AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Somvati Amavasya 2026: ಜೂ. 15 ಸೋಮವತಿ ಅಮಾವಾಸ್ಯೆ ; ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

2026ರ ಅಧಿಕ ಜ್ಯೇಷ್ಠ ಮಾಸದ ಸೋಮವತಿ ಅಮಾವಾಸ್ಯೆಯು ಜೂನ್ 15ರಂದು ಆಚರಿಸಲಾಗುವುದು. ಶಿವ, ಲಕ್ಷ್ಮಿ ಹಾಗೂ ಪೂರ್ವಜರ ಆಶೀರ್ವಾದ ಪಡೆಯಲು ಇದು ಅತ್ಯಂತ ಶುಭ ದಿನ. ಈ ದಿನ ಪವಿತ್ರ ಸ್ನಾನ, ಪಿತೃ ತರ್ಪಣ, ಶಿವ ಪೂಜೆ, ದಾನ ಮಾಡುವುದರಿಂದ ಅನಂತ ಪುಣ್ಯ ಲಭಿಸುತ್ತದೆ. ಆರ್ಥಿಕ ಸಮಸ್ಯೆ ನಿವಾರಣೆಗೆ ವಿಶೇಷ ಪರಿಹಾರಗಳಿದ್ದು, ಈ ದಿನದ ಮಹತ್ವ ಹಾಗೂ ಪೂಜಾ ವಿಧಾನವನ್ನು ಇಲ್ಲಿ ತಿಳಿಯಿರಿ.

Somvati Amavasya 2026: ಜೂ. 15 ಸೋಮವತಿ ಅಮಾವಾಸ್ಯೆ ; ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?
ಸೋಮವತಿ ಅಮಾವಾಸ್ಯೆ Image Credit source: Pinterest
ಅಕ್ಷತಾ ವರ್ಕಾಡಿ
|

Updated on: Jun 14, 2026 | 9:36 AM

Share

ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯ ದಿನವು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ವಿಶೇಷವಾಗಿ, ಸೋಮವಾರದಂದು ಬರುವ ಅಮಾವಾಸ್ಯೆಯನ್ನು ‘ಸೋಮವತಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ. ಈ ದಿನವನ್ನು ಶಿವ, ಲಕ್ಷ್ಮಿ ದೇವಿ ಹಾಗೂ ಪೂರ್ವಜರ (ಪಿತೃಗಳ) ವಿಶೇಷ ಆಶೀರ್ವಾದ ಪಡೆಯಲು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಅದರಲ್ಲೂ 2026 ರ ಅಧಿಕ ಜ್ಯೇಷ್ಠ ಮಾಸದಲ್ಲಿ ಬರುವ ಈ ಸೋಮವತಿ ಅಮಾವಾಸ್ಯೆಯು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತಷ್ಟು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ಜೂನ್ 14 ಅಥವಾ ಜೂನ್ 15? ಗೊಂದಲಕ್ಕೆ ಇಲ್ಲಿದೆ ಪರಿಹಾರ:

ಕ್ಯಾಲೆಂಡರ್ ಪ್ರಕಾರ ಅಮಾವಾಸ್ಯೆಯ ತಿಥಿಯು ಜೂನ್ 14 ರಂದು ಮಧ್ಯಾಹ್ನ 12:20 ಕ್ಕೆ ಆರಂಭವಾಗಿ, ಜೂನ್ 15, 2026 ರಂದು ಬೆಳಿಗ್ಗೆ 8:24 ಕ್ಕೆ ಮುಕ್ತಾಯವಾಗುತ್ತದೆ. ಶಾಸ್ತ್ರಗಳ ಪ್ರಕಾರ, ಸೂರ್ಯೋದಯದ ಸಮಯದಲ್ಲಿ ಯಾವ ತಿಥಿ ಇರುತ್ತದೆಯೋ ಆ ದಿನವೇ ಹಬ್ಬ ಅಥವಾ ವ್ರತವನ್ನು ಆಚರಿಸಬೇಕು. ಆದ್ದರಿಂದ, ಜೂನ್ 15ರ ಸೋಮವಾರದಂದು ಸೂರ್ಯೋದಯದ ಸಮಯದಲ್ಲಿ ಅಮಾವಾಸ್ಯೆ ಇರುವುದರಿಂದ, ಜೂನ್ 15 ರಂದೇ ಸೋಮವತಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ತಿಥಿಯು ಬೆಳಿಗ್ಗೆ 8:24 ರವರೆಗೆ ಮಾತ್ರ ಇರುವುದರಿಂದ, ಆ ಸಮಯಕ್ಕೆ ಮುಂಚಿತವಾಗಿ ಪ್ರಮುಖ ಪೂಜೆಗಳು ಮತ್ತು ತರ್ಪಣಗಳನ್ನು ಪೂರ್ಣಗೊಳಿಸುವುದು ಸೂಕ್ತ.

