AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs PBKS IPL Match Result: ಡೆಲ್ಲಿ ದಾಳಿಗೆ ಸುಲಭ ತುತ್ತಾದ ಪಂಜಾಬ್! 11 ಓವರ್​ಗಳಲ್ಲೇ ಗೆದ್ದ ಪಂತ್ ಪಡೆ

DC vs PBKS IPL Match Result: ಐಪಿಎಲ್ 2022 ರಲ್ಲಿ ಇದುವರೆಗಿನ ಅತ್ಯಂತ ಏಕಪಕ್ಷೀಯ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ (DC vs PBKS) ತಂಡವನ್ನು ಬಹಳ ಸುಲಭವಾಗಿ ಸೋಲಿಸಿತು.

DC vs PBKS IPL Match Result: ಡೆಲ್ಲಿ ದಾಳಿಗೆ ಸುಲಭ ತುತ್ತಾದ ಪಂಜಾಬ್! 11 ಓವರ್​ಗಳಲ್ಲೇ ಗೆದ್ದ ಪಂತ್ ಪಡೆ
DC vs PBKS
TV9 Web
| Updated By: ಪೃಥ್ವಿಶಂಕರ|

Updated on:Apr 20, 2022 | 10:52 PM

Share

ಐಪಿಎಲ್ 2022 (IPL 2022)ರಲ್ಲಿ ಇದುವರೆಗಿನ ಏಕಪಕ್ಷೀಯ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ (DC vs PBKS) ತಂಡವನ್ನು ಬಹಳ ಸುಲಭವಾಗಿ ಸೋಲಿಸಿತು. ಬೌಲರ್‌ಗಳ ಬಲದಿಂದ ಪಂಜಾಬ್ ತಂಡವನ್ನು ಕೇವಲ 115 ರನ್‌ಗಳಿಗೆ ಕಟ್ಟಿಹಾಕಿದ ನಂತರ, ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಅವರ ಸ್ಫೋಟಕ ಆರಂಭಿಕ ಜೊತೆಯಾಟದ ಆಧಾರದ ಮೇಲೆ ಡೆಲ್ಲಿ 9 ವಿಕೆಟ್‌ಗಳ ಜಯ ಸಾಧಿಸಿತು. ವಾರ್ನರ್ ಮತ್ತು ಶಾ ((David Warner and Prithvi Shaw)) ಅಂತಹ ಬಿರುಸಿನ ಬ್ಯಾಟಿಂಗ್ ಮಾಡಿದರು, ಇದರಿಂದಾಗಿ ಡೆಲ್ಲಿ ಕೇವಲ 11 ಓವರ್‌ಗಳಲ್ಲಿ ಈ ಗುರಿಯನ್ನು ಸಾಧಿಸಿತು ಮತ್ತು 2 ಅಂಕಗಳನ್ನು ಗಳಿಸಿತು. ಇದು ದೆಹಲಿಗೆ 6 ಪಂದ್ಯಗಳಲ್ಲಿ ಮೂರನೇ ಗೆಲುವು, ಪಂಜಾಬ್​ಗೆ ಏಳು ಪಂದ್ಯಗಳಲ್ಲಿ ನಾಲ್ಕನೇ ಸೋಲು.

ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ, ಪಂಜಾಬ್ ತನ್ನ ಎಲ್ಲಾ ತಂತ್ರದೊಂದಿಗೆ ಕಣಕ್ಕಿಳಿದಿತ್ತು. ತಂಡದ ಪರವಾಗಿ ನಾಯಕ ಮಯಾಂಕ್ ಅಗರ್ವಾಲ್ ಗಾಯದ ಸಮಸ್ಯೆಯಿಂದ ಗುಣಮುಖರಾಗಿ ತಂಡಕ್ಕೆ ಎಂಟ್ರಿಕೊಟ್ಟಿದ್ದರು. ಅದೇ ಸಮಯದಲ್ಲಿ, ಕೊರೊನಾ ವೈರಸ್‌ನಿಂದಾಗಿ ಮಿಚೆಲ್ ಮಾರ್ಷ್ ಇಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಆಡಬೇಕಾಯಿತು. ಇದರ ಹೊರತಾಗಿಯೂ, ದೆಹಲಿ ತಂಡವು ಪಂಜಾಬ್‌ಗೆ ಸೋಲಿನ ರುಚಿ ತೋರಿಸಿತು.

ಪಂದ್ಯ ಹೀಗಿತ್ತು ಡೆಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮಯಾಂಕ್ ಅಗರ್ವಾಲ್ ಮೊದಲ 3 ಓವರ್‌ಗಳಲ್ಲಿ ತ್ವರಿತ ಆರಂಭವನ್ನು ನೀಡಿದರು. ಆದರೆ ನಂತರದ ನಾಲ್ಕನೇ ಓವರ್‌ನಲ್ಲಿ ಅರೆಕಾಲಿಕ ಸ್ಪಿನ್ನರ್ ಲಲಿತ್ ಯಾದವ್ ಶಿಖರ್ ಧವನ್ ವಿಕೆಟ್ ಪಡೆಯುವ ಮೂಲಕ ಮೊದಲ ಹೊಡೆತ ನೀಡಿದರು. ಇಲ್ಲಿಂದ ಪಂಜಾಬ್​ನ ಇನ್ನಿಂಗ್ಸ್ ಹೀನಾಯವಾಗಿ ತತ್ತರಿಸಿತು. ಮುಂದಿನ 18 ಎಸೆತಗಳಲ್ಲಿ ಅಗ್ರ ಕ್ರಮಾಂಕದ ಉಳಿದ 3 ಬ್ಯಾಟ್ಸ್​ಮನ್​ಗಳೂ ಔಟಾದರು. ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್​ನಲ್ಲಿ ಮಯಾಂಕ್ ಔಟಾದರೆ, ಅಕ್ಷರ್ ಪಟೇಲ್ ದೊಡ್ಡ ಹೊಡೆತ ನೀಡಿದರು. ಅಪಾಯಕಾರಿ ಫಾರ್ಮ್​ನಲ್ಲಿದ್ದ ಲಿಯಾಮ್ ಲಿವಿಂಗ್​ಸ್ಟನ್ ಅವರನ್ನು ಎಡಗೈ ಸ್ಪಿನ್ನರ್ ಬಲೆಗೆ ಬಿಳಿಸಿದರು. ಇವರೊಂದಿಗೆ ಜಾನಿ ಬೈರ್‌ಸ್ಟೋ ಮತ್ತೆ ವಿಫಲರಾದರು.

ಕೇವಲ 6.4 ಓವರ್​ಗಳಲ್ಲಿ 54 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ವೇಗವಾಗಿ ರನ್ ಗಳಿಸಲು ಆರಂಭಿಸಿದ ಪಂಜಾಬ್ ತಂಡವನ್ನು ವಿಕೆಟ್ ಕೀಪರ್ ಜಿತೇಶ್ ಶರ್ಮಾ ನಿಭಾಯಿಸಲು ಯತ್ನಿಸಿದರು. ಅವರು ತಂಡವನ್ನು 85 ರನ್‌ಗಳಿಗೆ ಕೊಂಡೊಯ್ದರು, ಆದರೆ 13 ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಅವರನ್ನು ಎಲ್‌ಬಿಡಬ್ಲ್ಯೂ ಮಾಡಿದರು. ಇಲ್ಲಿಂದ ಪಂಜಾಬ್ ತಂಡದ ಪತನ ಮತ್ತೆ ಪ್ರಾರಂಭವಾಯಿತು. ಮುಂದಿನ 7 ರನ್‌ಗಳ ಒಳಗೆ ಕಗಿಸೊ ರಬಾಡ, ನಾಥನ್ ಎಲ್ಲಿಸ್ ಮತ್ತು ಶಾರುಖ್ ಖಾನ್ ಕೂಡ ವಾಕ್ ಮುಂದುವರಿಸಿದರು. ಕುಲದೀಪ್ ಯಾದವ್ ಒಂದೇ ಓವರ್‌ನಲ್ಲಿ ರಬಾಡ ಮತ್ತು ಎಲ್ಲಿಸ್ ಅವರನ್ನು ಔಟ್ ಮಾಡಿದರು. ಅಂತಿಮವಾಗಿ ರಾಹುಲ್ ಚಹಾರ್ ಮತ್ತು ಅರ್ಷದೀಪ್ ಸಿಂಗ್ ತಂಡವನ್ನು 115 ರನ್‌ಗಳಿಗೆ ಕೊಂಡೊಯ್ದರು. ಇನಿಂಗ್ಸ್​ನ ಕೊನೆಯ ಎಸೆತದಲ್ಲಿ ಪಂಜಾಬ್ ಕೂಡ 10ನೇ ವಿಕೆಟ್ ಕಳೆದುಕೊಂಡಿತು. ದೆಹಲಿ ಪರ ಅಕ್ಷರ್, ಕುಲದೀಪ್, ಖಲೀಲ್ ಮತ್ತು ಲಲಿತ್ ತಲಾ 2 ವಿಕೆಟ್ ಪಡೆದರು.

ಪವರ್‌ಪ್ಲೇಯಲ್ಲಿಯೇ ಪಂದ್ಯ ನಿರ್ಧಾರ ಇದಕ್ಕುತ್ತರವಾಗಿ ಡೆಲ್ಲಿ ಇನ್ನಿಂಗ್ಸ್ ಗೆಲುವಿಗೆ 20ರ ಬದಲಿಗೆ 10 ಓವರ್​ಗಳಷ್ಟೇ ಸಾಕಾಯಿತು. ಸ್ಫೋಟಕ ಆರಂಭಿಕ ಜೋಡಿ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಎಲ್ಲರೂ ನಿರೀಕ್ಷಿಸಿದ ಅದೇ ಶೈಲಿಯಲ್ಲಿ ಪ್ರಾರಂಭಿಸಿದರು. ಇಬ್ಬರೂ ಕೇವಲ 4 ಓವರ್‌ಗಳಲ್ಲಿ ತಂಡವನ್ನು 50 ರನ್‌ಗಳ ಗಡಿ ದಾಟಿಸಿದರು. ಇವರಿಬ್ಬರು ಪವರ್‌ಪ್ಲೇನಲ್ಲಿಯೇ 81 ರನ್‌ಗಳನ್ನು ಬಾರಿಸಿದರು. ಪೃಥ್ವಿ ಶಾ (41, 20 ಎಸೆತ, 7 ಬೌಂಡರಿ, 1 ಸಿಕ್ಸರ್) ಏಳನೇ ಓವರ್​ನಲ್ಲಿ ಔಟಾಗುವ ಮುನ್ನ ವಾರ್ನರ್ ಜತೆ 84 ರನ್ ಜೊತೆಯಾಟ ನಡೆಸಿದರು. ಶಾ ಔಟಾದ ನಂತರವೂ ವಾರ್ನರ್ ದಾಳಿ ನಿಲ್ಲಲಿಲ್ಲ ಮತ್ತು ಕೇವಲ 26 ಎಸೆತಗಳಲ್ಲಿ ಸತತ ಮೂರನೇ ಅರ್ಧಶತಕ ಗಳಿಸಿದರು. ವಾರ್ನರ್ (60, 30 ಎಸೆತ, 10 ಬೌಂಡರಿ, 1 ಸಿಕ್ಸರ್) 11ನೇ ಓವರ್​ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಇದನ್ನೂ ಓದಿ:DC vs PBKS Highlights, IPL 2022: ಪಂಜಾಬ್ ಬ್ಯಾಟರ್​ಗಳ ಪೆವಿಲಿಯನ್ ಪರೇಡ್; ಸುಲಭವಾಗಿ ಗೆದ್ದ ಡೆಲ್ಲಿ

Published On - 10:23 pm, Wed, 20 April 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್