ಯಾವ್ಯಾವ ಸಮಸ್ಯೆಗಳು?
-ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ
-ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ
– ತಂದೆಗೆ ಅನಾರೋಗ್ಯ ಸಮಸ್ಯೆಗಳಿದ್ದಲ್ಲಿ
-ತಂದೆ- ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ, ಮನಸ್ತಾಪಗಳು ತಲೆದೋರಿದ್ದಲ್ಲಿ
– ಸರ್ಕಾರಿ ಕೆಲಸಗಳಿಗೆ ಪ್ರಯತ್ನ ಪಡುತ್ತಿರುವವರು
– ರಾಜಕಾರಣಿಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವರು
– ರಾಜಕಾರಣದಲ್ಲಿ ಏಳ್ಗೆ, ಪ್ರಗತಿಗಾಗಿ ಪ್ರಯತ್ನ ಪಡುತ್ತಿರುವವರು
– ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಮಸ್ಯೆಗಳು ಇರುವರು
– ಸರ್ಕಾರದಿಂದ ಹಣ ಬರಬೇಕಾದದ್ದು ಬಾಕಿ ಇದ್ದಲ್ಲಿ
– ಸರ್ಕಾರದಿಂದ ಆಗಬೇಕಾದ ಕೆಲಸಗಳು ಬಹಳ ಸಮಯದಿಂದ ಹಾಗೇ ಉಳಿದುಹೋಗಿದ್ದಲ್ಲಿ
– ರವಿಯ ಕಾರಕತ್ವದ ಯಾವುದೇ ಸಮಸ್ಯೆ, ಗೋಚಾರ ದೋಷ ಅಥವಾ ದಶಾ ಕಾಲದ ದೋಷ ಅಥವಾ ಜನ್ಮ ಜಾತಕದಲ್ಲಿನ ದೋಷಗಳಿದ್ದಲ್ಲಿ
ಪರಿಹಾರಗಳು ಏನು?
– ರವಿ ಅಷ್ಟೋತ್ತರ ಪಠಣ ಮಾಡಬೇಕು
– ಕೆಂಪು ವಸ್ತ್ರದಲ್ಲಿ ಗೋಧಿ ಧಾನ್ಯವನ್ನು ಕಟ್ಟಿ, ವೀಳ್ಯದೆಲೆ, ಬಾಳೇಹಣ್ಣು, ಅಡಿಕೆ, ದಕ್ಷಿಣೆಗಳ ಸಹಿತ ದಾನ ಮಾಡಬೇಕು
– ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು
– ಕೆಂಪು ಹೂವುಗಳಿಂದ ರವಿ ಅಷ್ಟೋತ್ತರ ಪಠಿಸುತ್ತಾ ರವಿಯ ಆರಾಧನೆ ಮಾಡಬೇಕು
– ನವಗ್ರಹ ದೇವಸ್ಥಾನದಲ್ಲಿ ಮಧ್ಯದಲ್ಲಿ ಇರುವ ರವಿ ಗ್ರಹದ ವಿಗ್ರಹಕ್ಕೆ ಫಲ- ಪಂಚಾಮೃತದ ಅಭಿಷೇಕ ಮಾಡಿಸಬೇಕು
– ಗೋಧಿ ಪಾಯಸದಲ್ಲಿ ನೈವೇದ್ಯ ಮಾಡಿಸಿ, ಪ್ರಸಾದ ಸ್ವೀಕರಿಸಬೇಕು
ಆದರೆ, ಒಂದು ಕೆಲವು ಮುಖ್ಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ. ಈ ಪರಿಹಾರಗಳ ಪೈಕಿ ನಿಮ್ಮ ಸಮಸ್ಯೆಗೆ ರವಿ ಗ್ರಹ ಯಾವ ರೀತಿಯಲ್ಲಿ ಕಾರಣ ಹಾಗೂ ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಎಂಬುದನ್ನು ಜ್ಯೋತಿಷಿಗಳ ಬಳಿ ಜಾತಕ ಪರಾಮರ್ಶೆ ಮಾಡಿಸಿ, ತಿಳಿದುಕೊಳ್ಳಿ. ಪರಿಹಾರಗಳು ಸರಳವಾಗಿರುವಾಗ ಅದಕ್ಕೆ ಪ್ರಯತ್ನಿಸದಿದ್ದಲ್ಲಿ ಸಮಸ್ಯೆಗಳ ಜತೆಗೆ ಬದುಕಬೇಕಾಗುತ್ತದೆ. ರವಿಯ ಆರಾಧನೆಯಿಂದ ಎಷ್ಟೆಲ್ಲ ಪ್ರಯೋಜನ ಇದೆ ಎಂಬುದು ಈ ಮೇಲ್ಕಂಡ ಬಗೆಯಲ್ಲಿ ಕೈಂಕರ್ಯ ಮಾಡಿದ ನಂತರ ನಿಮಗೇ ಅನುಭವಕ್ಕೆ ಬರುತ್ತದೆ. ಎಲ್ಲರಿಗೂ ಶುಭವಾಗಲಿ, ಆ ಸೂರ್ಯ ಭಗವಾನ್ ಅನುಗ್ರಹ ದೊರೆಯಲಿ.
ಜ್ಯೋತಿಷಿ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ: 6361335497.
(How to get blessings of planet sun according to Vedic astrology)
ಇದನ್ನೂ ಓದಿ: Ugadi Rashi Bhavishya: ಯುಗಾದಿ ಭವಿಷ್ಯ 2021- ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ ದ್ವಾದಶ ರಾಶಿಗಳ ಭವಿಷ್ಯ
ಇದನ್ನೂ ಓದಿ: Ugadi Rashi Bhavishya 2021 | ಕಟಕ ರಾಶಿ ಯುಗಾದಿ ವರ್ಷ ಭವಿಷ್ಯ: ಭೂಮಿ ಲಾಭ, ದೇಹದ ತೂಕದ ಬಗ್ಗೆ ಎಚ್ಚರಿಕೆ ಅಗತ್ಯ