 ರಂದು ಸಂಜೆ 4.05 ಗಂಟೆಗೆ ಕುಡಾಲ್‌ನಿಂದ ಹೊರಡುತ್ತದೆ, ಮರುದಿನ 05:50ಕ್ಕೆ ಪುಣೆ ತಲುಪಲಿದೆ.

ಸ್ಟಾಪ್​ಗಳು ಲೋನಾವಾಲಾ, ಪನ್ವೇಲ್, ಮಂಗಾಂವ್, ಖೇಡ್, ಚಿಪ್ಲುನ್, ಸವರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಾಲಿ, ವಿಲವಾಡೆ, ರಾಜಾಪುರ ರಸ್ತೆ, ವೈಭವ್ವಾಡಿ ರಸ್ತೆ, ನಂದಗಾಂವ್ ರಸ್ತೆ, ಕಂಕವಾಲಿ ಮತ್ತು ಸಿಂಧುದುರ್ಗ.

ಈ ರೈಲು 1 ಎಸಿ 2 ಟೈರ್, 4 ಎಸಿ 3 ಟೈರ್, 11 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಜೊತೆಗೆ 2 ಗಾರ್ಡ್ ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿದೆ.

ಕರ್ಮಾಲಿ-ಪನ್ವೇಲ್-ಕೂಡಲ್ ವಿಶೇಷ – 6 ಸೇವೆಗಳು ರೈಲು ಸಂಖ್ಯೆ 01187

ಸೆಪ್ಟೆಂಬರ್ 16, 23 ಮತ್ತು 30 ರಂದು ಕರ್ಮಾಲಿಯಿಂದ ವಿಶೇಷ ನಿರ್ಗಮನ ಸಮಯ ಮಧ್ಯಾಹ್ನ 2.50 (3 ಟ್ರಿಪ್‌ಗಳು), ಮರುದಿನ ಮಧ್ಯಾಹ್ನ 02:45 ಕ್ಕೆ ಪನ್ವೆಲ್‌ಗೆ ಆಗಮಿಸುತ್ತದೆ.

ರೈಲು ಸಂಖ್ಯೆ 01188 17ನೇ, 24ನೇ ಸೆಪ್ಟೆಂಬರ್ ಮತ್ತು 01ನೇ ಅಕ್ಟೋಬರ್‌ನಲ್ಲಿ (3 ಟ್ರಿಪ್‌ಗಳು) ಪನ್ವೆಲ್‌ನಿಂದ ಸಂಜೆ 05.00 ಗಂಟೆಗೆ ಹೊರಡಲಿದ್ದು, ಕುಡಾಲ್‌ಗೆ ಮಧ್ಯಾಹ್ನ 02:00 ಆಗಿದೆ ತಲುಪಲಿದೆ.

ಸ್ಟಾಪ್​ಗಳು

ಥಿವಿಮ್, ಸಾವಂತವಾಡಿ ರಸ್ತೆ, ಕುಡಾಲ್, ಸಿಂಧುದುರ್ಗ, ಕಾಕ್ವಾಲಿ, ನಂದಗಾಂವ್ ರಸ್ತೆ, ವೈಭವ್ವಾಡಿ ರಸ್ತೆ, ರಾಜಾಪುರ ರಸ್ತೆ, ವಿಲವ್ಡೆ, ಅಡವಾಲಿ, ರತ್ನಗಿರಿ, ಸಂಗಮೇಶ್ವರ ರಸ್ತೆ, ಸವರ್ದಾ, ಚಿಪ್ಲುನ್, ಖೇಡ್, ರೋಹಾ ಮತ್ತು ಮಂಗಾವ್.

ಈ ರೈಲು 1 ಎಸಿ-2 ಟೈರ್, 4 ಎಸಿ-3 ಟೈರ್, 11 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಜೊತೆಗೆ 2 ಗಾರ್ಡ್ ಬ್ರೇಕ್ ವ್ಯಾನ್‌ಗಳನ್ನು ಒಳಗೊಂಡಿದೆ.

ದಿವಾ-ರತ್ನಗಿರಿ MEMU ವಿಶೇಷ (ನಿತ್ಯ ಓಡಾಡುವ ರೈಲು) – 40 ಸೇವೆಗಳು

ರೈಲು ಸಂಖ್ಯೆ 01153 13 ಸೆಪ್ಟಂಬರ್ ನಿಂದ 02 ಅಕ್ಟೋಬರ್ ವರೆಗೆ 07.10 ಗಂಟೆಗೆ (20 ಟ್ರಿಪ್‌ಗಳು) ದಿವಾದಿಂದ ಹೊರಡಲಿದ್ದು ರತ್ನಗಿರಿಗೆ ಆಗಮನ ಸಮಯ 02:55 ಬರಲಿದೆ.

ರೈಲು ಸಂಖ್ಯೆ 01154 ರತ್ನಗಿರಿಯಿಂದ ಮಧ್ಯಾಹ್ನ 03:40 ಕ್ಕೆ 13 ಸೆಪ್ಟಂಬರ್ ನಿಂದ 02 ಅಕ್ಟೋಬರ್ (20 ಟ್ರಿಪ್‌ಗಳು), ಅದೇ ದಿನ ರಾತ್ರಿ 10:40 ಕ್ಕೆ ದಿವಾಕ್ಕೆ ಬರಲಿದೆ.

ಎಲ್ಲಿ ನಿಲ್ಲುತ್ತದೆ?

ರೋಹಾ, ಮಂಗಾವ್, ವೀರ್, ಖೇಡ್, ಚಿಪ್ಲುನ್, ಸವರ್ದಾ, ಅರಾವಳಿ ರಸ್ತೆ ಮತ್ತು ಸಂಗಮೇಶ್ವರ ರಸ್ತೆ.

ಮುಂಬೈ-ಮಡ್ಗಾಂವ್ ವಿಶೇಷ (ದೈನಂದಿನ) – 40 ಸೇವೆಗಳು

ಗಣೇಶ ಚತುರ್ಥಿಗಾಗಿ ವಿಶೇಷವಾಗಿ ಟಿಕೆಟ್ ಬುಕ್ ಮಾಡುವವರು ಜೂನ್ 27 ರಿಂದ ಎಲ್ಲಾ  ಟಿಕೆಟ್ ರಿಸರ್ವೇಷನ್ ಕೇಂದ್ರಗಳು ಮತ್ತು ವೆಬ್‌ಸೈಟ್ www.irctc.co.inಗೆ ಭೇಟಿ ನೀಡಬಹುದು . ಈ ವಿಶೇಷ ರೈಲುಗಳ ನಿಲುಗಡೆ ಸಮಯ ತಿಳಿಯಲು www.enquiry ಗೆ ಭೇಟಿ ನೀಡಿ ಅಥವಾ ನೀವು Indianrail.gov.in ಗೆ ಭೇಟಿ ನೀಡಬಹುದು ಅಥವಾ  NTES ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.

ರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Mon, 26 June 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್