IND vs ENG Test: ಇಂಗ್ಲೆಂಡ್ ಟೆಸ್ಟ್ ಸರಣಿ ಭಾರತದ ಈ 3 ಆಟಗಾರರಿಗೆ ಕೊನೆಯ ಅವಕಾಶ: ಫೇಲ್ ಆದ್ರೆ…
ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಕರುಣ್ ನಾಯರ್, ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ತಮ್ಮನ್ನು ತಾವು ಸಾಬೀತುಪಡಿಸಲು ಬಹುಶಃ ಕೊನೆಯ ಅವಕಾಶ ಆಗಿದೆ. ಈ ಮೂವರು ಆಟಗಾರರು ನಿರೀಕ್ಷೆಯಂತೆ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ಅವರ ಟೆಸ್ಟ್ ವೃತ್ತಿಜೀವನ ಶಾಶ್ವತವಾಗಿ ಕೊನೆಗೊಳ್ಳಬಹುದು.

ಬೆಂಗಳೂರು (ಜೂ. 08): ಜೂನ್ 20 ರಂದು ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಪ್ರಾರಂಭವಾಗುವ ಟೆಸ್ಟ್ ಸರಣಿಯು ಅನೇಕ ಆಟಗಾರರ ವೃತ್ತಿಜೀವನಕ್ಕೆ ನಿರ್ಣಾಯಕವಾಗಬಹುದು. ಈ ಸರಣಿಯಲ್ಲಿ, ಬಿಸಿಸಿಐ ಅನೇಕ ಯುವ ಆಟಗಾರರಿಗೆ ಅವಕಾಶ ನೀಡಿದೆ. ಅದೇ ಸಮಯದಲ್ಲಿ, ಬಹಳ ಸಮಯದ ನಂತರ ಟೀಮ್ ಇಂಡಿಯಾಕ್ಕೆ ಮರಳಿರುವ ಕೆಲವು ಆಟಗಾರರಿದ್ದಾರೆ. ಈ ಹೈ-ವೋಲ್ಟೇಜ್ ಸರಣಿಯಲ್ಲಿ, ಕರುಣ್ ನಾಯರ್, ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ತಮ್ಮನ್ನು ತಾವು ಸಾಬೀತುಪಡಿಸಲು ಬಹುಶಃ ಇದು ಕೊನೆಯ ಅವಕಾಶ ಆಗಿದೆ. ಈ ಮೂವರು ಆಟಗಾರರು ನಿರೀಕ್ಷೆಯಂತೆ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ಅವರ ಟೆಸ್ಟ್ ವೃತ್ತಿಜೀವನ ಶಾಶ್ವತವಾಗಿ ಕೊನೆಗೊಳ್ಳಬಹುದು.
ಕರುಣ್ ನಾಯರ್
ಮೊದಲನೆಯದಾಗಿ, ಕರುಣ್ ನಾಯರ್ ಬಗ್ಗೆ ಹೇಳುವುದಾದರೆ , ಅವರು 2016 ರಲ್ಲಿ ತ್ರಿಶತಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು. ಆದರೆ ಇದಾದ ನಂತರ ಅವರ ಪ್ರದರ್ಶನ ಕ್ಷೀಣಿಸುತ್ತಲೇ ಇತ್ತು. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಅವರಿಗೆ ಮತ್ತೆ ಅವಕಾಶ ಸಿಕ್ಕಿದೆ. ಈಗ ಅವರಿಗೆ ಬಹುತೇಕ 32 ವರ್ಷ ವಯಸ್ಸಾಗಿರುವುದರಿಂದ, ಆಯ್ಕೆದಾರರು ಕೊನೆಯ ಅವಕಾಶ ನೀಡಿದ್ದಾರೆ. ಈ ಸರಣಿಯಲ್ಲಿ ಕರುಣ್ ನಾಯರ್ ಬ್ಯಾಟಿಂಗ್ನಲ್ಲಿ ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗದಿದ್ದರೆ, ಇದು ಅವರ ವೃತ್ತಿ ಜೀವನದ ಕೊನೆಯ ಟೆಸ್ಟ್ ಆಗುವುದು ಖಚಿತ.
WTC ಫೈನಲ್ ನಂತರ ಶಾರ್ದೂಲ್ಗೆ ಅವಕಾಶ
ಶಾರ್ದೂಲ್ ಠಾಕೂರ್ ಬಗ್ಗೆ ಹೇಳುವುದಾದರೆ, ಅವರು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಕೆಲವು ಸ್ಮರಣೀಯ ಇನ್ನಿಂಗ್ಸ್ ಮತ್ತು ಸ್ಪೆಲ್ಗಳನ್ನು ಮಾಡಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಅವರ ಫಾರ್ಮ್ ನಿರಂತರವಾಗಿ ಕುಸಿಯುತ್ತಿದೆ. ಟೀಮ್ ಇಂಡಿಯಾದಿಂದ ಪದೇ ಪದೇ ಹೊರಬೀಳುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಂತರ ಅವರಿಗೆ ಮತ್ತೆ ಅವಕಾಶ ಸಿಕ್ಕಿದೆ, ಆದರೆ ಇಂಗ್ಲೆಂಡ್ ವಿರುದ್ಧ ಅವರು ಪರಿಣಾಮಕಾರಿ ಎಂದು ಸಾಬೀತುಪಡಿಸದಿದ್ದರೆ, ಇದು ಅವರಿಗೆ ಕೊನೆಯ ಟೆಸ್ಟ್ ಆಗಲಿದೆ.
IND vs ENG Test: ಇಂಗ್ಲೆಂಡ್ ವಿರುದ್ಧದ ಟೆಸ್ಟ್ಗು ಮುನ್ನ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ
ಪ್ರಸಿದ್ಧ್ ಕೃಷ್ಣ ಗಾಯದ ಕಾರಣ ವಿಫಲ
ಪ್ರಸಿದ್ಧ್ ಕೃಷ್ಣ ಅವರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ಇತ್ತೀಚೆಗೆ ಸೀಮಿತ ಓವರ್ಗಳಲ್ಲಿ ಅವರು ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ವಿಶೇಷವಾಗಿ ಗಾಯದಿಂದ ಚೇತರಿಸಿಕೊಂಡು ಮರಳಿದ ನಂತರ, ಅವರು ತಮ್ಮ ಲಯ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ಐಪಿಎಲ್ನಲ್ಲಿ ಅವರ ಪ್ರದರ್ಶನ ಉತ್ತಮವಾಗಿದ್ದರೂ, ಕೆಂಪು ಚೆಂಡಿನೊಂದಿಗೆ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಇಂಗ್ಲೆಂಡ್ ವಿರುದ್ಧ ಅವಕಾಶ ಸಿಕ್ಕರೆ ಮತ್ತು ಇದರಲ್ಲಿ ವಿಫಲವಾದರೆ ಪ್ರಸಿದ್ಧ್ ಮುಂದೆ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಕಷ್ಟ.
ಈ ಸರಣಿಯನ್ನು ಈ ಮೂವರು ಆಟಗಾರರಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎಂದು ಕರೆಯಬಹುದು. ಭಾರತೀಯ ಟೆಸ್ಟ್ ತಂಡವು ಯುವ ಆಟಗಾರರಿಂದ ತುಂಬಿದ್ದು, ಸ್ಥಿರ ಪ್ರದರ್ಶನ ನೀಡದ ಆಟಗಾರರಿಗೆ ಇಲ್ಲಿ ಸ್ಥಾನ ಸಿಗುವುದು ಕಷ್ಟ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




