AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri: ನವರಾತ್ರಿಯ ನಾಲ್ಕು ಮತ್ತು ಐದನೇಯ ದಿನದ ದೇವಿಯ ಸ್ವರೂಪ ಮತ್ತು ನೈವೇದ್ಯ ಭಕ್ಷ್ಯ ಯಾವುದು?

ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು.

Navratri: ನವರಾತ್ರಿಯ ನಾಲ್ಕು ಮತ್ತು ಐದನೇಯ ದಿನದ ದೇವಿಯ ಸ್ವರೂಪ ಮತ್ತು ನೈವೇದ್ಯ ಭಕ್ಷ್ಯ ಯಾವುದು?
Navratri
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 28, 2022 | 7:52 AM

ನವರಾತ್ರಿಯ ಪರ್ವಕಾಲದಲ್ಲಿ ತಾಯಿ ದುರ್ಗೆಯನ್ನು ಅನನ್ಯವಾಗಿ ಪೂಜಿಸಿ ಅದ್ಭುತ ಫಲಗಳನ್ನು ಹೊಂದಿದ ಕಥೆಯನ್ನು ನಾವು ಕೇಳಿರುತ್ತೇವೆ. ಅಂತಹ ಶುಭವನ್ನು ನಾವು ಪಡೆಯಲು ಏನು ಮಾಡಬೇಕು ? ಎನ್ನುವುದಕ್ಕುತ್ತರ ಆಯಾಯ ದಿನದ ವಿಶೇಷ ತಿಳಿದು ಆ ಕ್ರಮದಲ್ಲೇ ಪೂಜಿಸಬೇಕು ಎಂದು. ಈಗ ನಾವು ನಾಲ್ಕು ಮತ್ತು ಐದನೇಯ ದಿನದ ಮಹತ್ವವನ್ನು ತಿಳಿಯೋಣ.

ನಾಲ್ಕನೇ ದಿನ – ದುರ್ಗೆಯ “ಶೈಲಜಾ” ಎನ್ನುವ ರೂಪ ಅಥವಾ “ಕೂಷ್ಮಾಂಡಾ” ಎನ್ನುವ ರೂಪದಲ್ಲಿ ಪೂಜಿಸಬೇಕು. ಈ ಸ್ವರೂಪದ ತಾತ್ಪರ್ಯ ಮಹತ್ತರವಾದ ಶಕ್ತಿಯುಳ್ಳ ಭಗವತೀ ಎಂದು. ಈ ರೂಪವನ್ನು

ರಕ್ತವರ್ಣಾಂ ಚತುರ್ಬಾಹುಂ ರಕ್ತವಸ್ತ್ರಾದ್ಯಲಂಕೃತಾಂ |

ಪಾಶಾಮಂಕುಶಾಂ ಮಾತುಲಿಂಗಧರಾಂ ಮೂಷಿಕವಾಹಿನೀಂ ||

ಎಂಬ ಮಂತ್ರದಿಂದ ಧ್ಯಾನಿಸಿ. ಕೆಂಪು ಬಣ್ಣದ ವಸ್ತ್ರವನ್ನು ಇಟ್ಟು ಮತ್ತು ಉಟ್ಟು; ತಾಯಿಗೆ ಇಂದಿನ ದಿನ “ಮಧು ಪ್ರೀತಾ” ಎನ್ನುವರು. ಅಂದರೆ ನವರಾತ್ರಿಯ ನಾಲ್ಕನೇಯ ದಿನದಂದು ಶ್ರೀದೇವಿಗೆ ಮಧು ( ಜೇನುತುಪ್ಪ) ವನ್ನು ನೈವೇದ್ಯ ಮಾಡಬೇಕು. ಈ ದಿನ ಅವಳಿಗೆ ಅದು ಅತ್ಯಂತ ಪ್ರಿಯವಾಗಿರುತ್ತದೆ. ಕೂಷ್ಮಾಂಡದಂತೆ ಇರುವ ನಮ್ಮ ಪಾಪದ ಸಂಗ್ರಹವನ್ನು ನಾಶ ಮಾಡುವ ಶಕ್ತಿಯುಳ್ಳ ಆ ತಾಯಿಯನ್ನು ಇಂದು ಪೂಜಿಸಿವುದರಿಂದ ನಮ್ಮ ಪಾಪವೆಲ್ಲಾ ಕರಗುವುದು.

