IND vs SL: ಹೆಲ್ಮೆಟ್ ಎಸೆದು, ಅಂಪೈರ್ ಜೊತೆ ವಾಗ್ವಾದ; ಲಂಕಾ ಕ್ರಿಕೆಟಿಗರದ್ದು ಇದೆಂಥಾ ದುರ್ವರ್ತನೆ! ವಿಡಿಯೋ

Virat Kohli: ಕೊಹ್ಲಿ ಮನವಿಯನ್ನು ಪರಿಶೀಲಿಸಿದ ಮೂರನೇ ಅಂಪೈರ್, ಕೊಹ್ಲಿ ನಾಟೌಟ್ ಎಂದು ತೀರ್ಪು ನೀಡಿದರು. ಇದಕ್ಕೆ ಬಲವಾದ ಕಾರಣವೂ ಇತ್ತು. ಏಕೆಂದರೆ, ರಿವ್ಯೂವ್​ನಲ್ಲಿ ಚೆಂಡು ವಿರಾಟ್ ಅವರ ಬ್ಯಾಟ್ ಬಳಿ ಇದ್ದಾಗ ಸ್ನೀಕೋಮೀಟರ್‌ನಲ್ಲಿ ಸ್ವಲ್ಪ ಏರಿಳಿತ ಕಂಡುಬಂತು. ಅಂದರೆ ಚೆಂಡು ಬ್ಯಾಟ್‌ಗೆ ತಾಗಿ ಪ್ಯಾಡ್‌ಗೆ ತಾಗಿದಂತೆ ತೋರುತ್ತಿತ್ತು. ಹೀಗಾಗಿ ಮೂರನೇ ಅಂಪೈರ್‌ಗೆ ಈ ನಿರ್ಧಾರವನ್ನು ಬದಲಾಯಿಸದೆ ಬೇರೆ ದಾರಿ ಇರಲಿಲ್ಲ.

IND vs SL: ಹೆಲ್ಮೆಟ್ ಎಸೆದು, ಅಂಪೈರ್ ಜೊತೆ ವಾಗ್ವಾದ; ಲಂಕಾ ಕ್ರಿಕೆಟಿಗರದ್ದು ಇದೆಂಥಾ ದುರ್ವರ್ತನೆ! ವಿಡಿಯೋ
ವಿರಾಟ್ ಕೊಹ್ಲಿ
Follow us
|

Updated on: Aug 04, 2024 | 9:26 PM

ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿ ಸಾಕಷ್ಟು ರೋಚಕತೆಯಿಂದ ಕೂಡಿದೆ. ರೋಚಕ ಟೈನೊಂದಿಗೆ ಮೊದಲ ಏಕದಿನ ಪಂದ್ಯ ಅಂತ್ಯಗೊಂಡಿದ್ದರೆ, ಇದೀಗ ಎರಡನೇ ಏಕದಿನ ಪಂದ್ಯವೂ ಹಾವು ಏಣಿ ಆಟದಂತೆ ಒಮ್ಮೆ ಲಂಕಾ ಪರ ವಾಲಿದರೆ, ಇನ್ನೊಮ್ಮೆ ಟೀಂ ಇಂಡಿಯಾ ಪರ ವಾಲುತ್ತಿದೆ. ಮೊದಲ ಏಕದಿನ ಪಂದ್ಯದಂತೆಯೇ ಎರಡನೇ ಏಕದಿನ ಪಂದ್ಯದಲ್ಲೂ ಲಂಕಾ ಬೌಲರ್​ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತ ಭಾರತ ಕೂಡ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಕಳಪೆ ಬ್ಯಾಟಿಂಗ್​ನಿಂದಾಗಿ ಸೋಲಿನ ಸುಳಿಗೆ ಸಿಲುಕಿದೆ. ತಂಡದ ಅಗ್ರ ಬ್ಯಾಟಿಂಗ್ ಕ್ರಮಾಂಕ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದೆ. ಇತ್ತ ವಿರಾಟ್ ಕೊಹ್ಲಿ ಕೂಡ ಸಿಕ್ಕ ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದೇ ವೇಳೆ ಕೊಹ್ಲಿ ವಿಕೆಟ್​ಗಾಗಿ ಶ್ರೀಲಂಕಾ ಕ್ರಿಕೆಟಿಗರು ಮೈದಾನದಲ್ಲಿ ಹೈಡ್ರಾಮ ನಡೆಸಿದ್ದು, ಕೆಲ ಸಮಯ ಮೈದಾನದಲ್ಲಿ ಗೊಂದಲದ ವಾತಾವರಣ ಕೂಡ ಸೃಷ್ಟಿಯಾಗಿದೆ.

ಕೊಲಂಬೊದಲ್ಲಿ ನಡೆಯುತ್ತಿರುವ ಸರಣಿಯ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರತಕ್ಕೆ ಗೆಲ್ಲಲು 241 ರನ್​ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ವೇಗದ ಆರಂಭ ನೀಡಿದರು. ಆದರೆ, ರೋಹಿತ್ ತನ್ನ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗದೆ, ಔಟಾದರು. ಅವರ ವಿಕೆಟ್ ನಂತರ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದರು.

ಕೊಹ್ಲಿ ವಿಕೆಟ್​ಗಾಗಿ ಹೈಡ್ರಾಮ

ಕೊಹ್ಲಿ ಬಂದ ತಕ್ಷಣವೇ ಎರಡು ಬೌಂಡರಿ ಬಾರಿಸಿ ಉತ್ತಮ ಆರಂಭ ಪಡೆದುಕೊಂಡರು. ಆದರೆ ಆ ನಂತರವೇ ಮೈದಾನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ವಾಸ್ತವವಾಗಿ ಅಕಿ ಧನಂಜಯ ಬೌಲ್ ಮಾಡಿದ ಓವರ್​ನ ಕೊನೆಯ ಎಸೆತದಲ್ಲಿ ಕೊಹ್ಲಿ ಎಲ್‌ಬಿಡಬ್ಲ್ಯೂ ಆದರು. ಕೂಡಲೇ ಲಂಕಾ ಕ್ರಿಕೆಟಿಗರು ವಿಕೆಟ್​ಗಾಗಿ ಮನವಿ ಮಾಡಿದರು. ಅಂಪೈರ್​ ಕೂಡ ಕೊಹ್ಲಿ ಔಟೆಂದು ತೀರ್ಪು ನೀಡಿದ್ದರು. ಆದರೆ ಅಂಪೈರ್ ನಿರ್ಧಾರದ ವಿರುದ್ಧ ಕೊಹ್ಲಿ ರಿವ್ಯೂ ತೆಗೆದುಕೊಂಡರು. ಆ ಬಳಿಕವೇ ಮೈದಾನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಕೊಹ್ಲಿ ಮನವಿಯನ್ನು ಪರಿಶೀಲಿಸಿದ ಮೂರನೇ ಅಂಪೈರ್, ಕೊಹ್ಲಿ ನಾಟೌಟ್ ಎಂದು ತೀರ್ಪು ನೀಡಿದರು. ಇದಕ್ಕೆ ಬಲವಾದ ಕಾರಣವೂ ಇತ್ತು. ಏಕೆಂದರೆ, ರಿವ್ಯೂವ್​ನಲ್ಲಿ ಚೆಂಡು ವಿರಾಟ್ ಅವರ ಬ್ಯಾಟ್ ಬಳಿ ಇದ್ದಾಗ ಸ್ನೀಕೋಮೀಟರ್‌ನಲ್ಲಿ ಸ್ವಲ್ಪ ಏರಿಳಿತ ಕಂಡುಬಂತು. ಅಂದರೆ ಚೆಂಡು ಬ್ಯಾಟ್‌ಗೆ ತಾಗಿ ಪ್ಯಾಡ್‌ಗೆ ತಾಗಿದಂತೆ ತೋರುತ್ತಿತ್ತು. ಹೀಗಾಗಿ ಮೂರನೇ ಅಂಪೈರ್‌ಗೆ ಈ ನಿರ್ಧಾರವನ್ನು ಬದಲಾಯಿಸದೆ ಬೇರೆ ದಾರಿ ಇರಲಿಲ್ಲ.

ಈ ನಿರ್ಧಾರ ಬಂದ ತಕ್ಷಣ ಸಿಟ್ಟಿಗೆದ್ದ ಶ್ರೀಲಂಕಾ ಆಟಗಾರರು ಅಂಪೈರ್ ಜತೆ ವಾಗ್ವಾದಕ್ಕಿಳಿದರು. ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ತಮ್ಮ ತಲೆಯಿಂದ ಹೆಲ್ಮೆಟ್ ತೆಗೆದು ನೆಲಕ್ಕೆ ಎಸೆದರು. ನಾಯಕ ಚರಿತ್ ಅಸಲಂಕಾ ಕೂಡ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಲು ಆರಂಭಿಸಿದರು. ಶ್ರೀಲಂಕಾದ ಕೋಚ್ ಸನತ್ ಜಯಸೂರ್ಯ ಮೈದಾನದ ಡ್ರೆಸ್ಸಿಂಗ್ ರೂಮ್‌ನಿಂದ ಕೆಳಗಿಳಿದು ಬೌಂಡರಿ ಬಳಿ ಕುಳಿತಿದ್ದ ನಾಲ್ಕನೇ ಅಂಪೈರ್‌ನನ್ನು ಪ್ರಶ್ನಿಸಲು ಆರಂಭಿಸಿದರು.

ಶ್ರೀಲಂಕಾ ಆಟಗಾರರು ಕೋಪಗೊಂಡಿದ್ದು ಏಕೆ?

ಈಗ ಪ್ರಶ್ನೆ ಏನೆಂದರೆ, ಎಲ್ಲವೂ ಸ್ಪಷ್ಟವಾದ ನಂತರವೂ ಶ್ರೀಲಂಕಾ ಆಟಗಾರರು ಏಕೆ ಕೋಪಗೊಂಡರು? ಎಂಬುದು. ವಾಸ್ತವವಾಗಿ, ರಿವ್ಯೂವ್​ನಲ್ಲಿ ಕಂಡಬಂದ ದೃಶ್ಯ ಕೊಂಚ ಗೊಂದಲಮಯವಾಗಿತ್ತು. ಏಕೆಂದರೆ ಸ್ನೀಕೋಮೀಟರ್‌ನಲ್ಲಿ ಏರಿಳಿತ ಕಂಡುಬಂದಾಗ ಚೆಂಡು ಕೊಹ್ಲಿಯ ಬ್ಯಾಟ್‌ಗೆ ಬಹಳ ಹತ್ತಿರದಲ್ಲಿತ್ತು. ಆದರೆ ಒಂದು ಫ್ರೆಮ್ ಮುಂದೆ ಸರಿದಾಗ ಚೆಂಡು ಬ್ಯಾಟ್​ನ ಬಳಿ ಇದ್ದರೂ, ಸ್ನೀಕೋಮೀಟರ್‌ನಲ್ಲಿ ಯಾವುದೇ ಏರಿಳಿತ ಇರಲಿಲ್ಲ. ಇದು ಲಂಕಾ ಆಟಗಾರನನ್ನು ಕೆರಳಿಸಿತು. ಬ್ಯಾಟ್‌ನ ಪಕ್ಕದಲ್ಲಿ ಚೆಂಡು ಇದ್ದರೂ ಸ್ನೀಕೋಮೀಟರ್‌ನಲ್ಲಿ ಏರಿಳಿತ ಇಲ್ಲ. ಹಾಗಿದ್ದರೂ ನಿರ್ಧಾರವನ್ನು ಏಕೆ ಬದಲಾಯಿಸಲಾಯಿತು ಎಂಬ ಪ್ರಶ್ನೆಗಳನ್ನು ಎತ್ತಿ, ತಮ್ಮ ಅಸಮಾಧಾನ ಹೊರಹಾಕಿದರು.

ಆದರೆ, ಇದರ ಲಾಭ ಪಡೆಯಲು ವಿರಾಟ್‌ ಕೊಹ್ಲಿಗೆ ಸಾಧ್ಯವಾಗಲಿಲ್ಲ. ಕೆಲವೇ ಎಸೆತಗಳ ನಂತರ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ವಿರಾಟ್ ಅವರನ್ನು ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಈ ವೇಳೆ ಖಚಿತವಾಗಿ ಔಟಾಗಿರುವುದು ಕೊಹ್ಲಿಗೆ ಗೊತ್ತಾದ ಕಾರಣ ಅವರು ರಿವ್ಯೂ ತೆಗೆದುಕೊಳ್ಳದೇ ಪೆವಿಲಿಯನ್ ಸೇರಿಕೊಂಡರು. ಕೊಹ್ಲಿ ಈ ಪಂದ್ಯದಲ್ಲಿ ಕೇವಲ 19 ರನ್ ಗಳಿಸಿ ಔಟಾದರು. ಕೊನೆಯ ಇನ್ನಿಂಗ್ಸ್‌ನಲ್ಲಿ ಅವರು 23 ರನ್ ಬಾರಿಸಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್