AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri: ನವರಾತ್ರಿಯ ನಾಲ್ಕು ಮತ್ತು ಐದನೇಯ ದಿನದ ದೇವಿಯ ಸ್ವರೂಪ ಮತ್ತು ನೈವೇದ್ಯ ಭಕ್ಷ್ಯ ಯಾವುದು?

ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು.

Navratri: ನವರಾತ್ರಿಯ ನಾಲ್ಕು ಮತ್ತು ಐದನೇಯ ದಿನದ ದೇವಿಯ ಸ್ವರೂಪ ಮತ್ತು ನೈವೇದ್ಯ ಭಕ್ಷ್ಯ ಯಾವುದು?
Navratri
TV9 Web
| Edited By: |

Updated on: Sep 28, 2022 | 7:52 AM

Share

ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು. ಈಗ ನಾವು ನಾಲ್ಕು ಮತ್ತು ಐದನೇಯ ದಿನದ ಮಹತ್ವವನ್ನು ತಿಳಿಯೋಣ.

ನಾಲ್ಕನೇ ದಿನ – ದುರ್ಗೆಯ “ಶೈಲಜಾ” ಎನ್ನುವ ರೂಪ ಅಥವಾ “ಕೂಷ್ಮಾಂಡಾ” ಎನ್ನುವ ರೂಪದಲ್ಲಿ ಪೂಜಿಸಬೇಕು. ಈ ಸ್ವರೂಪದ ತಾತ್ಪರ್ಯ ಮಹತ್ತರವಾದ ಶಕ್ತಿಯುಳ್ಳ ಭಗವತೀ ಎಂದು. ಈ ರೂಪವನ್ನು

ರಕ್ತವರ್ಣಾಂ ಚತುರ್ಬಾಹುಂ ರಕ್ತವಸ್ತ್ರಾದ್ಯಲಂಕೃತಾಂ |

ಪಾಶಾಮಂಕುಶಾಂ ಮಾತುಲಿಂಗಧರಾಂ ಮೂಷಿಕವಾಹಿನೀಂ ||

ಎಂಬ ಮಂತ್ರದಿಂದ ಧ್ಯಾನಿಸಿ. ಕೆಂಪು ಬಣ್ಣದ ವಸ್ತ್ರವನ್ನು ಇಟ್ಟು ಮತ್ತು ಉಟ್ಟು; ತಾಯಿಗೆ ಇಂದಿನ ದಿನ “ಮಧು ಪ್ರೀತಾ” ಎನ್ನುವರು. ಅಂದರೆ ನವರಾತ್ರಿಯ ನಾಲ್ಕನೇಯ ದಿನದಂದು ಶ್ರೀದೇವಿಗೆ ಮಧು ( ಜೇನುತುಪ್ಪ) ವನ್ನು ನೈವೇದ್ಯ ಮಾಡಬೇಕು. ಈ ದಿನ ಅವಳಿಗೆ ಅದು ಅತ್ಯಂತ ಪ್ರಿಯವಾಗಿರುತ್ತದೆ. ಕೂಷ್ಮಾಂಡದಂತೆ ಇರುವ ನಮ್ಮ ಪಾಪದ ಸಂಗ್ರಹವನ್ನು ನಾಶ ಮಾಡುವ ಶಕ್ತಿಯುಳ್ಳ ಆ ತಾಯಿಯನ್ನು ಇಂದು ಪೂಜಿಸಿವುದರಿಂದ ನಮ್ಮ ಪಾಪವೆಲ್ಲಾ ಕರಗುವುದು.

ಐದನೇಯ ದಿನ – – ನವರಾತ್ರಿಯ ಈ ದಿನ ಅತ್ಯಂತ ಪುಣ್ಯಕಾಲವಾಗಿದೆ. ಈ ದಿನವನ್ನು ಲಲಿತಾಪಂಚಮೀ ಎಂದು ಕರೆಯುವರು. ಈ ಸಲ 30/9/22 ರಂದು ಲಲಿತಾ ಪಂಚಮೀ ಇದೆ. ಇಂದು “ಧೂಮ್ರಹಾ” ಅಥವಾ “ಸ್ಕಂದಮಾತಾ” ಎಂಬ ಹೆಸರಿನಿಂದ ಪೂಜಿಸುವರು. ಧೂಮ್ರಹಾ ಎಂದರೆ ಧೂಮ್ರಾಕ್ಷ ಎಂಬ ರಾಕ್ಷಸನ್ನು ಹನನ ಮಾಡಿದವಳು ಎಂದು ಅರ್ಥ. ಸ್ಕಂದ ಮಾತಾ ಎಂದರೆ ಸುಬ್ರಹ್ಮಣ್ಯನ ತಾಯಿ ಎಂದು. ಈ ಎರಡೂ ರೂಪವೂ ಒಂದೇ ಆಗಿದೆ.

ಈ ದಿನದಂದು ತಾಯಿಗೆ “ದಧ್ಯನ್ನಾಸಕ್ತ ಹೃದಯಾ” ಎಂದು ಕರೆಯುವರು. ಯಾಕೆಂದರೆ ಲಲಿತಾ ಪಂಚಮಿಯಂದು ದಧ್ಯನ್ನ (ಮೊಸರನ್ನವನ್ನು) ವನ್ನು ಮಾಡಿ ಅದನ್ನು ತಾಯಿ ಲಲಿತೆಗೆ ನೈವೇದ್ಯ ಮಾಡಿ ಯಾರು ಪೂಜಿಸುತ್ತಾರೋ ಅವರಿಗೆ ಅವರ ಅಭೀಷ್ಟಸಿದ್ಧಿಸುವುದು ಮತ್ತು ಆ ದಧ್ಯವನ್ನು ಪ್ರಸಾದವಾಗಿ ಮಕ್ಕಳಿಗೆ ನೀಡಿದರೆ ಒಳ್ಳೆಯ ಬುದ್ಧಿಶಕ್ತಿಯೊಂದಿಗೆ ಸದ್ವಿದ್ಯೆಯು ಪ್ರಾಪ್ತವಾಗುವುದು. ಈ ದಿನ ಸಾಯಂಕಾಲ ಸುಮಾರು ಮುಸ್ಸಂಜೆ ವೇಳೆಯಲ್ಲಿ ತುಪ್ಪ ದೀಪವನ್ನು ಬೆಳಗಿಸಿ ಲಲಿತಾ ಸಹಸ್ರನಾಮ ಪಠಿಸಿ ಸಮಸ್ತ ಅಮಂಗಲ ದೂರವಾಗುವುದು. ಹಾಗೆಯೇ –

ಚತುರ್ಭುಜಾಂ ಸುವರ್ಣಾಭಾಂ ಶಂಖಚಕ್ರಗದಾಂಬುಜಾಂ |

ಪಂಚಮ್ಯಾಂ ಪೂಜಯೇತ್ ದೇವೀಂ ಸದಾ ಮಕರವಾಹಿನೀಂ ||

ಎಂಬ ಶ್ಲೋಕವನ್ನು ಹೇಳುತ್ತಾ ಧ್ಯಾನಿಸಿ ಪುಷ್ಪಾರ್ಚನೆ ಮಾಡಿರಿ. ಮತ್ತು ದಧ್ಯನ್ನವನ್ನು ನೈವೇದ್ಯ ಮಾಡಿ ಪೂಜಿಸಿ. ಸತ್ಫಲವು ಪ್ರಾಪ್ತವಾಗುವುದು.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು, kkmanasvi@gamail.com

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