ಐದನೇಯ ದಿನ – – ನವರಾತ್ರಿಯ ಈ ದಿನ ಅತ್ಯಂತ ಪುಣ್ಯಕಾಲವಾಗಿದೆ. ಈ ದಿನವನ್ನು ಲಲಿತಾಪಂಚಮೀ ಎಂದು ಕರೆಯುವರು. ಈ ಸಲ 30/9/22 ರಂದು ಲಲಿತಾ ಪಂಚಮೀ ಇದೆ. ಇಂದು “ಧೂಮ್ರಹಾ” ಅಥವಾ “ಸ್ಕಂದಮಾತಾ” ಎಂಬ ಹೆಸರಿನಿಂದ ಪೂಜಿಸುವರು. ಧೂಮ್ರಹಾ ಎಂದರೆ ಧೂಮ್ರಾಕ್ಷ ಎಂಬ ರಾಕ್ಷಸನ್ನು ಹನನ ಮಾಡಿದವಳು ಎಂದು ಅರ್ಥ. ಸ್ಕಂದ ಮಾತಾ ಎಂದರೆ ಸುಬ್ರಹ್ಮಣ್ಯನ ತಾಯಿ ಎಂದು. ಈ ಎರಡೂ ರೂಪವೂ ಒಂದೇ ಆಗಿದೆ.

ಈ ದಿನದಂದು ತಾಯಿಗೆ “ದಧ್ಯನ್ನಾಸಕ್ತ ಹೃದಯಾ” ಎಂದು ಕರೆಯುವರು. ಯಾಕೆಂದರೆ ಲಲಿತಾ ಪಂಚಮಿಯಂದು ದಧ್ಯನ್ನ (ಮೊಸರನ್ನವನ್ನು) ವನ್ನು ಮಾಡಿ ಅದನ್ನು ತಾಯಿ ಲಲಿತೆಗೆ ನೈವೇದ್ಯ ಮಾಡಿ ಯಾರು ಪೂಜಿಸುತ್ತಾರೋ ಅವರಿಗೆ ಅವರ ಅಭೀಷ್ಟಸಿದ್ಧಿಸುವುದು ಮತ್ತು ಆ ದಧ್ಯವನ್ನು ಪ್ರಸಾದವಾಗಿ ಮಕ್ಕಳಿಗೆ ನೀಡಿದರೆ ಒಳ್ಳೆಯ ಬುದ್ಧಿಶಕ್ತಿಯೊಂದಿಗೆ ಸದ್ವಿದ್ಯೆಯು ಪ್ರಾಪ್ತವಾಗುವುದು. ಈ ದಿನ ಸಾಯಂಕಾಲ ಸುಮಾರು ಮುಸ್ಸಂಜೆ ವೇಳೆಯಲ್ಲಿ ತುಪ್ಪ ದೀಪವನ್ನು ಬೆಳಗಿಸಿ ಲಲಿತಾ ಸಹಸ್ರನಾಮ ಪಠಿಸಿ ಸಮಸ್ತ ಅಮಂಗಲ ದೂರವಾಗುವುದು. ಹಾಗೆಯೇ –

ಚತುರ್ಭುಜಾಂ ಸುವರ್ಣಾಭಾಂ ಶಂಖಚಕ್ರಗದಾಂಬುಜಾಂ |

ಪಂಚಮ್ಯಾಂ ಪೂಜಯೇತ್ ದೇವೀಂ ಸದಾ ಮಕರವಾಹಿನೀಂ ||

ಎಂಬ ಶ್ಲೋಕವನ್ನು ಹೇಳುತ್ತಾ ಧ್ಯಾನಿಸಿ ಪುಷ್ಪಾರ್ಚನೆ ಮಾಡಿರಿ. ಮತ್ತು ದಧ್ಯನ್ನವನ್ನು ನೈವೇದ್ಯ ಮಾಡಿ ಪೂಜಿಸಿ. ಸತ್ಫಲವು ಪ್ರಾಪ್ತವಾಗುವುದು.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು, kkmanasvi@gamail.com

ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು