IPL 2022: ಮೆಗಾ ಹರಾಜಿನಲ್ಲಿ ಅಧಿಕ ಹಣಕ್ಕೆ ಹರಾಜಾಗಿದ್ದ ಈ 6 ಆಟಗಾರರ ಪ್ರದರ್ಶನ ಹೇಗಿತ್ತು? ಈ ರಿಪೋರ್ಟ್​ ನೋಡಿ

IPL 2022: ಈ ಸೀಸನ್‌ಗೂ ಮುನ್ನವೇ ಮೆಗಾ ಹರಾಜು ನಡೆದಿದ್ದು, ಹಲವು ಆಟಗಾರರು 10 ಕೋಟಿಗೂ ಹೆಚ್ಚು ಹಣಕ್ಕೆ ಮಾರಾಟವಾಗಿದ್ದರು.

IPL 2022: ಮೆಗಾ ಹರಾಜಿನಲ್ಲಿ ಅಧಿಕ ಹಣಕ್ಕೆ ಹರಾಜಾಗಿದ್ದ ಈ 6 ಆಟಗಾರರ ಪ್ರದರ್ಶನ ಹೇಗಿತ್ತು? ಈ ರಿಪೋರ್ಟ್​ ನೋಡಿ
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಲಿಯಾಮ್ ಲಿವಿಂಗ್ಸ್ಟನ್
Follow us
| Updated By: ಪೃಥ್ವಿಶಂಕರ

Updated on: May 31, 2022 | 7:30 AM

ಐಪಿಎಲ್‌ (IPL)ನ ಪ್ರತಿ ಸೀಸನ್‌ನಲ್ಲಿ, ಯಾವ ಆಟಗಾರ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಾನೆ ಮತ್ತು ಆ ಋತುವಿನಲ್ಲಿ ಆ ಆಟಗಾರ ಹೇಗೆ ಪ್ರದರ್ಶನ ನೀಡುತ್ತಾನೆ ಎಂಬುದನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ. ಐಪಿಎಲ್ 2022 (IPL 2022) ಕೂಡ ಇದಕ್ಕೆ ಭಿನ್ನವಾಗಿರಲಿಲ್ಲ. ಈ ಸೀಸನ್‌ಗೂ ಮುನ್ನವೇ ಮೆಗಾ ಹರಾಜು ನಡೆದಿದ್ದು, ಹಲವು ಆಟಗಾರರು 10 ಕೋಟಿಗೂ ಹೆಚ್ಚು ಹಣಕ್ಕೆ ಮಾರಾಟವಾಗಿದ್ದರು. ಅಲ್ಲದೆ, ಅವರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ದೀಪಕ್ ಚಹಾರ್ ಅವರನ್ನು 14 ಕೋಟಿಗೆ ಖರೀದಿಸಲಾಯಿತು, ಆದರೆ ಅವರು ಗಾಯದ ಕಾರಣದಿಂದ ಹೊರಗುಳಿದಿದ್ದರು. ಆದ್ದರಿಂದ, ಅವರನ್ನು ಹೊರತುಪಡಿಸಿ, ಟಾಪ್ 6 ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರ ಪ್ರದರ್ಶನವನ್ನು ನಾವು ನಿಮಗೆ ಹೇಳಲಿದ್ದೇವೆ.

