Tulasi and Menstruation: ಮುಟ್ಟಿನ ಸಮಯದಲ್ಲಿ ತುಳಸಿ ಗಿಡ ಏಕೆ ಮುಟ್ಟಬಾರದು? ಸತ್ಯ ಮತ್ತು ಮಿಥ್ಯಗಳು
ತುಳಸಿ ಗಿಡವನ್ನು ಮುಟ್ಟಿನ ಸಮಯದಲ್ಲಿ ಮಹಿಳೆಯರು ಸ್ಪರ್ಶಿಸಬಾರದು ಎಂಬುದು ಭಾರತೀಯ ಸಂಸ್ಕೃತಿಯಲ್ಲಿರುವ ಒಂದು ನಂಬಿಕೆ. ಧಾರ್ಮಿಕವಾಗಿ ಅಶುದ್ಧತೆ ಎನ್ನಲಾಗಿದ್ದರೂ, ವಿಜ್ಞಾನ ಇದಕ್ಕೆ ನೇರ ಸಂಬಂಧವಿಲ್ಲ ಎನ್ನುತ್ತದೆ. ಆದರೆ, ಹಿರಿಯರು ಈ ನಿಯಮವನ್ನು ರೂಪಿಸಲು ವಿಶ್ರಾಂತಿ, ನೈರ್ಮಲ್ಯ ಮತ್ತು ಆರೋಗ್ಯದಂತಹ ಪ್ರಾಯೋಗಿಕ ಕಾರಣಗಳಿದ್ದವು. ಇವು ಈ ಸಂಪ್ರದಾಯದ ಹಿಂದಿನ ಅಸಲಿ ಸತ್ಯವನ್ನು ತಿಳಿಸುತ್ತವೆ.

ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ತುಳಸಿಯನ್ನು ಕೇವಲ ಗಿಡವಾಗಿ ನೋಡದೆ ‘ಲಕ್ಷ್ಮಿ’ಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ಹಿರಿಯರು ಇಂದಿಗೂ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟಬಾರದು ಎಂದು ಹೇಳುತ್ತಾರೆ. ಇದರ ಹಿಂದಿನ ಅಸಲಿ ಕಾರಣಗಳೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸಾಂಪ್ರದಾಯಿಕ ಮತ್ತು ಧಾರ್ಮಿಕ ನಂಬಿಕೆಗಳು:
ಪುರಾಣಗಳ ಪ್ರಕಾರ ತುಳಸಿಯು ಅತ್ಯಂತ ಶುದ್ಧ ಮತ್ತು ದೈವಿಕ ಶಕ್ತಿಯ ಸಂಕೇತ. ಮುಟ್ಟಿನ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ‘ಅಶುದ್ಧತೆ’ ಇರುತ್ತದೆ ಎಂಬುದು ಹಳೆಯ ಕಾಲದ ನಂಬಿಕೆ. ಈ ಸಮಯದಲ್ಲಿ ತುಳಸಿಯನ್ನು ಮುಟ್ಟಿದರೆ ಗಿಡವು ತನ್ನ ಪವಿತ್ರತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಒಣಗಿ ಹೋಗುತ್ತದೆ ಎಂದು ಹಿರಿಯರು ನಂಬುತ್ತಾರೆ.
ವೈಜ್ಞಾನಿಕ ದೃಷ್ಟಿಕೋನ:
ಆಧುನಿಕ ವಿಜ್ಞಾನದ ಪ್ರಕಾರ, ಮಹಿಳೆಯರ ಋತುಚಕ್ರಕ್ಕೂ ಮತ್ತು ಸಸ್ಯಗಳ ಆರೋಗ್ಯಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಮಹಿಳೆಯರ ದೇಹದಲ್ಲಿ ಈ ಸಮಯದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು ಸಸ್ಯಗಳನ್ನು ಒಣಗಿಸುವ ಶಕ್ತಿಯನ್ನು ಹೊಂದಿರುವುದಿಲ್ಲ. ಯಾವುದೇ ವೈಜ್ಞಾನಿಕ ಸಂಶೋಧನೆಯೂ ಸಹ “ಮಹಿಳೆಯರ ಸ್ಪರ್ಶದಿಂದ ಗಿಡ ಒಣಗುತ್ತದೆ” ಎಂಬ ವಾದವನ್ನು ಸಾಬೀತುಪಡಿಸಿಲ್ಲ. ಗಿಡ ಒಣಗಲು ಮುಖ್ಯ ಕಾರಣಗಳು ನೀರು, ಸೂರ್ಯನ ಬೆಳಕು ಅಥವಾ ಪೋಷಕಾಂಶಗಳ ಕೊರತೆಯೇ ಹೊರತು ಮಾನವ ಸ್ಪರ್ಶವಲ್ಲ.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಹಿರಿಯರು ಈ ನಿಯಮ ಮಾಡಲು ಅಸಲಿ ಕಾರಣವೇನು?
ಹಿಂದಿನ ಕಾಲದಲ್ಲಿ ಈ ನಿಯಮಗಳನ್ನು ಜಾರಿಗೆ ತರಲು ಕೆಲವು ಪ್ರಾಯೋಗಿಕ ಕಾರಣಗಳಿದ್ದವು:
ವಿಶ್ರಾಂತಿಯ ಅಗತ್ಯ:
ಹಿಂದಿನ ಕಾಲದಲ್ಲಿ ಮಹಿಳೆಯರು ಮನೆಯಲ್ಲೇ ದೈಹಿಕವಾಗಿ ತುಂಬಾ ಕೆಲಸ ಮಾಡಬೇಕಿತ್ತು. ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು, ಸೊಂಟ ನೋವು ಮತ್ತು ಅತಿಯಾದ ರಕ್ತಸ್ರಾವದಿಂದ ಅವರಿಗೆ ವಿಶ್ರಾಂತಿ ನೀಡಲು ‘ದೂರವಿರುವ’ ಪದ್ಧತಿಯನ್ನು ತರಲಾಯಿತು.
ನೈರ್ಮಲ್ಯದ ಕಾಳಜಿ:
ಅಂದು ಇಂದಿನಂತೆ ಸ್ಯಾನಿಟರಿ ಪ್ಯಾಡ್ಗಳ ಸೌಲಭ್ಯವಿರಲಿಲ್ಲ. ಸೋಂಕು ಹರಡದಂತೆ ತಡೆಯಲು ಮತ್ತು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅವರನ್ನು ದೇವಸ್ಥಾನ ಅಥವಾ ಪವಿತ್ರ ಗಿಡಗಳಿಂದ ದೂರವಿಡಲಾಗುತ್ತಿತ್ತು.
ರೋಗನಿರೋಧಕ ಶಕ್ತಿ: ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪ ಕಡಿಮೆಯಿರುತ್ತದೆ. ತುಳಸಿ ಗಿಡವು ಗಿಡಮೂಲಿಕೆಗಳ ಆಗರವಾಗಿದ್ದರೂ, ತೋಟದ ಕೆಲಸ ಅಥವಾ ಗಿಡದ ಆರೈಕೆಯಲ್ಲಿ ತೊಡಗುವುದರಿಂದ ಅವರಿಗೆ ಆಯಾಸವಾಗಬಾರದು ಎಂಬುದು ಅಂದಿನವರ ಕಾಳಜಿಯಾಗಿತ್ತು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Sat, 4 April 26




