
ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರಕ್ಕೆ ಪ್ರತಿಯೊಬ್ಬರ ಜೀವನದಲ್ಲೂ ಹೆಚ್ಚಿನ ಪ್ರಾಮುಖ್ಯತೆಯಿದೆ. ಆದರೆ, ಕೆಲವರು ವಾಸ್ತು ನಿಯಮಗಳನ್ನು ಪಾಲಿಸಲು ಆಸಕ್ತಿ ತೋರುವುದಿಲ್ಲ, ಇದರಿಂದಾಗಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನೇಕರು ವಾಸ್ತು ಎಂದರೆ ಕೇವಲ ಮನೆ ನಿರ್ಮಾಣ, ದಿಕ್ಕುಗಳು ಮತ್ತು ಮೂಲೆಗಳಿಗೆ ಮಾತ್ರ ಸೀಮಿತ ಎಂದು ಭಾವಿಸುತ್ತಾರೆ. ಆದರೆ ಮನೆಯ ಸುತ್ತಮುತ್ತ ನೆಡುವ ಗಿಡಮರಗಳೂ ವಾಸ್ತು ಮೇಲೆ ಪ್ರಭಾವ ಬೀರುತ್ತವೆ.
ಸಾಮಾನ್ಯವಾಗಿ ಜನರು ತಮ್ಮ ಮನೆಗಳ ಮುಂದೆ ಪೇರಲೆ, ಮಾವು ಮುಂತಾದ ಹಣ್ಣಿನ ಮರಗಳನ್ನು ನೆಡುತ್ತಾರೆ. ಕೆಲವರು ಸೀತಾಫಲ ಗಿಡವನ್ನು ಸಹ ನೆಡುತ್ತಾರೆ. ಧಾರ್ಮಿಕವಾಗಿ ಲಕ್ಷ್ಮಿ ದೇವಿಯ ಪೂಜೆಯಲ್ಲಿ ಸೀತಾಫಲವನ್ನು ಬಳಸಲಾಗುತ್ತದೆ ಹಾಗೂ ಈ ಹಣ್ಣನ್ನು ದೇವಿಗೆ ಅರ್ಪಿಸುವುದರಿಂದ ಬಡತನ ದೂರವಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದಾಗಿ ಪೂಜೆಗೆ ಬಳಕೆಯಾಗುವ ಈ ಗಿಡವನ್ನು ಮನೆಯ ಮುಂದೆ ಬೆಳೆಸುವುದು ಒಳ್ಳೆಯದು ಎಂದು ಭಾವಿಸಲಾಗುತ್ತದೆ.
ಆರೋಗ್ಯದ ದೃಷ್ಟಿಯಿಂದ ಸೀತಾಫಲವು ದೇಹಕ್ಕೆ ಅತ್ಯಂತ ಒಳ್ಳೆಯದಾಗಿದ್ದರೂ, ವಾಸ್ತು ಪ್ರಕಾರ ಮನೆಯ ಮುಂದೆ ಸೀತಾಫಲ ಮರ ಇರುವುದು ಶುಭಕರವಲ್ಲ ಎಂದು ವಾಸ್ತು ತಜ್ಞರು ತಿಳಿಸುತ್ತಾರೆ. ಮನೆಯ ಎದುರು ಈ ಮರವನ್ನು ನೆಡುವುದರಿಂದ ಆರ್ಥಿಕ ತೊಂದರೆಗಳು ಹೆಚ್ಚಾಗುತ್ತವೆ ಮತ್ತು ಹಲವು ರೀತಿಯ ಕಿರಿಕಿರಿಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ
ಯಾರಾದರೂ ತಮ್ಮ ಮನೆಯ ಮುಂದೆ ಸೀತಾಫಲ ಮರವನ್ನು ನೆಟ್ಟಿದ್ದರೆ, ವಾಸ್ತು ದೋಷದಿಂದ ಪಾರಾಗಲು ತಜ್ಞರು ಕೆಲವು ಸುಲಭ ಪರಿಹಾರಗಳನ್ನು ಸೂಚಿಸುತ್ತಾರೆ. ಮರವನ್ನು ತಕ್ಷಣವೇ ತೆರವುಗೊಳಿಸುವುದು ಒಂದು ಮಾರ್ಗವಾದರೆ, ಒಂದು ವೇಳೆ ಮರವನ್ನು ಕತ್ತರಿಸಲು ಇಷ್ಟವಿಲ್ಲದಿದ್ದರೆ ಅದರ ಪಕ್ಕದಲ್ಲಿಯೇ ಅಶೋಕ ಮರ ಅಥವಾ ನೆಲ್ಲಿಕಾಯಿ ಗಿಡವನ್ನು ನೆಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