IPL 2025: ನಾವು ಅಲ್ಲೆ ತಪ್ಪು ಮಾಡಿದೆವು; ಸತತ ಸೋಲಿಗೆ ಕಾರಣ ತಿಳಿಸಿದ ಸಿಎಸ್​ಕೆ ಹೆಡ್ ಕೋಚ್

CSK's IPL 2025 Disappointment: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಬಾರಿಯ ಐಪಿಎಲ್ ಪ್ರದರ್ಶನ ಅತ್ಯಂತ ನಿರಾಶಾದಾಯಕವಾಗಿದೆ. ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಮೆಗಾ ಹರಾಜಿನಲ್ಲಿ ತಂಡ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಒಪ್ಪಿಕೊಂಡಿದ್ದಾರೆ. ಆಟಗಾರರ ಕಳಪೆ ಪ್ರದರ್ಶನ ಮತ್ತು ಉತ್ತಮ ಆಟಗಾರರನ್ನು ಖರೀದಿಸಲು ವಿಫಲರಾದದ್ದು ಸೋಲಿಗೆ ಪ್ರಮುಖ ಕಾರಣಗಳು ಎಂದು ಹೇಳಿದ್ದಾರೆ.

IPL 2025: ನಾವು ಅಲ್ಲೆ ತಪ್ಪು ಮಾಡಿದೆವು; ಸತತ ಸೋಲಿಗೆ ಕಾರಣ ತಿಳಿಸಿದ ಸಿಎಸ್​ಕೆ ಹೆಡ್ ಕೋಚ್
Stephen Fleming

Updated on: Apr 26, 2025 | 4:17 PM

ಈ ಬಾರಿಯ ಐಪಿಎಲ್‌ನಲ್ಲಿ (IPL 2025) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. ತಂಡವು ಆಡಿರುವ 9 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದ್ದರೆ, 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಸಿಎಸ್‌ಕೆ (CSK) ತಂಡ ಪ್ಲೇಆಫ್‌ನಿಂದ ಬಹುತೇಕ ಹೊರಬಿದ್ದಿದೆ. ಆದಾಗ್ಯೂ ಧೋನಿ ಪಡೆ ಈಗ ಪ್ಲೇಆಫ್ ತಲುಪಬೇಕಾದರೆ, ಎಲ್ಲಾ ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ, ಅಂದರೆ ಒಂದು ಪವಾಡ ಮಾತ್ರ ಚೆನ್ನೈ ಅನ್ನು ಪ್ಲೇಆಫ್‌ಗೆ ಕೊಂಡೊಯ್ಯಲು ಸಾಧ್ಯ. ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ತವರಿನಲ್ಲಿ ಸೋಲಿನ ನಂತರ, ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Fleming) ತಂಡದ ಈ ಸತತ ಸೋಲುಗಳಿಗೆ ನಿಜವಾದ ಕಾರಣ ಬಹಿರಂಗಪಡಿಸಿದರು.

ಸಿಎಸ್‌ಕೆ ಮಾಡಿದ ತಪ್ಪೇನು?

ಏಪ್ರಿಲ್ 25 ರಂದು ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಈ ಸೀಸನ್‌ನಲ್ಲಿ ಸಿಎಸ್‌ಕೆ ಆಡಿದ 9 ಪಂದ್ಯಗಳಲ್ಲಿ ಇದು 7ನೇ ಸೋಲು. ಈ ಸೋಲಿನ ನಂತರ ಮಾತನಾಡಿದ ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ‘ಮೆಗಾ ಹರಾಜಿನಲ್ಲಿ ಫ್ರಾಂಚೈಸಿ ದೊಡ್ಡ ತಪ್ಪು ಮಾಡಿದೆ ಎಂದು ಒಪ್ಪಿಕೊಂಡರು. ಈ ಸೀಸನ್​ನ ಆರಂಭದಲ್ಲಿ ತಂಡವು ಕೆಲವು ಕೆಲಸಗಳನ್ನು ಸರಿಯಾಗಿ ಮಾಡಲಿಲ್ಲ. ಅಂದಿನಿಂದ, ಪ್ರತಿ ಪಂದ್ಯದಲ್ಲೂ ಕುಸಿತ ಮುಂದುವರೆಯಿತು.

ಪ್ರಸ್ತುತ ಸೀಸನ್‌ನಲ್ಲಿ ಚೆನ್ನೈ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ತವರಿನಲ್ಲಿ ಗೆಲುವಿನೊಂದಿಗೆ ಆರಂಭಿಸಿತು, ಆದರೆ ಆ ನಂತರ ಆಡಿದ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೆಗಾ ಹರಾಜಿನ ಸಮಯದಲ್ಲಿ, ನಾವು ಉತ್ತಮ ಆಟಗಾರರನ್ನು ಖರೀದಿಸಲು ವಿಫಲರಾಗಿದ್ದೇವೆ. ಇದು ನಮ್ಮ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ನಾವು ಪ್ರಯತ್ನಿಸಿದ ಮತ್ತು ಪರೀಕ್ಷಿಸಲ್ಪಟ್ಟ ಆಟಗಾರರನ್ನು ಮಾತ್ರ ನಂಬಿದ್ದೆವು, ಆದರೆ ನಾವು ತಂಡದಲ್ಲಿ ಹೊಸ ಆಟಗಾರರನ್ನು ಸಹ ಸೇರಿಸಿಕೊಳ್ಳಬೇಕಾಗಿತ್ತು ಎಂದು ಅವರು ಹೇಳಿದರು.

IPL 2025: ಐಪಿಎಲ್ ನಡುವೆ ಸಿಎಸ್​ಕೆ ತಂಡದ ಸ್ಟಾರ್ ಆಟಗಾರನ ತಂದೆ ನಿಧನ

ಆಟಗಾರರು ಉತ್ತಮವಾಗಿ ಆಡಲಿಲ್ಲ

ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವಿಜಯ್ ಶಂಕರ್ ಅವರಂತಹ ಬ್ಯಾಟ್ಸ್‌ಮನ್‌ಗಳು ಈ ಸೀಸನ್‌ನಲ್ಲಿ ಬ್ಯಾಟ್‌ನಿಂದ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ, ಇದರಿಂದಾಗಿ ತಂಡವು ತೊಂದರೆ ಅನುಭವಿಸಬೇಕಾಯಿತು. ಮುಂದಿನ ಸೀಸನ್‌ನಲ್ಲಿ ಯುವ ಆಟಗಾರರಾದ ಆಯುಷ್ ಮ್ಹಾತ್ರೆ, ಶೇಖ್ ರಶೀದ್ ಮತ್ತು ಡೆವಾಲ್ಡ್ ಬ್ರೆವಿಸ್ ಉತ್ತಮ ಪ್ರದರ್ಶನ ನೀಡಬಹುದು. ತಂಡವು ಅವರನ್ನು ಭರವಸೆಯಿಂದ ನೋಡುತ್ತಿದೆ. ಇದು ಮಾತ್ರವಲ್ಲದೆ ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ಗಾಯಗೊಂಡಿರುವುದರಿಂದ ತಂಡದ ಬ್ಯಾಟಿಂಗ್ ಕೂಡ ದುರ್ಬಲಗೊಂಡಿದೆ. ನಾವು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಮತ್ತು ಸುಧಾರಿಸಲು ಪ್ರಯತ್ನಿಸುತ್ತೇವೆ. ನಾವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Sat, 26 April 25