Garuda Purana: ನಿಮ್ಮ ಜೀವನದಲ್ಲಿ ಸಂತೋಷವೇ ತುಂಬಿರಬೇಕೆ? ಗರುಡ ಪುರಾಣದ ಈ ವಿಷಯಗಳನ್ನು ತಿಳಿಯಿರಿ

ಗರುಡ ಪುರಾಣ: ಮನುಷ್ಯನು ಧರ್ಮದ ಹಾದಿಯಲ್ಲಿ ನಡೆಯುವ ಕುರಿತಾಗಿ ಹಾಗೂ ಜೀವನದಲ್ಲಿ ಸಂತೋಷವನ್ನು ಅನುಭವಿಸಲು ಬೇಕಾಗುವ ಕೆಲವು ನೀತಿಗಳನ್ನು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.

Garuda Purana: ನಿಮ್ಮ ಜೀವನದಲ್ಲಿ ಸಂತೋಷವೇ ತುಂಬಿರಬೇಕೆ? ಗರುಡ ಪುರಾಣದ ಈ ವಿಷಯಗಳನ್ನು ತಿಳಿಯಿರಿ
ವಿಷ್ಣು ದೇವರು-ಗರುಡವಾಹನ
Follow us
| Edited By: Ayesha Banu

Updated on: Jul 29, 2021 | 6:44 AM

ಸಾವಿನ ಹಿಂದಿರುವ ಹಾಗೂ ಸಾವಿನ ನಂತರದ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ ಗರುಡ ಪುರಾಣದ ಕಥೆಗಳನ್ನು ತಿಳಿದುಕೊಳ್ಳಿ. ಮರಣದ ನಂತರದ ಜಗತ್ತು ಹೇಗಿದೆ? ಎಂಬ ಕುತೂಹಲ ಇದ್ದೇ ಇರುತ್ತದೆ. ವಿಷ್ಣು ಮತ್ತು ಗರುಡನ ನಡುವಿನ ಸಂಭಾಷಣೆಯನ್ನು ಗರುಡ ಪುರಾಣ(Garuda Purana) ತಿಳಿಸುತ್ತದೆ. ಜನನ, ಮರಣ ಮತ್ತು ಮರಣಾಂತರದ ಸಂದರ್ಭಗಳಿಗೆ ಸಂಬಂಧಿಸಿದಂತೆ ಗರುಡ ಪ್ರಶ್ನೆಯನ್ನು ಕೇಳುತ್ತಾನೆ, ಅದಕ್ಕೆ ವಿಷ್ಣು ವಿವರವಾಗಿ ಉತ್ತರಿಸುತ್ತಾನೆ.

ಗರುಡ ಪುರಾಣದ ಪ್ರಕಾರ ಸಾವಿನ ನಂತರ, ಸ್ವರ್ಗ, ನರಕ ಮತ್ತು ಪಿತೃ ಲೋಕವನ್ನು ಪಡೆಯುವ ಬಗ್ಗೆ ತಿಳಿಸಲಾಗಿದೆ. ಆತ್ಮವು ಹೇಗೆ ದೇಹವನ್ನು ಮತ್ತೆ ಪಡೆಯುತ್ತದೆ, ಆತ್ಮವು ಹೇಗೆ ಮೋಕ್ಷವನ್ನು ಪಡೆಯುತ್ತದೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಗರುಡ ಪುರಾಣದಲ್ಲಿದೆ. ಮನುಷ್ಯನು ಧರ್ಮದ ಹಾದಿಯಲ್ಲಿ ನಡೆಯುವ ಕುರಿತಾಗಿ ಹಾಗೂ ಜೀವನದಲ್ಲಿ ಸಂತೋಷವನ್ನು ಅನುಭವಿಸಲು ಬೇಕಾಗುವ ಕೆಲವು ನೀತಿಗಳನ್ನು ತಿಳಿಸಲಾಗಿದೆ.