  1. ಇಶಾನ್ ಕಿಶನ್: ಈ ಬಾರಿಯ ಮೆಗಾ ಹರಾಜಿನಲ್ಲಿ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ಗೆ ಗರಿಷ್ಠ ಮೊತ್ತ ವ್ಯಯಿಸಲಾಗಿದೆ. ಮುಂಬೈ ಇಂಡಿಯನ್ಸ್ ಈ ಬ್ಯಾಟರ್​ನನ್ನು ದಾಖಲೆಯ 15.25 ಕೋಟಿ ರೂ. ಗೆ ಖರೀದಿಸಿತ್ತು. ಆದರೆ, ಇಶಾನ್‌ ಅವರ ಪ್ರದರ್ಶನ ಅಷ್ಟಾಗಿ ಇರಲಿಲ್ಲ. ಅವರು 14 ಇನ್ನಿಂಗ್ಸ್‌ಗಳಲ್ಲಿ 418 ರನ್ ಗಳಿಸಿದರು, ಆದರೆ ಅವರ ಸ್ಟ್ರೈಕ್ ರೇಟ್ ಕೂಡ ಕೇವಲ 120 ಆಗಿತ್ತು. ಅವರು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ, ಅದರ ಫಲಿತಾಂಶವು ಮುಂಬೈನ ಪ್ರದರ್ಶನದಲ್ಲಿ ಪ್ರತಿಫಲಿಸಿತು.
  2. ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅವರನ್ನು ಕೋಲ್ಕತ್ತಾ 12.25 ಕೋಟಿ ರೂ.ಗೆ ಖರೀದಿಸಿ ನಿರೀಕ್ಷೆಯಂತೆಯೇ ನಾಯಕನನ್ನಾಗಿ ಮಾಡಿತು. ಆದರೆ ಶ್ರೇಯಸ್ ಪ್ರರ್ದನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. 14 ಪಂದ್ಯಗಳಲ್ಲಿ, 3 ಅರ್ಧ ಶತಕಗಳೊಂದಿಗೆ, 134 ಸ್ಟ್ರೈಕ್ ರೇಟ್‌ನೊಂದಿಗೆ 401 ರನ್‌ಗಳು ಅವರ ಬ್ಯಾಟ್‌ನಿಂದ ಬಂದವು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಬೆಂಬಲ ಸಿಗಲಿಲ್ಲ. ಅಲ್ಲದೆ, ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
  3. ಲಿಯಾಮ್ ಲಿವಿಂಗ್ಸ್ಟನ್: ಈ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ನ ಲಿವಿಂಗ್‌ಸ್ಟನ್ ಅತಿ ಹೆಚ್ಚು ಬೆಲೆಗೆ ಮಾರಾಟವಾದ ವಿದೇಶಿ ಆಟಗಾರ. ಪಂಜಾಬ್ ಕಿಂಗ್ಸ್ ಅವರನ್ನು 11.50 ಕೋಟಿಗೆ ಖರೀದಿಸಿತು. ಅವರ ಬಗ್ಗೆ ಸಾಕಷ್ಟು ಭರವಸೆ ಇತ್ತು. ಈ ಎಲ್ಲಾ ಭರವಸೆಗಳನ್ನು ಲಿವಿಂಗ್‌ಸ್ಟನ್ ನಿಜ ಮಾಡಿ ತನ್ನ ಮೊದಲ ಪೂರ್ಣ IPL ಋತುವಿನಲ್ಲಿ ಪ್ಯಾನಿಕ್ ಸೃಷ್ಟಿಸಿದರು. ಈ ಇಂಗ್ಲಿಷ್ ಬ್ಯಾಟ್ಸ್‌ಮನ್ 14 ಪಂದ್ಯಗಳಲ್ಲಿ 437 ರನ್ ಗಳಿಸಿದರು, ಅದರಲ್ಲಿ ಅವರ ಸ್ಟ್ರೈಕ್ ರೇಟ್ 182 ಆಗಿತ್ತು. ಅವರು 34 ಸಿಕ್ಸರ್‌ಗಳನ್ನು ಹೊಡೆದರು, ಅದರಲ್ಲಿ ಂದು 117 ಮೀಟರ್ ಉದ್ದದ ಸಿಕ್ಸರ್ ಕೂಡ ಇತ್ತು.