ಈ ದಿನದ ವಿಶೇಷತೆ ಮತ್ತು ಮಹತ್ವ:

ಸೋಮಾವತಿ ಅಮಾವಾಸ್ಯೆಯಂದು ಮಾಡುವ ಧಾರ್ಮಿಕ ಕಾರ್ಯಗಳಿಗೆ ಸಾವಿರ ಪಟ್ಟು ಹೆಚ್ಚಿನ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ಶಿವನ ಆರಾಧನೆ ಮಾಡುವುದರಿಂದ ಕೋಟಿ ಯಜ್ಞಗಳ ಪುಣ್ಯ ಲಭಿಸುತ್ತದೆ. ಅಲ್ಲದೆ, ಪಿತೃ ತರ್ಪಣ ಮಾಡುವುದರಿಂದ ಪಿತೃ ದೋಷಗಳು ನಿವಾರಣೆಯಾಗುತ್ತವೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಮಂತ್ರ ಜಪ ಮಾಡುವುದರಿಂದ ಅಕ್ಷಯ ಪುಣ್ಯ ಲಭಿಸುತ್ತದೆ. ಇದು ಅಧಿಕ ಮಾಸದಲ್ಲಿ ಬಂದಿರುವುದರಿಂದ, ಈ ದಿನ ಮಾಡುವ ಪ್ರತಿಯೊಂದು ಸತ್ಕರ್ಮವೂ ಶಾಶ್ವತ ಫಲಿತಾಂಶಗಳನ್ನು ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಶುಭ ಮುಹೂರ್ತಗಳು ಮತ್ತು ಪೂಜಾ ವಿಧಾನ:

ಈ ಪವಿತ್ರ ದಿನದಂದು ಪೂಜಾ ಕಾರ್ಯಗಳನ್ನು ನೆರವೇರಿಸಲು ಜ್ಯೋತಿಷ್ಯ ಶಾಸ್ತ್ರವು ಕೆಲವು ನಿರ್ದಿಷ್ಟ ಶುಭ ಸಮಯಗಳನ್ನು ಸೂಚಿಸಿದೆ:

  • ಬ್ರಹ್ಮ ಮುಹೂರ್ತ: ಬೆಳಿಗ್ಗೆ 4:00 ರಿಂದ 5:30 (ಈ ಸಮಯದಲ್ಲಿ ಎದ್ದು ಸ್ನಾನ ಮಾಡುವುದು ಶ್ರೇಷ್ಠ).
  • ಪಿತೃ ತರ್ಪಣ ಸಮಯ: ಬೆಳಿಗ್ಗೆ 6:00 ರಿಂದ 8:00 ರ ನಡುವೆ ಪಿತೃಗಳಿಗೆ ತರ್ಪಣ ನೀಡುವುದು ಅತ್ಯಂತ ಶುಭ.

ಸರಳ ಪೂಜಾ ವಿಧಾನ:

ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. ನಂತರ ಶಿವಲಿಂಗಕ್ಕೆ ನೀರು ಮತ್ತು ಹಾಲಿನ ಅಭಿಷೇಕ ಮಾಡಿ, ಬಿಲ್ವದಳಗಳನ್ನು ಸಮರ್ಪಿಸಬೇಕು. ಈ ಸಮಯದಲ್ಲಿ “ಓಂ ನಮಃ ಶಿವಾಯ” ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಬೇಕು. ಬಳಿಕ ಪಿತೃದೇವತೆಗಳಿಗೆ ನೈವೇದ್ಯ ಅರ್ಪಿಸಿ, ಬಡವರಿಗೆ ದಾನ ಧರ್ಮ ಮಾಡಬೇಕು. ಸಂಜೆ ಮನೆಯಲ್ಲಿ ದೀಪ ಬೆಳಗಿಸಿ ಶಿವ-ಪಾರ್ವತಿಯರನ್ನು ಪ್ರಾರ್ಥಿಸಬೇಕು.

