AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maa Bagdahi Temple: ಬಡ ಕುರುಬನ ಭಕ್ತಿಗೆ ಒಲಿದ ದೇವಿ; ಕಲ್ಲುಗಳನ್ನೇ ಕಾಣಿಕೆಯಾಗಿ ಪಡೆಯುವ ವಿಶಿಷ್ಟ ಶಕ್ತಿ ಪೀಠ

ಭಾರತದಾದ್ಯಂತ ದೇವಾಲಯಗಳಲ್ಲಿ ವೈಭವದ ಅರ್ಪಣೆಗಳು ಸಾಮಾನ್ಯವಾದರೆ, ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿರುವ 'ಮಾ ಬಾಗದಾಯಿ' ದೇವಾಲಯವು ವಿಶಿಷ್ಟವಾಗಿದೆ. ಇಲ್ಲಿ ಭಕ್ತರು ದೇವಿಗೆ ಕೇವಲ ಐದು ಕಲ್ಲುಗಳು ಮತ್ತು ಒಂದು ಹೂವನ್ನು ಅರ್ಪಿಸುತ್ತಾರೆ. ಬಡ ಕುರುಬನ ಭಕ್ತಿ ಮತ್ತು ದೇವಿಯ ಸರಳತೆಯ ಕುರಿತಾದ ಹೃದಯಸ್ಪರ್ಶಿ ಕಥೆ ಈ ಪದ್ಧತಿಯ ಹಿಂದಿದೆ. ಮನದ ಆಸೆ ಈಡೇರಿದಾಗ ಕೃತಜ್ಞತೆ ಸಲ್ಲಿಸಲು ಕಲ್ಲುಗಳನ್ನು ಅರ್ಪಿಸುವುದು ಇಲ್ಲಿನ ನಂಬಿಕೆ.

Maa Bagdahi Temple: ಬಡ ಕುರುಬನ ಭಕ್ತಿಗೆ ಒಲಿದ ದೇವಿ; ಕಲ್ಲುಗಳನ್ನೇ ಕಾಣಿಕೆಯಾಗಿ ಪಡೆಯುವ ವಿಶಿಷ್ಟ ಶಕ್ತಿ ಪೀಠ
ಮಾ ಬಾಗದಾಯಿ
ಅಕ್ಷತಾ ವರ್ಕಾಡಿ
|

Updated on:Apr 08, 2026 | 1:36 PM

Share

ಭಾರತದಾದ್ಯಂತ ಇರುವ ಶಕ್ತಿ ಪೀಠಗಳಲ್ಲಿ ದೇವಿಗೆ ರೇಷ್ಮೆ ಸೀರೆ, ಬಂಗಾರ, ಹಣ್ಣು-ಹಂಪಲು ಅಥವಾ ವೈಭವದ ನೈವೇದ್ಯಗಳನ್ನು ಅರ್ಪಿಸುವುದು ಸಾಮಾನ್ಯ. ಆದರೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಅರಣ್ಯದ ನಡುವೆ ನೆಲೆಸಿರುವ ‘ಮಾ ಬಾಗದಾಯಿ’ ದೇವಾಲಯವು ಈ ಎಲ್ಲಾ ಸಂಪ್ರದಾಯಗಳಿಗಿಂತ ಭಿನ್ನವಾಗಿದೆ. ಇಲ್ಲಿ ಭಕ್ತರು ದೇವಿಗೆ ಅರ್ಪಿಸುವುದು ಕೇವಲ ಐದು ಕಲ್ಲುಗಳು ಮತ್ತು ಒಂದು ಹೂವು!

ಕಲ್ಲುಗಳ ಅರ್ಪಣೆಯ ಹಿಂದಿರುವ ‘ಕುರುಬ ಭಕ್ತಿ’ಯ ಕಥೆ:

ಶತಮಾನಗಳಷ್ಟು ಹಳೆಯದಾದ ಈ ವಿಶಿಷ್ಟ ಆಚರಣೆಯ ಹಿಂದೆ ಹೃದಯಸ್ಪರ್ಶಿ ಕಥೆಯೊಂದಿದೆ. ಜನಪದರ ನಂಬಿಕೆಯಂತೆ, ಸುಮಾರು ನೂರು ವರ್ಷಗಳ ಹಿಂದೆ ಒಬ್ಬ ಬಡ ಕುರುಬನು ಕಾಡಿನಲ್ಲಿ ದೇವಿಯ ಜೀವಂತ ಪ್ರತಿಮೆಯನ್ನು ಕಂಡುಕೊಂಡನು. ಅಂದೇ ದೇವಿಯು ಅವನ ಕನಸಿನಲ್ಲಿ ಬಂದು ತನ್ನನ್ನು ಅಲ್ಲಿಯೇ ಪ್ರತಿಷ್ಠಾಪಿಸುವಂತೆ ಸೂಚಿಸಿದಳು.

