
ಶ್ರಾವಣ ಮಾಸದ ಮುಕ್ತಾಯದ ಸಮಯದಲ್ಲಿ ಬರುವ ಅಮಾವಾಸ್ಯೆಗೆ ಅತ್ಯಂತ ವಿಶೇಷ ಹಾಗೂ ಶಕ್ತಿಶಾಲಿ ಮಹತ್ವವಿದೆ. ಈ ವರ್ಷದ ಶ್ರಾವಣ ಅಮಾವಾಸ್ಯೆಯ ತಿಥಿಯು ಸೆಪ್ಟೆಂಬರ್ 10ರ ಬೆಳಿಗ್ಗೆ 10:33ಕ್ಕೆ ಪ್ರಾರಂಭವಾಗಿ, ಸೆಪ್ಟೆಂಬರ್ 11ರ ಬೆಳಿಗ್ಗೆ 8:56ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಪವಿತ್ರ ದಿನದಂದು ನಿರ್ದಿಷ್ಟ ನಿಯಮಗಳನ್ನು ಪಾಲಿಸುವುದರಿಂದ ಸಕಲ ನಕಾರಾತ್ಮಕ ಶಕ್ತಿಗಳು ದೂರವಾಗಿ, ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತವೆ.
ಈ ಶಕ್ತಿಶಾಲಿ ಅಮಾವಾಸ್ಯೆಯ ದಿನದಂದು ಲಕ್ಷ್ಮಿ ದೇವಿಯ ಪೂಜೆ ಹಾಗೂ ಪಿತೃಗಳಿಗೆ ತರ್ಪಣ ನೀಡುವುದು ಅತ್ಯಂತ ಶುಭಕರ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗಿ, ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಜೊತೆಗೆ ದೀರ್ಘಕಾಲದ ಆರ್ಥಿಕ ಸಂಕಷ್ಟಗಳು ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎಂದು ಜ್ಯೋತಿಷ್ಯ ವಿದ್ವಾಂಸರು ತಿಳಿಸುತ್ತಾರೆ.
ಅಮಾವಾಸ್ಯೆಯ ದಿನ ಮಧ್ಯರಾತ್ರಿ 12 ಗಂಟೆಗೆ ಮನೆಯ ಮುಖ್ಯ ದ್ವಾರದ (ಸಿಂಹದ್ವಾರ) ಮುಂದೆ ಎಳ್ಳೆಣ್ಣೆಯ ದೀಪವನ್ನು ಹಚ್ಚಿಡುವುದು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಅತ್ಯುತ್ತಮ ಮಾರ್ಗ. ಈ ಪರಿಹಾರವನ್ನು ಮಾಡುವುದರಿಂದ ದುಷ್ಟಶಕ್ತಿಗಳ ಕಾಟ, ದೃಷ್ಟಿದೋಷ ಮತ್ತು ಧನಹಾನಿಯಿಂದ ಬಳಲುತ್ತಿರುವವರಿಗೆ ತಕ್ಷಣದ ಪರಿಹಾರ ಸಿಗುತ್ತದೆ ಹಾಗೂ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಇದನ್ನೂ ಓದಿ: ಮನಿ ಪ್ಲಾಂಟ್ಗಿಂತಲೂ ಪವರ್ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ಅಮಾವಾಸ್ಯೆಯ ಶುಭ ಸಮಯದಲ್ಲಿ ಲಕ್ಷ್ಮಿ ದೇವಿಯ ಎಂಟು ಸ್ತೋತ್ರಗಳು ಹಾಗೂ ಕನಕಧಾರಾ ಸ್ತೋತ್ರವನ್ನು ಪಠಿಸುವುದು ಅತ್ಯಂತ ಶ್ರೇಷ್ಠ. ಇದರೊಂದಿಗೆ ಬಡವರಿಗೆ ಅನ್ನದಾನ, ಕಪ್ಪು ಎಳ್ಳು ದಾನ ಮತ್ತು ಅಮಾವಾಸ್ಯೆಯ ಮಧ್ಯರಾತ್ರಿಯಲ್ಲಿ ಕಪ್ಪು ಬಟ್ಟೆಗಳನ್ನು ದಾನ ಮಾಡುವುದರಿಂದ ವಿಶೇಷ ಪುಣ್ಯ ಫಲಗಳು ಲಭಿಸಿ, ಸಕಲ ಸಂಪತ್ತು ಒಲಿದುಬರುತ್ತದೆ.
ಅಮಾವಾಸ್ಯೆಯ ರಾತ್ರಿ ನಕಾರಾತ್ಮಕ ಹಾಗೂ ಅದೃಶ್ಯ ಶಕ್ತಿಗಳ ಪ್ರಭಾವವು ವಾತಾವರಣದಲ್ಲಿ ಅತ್ಯಂತ ಹೆಚ್ಚಾಗಿರುತ್ತದೆ. ಆದ್ದರಿಂದ ಶಾಸ್ತ್ರಗಳ ಪ್ರಕಾರ, ಈ ದಿನದ ಮಧ್ಯರಾತ್ರಿಯ ಸಮಯದಲ್ಲಿ ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಬೇಕು. ನಕಾರಾತ್ಮಕ ಶಕ್ತಿಗಳು ಸುಲಭವಾಗಿ ಪ್ರಭಾವ ಬೀರುವ ಸನ್ನಿವೇಶ ಇದಾಗಿರುವುದರಿಂದ, ಈ ಸಮಯದಲ್ಲಿ ಜಾಗರೂಕರಾಗಿರುವುದು ಕ್ಷೇಮ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:25 am, Wed, 9 September 26