ಕಷ್ಟ ನಿವಾರಣೆಗೆ ಮಾಡಬೇಕಾದ ಪ್ರಮುಖ ದಾನಗಳು:

ಶಾಸ್ತ್ರಗಳ ಪ್ರಕಾರ, ಸೋಮವತಿ ಅಮಾವಾಸ್ಯೆಯಂದು ಮಾಡುವ ದಾನಗಳು ಪೂರ್ವಜರ ಆತ್ಮಕ್ಕೆ ಶಾಂತಿ ನೀಡುವುದಲ್ಲದೆ, ಶನಿದೋಷದ ಕಷ್ಟಗಳನ್ನು ಕಡಿಮೆ ಮಾಡುತ್ತದೆ. ಈ ದಿನ ಕೆಳಗಿನ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರ:

  • ಕಪ್ಪು ಎಳ್ಳು, ಭತ್ತ ಮತ್ತು ಗೋಧಿ
  • ಬಟ್ಟೆಗಳು, ಛತ್ರಿ ಮತ್ತು ಪಾದರಕ್ಷೆಗಳು
  • ಕುಡಿಯುವ ನೀರಿನ ಪಾತ್ರೆಗಳು ಮತ್ತು ಅನ್ನದಾನ
  • ಗೋಸೇವೆ (ಹಸುಗಳಿಗೆ ಆಹಾರ ನೀಡುವುದು)

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಆರ್ಥಿಕ ಸಮಸ್ಯೆಗಳ ನಿವಾರಣೆಗೆ ವಿಶೇಷ ಪರಿಹಾರಗಳು:

ನಿಮ್ಮ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದ್ದರೆ, ಈ ಶುಭ ದಿನದಂದು ಕೆಲವು ಸರಳ ತಾಂತ್ರಿಕ/ಧಾರ್ಮಿಕ ಪರಿಹಾರಗಳನ್ನು ಮಾಡಿಕೊಳ್ಳಬಹುದು:

  • ಲಕ್ಷ್ಮೀ ಕಟಾಕ್ಷಕ್ಕಾಗಿ: ಅಮಾವಾಸ್ಯೆಯ ದಿನ ಬೆಳಿಗ್ಗೆ, ಲಕ್ಷ್ಮಿ ದೇವಿಯ ಚಿತ್ರದ ಮುಂದೆ 11 ಹಸುವಿನ ತುಪ್ಪದ ದೀಪಗಳನ್ನು ಬೆಳಗಿಸಿ. “ಓಂ ಶ್ರೀ ಮಹಾಲಕ್ಷ್ಮಿ ನಮಃ” ಮಂತ್ರವನ್ನು 108 ಬಾರಿ ಪಠಿಸಿ.
  • ಸಾಲದ ಹೊರೆಯಿಂದ ಮುಕ್ತಿ: 11 ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು ಸ್ವಲ್ಪ ಅರಿಶಿನವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಲಕ್ಷ್ಮಿ ದೇವಿಯ ಪಾದದ ಬಳಿ ಇರಿಸಿ. ಮರುದಿನ ಅದನ್ನು ನಿಮ್ಮ ಹಣದ ಪೆಟ್ಟಿಗೆಯಲ್ಲಿ (ಲಾಕರ್) ಇಡಿ.
  • ಹಣದ ಹರಿವು ಹೆಚ್ಚಿಸಲು: ಸೋಮಾವತಿ ಅಮಾವಾಸ್ಯೆಯ ತಿಥಿಯ ಸಮಯದಲ್ಲಿ ಅರಳಿ (ರವಿ) ವೃಕ್ಷಕ್ಕೆ ನೀರು ಹಾಕಿ, 108 ಪ್ರದಕ್ಷಿಣೆ ಹಾಕುವುದು ಅತ್ಯಂತ ಪ್ರಯೋಜನಕಾರಿ.
  • ವ್ಯಾಪಾರ ಅಭಿವೃದ್ಧಿಗಾಗಿ: ಪೂಜಾ ಕೋಣೆಯಲ್ಲಿ 11 ಹಳದಿ ಕವಡೆಗಳನ್ನು (ಚಿಪ್ಪುಗಳನ್ನು) ಇರಿಸಿ ಲಕ್ಷ್ಮಿ ಅಷ್ಟೋತ್ತರವನ್ನು ಭಕ್ತಿಯಿಂದ ಪಠಿಸಿ.
  • ಪಿತೃ ದೋಷ ತಡೆಗೆ: ಕಪ್ಪು ಎಳ್ಳಿನಿಂದ ಪಿತೃಗಳಿಗೆ ತರ್ಪಣ ಅರ್ಪಿಸುವುದು ಮತ್ತು ಕಾಗೆಗಳಿಗೆ ಅನ್ನ ನೀಡುವುದರಿಂದ ಪೂರ್ವಜರ ಆಶೀರ್ವಾದ ಸಿಕ್ಕು, ಆರ್ಥಿಕ ಪ್ರಗತಿಯ ಹಾದಿ ಸುಗಮವಾಗುತ್ತದೆ.

ಅಮಾವಾಸ್ಯೆಯಂದು ಮಾಡಬಾರದ ತಪ್ಪುಗಳು:

ಈ ಪವಿತ್ರ ದಿನದಂದು ಕೆಲವು ನಕಾರಾತ್ಮಕ ಕೆಲಸಗಳಿಂದ ದೂರವಿರಬೇಕು. ಮನೆಯಲ್ಲಿ ಅನಗತ್ಯ ಕೋಪ, ಜಗಳ ಮಾಡಬಾರದು. ಮದ್ಯಪಾನ ಮತ್ತು ಮಾಂಸಾಹಾರ ಸೇವನೆ ಸಂಪೂರ್ಣ ನಿಷಿದ್ಧ. ಈ ದಿನ ಯಾರಿಂದಲೂ ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಳ್ಳಬಾರದು. ಹಿರಿಯರನ್ನು, ವಿಶೇಷವಾಗಿ ತಂದೆ-ತಾಯಿಯರನ್ನು ಅವಮಾನಿಸಬಾರದು ಅಥವಾ ಅವರ ಆರೈಕೆಯನ್ನು ನಿರ್ಲಕ್ಷಿಸಬಾರದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಇಂದು ಈ ರಾಶಿಯವರು ಕೆಲಸಗಳಲ್ಲಿ ಅವಸರ ಮಾಡಬೇಡಿ
ಇಂದು ಈ ರಾಶಿಯವರು ಕೆಲಸಗಳಲ್ಲಿ ಅವಸರ ಮಾಡಬೇಡಿ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ: ಸಿಎಂ ಡಿಕೆಶಿ ಮಾಹಿತಿ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ: ಸಿಎಂ ಡಿಕೆಶಿ ಮಾಹಿತಿ
ಫುಟ್​​ಬಾಲ್ ವಿಶ್ವಕಪ್ ಉದ್ಘಾಟನೆಯಲ್ಲಿ ಹೀಗಿತ್ತು ನೋರಾ ಫತೇಹಿ ಪ್ರದರ್ಶನ
ಫುಟ್​​ಬಾಲ್ ವಿಶ್ವಕಪ್ ಉದ್ಘಾಟನೆಯಲ್ಲಿ ಹೀಗಿತ್ತು ನೋರಾ ಫತೇಹಿ ಪ್ರದರ್ಶನ
ಸಾವಿನ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ: ನಟ ದೊಡ್ಡಣ್ಣ ಹೇಳಿದ್ದೇನು?
ಸಾವಿನ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ: ನಟ ದೊಡ್ಡಣ್ಣ ಹೇಳಿದ್ದೇನು?
ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ ನೀಡಿದ ಸಿಎಂ ಡಿಕೆ ಶಿವಕುಮಾರ್​
ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ ನೀಡಿದ ಸಿಎಂ ಡಿಕೆ ಶಿವಕುಮಾರ್​
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?