AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri: ನವರಾತ್ರಿಯ ನಾಲ್ಕು ಮತ್ತು ಐದನೇಯ ದಿನದ ದೇವಿಯ ಸ್ವರೂಪ ಮತ್ತು ನೈವೇದ್ಯ ಭಕ್ಷ್ಯ ಯಾವುದು?

ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು.

Navratri: ನವರಾತ್ರಿಯ ನಾಲ್ಕು ಮತ್ತು ಐದನೇಯ ದಿನದ ದೇವಿಯ ಸ್ವರೂಪ ಮತ್ತು ನೈವೇದ್ಯ ಭಕ್ಷ್ಯ ಯಾವುದು?
Navratri
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 28, 2022 | 7:52 AM

Share

ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು. ಈಗ ನಾವು ನಾಲ್ಕು ಮತ್ತು ಐದನೇಯ ದಿನದ ಮಹತ್ವವನ್ನು ತಿಳಿಯೋಣ.

ನಾಲ್ಕನೇ ದಿನ – ದುರ್ಗೆಯ “ಶೈಲಜಾ” ಎನ್ನುವ ರೂಪ ಅಥವಾ “ಕೂಷ್ಮಾಂಡಾ” ಎನ್ನುವ ರೂಪದಲ್ಲಿ ಪೂಜಿಸಬೇಕು. ಈ ಸ್ವರೂಪದ ತಾತ್ಪರ್ಯ ಮಹತ್ತರವಾದ ಶಕ್ತಿಯುಳ್ಳ ಭಗವತೀ ಎಂದು. ಈ ರೂಪವನ್ನು

ರಕ್ತವರ್ಣಾಂ ಚತುರ್ಬಾಹುಂ ರಕ್ತವಸ್ತ್ರಾದ್ಯಲಂಕೃತಾಂ |

ಪಾಶಾಮಂಕುಶಾಂ ಮಾತುಲಿಂಗಧರಾಂ ಮೂಷಿಕವಾಹಿನೀಂ ||

ಎಂಬ ಮಂತ್ರದಿಂದ ಧ್ಯಾನಿಸಿ. ಕೆಂಪು ಬಣ್ಣದ ವಸ್ತ್ರವನ್ನು ಇಟ್ಟು ಮತ್ತು ಉಟ್ಟು; ತಾಯಿಗೆ ಇಂದಿನ ದಿನ “ಮಧು ಪ್ರೀತಾ” ಎನ್ನುವರು. ಅಂದರೆ ನವರಾತ್ರಿಯ ನಾಲ್ಕನೇಯ ದಿನದಂದು ಶ್ರೀದೇವಿಗೆ ಮಧು ( ಜೇನುತುಪ್ಪ) ವನ್ನು ನೈವೇದ್ಯ ಮಾಡಬೇಕು. ಈ ದಿನ ಅವಳಿಗೆ ಅದು ಅತ್ಯಂತ ಪ್ರಿಯವಾಗಿರುತ್ತದೆ. ಕೂಷ್ಮಾಂಡದಂತೆ ಇರುವ ನಮ್ಮ ಪಾಪದ ಸಂಗ್ರಹವನ್ನು ನಾಶ ಮಾಡುವ ಶಕ್ತಿಯುಳ್ಳ ಆ ತಾಯಿಯನ್ನು ಇಂದು ಪೂಜಿಸಿವುದರಿಂದ ನಮ್ಮ ಪಾಪವೆಲ್ಲಾ ಕರಗುವುದು.

ಐದನೇಯ ದಿನ – – ನವರಾತ್ರಿಯ ಈ ದಿನ ಅತ್ಯಂತ ಪುಣ್ಯಕಾಲವಾಗಿದೆ. ಈ ದಿನವನ್ನು ಲಲಿತಾಪಂಚಮೀ ಎಂದು ಕರೆಯುವರು. ಈ ಸಲ 30/9/22 ರಂದು ಲಲಿತಾ ಪಂಚಮೀ ಇದೆ. ಇಂದು “ಧೂಮ್ರಹಾ” ಅಥವಾ “ಸ್ಕಂದಮಾತಾ” ಎಂಬ ಹೆಸರಿನಿಂದ ಪೂಜಿಸುವರು. ಧೂಮ್ರಹಾ ಎಂದರೆ ಧೂಮ್ರಾಕ್ಷ ಎಂಬ ರಾಕ್ಷಸನ್ನು ಹನನ ಮಾಡಿದವಳು ಎಂದು ಅರ್ಥ. ಸ್ಕಂದ ಮಾತಾ ಎಂದರೆ ಸುಬ್ರಹ್ಮಣ್ಯನ ತಾಯಿ ಎಂದು. ಈ ಎರಡೂ ರೂಪವೂ ಒಂದೇ ಆಗಿದೆ.

ಈ ದಿನದಂದು ತಾಯಿಗೆ “ದಧ್ಯನ್ನಾಸಕ್ತ ಹೃದಯಾ” ಎಂದು ಕರೆಯುವರು. ಯಾಕೆಂದರೆ ಲಲಿತಾ ಪಂಚಮಿಯಂದು ದಧ್ಯನ್ನ (ಮೊಸರನ್ನವನ್ನು) ವನ್ನು ಮಾಡಿ ಅದನ್ನು ತಾಯಿ ಲಲಿತೆಗೆ ನೈವೇದ್ಯ ಮಾಡಿ ಯಾರು ಪೂಜಿಸುತ್ತಾರೋ ಅವರಿಗೆ ಅವರ ಅಭೀಷ್ಟಸಿದ್ಧಿಸುವುದು ಮತ್ತು ಆ ದಧ್ಯವನ್ನು ಪ್ರಸಾದವಾಗಿ ಮಕ್ಕಳಿಗೆ ನೀಡಿದರೆ ಒಳ್ಳೆಯ ಬುದ್ಧಿಶಕ್ತಿಯೊಂದಿಗೆ ಸದ್ವಿದ್ಯೆಯು ಪ್ರಾಪ್ತವಾಗುವುದು. ಈ ದಿನ ಸಾಯಂಕಾಲ ಸುಮಾರು ಮುಸ್ಸಂಜೆ ವೇಳೆಯಲ್ಲಿ ತುಪ್ಪ ದೀಪವನ್ನು ಬೆಳಗಿಸಿ ಲಲಿತಾ ಸಹಸ್ರನಾಮ ಪಠಿಸಿ ಸಮಸ್ತ ಅಮಂಗಲ ದೂರವಾಗುವುದು. ಹಾಗೆಯೇ –

ಚತುರ್ಭುಜಾಂ ಸುವರ್ಣಾಭಾಂ ಶಂಖಚಕ್ರಗದಾಂಬುಜಾಂ |

ಪಂಚಮ್ಯಾಂ ಪೂಜಯೇತ್ ದೇವೀಂ ಸದಾ ಮಕರವಾಹಿನೀಂ ||

ಎಂಬ ಶ್ಲೋಕವನ್ನು ಹೇಳುತ್ತಾ ಧ್ಯಾನಿಸಿ ಪುಷ್ಪಾರ್ಚನೆ ಮಾಡಿರಿ. ಮತ್ತು ದಧ್ಯನ್ನವನ್ನು ನೈವೇದ್ಯ ಮಾಡಿ ಪೂಜಿಸಿ. ಸತ್ಫಲವು ಪ್ರಾಪ್ತವಾಗುವುದು.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು, kkmanasvi@gamail.com

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್