  4. ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್‌ನ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಪೂರನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 10.75 ಕೋಟಿ ರೂಪಾಯಿಗಳಿಗೆ ಖರೀದಿಸಿತು. ಪೂರನ್​ ಕೂಡ ಅದಕ್ಕೆ ತಕ್ಕನಾದ ಉತ್ತಮ ಪ್ರದರ್ಶನ ನೀಡಿದರು. ಪೂರನ್ ಅವರು 13 ಇನ್ನಿಂಗ್ಸ್‌ಗಳಲ್ಲಿ 144 ಸ್ಟ್ರೈಕ್ ರೇಟ್‌ನಲ್ಲಿ 306 ರನ್ ಗಳಿಸಿದರು. ಆದರೆ, ಹೆಚ್ಚಿನ ಪಂದ್ಯಗಳಲ್ಲಿ, ಕೊನೆಯಲ್ಲಿ ತಂಡದ ಜವಾಬ್ದಾರಿ ಅವರ ಮೇಲೆ ಬಂದಿತು.
  5. ಇದನ್ನೂ ಓದಿ
    Image
    IPL 2022: 74 ಪಂದ್ಯಗಳಿಗೆ ಪಿಚ್ ಸಿದ್ಧಪಡಿಸಿದ ಕ್ಯುರೇಟರ್‌ಗಳಿಗೆ ಬಂಪರ್ ಬಹುಮಾನ ಘೋಷಿಸಿದ ಬಿಸಿಸಿಐ!
    Image
    IPL 2022: ಈ ಐಪಿಎಲ್ ಮೂಲಕ ಟೀಂ ಇಂಡಿಯಾಗೆ ಸಿಕ್ಕ ಐವರು ಪ್ರತಿಭಾವಂತ ಬೌಲರ್​ಗಳಿವರು
    Image
    IPL 2022 Final: ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಗುಜರಾತ್ ತಂಡದ ಸಂಭ್ರಮಾಚರಣೆ ಹೇಗಿತ್ತು? ಫೋಟೋ ನೋಡಿ
  6. ಶಾರ್ದೂಲ್ ಠಾಕೂರ್: ದೆಹಲಿ ಕ್ಯಾಪಿಟಲ್ಸ್ ಭಾರತದ ಆಲ್ ರೌಂಡರ್ ಅನ್ನು 10.75 ಕೋಟಿ ರೂ.ಗೆ ಖರೀದಿಸಿತು. ಆದರೆ ಈ ಒಪ್ಪಂದವು ಹೆಚ್ಚು ಯಶಸ್ಸನ್ನು ತರಲು ಸಾಧ್ಯವಾಗಲಿಲ್ಲ. ಶಾರ್ದೂಲ್ 14 ಇನ್ನಿಂಗ್ಸ್‌ಗಳಲ್ಲಿ 138 ಸ್ಟ್ರೈಕ್ ರೇಟ್‌ನಲ್ಲಿ 120 ರನ್ ಗಳಿಸಿದರು, ಇದು ಸಮಂಜಸವೆಂದು ಪರಿಗಣಿಸಬಹುದು, ಆದರೆ ಅವರು ಕೇವಲ 15 ವಿಕೆಟ್‌ಗಳನ್ನು ಪಡೆದರು, ಆದರೆ ಅವರ ಎಕಾನಮಿ ರೇಟ್ 9.78 ಆಗಿತ್ತು.
  7. ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್: RCB ಹಸರಂಗ ಮತ್ತು ಹರ್ಷಲ್‌ಗಾಗಿ 10.75 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ಈ ಇಬ್ಬರೂ ಕೂಡ ಬೆಂಗಳೂರಿಗೆ ಹಣಕ್ಕೆ ತಕ್ಕನಾದ ಪ್ರದರ್ಶನ ನೀಡಿದರು. ಲೆಗ್ ಸ್ಪಿನ್ನರ್ ಹಸರಂಗ ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರ ಎನಿಸಿಕೊಂಡರು. ಅವರು 26 ವಿಕೆಟ್ ಪಡೆದರು. ಆದರೆ, ಅವರು ಬ್ಯಾಟ್‌ನಿಂದ ಯಾವುದೇ ಅದ್ಭುತಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಹರ್ಷಲ್ ಪಟೇಲ್ ಹಿಂದಿನ ಸೀಸನ್‌ನಂತೆ ಯಶಸ್ವಿಯಾಗಲಿಲ್ಲ, ಆದರೂ ಅವರು 19 ವಿಕೆಟ್‌ಗಳನ್ನು ಪಡೆದರು.

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು