AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ವೈಡ್ ನೀಡದ ಅಂಪೈರ್; ಕೆರಳಿ ಕೆಂಡವಾದ ದೀಪಕ್ ಹೂಡಾ! ವಿಡಿಯೋ ನೋಡಿ

Deepak Hooda: ಕಸುನ್ ರಜಿತಾ ಬೌಲ್ ಮಾಡಿದ ಓವರ್‌ನ ಐದನೇ ಎಸೆತವನ್ನು ಆಫ್‌ಸೈಡ್ ಸ್ಟ್ಯಾಂಡ್ ತೆಗೆದುಕೊಂಡು ದೀಪಕ್ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ವೈಡ್ ಲೈನ್ ದಾಟಿ ಕೀಪರ್ ಕೈ ಸೇರಿತು.

IND vs SL: ವೈಡ್ ನೀಡದ ಅಂಪೈರ್; ಕೆರಳಿ ಕೆಂಡವಾದ ದೀಪಕ್ ಹೂಡಾ! ವಿಡಿಯೋ ನೋಡಿ
ಅಂಪೈರ್ ವಿರುದ್ಧ ಕಿಡಿ ಕಾರಿದ ದೀಪಕ್ ಹೂಡಾ
TV9 Web
| Updated By: ಪೃಥ್ವಿಶಂಕರ|

Updated on:Jan 04, 2023 | 1:41 PM

Share

ಮುಂಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (India Vs Sri Lanka) 2 ರನ್‌ಗಳಿಂದ ರೋಚಕ ಜಯ ಸಾಧಿಸಿದೆ. ಭಾರತದ ಗೆಲುವಿನಲ್ಲಿ ಯುವ ಸೆನ್ಸೇಷನ್ ದೀಪಕ್ ಹೂಡಾ (Deepak Hooda) ಪ್ರಮುಖ ಪಾತ್ರ ವಹಿಸಿದ್ದರು. 23 ಎಸೆತಗಳಲ್ಲಿ 41 ರನ್ ಗಳಿಸಿ ಟೀಂ ಇಂಡಿಯಾದ ಬೃಹತ್ ಸ್ಕೋರ್​ಗೆ ನಾಂದಿ ಹಾಡಿದರು. ಅವರ ಇನ್ನಿಂಗ್ಸ್‌ನಲ್ಲಿ ಒಂದು ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಇದಲ್ಲದೆ, ಅವರು ಅಕ್ಷರ್ ಪಟೇಲ್ ಅವರೊಂದಿಗೆ ಅಜೇಯ ಆರನೇ ವಿಕೆಟ್‌ಗೆ ಕೇವಲ 30 ಎಸೆತಗಳಲ್ಲಿ 61 ರನ್ ಕೂಡ ಸೇರಿಸಿದರು. ಈ ಜೊತೆಯಾಟದಿಂದಾಗಿ ಟೀಂ ಇಂಡಿಯಾ (Team India) ಲಂಕಾ ಎದುರು 163 ರನ್‌ಗಳ ಗೌರವಾನ್ವಿತ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಲಂಕಾ ಪಡೆ 160 ರನ್​ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು ಸೋಲಿಗೆ ಕೊರಳೊಡ್ಡಿತು. ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ದೀಪಕ್ ಹೂಡಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಆದರೆ ಪಂದ್ಯದ ನಡುವೆ ಅಂಪೈರ್ ನಿರ್ಣಯಕ್ಕೆ ತಲೆಬಾಗದೆ ಅಂಪೈರ್​ ವಿರುದ್ಧ ಕೂಗಾಡಿರುವ ಹೂಡಾ ಅವರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅಲ್ಪ ರನ್​ಗಳಿಗೆ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಈ ವೇಳೆ ಬ್ಯಾಟಿಂಗ್​ಗೆ ಇಳಿದ ದೀಪಕ್ ಹೂಡಾ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಕ್ರೀಸ್‌ನಲ್ಲಿರುವವರೆಗೂ ಬೌಂಡರಿ, ಸಿಕ್ಸರ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಆದರೆ ಈ ನಡುವೆ ಅಂಪೈರ್ ನಿರ್ಣಯದ ವಿರುದ್ಧ ವಿವೇಚನೆಯನ್ನೂ ಕಳೆದುಕೊಂಡ ಹೂಡಾ ಮೈದಾನದಲ್ಲಿಯೇ ಉಗ್ರರೂಪ ತಾಳಿದರು.

