AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Broom Placement: ಮನೆಯಲ್ಲಿ ಪೊರಕೆಯನ್ನು ಈ ದಿಕ್ಕಿನಲ್ಲಿ ಇಡಲೇಬೇಡಿ; ಅಪಾಯ ತಪ್ಪಿದ್ದಲ್ಲ!

ಭಾರತೀಯ ಸಂಪ್ರದಾಯದಲ್ಲಿ ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪೂಜಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ವಿಧಾನದಲ್ಲಿಇಡುವುದರಿಂದ ಮನೆಗೆ ಸಂಪತ್ತು ಮತ್ತು ಸಮೃದ್ಧಿ ಹರಿಯುತ್ತದೆ. ಹೊಸ್ತಿಲ ಮೇಲೆ ಕಸ ಗುಡಿಸದಿರುವುದು, ಪೊರಕೆಯನ್ನು ಕಾಲಿನಿಂದ ತುಳಿಯದಿರುವುದು ಮುಖ್ಯ. ಈ ನಿಯಮಗಳಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ.

Vastu Broom Placement: ಮನೆಯಲ್ಲಿ ಪೊರಕೆಯನ್ನು ಈ ದಿಕ್ಕಿನಲ್ಲಿ ಇಡಲೇಬೇಡಿ; ಅಪಾಯ ತಪ್ಪಿದ್ದಲ್ಲ!
Vastu Broom Placement
ಅಕ್ಷತಾ ವರ್ಕಾಡಿ
|

Updated on: Mar 29, 2026 | 6:04 PM

Share

ಭಾರತೀಯ ಸಂಪ್ರದಾಯದಲ್ಲಿ ಪೊರಕೆಯನ್ನು ಕೇವಲ ಕಸ ಗುಡಿಸುವ ಸಾಮಾನ್ಯ ಸಾಧನವಾಗಿ ನೋಡದೆ, ಅದನ್ನು ಲಕ್ಷ್ಮಿ ದೇವಿಯ ಸಾಕಾರ ರೂಪವೆಂದು ಗೌರವಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯು ಮನೆಯಲ್ಲಿರುವ ಬಡತನ ಮತ್ತು ಅಶುಭವನ್ನು ‘ಕಸ’ದ ರೂಪದಲ್ಲಿ ಹೊರಹಾಕಿ, ಸ್ವಚ್ಛತೆಯ ಮೂಲಕ ದೈವಿಕ ಅನುಗ್ರಹವನ್ನು ತರುತ್ತದೆ. ಆದರೆ, ಈ ಪವಿತ್ರ ವಸ್ತುವನ್ನು ಮನೆಯಲ್ಲಿ ಎಲ್ಲಿ ಇಡಬೇಕು ಮತ್ತು ಹೇಗೆ ಬಳಸಬೇಕು ಎಂಬುದರ ಕುರಿತು ಅನೇಕ ಧಾರ್ಮಿಕ ನಂಬಿಕೆಗಳಿವೆ. ಈ ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಸಂಪತ್ತು ಮತ್ತು ಶುಭ ಫಲಗಳು ಲಭಿಸುತ್ತವೆ ಎಂಬುದು ಹಿರಿಯರ ನಂಬಿಕೆ.

ಪೊರಕೆಯನ್ನು ಇಡುವ ವಿಧಾನದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಸಾಮಾನ್ಯವಾಗಿ ಅನೇಕರು ಪೊರಕೆಯನ್ನು ಬಳಸಿದ ನಂತರ ಅದರ ಗುಡಿಸುವ ಭಾಗ ಕೆಳಗೆ ಇರುವಂತೆ ಇಡುತ್ತಾರೆ, ಆದರೆ ಇದು ತಪ್ಪು ವಿಧಾನ. ಇದರಿಂದ ಪೊರಕೆಗೆ ಹಾನಿಯಾಗುವುದಲ್ಲದೆ ವಾಸ್ತು ದೋಷವೂ ಉಂಟಾಗುತ್ತದೆ. ಬದಲಾಗಿ, ಪೊರಕೆಯನ್ನು ಯಾವಾಗಲೂ ಲಂಬವಾಗಿ ಅಥವಾ ಮಲಗಿಸಿ ಇಡಬೇಕು, ಅಂದರೆ ಅದರ ಗುಡಿಸುವ ಭಾಗವು ಮೇಲ್ಮುಖವಾಗಿರಬೇಕು. ಇನ್ನು ಮುಖ್ಯವಾದ ವಿಷಯವೆಂದರೆ, ಮನೆಯಲ್ಲಿ ಎಂದಿಗೂ ಎರಡು ಪೊರಕೆಗಳನ್ನು ಒಟ್ಟಿಗೆ ಇಡಬಾರದು; ಇದು ಅಶುಭದ ಸಂಕೇತವೆಂದು ಪರಿಗಣಿಸಲಾಗಿದೆ.

ವಾಸ್ತು ಪ್ರಕಾರ ದಿಕ್ಕುಗಳಿಗೆ ಹೆಚ್ಚಿನ ಮಹತ್ವವಿದ್ದು, ಪೊರಕೆಯನ್ನು ಈಶಾನ್ಯ ಮೂಲೆಯಲ್ಲಿ ಎಂದಿಗೂ ಇಡಬಾರದು. ಈಶಾನ್ಯವು ದೈವಿಕ ಶಕ್ತಿಯ ಮೂಲವಾಗಿದ್ದು, ಅಲ್ಲಿ ಕಸ ಗುಡಿಸುವ ವಸ್ತುವನ್ನು ಇಡುವುದು ಸರಿಯಲ್ಲ. ಬದಲಾಗಿ, ನೈಋತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದು ಅತ್ಯಂತ ಶುಭ. ಇದು ಆರ್ಥಿಕ ಸಂಕಷ್ಟಗಳನ್ನು ದೂರಮಾಡಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ. ಅಲ್ಲದೆ, ಮನೆಯೊಳಗೆ ಬರುವ ಅತಿಥಿಗಳ ಕಣ್ಣಿಗೆ ಪೊರಕೆ ನೇರವಾಗಿ ಬೀಳಬಾರದು; ಅದನ್ನು ಯಾರೂ ಗಮನಿಸದ ಶಾಂತವಾದ ಮೂಲೆಯಲ್ಲಿ ಅಡಗಿಸಿ ಇಡುವುದು ಸೂಕ್ತ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮನೆಯನ್ನು ಗುಡಿಸುವಾಗಲೂ ಕೆಲವು ಶಿಸ್ತುಬದ್ಧ ಕ್ರಮಗಳಿವೆ. ಕಸವನ್ನು ಎಂದಿಗೂ ಈಶಾನ್ಯದ ಕಡೆಗೆ ಗುಡಿಸಬಾರದು, ಬದಲಾಗಿ ದಕ್ಷಿಣದ ಕಡೆಗೆ ಗುಡಿಸಬೇಕು. ಒಂದು ಕೋಣೆಯ ಕಸವನ್ನು ಗುಡಿಸಿ ಆ ಕೋಣೆಯಲ್ಲಿಯೇ ಅದನ್ನು ಎತ್ತಿ ಹೊರಹಾಕಬೇಕು. ಕಸವನ್ನು ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ದೂಡುವುದು ಅಥವಾ ಹೊಸ್ತಿಲ ಮೇಲೆ ಗುಡಿಸುವುದು ಅತ್ಯಂತ ಅಶುಭ. ಏಕೆಂದರೆ, ಮನೆಯ ದ್ವಾರವನ್ನು ಮಹಾಲಕ್ಷ್ಮಿಯ ರೂಪವೆಂದು ನಂಬಲಾಗುತ್ತದೆ. ಅರಿಶಿನ-ಕುಂಕುಮದಿಂದ ಪೂಜಿಸಬೇಕಾದ ಹೊಸ್ತಿಲ ಮೇಲೆ ಕಸವನ್ನು ಹಾಕುವುದು ಮನೆಗೆ ದಾರಿದ್ರ್ಯವನ್ನು ತರುತ್ತದೆ ಎಂಬ ನಂಬಿಕೆಯಿದೆ.

ಪೊರಕೆಯನ್ನು ಅತ್ಯಂತ ಪವಿತ್ರವಾಗಿ ಕಾಣಬೇಕು ಮತ್ತು ಅದನ್ನು ಎಂದಿಗೂ ಕಾಲಿನಿಂದ ತುಳಿಯಬಾರದು. ದೇವತೆಗಳ ವರಪ್ರಸಾದವೆಂದು ನಂಬಲಾದ ಈ ವಸ್ತುವನ್ನು ಪಾದಗಳಿಂದ ಸ್ಪರ್ಶಿಸುವುದು ಅಗೌರವದ ಸಂಕೇತವಾಗಿದೆ. ಇನ್ನು ಪೊರಕೆ ಖರೀದಿಸುವ ವಿಷಯಕ್ಕೆ ಬಂದರೆ, ಎಣ್ಣೆ ಅಥವಾ ಉಪ್ಪಿನಂತೆ ಇದಕ್ಕೆ ನಿರ್ದಿಷ್ಟ ದಿನಗಳ ನಿರ್ಬಂಧವಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಗತ್ಯವಿದ್ದಾಗ ಹೊಸ ಪೊರಕೆಯನ್ನು ಖರೀದಿಸಬಹುದು. ಈ ಸರಳ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಆರ್ಥಿಕ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?
ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ರಾಮ ಮಂದಿರದಲ್ಲಿ ಹನುಮ ಭಕ್ತಿ;ಮಂಗಳಾರತಿವರೆಗೂ ಕಾದು ಪ್ರಾರ್ಥನೆಗೈದ ಕೋತಿ
ರಾಮ ಮಂದಿರದಲ್ಲಿ ಹನುಮ ಭಕ್ತಿ;ಮಂಗಳಾರತಿವರೆಗೂ ಕಾದು ಪ್ರಾರ್ಥನೆಗೈದ ಕೋತಿ
ಬಿಜೆಪಿ ಎಲ್ಡಿಎಫ್​, ಯುಡಿಎಫ್ ಹಗರಣಗಳನ್ನು ಬಯಲು ಮಾಡುತ್ತೆ: ಪ್ರಧಾನಿ ಮೋದಿ
ಬಿಜೆಪಿ ಎಲ್ಡಿಎಫ್​, ಯುಡಿಎಫ್ ಹಗರಣಗಳನ್ನು ಬಯಲು ಮಾಡುತ್ತೆ: ಪ್ರಧಾನಿ ಮೋದಿ
ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಬೇಧಿ!
ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಬೇಧಿ!
ಜೈಲುಪಾಲಾಗಿರುವ ಪುತ್ರ ಪ್ರಜ್ವಲ್ ಗಾಗಿ ತಂದೆ ರೇವಣ್ಣ ವಿಶೇಷ ಪೂಜೆ
ಜೈಲುಪಾಲಾಗಿರುವ ಪುತ್ರ ಪ್ರಜ್ವಲ್ ಗಾಗಿ ತಂದೆ ರೇವಣ್ಣ ವಿಶೇಷ ಪೂಜೆ
ಅಣ್ಣಮ್ಮ ಸಾಂಗ್​ಗೆ ಮಚ್ಚು ಹಿಡಿದು ರೌಡಿಶೀಟರ್ ಡ್ಯಾನ್ಸ್ ! ಇಬ್ಬರ ಬಂಧನ
ಅಣ್ಣಮ್ಮ ಸಾಂಗ್​ಗೆ ಮಚ್ಚು ಹಿಡಿದು ರೌಡಿಶೀಟರ್ ಡ್ಯಾನ್ಸ್ ! ಇಬ್ಬರ ಬಂಧನ
ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ: ಅಧಿಕಾರಿಗಳ ಗಮನಕ್ಕೆ ತಂದ ಅನಿರುದ್ಧ್
ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ: ಅಧಿಕಾರಿಗಳ ಗಮನಕ್ಕೆ ತಂದ ಅನಿರುದ್ಧ್
BJP ಅಭ್ಯರ್ಥಿ ಸಹೋದರನಿಂದ ಕಾಂಗ್ರೆಸ್​​ ಪರ ಮತಯಾಚನೆ!
BJP ಅಭ್ಯರ್ಥಿ ಸಹೋದರನಿಂದ ಕಾಂಗ್ರೆಸ್​​ ಪರ ಮತಯಾಚನೆ!
ತಾಯಿ, ಅಕ್ಕನ ಕೊಂದು ಆತ್ಮಹತ್ಯೆಗೆ ಯುವಕ ಯತ್ನ: ಎಸ್​​ಪಿ ಹೇಳಿದ್ದೇನು?
ತಾಯಿ, ಅಕ್ಕನ ಕೊಂದು ಆತ್ಮಹತ್ಯೆಗೆ ಯುವಕ ಯತ್ನ: ಎಸ್​​ಪಿ ಹೇಳಿದ್ದೇನು?