India vs Sri Lanka 2nd T20: 9 ಆಟಗಾರರ ಪದಾರ್ಪಣೆ, ಪಡಿಕ್ಕಲ್-ರುತುರಾಜ್: ಯಾರಿಗೆ ಸಿಗಲಿದೆ ಚಾನ್ಸ್​..?

TV9 Digital Desk

| Edited By: Zahir Yusuf

Updated on: Jul 26, 2021 | 9:42 PM

ಟೀಮ್ ಇಂಡಿಯಾ ಯುವ ಆಟಗಾರರೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಏಕದಿನ ಸರಣಿಯನ್ನು (India vs Sri Lanka) 2-1 ರಿಂದ ವಶಪಡಿಸಿಕೊಂಡಿದೆ. ಇದರ ಬಳಿಕ ಶುರುವಾದ ಟಿ20 (India vs Sri Lanka 2nd T20) ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಮಂಗಳವಾರ (ಜುಲೈ 27) ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಟಿ20 ಸರಣಿ ಕೂಡ ಭಾರತದ ವಶವಾಗಲಿದೆ. […]

India vs Sri Lanka 2nd T20: 9 ಆಟಗಾರರ ಪದಾರ್ಪಣೆ, ಪಡಿಕ್ಕಲ್-ರುತುರಾಜ್: ಯಾರಿಗೆ ಸಿಗಲಿದೆ ಚಾನ್ಸ್​..?
Devdutt padikkal and ruturaj gaikwad

ಟೀಮ್ ಇಂಡಿಯಾ ಯುವ ಆಟಗಾರರೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಏಕದಿನ ಸರಣಿಯನ್ನು (India vs Sri Lanka) 2-1 ರಿಂದ ವಶಪಡಿಸಿಕೊಂಡಿದೆ. ಇದರ ಬಳಿಕ ಶುರುವಾದ ಟಿ20 (India vs Sri Lanka 2nd T20) ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಮಂಗಳವಾರ (ಜುಲೈ 27) ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಟಿ20 ಸರಣಿ ಕೂಡ ಭಾರತದ ವಶವಾಗಲಿದೆ. ಇತ್ತ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ 2ನೇ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ 9 ಆಟಗಾರರ ಪದಾರ್ಪಣೆ ಮಾಡಿದ್ದಾರೆ.  ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಪದಾರ್ಪಣೆ ಮಾಡಿದರೆ, 3ನೇ ಏಕದಿನದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಅವಕಾಶ ಪಡೆದರು. ಹಾಗೆಯೇ ಮೊದಲ ಟಿ20ಯಲ್ಲಿ ಪೃಥ್ವಿ ಶಾ ಹಾಗೂ ವರುಣ್ ಚಕ್ರವರ್ತಿ ಚೊಚ್ಚಲ ಬಾರಿ ಟೀಮ್ ಇಂಡಿಯಾ ಕ್ಯಾಪ್ ಧರಿಸಿದ್ದರು. ಹೀಗೆ 9 ಆಟಗಾರರಿಗೆ ಪದಾರ್ಪಣೆ ಅವಕಾಶ ದೊರೆತರೂ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ರುತುರಾಜ್ ಗಾಯಕ್ವಾಡ್ ಅವರಿಗೆ ಚಾನ್ಸ್​ ಸಿಕ್ಕಿರಲಿಲ್ಲ.

ಅಂದರೆ ಲಂಕಾ ಪ್ರವಾಸ ಕೈಗೊಂಡಿದ್ದ 20 ಸದಸ್ಯರಲ್ಲಿ 18 ಮಂದಿ ಕಣಕ್ಕಿಳಿದಿದ್ದಾರೆ. ಆದರೆ ದೇವದತ್ ಪಡಿಕ್ಕಲ್ ಮತ್ತು ರುತುರಾಜ್ ಗಾಯಕ್ವಾಡ್ ಅವರಿಗೆ ಮಾತ್ರ ಈವರೆಗೆ ಅವಕಾಶ ಸಿಕ್ಕಿಲ್ಲ. ಈ ಇಬ್ಬರು ಆಟಗಾರರು ಆರಂಭಿಕ ಬ್ಯಾಟ್ಸ್​ಮನ್​ಗಳಾಗಿದ್ದು, ಹೀಗಾಗಿಯೇ ಅವಕಾಶ ದೊರೆತಿಲ್ಲ. ಏಕೆಂದರೆ ಪ್ರಸ್ತುತ ತಂಡದಲ್ಲಿರುವ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹೀಗಾಗಿ ಏಕದಿನ ಸರಣಿಯಲ್ಲಿ ಆರಂಭಿಕ ಜೋಡಿಯನ್ನು ಬದಲಿಸಲು ದ್ರಾವಿಡ್ ಮುಂದಾಗಿರಲಿಲ್ಲ. ಇದೀಗ ಮೊದಲ ಟಿ20ಯಲ್ಲಿ ಪೃಥ್ವಿ ಶಾ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ. ಅವರ ಸ್ಥಾನದಲ್ಲಿ ಎಡಗೈ ಬ್ಯಾಟ್ಸ್​ಮನ್ ಪಡಿಕ್ಕಲ್​ಗೆ ಸ್ಥಾನ ನೀಡಬೇಕೆಂಬ ಮಾತುಗಳು ಕೇಳಿ ಬಂದಿವೆ. ಇತ್ತ ಶಿಖರ್ ಧವನ್ ಕೂಡ ಎಡಗೈ ಬ್ಯಾಟ್ಸ್​ಮನ್ ಆಗಿರುವುದರಿಂದ ಲೆಫ್ಟ್-ರೈಟ್ ಕಾಂಬಿನೇಷನ್​ನಲ್ಲಿ ಬಲೈ ಬ್ಯಾಟ್ಸ್​ಮನ್ ರುತುರಾಜ್ ಕೂಡ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ 2ನೇ ಏಕದಿನ ಪಂದ್ಯದಲ್ಲಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಭರ್ಜರಿ ಫಾರ್ಮ್​ನಲ್ಲಿರುವ ಡಿಡಿಪಿ: 21 ವರ್ಷದ ದೇವದತ್ ಪಡಿಕ್ಕಲ್ ಟಿ20 ಯಲ್ಲಿ 2 ಶತಕ ಬಾರಿಸಿದ್ದಾರೆ. 39 ಟಿ20 ಪಂದ್ಯಗಳನ್ನು (ಐಪಿಎಲ್ ಮತ್ತು ಕರ್ನಾಟಕ ತಂಡಗಳ ಪರ) ಆಡಿರುವ ಪಡಿಕ್ಕಲ್ 43 ಸರಾಸರಿಯಲ್ಲಿ 1466 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಹಿಂದೆ ವಿಜಯ್ ಹಜಾರೆ ಟ್ರೋಫಿಯಲ್ಲಿ 800 ಕ್ಕೂ ಹೆಚ್ಚು ರನ್ ಗಳಿಸಿದ್ದರು.

ಇನ್ನು 24 ವರ್ಷದ ರುತುರಾಜ್ ಗಾಯಕ್ವಾಡ್ ಕೂಡ ಟಿ 20 ಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 46 ಪಂದ್ಯಗಳಲ್ಲಿ 33 ಸರಾಸರಿಯಲ್ಲಿ 1337 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧಶತಕಗಳು ಒಳಗೊಂಡಿವೆ. ಪ್ರಸ್ತುತ ಸಿಎಸ್​ಕೆ ತಂಡದ ಆರಂಭಿಕ ಆಟಗಾರನಾಗಿರುವ ರುತುರಾಜ್ ಈ ಬಾರಿಯ ಐಪಿಎಲ್​ನಲ್ಲೂ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ: Viral Story: ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್

ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?

(India vs Sri Lanka 2nd T20: Devdutt padikkal and ruturaj gaikwad not get a chance)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada