God Krishna and Draupadi: ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ ಮತ್ತು ರಕ್ಷಾ ಬಂಧನದ ಕತೆ: ಸೋದರನಿಗೆ ರಾಖಿ ಕಟ್ಟುವಾಗ ಈ ಮಂತ್ರ ಪಠಿಸಿ

Raksha Bandhan 2024: ಕೃಷ್ಣ ಮತ್ತು ದ್ರೌಪದಿ ಸೋದರತೆಯ ಸಂಬಂಧದ ಸಂಕೇತ ಈ ರಕ್ಷಾ ಬಂಧನ ಎಂದು ಹೇಳಲಾಗುತ್ತದೆ. ಶಿಶುಪಾಲನ ನೂರು ತಪ್ಪುಗಳು ಕ್ಷಮಿಸಿದ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸಲು ತನ್ನ ಶ್ರೀ ಚಕ್ರವನ್ನು ಕಳುಹಿಸುತ್ತಾನೆ. ಶ್ರೀಚಕ್ರ ಕೈಯಿಂದ ಹೋಗುವ ವೇಳೆ ಶ್ರೀಕೃಷ್ಣನ ಬೆರಳು ಗಾಯವಾಗಿ ರಕ್ತ ಸುರಿಯುತ್ತಿರುತ್ತದೆ. ಇದನ್ನು ಕಂಡ ದ್ರೌಪದಿ ಹಿಂದುಮುಂದು ಯೋಚಿಸದೆ...

God Krishna and Draupadi: ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ ಮತ್ತು ರಕ್ಷಾ ಬಂಧನದ ಕತೆ: ಸೋದರನಿಗೆ ರಾಖಿ ಕಟ್ಟುವಾಗ ಈ ಮಂತ್ರ ಪಠಿಸಿ
ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ ಮತ್ತು ರಕ್ಷಾ ಬಂಧನದ ಕತೆ
Follow us
|

Updated on: Aug 19, 2024 | 12:28 PM

ರಕ್ಷಾ ಬಂಧನ ವಿಶೇಷ ಮಂತ್ರ: ರಕ್ಷಾ ಬಂಧನದ ಹಬ್ಬವನ್ನು ಇಂದು ಆಗಸ್ಟ್ 19 ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ರಾಖಿಗೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ. ರಾಖಿಯ ವಿಶೇಷತೆಯೆಂದರೆ ಇದನ್ನು ಶ್ರದ್ಧಾ ಭಕ್ತಿಗಳೊಂದಿಗೆ ಸಕಲ ವಿಧಿ ವಿಧಾನಗಳೊಂದಿಗೆ ಆಚರಿಸಲಾಗುತ್ತದೆ. ಆಗ ಮಾತ್ರ ಅದರ ಸರಿಯಾದ ಲಾಭ ಪ್ರಾಪ್ತಿಯಾಗುತ್ತದೆ. ಭದ್ರ ಕಾಲದ ಕಾರಣ ಈ ಬಾರಿ ಸಹೋದರಿಯರು ಮಧ್ಯಾಹ್ನದ ನಂತರ ಅಣ್ಣನ ಮುಂಗೈಗೆ ರಾಖಿ ಕಟ್ಟುತ್ತಾರೆ. ಅದಕ್ಕಿಂತ ಮುಂಚೆಯೇ ರಾಖಿ ಕಟ್ಟಲು ಸಮಯ ಅಶುಭವಾಗಿದೆ. ರಕ್ಷಾಬಂಧನದಲ್ಲಿ ತಿಥಿ ಮತ್ತು ಶುಭ ಮುಹೂರ್ತ ಹೆಚ್ಚು ಉಪಯುಕ್ತ. ಇದಲ್ಲದೆ, ಇನ್ನೂ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಮತ್ತು ಹೆಚ್ಚಿನ ಜನರು ಈ ನಿಯಮಕ್ಕೆ ಗಮನ ಕೊಡುವುದಿಲ್ಲ. ರಾಖಿ ಕಟ್ಟುವಾಗ ಮಂತ್ರವನ್ನು ಪಠಿಸುವುದರಿಂದಲೂ ಪ್ರಯೋಜನವಾಗುತ್ತದೆ. ರಾಖಿಯ ಹಬ್ಬ ಪೂರ್ಣವಾಗಲು ಯಾವ ಮಂತ್ರವನ್ನು ಪಠಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ.

ರಾಖಿ ಕಟ್ಟುವಾಗ ಈ ಮಂತ್ರವನ್ನು ಪಠಿಸಿ: ಸಾಮಾನ್ಯವಾಗಿ, ರಕ್ಷಾಬಂಧನದಂದು ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿ ಕಟ್ಟುವಾಗ, ಅವರು ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುತ್ತಾರೆ. ಹೆಣ್ಣುಮಕ್ಕಳು ಪೂಜೆಯ ತಟ್ಟೆಯನ್ನು ಅಲಂಕರಿಸುತ್ತಾರೆ. ಸಹೋದರನಿಗೆ ಆರತಿ ಎತ್ತುತ್ತಾರೆ. ಇದಾದ ನಂತರ ರಕ್ಷಾ ದಾರ ಕಟ್ಟುತ್ತಾರೆ. ಆದರೆ ಹೆಚ್ಚಿನ ಸಹೋದರಿಯರು ಅನುಸರಿಸದ ಒಂದು ಪ್ರಮುಖ ವಿಷಯವಿದೆ. ಅದು ಮಂತ್ರ ಉಚ್ಚಾರಣೆ. ರಾಖಿ ಕಟ್ಟುವಾಗ ಮಂತ್ರವನ್ನು ಪಠಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ಸರಿಯಾದ ಪ್ರಯೋಜನಗಳು ಸಿಗುವುದಿಲ್ಲ ಮತ್ತು ರಾಖಿ ಕಟ್ಟುವ ಪ್ರಕ್ರಿಯೆಯು ಸಹ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಈ ಮಂತ್ರವು –

