AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಪೂಜಾ ಕೋಣೆಯಲ್ಲಿ ಎಂದಿಗೂ ಈ ವಿಗ್ರಹಗಳನ್ನು ಇಡಬೇಡಿ!

ವಾಸ್ತುಶಾಸ್ತ್ರದ ಪ್ರಕಾರ, ಪೂಜಾ ಕೋಣೆಯು ಮನೆಯ ಅತ್ಯಂತ ಪವಿತ್ರ ಸ್ಥಳ. ಕೆಲವು ದೇವತೆಗಳ ವಿಗ್ರಹಗಳನ್ನು ಒಟ್ಟಿಗೆ ಇಡುವುದು ಶುಭ, ಆದರೆ ಕೆಲವು ಅಶುಭ. ವಿಷ್ಣು ಮತ್ತು ಶಿವಲಿಂಗವನ್ನು ಒಟ್ಟಿಗೆ ಇಡಬಾರದು. ಕಾಳಿ, ಶನಿ, ರಾಹು, ಕೇತುಗಳ ಚಿತ್ರಗಳನ್ನು ಇಡುವುದು ಅಶುಭ. ಸಕಾರಾತ್ಮಕ ಶಕ್ತಿಗಾಗಿ ಸಂತೋಷ ಮತ್ತು ಆಶೀರ್ವಾದದ ಭಂಗಿಯ ವಿಗ್ರಹಗಳನ್ನು ಇಡಬೇಕು ಎಂದು ಸೂಚಿಸಲಾಗಿದೆ.

Vastu Tips: ಪೂಜಾ ಕೋಣೆಯಲ್ಲಿ ಎಂದಿಗೂ ಈ ವಿಗ್ರಹಗಳನ್ನು ಇಡಬೇಡಿ!
Vastu Shastra Pooja Room
ಅಕ್ಷತಾ ವರ್ಕಾಡಿ
|

Updated on: Jul 16, 2025 | 12:42 PM

Share

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪೂಜಾ ಸ್ಥಳವು ಬಹಳ ಮುಖ್ಯ ಹಾಗೂ ಅತ್ಯಂತ ಪವಿತ್ರವಾಗಿದೆ. ಪೂಜಾ ಮನೆಯ ಶುಚಿತ್ವದ ಜೊತೆಗೆ, ಕೆಲವು ವಿಶೇಷ ವಿಷಯಗಳನ್ನು ಅನುಸರಿಸುವುದು ಬಹಳ ಮುಖ್ಯ. ವಾಸ್ತುವಿನಲ್ಲಿ ಪೂಜಾ ಕೋಣೆಯಲ್ಲಿ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಇಡುವ ಬಗ್ಗೆ ಕೆಲವು ನಿಯಮಗಳಿವೆ. ಅವುಗಳನ್ನು ಅನುಸರಿಸುವುದರಿಂದ ಮನೆಯೊಳಗೆ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಕೋಣೆಯಲ್ಲಿ ಶ್ರೀಕೃಷ್ಣ ಮತ್ತು ರಾಧಾ ರಾಣಿಯ ವಿಗ್ರಹಗಳನ್ನು ಒಟ್ಟಿಗೆ ಇಡುವುದು ಶುಭ. ಆದರೆ ಇನ್ನುಳಿದ ಕೆಲವು ದೇವರುಗಳ ವಿಗ್ರಹವನ್ನು ಒಟ್ಟಿಗೆ ಇಡುವುದರಿಂದ ಅಶುಭಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಆದ್ದರಿಂದ ಯಾವ ದೇವರುಗಳ ವಿಗ್ರಹ ಹಾಗೂ ಫೋಟೋಗಳನ್ನು ಒಟ್ಟಿಗೆ ಇಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಇದನ್ನೂ ಓದಿ
Image
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
Image
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
Image
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
Image
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ವಾಸ್ತು ಶಾಸ್ತ್ರದ ಪ್ರಕಾರ, ವಿಷ್ಣು ಮತ್ತು ಶಿವಲಿಂಗವನ್ನು ಪೂಜಾ ಕೋಣೆಯಲ್ಲಿ ಎಂದಿಗೂ ಒಟ್ಟಿಗೆ ಇಡಬಾರದು. ಏಕೆಂದರೆ ಇಬ್ಬರ ಪೂಜಾ ವಿಧಾನವು ವಿಭಿನ್ನವಾಗಿರುತ್ತದೆ. ಆದ್ದರಿಂದ ಒಟ್ಟಿಗೆ ಇಡುವುದರಿಂದ ಶುಭಕ್ಕಿಂತ ಅಶುಭ ಫಲಗಳೇ ಹೆಚ್ಚು. ಇದಲ್ಲದೇ ಪೂಜಾ ಕೋಣೆಯಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ವಿಗ್ರಹಗಳನ್ನು ತಪ್ಪಾಗಿಯಾದರೂ ಒಟ್ಟಿಗೆ ಇಡಬೇಡಿ.

ಇದನ್ನೂ ಓದಿ: ಶಿವ ದೇವಾಲಯದಲ್ಲಿ ಮೂರು ಬಾರಿ ಚಪ್ಪಾಳೆ ತಟ್ಟುವುದೇಕೆ? ಹಿಂದಿನ ಕಾರಣವನ್ನು ತಿಳಿಯಿರಿ

ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಕೋಣೆಯಲ್ಲಿ ಸತ್ತ ಸಂಬಂಧಿಕರ ಫೋಟೋಗಳು ಅಥವಾ ವಿಗ್ರಹಗಳನ್ನು ಇಡಬಾರದು. ಇದಲ್ಲದೇ ಪೂಜಾ ಕೋಣೆಯಲ್ಲಿ ಕಾಳಿ, ಶನಿ ದೇವರು, ರಾಹು ಮತ್ತು ಕೇತುವಿನ ಚಿತ್ರಗಳನ್ನು ಇಡಬೇಡಿ. ಏಕೆಂದರೆ ಈ ಎಲ್ಲಾ ದೇವತೆಗಳು ಉಗ್ರ ಸ್ವಭಾವದವರು. ವಿಶೇಷ ತಾಂತ್ರಿಕ ಆಚರಣೆಗಳ ಮೂಲಕ ಅವರನ್ನು ಪೂಜಿಸಲಾಗುತ್ತದೆ. ಪೂಜಾ ಕೋಣೆಯಲ್ಲಿ ಕೋಪಗೊಂಡ ದೇವತೆಯ ಅಥವಾ ವಿನಾಶದ ದೇವತೆಯ ವಿಗ್ರಹವನ್ನು ಇಡಬಾರದು. ಸಂತೋಷ ಅಥವಾ ಆಶೀರ್ವಾದದ ಭಂಗಿಯನ್ನು ಮಾತ್ರ ಶುಭವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