*ಪ್ರತಿಯೊಬ್ಬರೂ ಸಹ ಜನರ ನಡುವೆ ಗೌರವ ಸಿಗಬೇಕು ಎಂದು ಬಯಸುತ್ತಾರೆ. ಈ ಕುರಿತಂತೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ನಿಮ್ಮ ವಯಸ್ಸಿಗಿಂತ ಹಿರಿಯರು ಅಥವಾ ನಿಮ್ಮ ವಯಸ್ಸಿನವರು ನಿಮಗೇನಾದರೂ ಹೇಳಿದರೆ ಅದನ್ನು ಸಹಿಸಿಕೊಳ್ಳಬಹುದು. ಆದರೆ ನಿಮಗಿಂತ ಚಿಕ್ಕವರು ಹೇಳಿದಾಗ ಅವಮಾನಕ್ಕೆ ಒಳಗಾಗುತ್ತೀರಿ. ಅಂತಹ ಸಮಯದಲ್ಲಿ ಹೆಚ್ಚು ತಾಳ್ಮೆಯಿಂದ ನಡೆದುಕೊಳ್ಳಬೇಕು. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಕೋಪ ಸಮಸ್ಯೆಗಳನ್ನು ತಂದೊಡ್ಡುತ್ತದೆ.

*ಯಾವುದೋ ಕೆಲಸವನ್ನು ಮಾಡಲು ಹೊರಟಾಗ ಕೆಲಸದಲ್ಲಿ ಯಶಸ್ಸು ಸಿಗಲಿ ಎಂಬ ಆಶಯವಿರುತ್ತದೆ. ಆದರೆ ಮತ್ತೆ ಮತ್ತೆ ಪ್ರಯತ್ನದಲ್ಲಿ ವಿಫಲನಾಗುತ್ತಿದ್ದರೆ ಎಲ್ಲೋ ನಮ್ಮ ಪ್ರಯತ್ನಗಳಲ್ಲಿ ಕೊರತೆ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು. ಅಂತಹ ಪರಿಸ್ಥಿತಿಯಲ್ಲಿ ತಪ್ಪುಗಳನ್ನು ಸರಿಪಡಿಸುವ ಮೂಲಕ ಮುನ್ನಡೆಯಬಹುದು.

*ಮದುವೆಯ ಬಳಿಕ ಗಂಡ- ಹೆಂಡತಿ ಸಂಬಂಧ ನಂಬಿಕೆ ಎಂಬ ಅಡಿಪಾಯದಲ್ಲಿ ನಿಂತಿರುತ್ತದೆ. ಹಾಗಿರುವಾಗ ಪರಸ್ಪರ ನಂಬಿಕೆಯನ್ನು ಒಡೆಯುವ ಯಾವುದೇ ಕೆಲಸವನ್ನು ಮಾಡಬೇಡಿ. ಒಬ್ಬರಿಗೊಬ್ಬರ ನಡುವಿನ ವಿಶ್ವಾಸ ಕಳೆದು ಹೋದರೆ ದಾಂಪತ್ಯ ಜೀವನ ಹಾಳಾಗುತ್ತದೆ.

*ನಿಮ್ಮ ಸಂಗಾತಿ ಅನಾರೋಗ್ಯಕ್ಕೆ ಒಳಗಾದಾಗ ಅವರು ಆರೋಗ್ಯವಾಗಿರಲು ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ಮಾಡಿ. ಇದು ಇಬ್ಬರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಸಂತೋಷದ ಜೀವನಕ್ಕಾಗಿ ಗಂಡ ಮತ್ತು ಹೆಂಡತಿ ಆರೋಗ್ಯವಾಗಿರುವುದು ಅವಶ್ಯಕ.

ಇದನ್ನೂ ಓದಿ:

Garuda Purana: ಗರುಡ ಪುರಾಣದಲ್ಲಿ ಹೇಳಿರುವ ಈ 5 ಸಂಗತಿಗಳನ್ನು ಅಳವಡಿಸಿಕೊಂಡರೆ ಬದುಕು ಬದಲಿಸಬಹುದು

Garuda Purana: ಈ ಗುಣಗಳಿಂದ ಸ್ವರ್ಗ ಅಥವಾ ನರಕದ ಹಾದಿ ನಿರ್ಧಾರವಾಗುತ್ತದೆ; ಗರುಡ ಪುರಾಣ ಏನು ಹೇಳುತ್ತದೆ?

ತಾಜಾ ಸುದ್ದಿ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