ದೇವಿಯ ಆಜ್ಞೆಯಂತೆ ಕುರುಬನು ಸಣ್ಣ ಗುಡಿಯನ್ನೇನೋ ನಿರ್ಮಿಸಿದ, ಆದರೆ ದೇವಿಗೆ ಅರ್ಪಿಸಲು ಅವನ ಬಳಿ ತೆಂಗಿನಕಾಯಿ ಅಥವಾ ಬೆಲೆಬಾಳುವ ಯಾವುದೇ ವಸ್ತುಗಳಿರಲಿಲ್ಲ. ತನ್ನ ಬಡತನಕ್ಕೆ ನೊಂದು ಕಣ್ಣೀರಿಟ್ಟ ಭಕ್ತನಿಗೆ ದೇವಿಯು ಮತ್ತೆ ದರ್ಶನ ನೀಡಿ ಹೀಗೆಂದಳಂತೆ: “ಮಗನೇ, ನನಗೆ ನಿನ್ನ ಆಡಂಬರ ಬೇಕಾಗಿಲ್ಲ, ನಿನ್ನ ನಿಷ್ಕಲ್ಮಶ ಪ್ರೀತಿ ಸಾಕು. ಇಲ್ಲಿ ಬಿದ್ದಿರುವ ಐದು ಕಲ್ಲುಗಳನ್ನೇ ನನಗೆ ಪ್ರೀತಿಯಿಂದ ಅರ್ಪಿಸು.” ಅಂದಿನಿಂದ ಇಂದಿನವರೆಗೆ, ಈ ದೇವಾಲಯದಲ್ಲಿ ಕಲ್ಲುಗಳೇ ಮಹಾಪ್ರಸಾದ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಹರಕೆ ತೀರಿಸುವ ವಿಶಿಷ್ಟ ಪದ್ಧತಿ:

ಈ ದೇವಾಲಯಕ್ಕೆ ಬರುವ ಭಕ್ತರು ತಮ್ಮ ಮನದ ಇಚ್ಛೆಯನ್ನು ದೇವಿಯ ಮುಂದೆ ತೋಡಿಕೊಳ್ಳುವಾಗ ಐದು ಕಲ್ಲುಗಳು ಮತ್ತು ಒಂದು ಹೂವನ್ನು ಪೂರ್ಣ ಹೃದಯದಿಂದ ಅರ್ಪಿಸುತ್ತಾರೆ. ಭಕ್ತರ ಆಸೆ ಈಡೇರಿದಾಗ, ಅವರು ಮತ್ತೆ ದೇವಾಲಯಕ್ಕೆ ಬಂದು ಕೃತಜ್ಞತೆಯ ಸಂಕೇತವಾಗಿ ಪುನಃ ಐದು ಕಲ್ಲುಗಳನ್ನು ದೇವಿಯ ಪಾದಕ್ಕೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ದುಷ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗಿ, ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂಬುದು ಭಕ್ತರ ಗಾಢ ನಂಬಿಕೆ.

ಪ್ರಕೃತಿ ಮತ್ತು ಆಧ್ಯಾತ್ಮದ ಸಮಾಗಮ, ನವರಾತ್ರಿ ಜಾತ್ರೆ:

ಪ್ರತಿ ವರ್ಷ ಚೈತ್ರ ಮತ್ತು ಶರದೃತ ನವರಾತ್ರಿಯ ಸಮಯದಲ್ಲಿ ಮಾ ಬಾಗದಾಯಿ ದೇವಾಲಯವು ಭಕ್ತ ಸಾಗರದಿಂದ ತುಂಬಿರುತ್ತದೆ. ಒಂಬತ್ತು ದಿನಗಳ ಕಾಲ ದೇವಿಯನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗುತ್ತದೆ. ದಟ್ಟವಾದ ಕಾಡಿನ ಮಧ್ಯೆ ನಡೆಯುವ ಈ ಜಾತ್ರೆಯು ಪ್ರಕೃತಿಯ ಸೌಂದರ್ಯದೊಂದಿಗೆ ಆಧ್ಯಾತ್ಮಿಕತೆಯ ಅದ್ಭುತ ಅನುಭವವನ್ನು ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Wed, 8 April 26

Follow Us