AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈನಂದಿನ ಜೀವನದಲ್ಲಿ ಈ ತಪ್ಪುಗಳನ್ನು ಮಾಡದಿರಿ, ಇದು ಉದಾತ್ತ ಸಲಹೆಯಷ್ಟೆ!

ದೇವಸ್ಥಾನಕ್ಕೆ ಕೊಡುವ ಹೂವು, ಫಲವಸ್ತುಗಳು ತಮ್ಮದೆ ತೋಟದಲ್ಲಿ ಬೆಳೆದ ವಸ್ತುಗಳನ್ನೇ ಕೊಡಿ... ಸಾಧ್ಯವಾದರೆ ಕೈಯಾರೆ ಹೂವನ್ನು ಕಟ್ಟಿ ಶ್ರೀ ದೇವರಿಗೆ ಸಮರ್ಪಿಸಿ.

ದೈನಂದಿನ ಜೀವನದಲ್ಲಿ ಈ ತಪ್ಪುಗಳನ್ನು ಮಾಡದಿರಿ, ಇದು ಉದಾತ್ತ ಸಲಹೆಯಷ್ಟೆ!
ದೈನಂದಿನ ಜೀವನದಲ್ಲಿ ಈ ತಪ್ಪುಗಳನ್ನು ಮಾಡದಿರಿ, ಇದು ಉದಾತ್ತ ಸಲಹೆಯಷ್ಟೆ!Image Credit source: canstockphoto.com
TV9 Web
| Edited By: |

Updated on: Dec 15, 2022 | 6:06 AM

Share

ಜಾತ್ರೆ ಮಹೋತ್ಸವದಲ್ಲಿ ಖರೀದಿಸಿದ ಅಥವಾ ಉಡುಗೊರೆ ಕೊಟ್ಟ ದೇವತಾ ಮೂರ್ತಿಗಳನ್ನು ಪೂಜಾ ಮಂದಿರದಲ್ಲಿ ಇಡದಿರಿ. ಅದಷ್ಟು ಲೋಹದ ಮೂರ್ತಿಗಳನ್ನು ಮನೆಯಲ್ಲಿ ಹೊಸದಾಗಿ ಪೂಜೆ ಮಾಡದಿರಿ (mistake). ಅನಿವಾರ್ಯವೇ ಆದರೆ ಸೂಕ್ತವಾದ ಮಾಹಿತಿ ಪಡೆದು (peace) ಅದರಂತೆ ನಡೆದುಕೊಳ್ಳಿ (Spiritual).

  1. ಸಂಬಂಧಪಡದವರ ಉತ್ತರ ಕ್ರಿಯೆ ಅಥವಾ ಸಮಾರಾಧನೆಯ ಊಟವನ್ನು ಅದಷ್ಟು ತಪ್ಪಿಸಿ. ಇದಕ್ಕೆ ಸೂತಕದ ಅನ್ನ… ಎನ್ನುತ್ತಾರೆ. ಇದು ನಮ್ಮಲ್ಲಿ ಋಣಾತ್ಮಕವಾದ ಶಕ್ತಿ ಸಂಚಯ ಮಾಡುವಲ್ಲಿ ಪಾತ್ರ ವಹಿಸುತ್ತದೆ.
  2. ಹೇರ್ ಕಟ್ಟಿಂಗ್ ಮಾಡಿಸಿಕೊಳ್ಳುವಾಗ… ಒಂದೇ ಮನೆಯವರು ಒಂದೇ ದಿನ ಮಾಡದಿರಿ. ಅಂದರೆ ತಂದೆ, ಮಗ ಅಥವಾ ಅಣ್ಣ-ತಮ್ಮ ಒಂದೇ ದಿನ ತಲೆಗೂದಲ ಕತ್ತರಿಸದಿರಿ… ಸಂಪ್ರದಾಯದ ಪ್ರಕಾರ ಇದು ನಿಷಿದ್ಧ.
  3. ದೇವರ ಪ್ರಸಾದಗಳನ್ನು ಪ್ರಾಣಿ ಪಕ್ಷಿಗಳಿಗೆ ಹಾಕದಿರಿ.
  4. ದೇವಸ್ಥಾನಕ್ಕೆ ಕೊಡುವ ಹೂವು, ಫಲವಸ್ತುಗಳು ತಮ್ಮದೆ ತೋಟದಲ್ಲಿ ಬೆಳೆದ ವಸ್ತುಗಳನ್ನೇ ಕೊಡಿ… ಸಾಧ್ಯವಾದರೆ ಕೈಯಾರೆ ಹೂವನ್ನು ಕಟ್ಟಿ ಶ್ರೀ ದೇವರಿಗೆ ಸಮರ್ಪಿಸಿ.
  5. ಮನೆಯ ದ್ವಾರದಲ್ಲಿ ಕಟ್ಟಿದ ತಳಿರು ತೋರಣಗಳನ್ನು ಒಣಗುವ ಮುಂಚೆಯೇ ತೆಗೆಯಿರಿ.
  6. ಜಾತ್ರೆ ಮಹೋತ್ಸವದಲ್ಲಿ ಖರೀದಿಸಿದ ಅಥವಾ ಉಡುಗೊರೆ ಕೊಟ್ಟ ದೇವತಾ ಮೂರ್ತಿಗಳನ್ನು ಪೂಜಾ ಮಂದಿರದಲ್ಲಿ ಇಡದಿರಿ. ಅದಷ್ಟು ಲೋಹದ ಮೂರ್ತಿಗಳನ್ನು ಮನೆಯಲ್ಲಿ ಹೊಸದಾಗಿ ಪೂಜೆ ಮಾಡದಿರಿ. ಅನಿವಾರ್ಯವೇ ಆದರೆ ಸೂಕ್ತವಾದ ಮಾಹಿತಿ ಪಡೆದು ಅದರಂತೆ ನಡೆದುಕೊಳ್ಳಿ.
  7. ರುದ್ರಾಕ್ಷಿ ತುಳಸಿಮಾಲೆ ಧರಿಸಿ ಮದ್ಯ, ಮಾಂಸ ಸೇವಿಸದಿರಿ.
  8. ಸೂರ್ಯ ಮುಳುಗುವ ಹೊತ್ತಿನಲ್ಲಿ ಮನೆಯಲ್ಲಿ ದೀಪ ಹಚ್ಚಿ… ಪ್ರತಿಬಾರಿ ದೀಪ ಹಚ್ಚುವಾಗ ಹಳೆಯ ಬತ್ತಿ ಹಾಗೂ ದೀಪ ಸಾಮಾಗ್ರಿಯನ್ನು ಶುದ್ಧವಾದ ನೀರಿನಲ್ಲಿ ಶುಚಿಗೊಳಿಸಿ. ಶುದ್ಧವಾದ ಎಳ್ಳೆಣ್ಣೆ ಅಥವಾ ತುಪ್ಪವನ್ನು ಬಳಸಿ.
  9. ಹಣೆಯಲ್ಲಿ ತಿಲಕ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಿ. ಹಣೆಯಲ್ಲಿ ತಿಲಕವಿಲ್ಲದೆ ಯಾವುದೇ ಪೂಜಾ ಕಾರ್ಯಗಳನ್ನು ಮಾಡದಿರಿ. ಹಣೆಯಲ್ಲಿ ತಿಲಕವಿಲ್ಲದ, ಸೊಂಟಕ್ಕೆ ಬಟ್ಟೆ ಕಟ್ಟಿದ ಅಥವಾ ಬಿಳಿ ಬಟ್ಟೆಯನ್ನು ತಲೆಗೆ ಮುಸುಕು ಹಾಕಿದವರನ್ನು ಮಾತನಾಡಿಸಬಾರದು ಎಂಬ ಮಾತಿದೆ…. ಅಂದರೆ ಸೂತಕದಲ್ಲಿ ಇದ್ದಾಗ ಮಾತ್ರ ಈ ರೀತಿಯ ವ್ಯವಸ್ಥೆ ಇರುತ್ತದೆ.
  10. ಕೊನೆಯ ಮಾತು: ಜೀವನದುದ್ದಕ್ಕೂ ಕೇವಲ ಪಾಪ ಮತ್ತು ನರಕದ ಜ್ವಾಲೆ ಇವುಗಳ ಬಗ್ಗೆಯೇ ಮಾತನಾಡುವುದೇಕೆ? ಭಗವಂತನ ನಾಮವನ್ನು ಜಪಿಸಿ. ಒಮ್ಮೆ ಹೇಳಿಬಿಡಿ ಓ ಭಗವಂತ, ನಾನು ಮಾಡಬಾರದ್ದನ್ನೆಲ್ಲ ಮಾಡಿದ್ದೇನೆ ಮತ್ತು ಮಾಡಬೇಕಾದ್ದನ್ನೆಲ್ಲ ಮಾಡದೆ ಬಿಟ್ಟಿದ್ದೇನೆ. ಹೇ ದೇವಾ, ನನ್ನನ್ನು ಕ್ಷಮಿಸು… ಹೀಗೆ ಒಮ್ಮೆಯಾದರೂ ಹೇಳಿ, ಹೀಗೆ ಹೇಳುತ್ತಾ ಅವನಲ್ಲಿ ಶ್ರದ್ಧೆ ಇಡಿ. ಎಲ್ಲ ಪಾಪಗಳಿಂದ ನೀವು ಮುಕ್ತರಾಗುತ್ತಿರಿ. (ಬರಹ: ಎನ್​. ಜಗದೀಶ್)