ಯೇನ್‌ ಬದ್ಧೋ ಬಲಿ ರಾಜಾ, ದಾನವೇಂದ್ರೋ ಮಹಾಬಲಃ ತೇನ್‌ ತ್ವಾಂ ಪ್ರತಿಬದ್ಧನಾಮಿ ರಕ್ಷೇ ಮಾಚಲ ಮಾಚಲಃ (येन बद्धो बलि राजा, दानवेन्द्रो महाबल: तेन त्वाम् प्रतिबद्धन रक्षे माचल माचल)

ಕೃಷ್ಣ ಮತ್ತು ದ್ರೌಪದಿ ಸೋದರತೆಯ ಸಂಬಂಧದ ಸಂಕೇತ ಈ ರಕ್ಷಾ ಬಂಧನ ಎಂದು ಹೇಳಲಾಗುತ್ತದೆ. ಶಿಶುಪಾಲನ ನೂರು ತಪ್ಪುಗಳು ಕ್ಷಮಿಸಿದ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸಲು ತನ್ನ ಶ್ರೀ ಚಕ್ರವನ್ನು ಕಳುಹಿಸುತ್ತಾನೆ. ಶ್ರೀಚಕ್ರ ಕೈಯಿಂದ ಹೋಗುವ ವೇಳೆ ಶ್ರೀಕೃಷ್ಣನ ಬೆರಳು ಗಾಯವಾಗಿ ರಕ್ತ ಸುರಿಯುತ್ತಿರುತ್ತದೆ. ಇದನ್ನು ಕಂಡ ದ್ರೌಪದಿ ಹಿಂದುಮುಂದು ಯೋಚಿಸದೆ ತಾನುಟ್ಟಿದ್ದ ಸೀರೆಯ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ.

Also Read: Rakhi 2024 – ಮತ್ತೊಂದು ದಾಖಲೆಗೆ ಸಜ್ಜಾದ ಇಂದೋರ್.. ಗಣಪನಿಗೆ ಅದ್ಧೂರಿ ರಾಖಿ! ವಿಶೇಷ ಏನು ಗೊತ್ತಾ?

ಇದನ್ನು ಕಂಡ ಶ್ರೀಕೃಷ್ಣ ನಿನಗೆ ಏನು ಬೇಕು ಎಂದು ಕೇಳಿಕೋ ಎಂದು ಹೇಳುತ್ತಾನೆ. ಈ ವೇಳೆ ದ್ರೌಪದಿ ಜೀವನ ಇರುವವರೆಗೂ ಒಳ್ಳೆಯ ಸಹೋದರಿಯಾಗಿತ್ತೇನೆ ಎಂದು ಹೇಳುತ್ತಾಳೆ. ದ್ರೌಪದಿಯ ಈ ಮಾತುಗಳನ್ನು ಕೇಳಿದ ಶ್ರೀಕೃಷ್ಣನು ದ್ರೌಪದಿಯ ಸಹೋದರನಾಗಿ ನಿಂತು ಸಂಕಷ್ಟದ ಸಮಯದಲ್ಲಿ ಕಾಪಾಡುವುದಾಗಿ ಹೇಳುತ್ತಾನೆ.

ಇದರಂತೆ ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಸಹೋದರನಾಗಿ ನಿಂತ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಸೀರೆಯನ್ನು ದಯಪಾಲಿಸಿ ಆಕೆಯನ್ನು ರಕ್ಷಿಸುತ್ತಾನೆ. ಅಂದಿನಿಂದ ಇಂದಿನವರೆಗೂ ವಿಶೇಷವಾಗಿ ರಕ್ಷಾಬಂಧನವನ್ನು ಹಬ್ಬವಾಗಿ ಆಚರಿಸಲಾಗುತ್ತದೆ.

Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ

ರಾಖಿಯ ಶುಭ ಸಮಯ ಈ ಬಾರಿಯ ಶುಭ ಮುಹೂರ್ತದ ಬಗ್ಗೆ ಹೇಳುವುದಾದರೆ, ಮಧ್ಯಾಹ್ನ 1:46ಕ್ಕೆ ಶುಭ ಮುಹೂರ್ತ ಆರಂಭವಾಗಲಿದೆ. ಸಂಜೆ 4.19ರವರೆಗೆ ಈ ಶುಭ ಮುಹೂರ್ತ ನಡೆಯಲಿದೆ. ಇದನ್ನು ಹೊರತುಪಡಿಸಿ, ನಾವು ಇತರ ಶುಭ ಸಮಯದ ಬಗ್ಗೆ ಮಾತನಾಡಿದರೆ ಅದು ಸಂಜೆ ಪ್ರದೋಷಕಾಲದಲ್ಲಿ ನಡೆಯುತ್ತದೆ. ಪ್ರದೋಷ ಕಾಲವು ಸಂಜೆ 6:55 ಕ್ಕೆ ಪ್ರಾರಂಭವಾಗಿ ರಾತ್ರಿ 9:07 ರವರೆಗೆ ಇರುತ್ತದೆ. ರಾಖಿ ಕಟ್ಟಲು ಈ ಸಮಯವೂ ಶುಭ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)