AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shravana: ಶ್ರಾವಣ ಮಂಗಳವಾರದಂದು ತಪ್ಪಿಯೂ ಈ ಕೆಲಸ ಮಾಡಬೇಡಿ; ಪಾಲಿಸಬೇಕಾದ ಕಠಿಣ ನಿಯಮಗಳಿವು

ಶ್ರಾವಣ ಮಾಸದ ಮಂಗಳಗೌರಿ ವ್ರತವು ಕುಟುಂಬದ ಶ್ರೇಯಸ್ಸಿಗೆ ಮಹತ್ವಪೂರ್ಣ. ಈ ಪವಿತ್ರ ದಿನದಂದು ಸಂಪೂರ್ಣ ಸಾತ್ವಿಕ ವಾತಾವರಣ ಅಗತ್ಯ. ಮಾಂಸಾಹಾರ, ಮದ್ಯಪಾನ, ಈರುಳ್ಳಿ, ಬೆಳ್ಳುಳ್ಳಿ ತ್ಯಜಿಸಬೇಕು. ಉಗುರು, ಕೂದಲು ಕತ್ತರಿಸುವುದು ನಿಷಿದ್ಧ. ಯಾರನ್ನೂ ನೋಯಿಸದೆ, ಶಾಂತ ಮನಸ್ಸಿನಿಂದ ಪೂಜಿಸುವುದರಿಂದ ಸಕಲ ಶುಭಗಳು ಲಭಿಸುತ್ತವೆ ಎಂದು ನಂಬಲಾಗಿದೆ.

Shravana: ಶ್ರಾವಣ ಮಂಗಳವಾರದಂದು ತಪ್ಪಿಯೂ ಈ ಕೆಲಸ ಮಾಡಬೇಡಿ; ಪಾಲಿಸಬೇಕಾದ ಕಠಿಣ ನಿಯಮಗಳಿವು
ಶ್ರಾವಣ ಮಂಗಳವಾರImage Credit source: Getty Images
ಅಕ್ಷತಾ ವರ್ಕಾಡಿ
|

Updated on: Aug 18, 2026 | 8:23 AM

Share

ಶ್ರಾವಣ ಮಾಸದ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಪವಿತ್ರತೆ ಹಾಗೂ ಧಾರ್ಮಿಕ ಪ್ರಾಮುಖ್ಯತೆ ಇದೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಮಂಗಳವಾರದಂದು ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಶ್ರೇಯಸ್ಸು, ಅಭಿವೃದ್ಧಿ ಹಾಗೂ ಮುತ್ತೈದೆತನಕ್ಕಾಗಿ ‘ಮಂಗಳಗೌರಿ ವ್ರತ’ವನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಆಚರಿಸುತ್ತಾರೆ. ಶ್ರಾವಣದ ಮೊದಲ ಮಂಗಳವಾರದಿಂದ ಪ್ರಾರಂಭವಾಗುವ ಈ ವ್ರತವು ಅಖಂಡ ಸೌಭಾಗ್ಯ ಹಾಗೂ ಜೀವನದಲ್ಲಿ ಸಕಲ ಶುಭಗಳನ್ನು ತರುತ್ತದೆ ಎಂಬುದು ಭಕ್ತರ ದೃಢ ನಂಬಿಕೆ. ಈ ದಿನದಂದು ಉಪವಾಸ ವ್ರತ ಕೈಗೊಂಡು, ಗೌರಿ ದೇವಿಗೆ ಅಷ್ಟೋತ್ತರ ಶತನಾಮಾವಳಿಯಿಂದ ಪೂಜೆ ಸಲ್ಲಿಸುವುದರಿಂದ ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.

ಆದರೆ, ಇಷ್ಟೊಂದು ಮಹತ್ವವಿರುವ ಈ ಪವಿತ್ರ ದಿನದಂದು ಆಕಸ್ಮಿಕವಾಗಿಯೂ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಶಾಸ್ತ್ರಗಳು ಮತ್ತು ಪಂಡಿತರು ಎಚ್ಚರಿಸುತ್ತಾರೆ. ಈ ದಿನ ತಪ್ಪಿಯೂ ಮಾಡಬಾರದ ಕೆಲಸಗಳ ವಿವರ ಇಲ್ಲಿದೆ:

ಮಾಂಸಾಹಾರ ಹಾಗೂ ಮಧ್ಯಪಾನ ಸಂಪೂರ್ಣ ವರ್ಜ್ಯ:

ಶ್ರಾವಣ ಮಂಗಳವಾರದಂದು ಮನೆಯಲ್ಲಿ ಸಂಪೂರ್ಣ ಸಾತ್ವಿಕ ವಾತಾವರಣವಿರಬೇಕು. ಈ ದಿನ ಮಾಂಸ, ಮದ್ಯ, ಮೊಟ್ಟೆ, ಮೀನು ಮುಂತಾದ ಯಾವುದೇ ರೀತಿಯ ಆಹಾರಗಳನ್ನು ಸೇವಿಸಬಾರದು. ಈ ಪವಿತ್ರ ದಿನದಂದು ಮಾಂಸಾಹಾರ ಸೇವಿಸುವುದರಿಂದ ದೇವಿಯ ಕೋಪಕ್ಕೆ ಗುರಿಯಾಗಬೇಕಾಗಬಹುದು ಹಾಗೂ ಜೀವನದಲ್ಲಿ ಹಲವು ರೀತಿಯ ನಕಾರಾತ್ಮಕ ಪರಿಣಾಮಗಳು ಎದುರಾಗಬಹುದು.

ರುಚಿ ಮತ್ತು ಆಹಾರದಲ್ಲಿ ಪಾಲಿಸಬೇಕಾದ ನಿಯಮಗಳು:

ಮಂಗಳಗೌರಿ ವ್ರತವನ್ನು ಆಚರಿಸುವವರು ಹಾಗೂ ಉಪವಾಸವಿರುವವರು ತಮ್ಮ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇಷ್ಟೇ ಅಲ್ಲದೆ, ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಬದನೆಕಾಯಿ ಹಾಗೂ ಕೆಲವು ರೀತಿಯ ಸೊಪ್ಪುಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಶಾರೀರಿಕ ನೈರ್ಮಲ್ಯ ಮತ್ತು ಆಚರಣೆಯ ನಿಯಮಗಳು:

ಮಂಗಳವಾರದಂದು ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಉಗುರುಗಳನ್ನು ಕತ್ತರಿಸುವುದು (Nail cutting) ಮತ್ತು ಕೂದಲು ಕತ್ತರಿಸಿಕೊಳ್ಳುವುದನ್ನು (Haircut) ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ದಿನ ಇಂತಹ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ಕಡಿಮೆಯಾಗಿ, ಆರೋಗ್ಯ ಮತ್ತು ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ ಎಂಬ ನಂಬಿಕೆಯಿದೆ.

ಮಾತು ಮತ್ತು ನಡವಳಿಕೆಯಲ್ಲಿ ನಿಗ್ರಹ:

ದೇವರ ಪೂಜೆಯಷ್ಟೇ ಮುಖ್ಯವಾದದ್ದು ಮನಸ್ಸಿನ ನೈರ್ಮಲ್ಯ. ಶ್ರಾವಣ ಮಂಗಳವಾರದಂದು ಯಾರನ್ನೂ ಅವಮಾನಿಸುವುದು, ಮನಸ್ಸಿಗೆ ನೋವುಂಟು ಮಾಡುವ ಕೆಟ್ಟ ಮಾತುಗಳನ್ನು ಆಡುವುದು ಅಥವಾ ಕೋಪಿಸಿಕೊಳ್ಳುವುದನ್ನು ಮಾಡಬಾರದು. ಸದಾ ಶಾಂತ ಮತ್ತು ಪವಿತ್ರ ಮನಸ್ಸಿನಿಂದ ಗೌರಿ ದೇವಿಯನ್ನು ಸ್ಮರಿಸುವುದರಿಂದ ವ್ರತದ ಪೂರ್ಣ ಫಲ ದೊರೆಯುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!