Fact Check: ರಿಷಬ್ ಪಂತ್​ಗೆ ರಕ್ತ ನೀಡಿದ್ರಾ ರೋಹಿತ್ ಶರ್ಮಾ? ಇಲ್ಲಿದೆ ಫ್ಯಾಕ್ಟ್ ಚೆಕ್

ಚೆಂಡು ವೈಡ್ ಲೈನ್ ದಾಟಿ ಕೀಪರ್ ಕೈ ಸೇರಿತು

ವಾಸ್ತವವಾಗಿ ಭಾರತದ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಕಸುನ್ ರಜಿತಾ ಬೌಲ್ ಮಾಡಿದ ಓವರ್‌ನ ಐದನೇ ಎಸೆತವನ್ನು ಆಫ್‌ಸೈಡ್ ಸ್ಟ್ಯಾಂಡ್ ತೆಗೆದುಕೊಂಡು ದೀಪಕ್ ಆಡಲು ಪ್ರಯತ್ನಿಸಿದರು. ಆದರೆ ಚೆಂಡು ವೈಡ್ ಲೈನ್ ದಾಟಿ ಕೀಪರ್ ಕೈ ಸೇರಿತು. ಆದರೆ ಫೀಲ್ಡ್ ಅಂಪೈರ್ ಕೆ.ಎನ್.ಅನಂತಪದ್ಮನಾಭನ್ ಅದನ್ನು ವೈಡ್ ಎಂದು ಪರಿಗಣಿಸಲಿಲ್ಲ. ಇದರಿಂದ ದಿಢೀರ್ ಕೋಪಗೊಂಡ ದೀಪಕ್, ಅಂಪೈರ್‌ ನಿರ್ಧಾರವನ್ನು ಗೇಲಿ ಮಾಡಿದರು. ಅಲ್ಲದೆ ಬ್ಯಾಟ್​ ಸನ್ಹೆಯ ಮೂಲಕ ಐಸಿಸಿ ನಿಯಮದ ಪ್ರಕಾರ ಇದು ವೈಡ್ ಎಂಬುದನ್ನು ಅಂಪೈರ್​ಗೆ ಮನವರಿಕೆ ಮಾಡಲು ದೀಪಕ್ ಯತ್ನಿಸಿದರು. ಆದರೆ ದೀಪಕ್ ಮಾತಿಗೆ ಸೊಪ್ಪು ಹಾಕದ ಅಂಪೈರ್ ತಮ್ಮ ನಿರ್ಣಯಕ್ಕೆ ಬದ್ಧರಾಗಿದ್ದರು.

ದೀಪಕ್ ವರ್ತನೆಗೆ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ

ಹೀಗಾಗಿ ಮತ್ತಷ್ಟು ಕೋಪಗೊಂಡ ದೀಪಕ್ ಇಲ್ಲಿಗೆ ಸುಮ್ಮನಾಗದೆ ಅಂಪೈರ್ ವಿರುದ್ಧ ಸಿಟ್ಟಿಗೆದ್ದರು. ಇದೆಲ್ಲವೂ ಸ್ಟಂಪ್‌ನ ಮೈಕ್‌ನಲ್ಲಿ ರೆಕಾರ್ಡ್​ ಕೂಡ ಆಯಿತು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ದೀಪಕ್ ವರ್ತನೆಗೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟಕ್ಕಷ್ಟೇ ಅಲ್ಲ ಅಂಪೈರ್ ಗಳಿಗೂ ಗೌರವ ಕೊಡುವುದನ್ನು ಕಲಿಯಬೇಕು ಎಂದು ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Wed, 4 January 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