AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: RCB ಯಾಕೆ ಬಲಿಷ್ಠ ತಂಡವೆಂದರೆ….!

IPL 2022 RCB: ಪ್ಲೇಯಿಂಗ್ 11 ರೂಪಿಸುವುದಾದರೂ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಶಹಬಾಜ್ ಅಹ್ಮದ್​​ಗೆ ಸ್ಥಾನ ಖಚಿತ.

IPL 2022 Auction: RCB ಯಾಕೆ ಬಲಿಷ್ಠ ತಂಡವೆಂದರೆ....!
IPL 2022 RCB
TV9 Web
| Edited By: |

Updated on: Feb 14, 2022 | 7:33 PM

Share

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿನ ಮೂಲಕ ಆರ್​ಸಿಬಿ ತಂಡವು ಒಟ್ಟು 19 ಆಟಗಾರರನ್ನು ಖರೀದಿಸಿದೆ. ಈ ಮೂಲಕ 22 ಸದಸ್ಯರ ಬಳಗದ ಹೊಸ ತಂಡವನ್ನು ಕಟ್ಟಿದೆ. ಮೇಲ್ನೋಟಕ್ಕೆ ಆರ್​ಸಿಬಿ ಸಾಧಾರಣ ತಂಡವೆಂಬಂತೆ ಭಾಸವಾಗುತ್ತಿದ್ದರೂ, ತಂಡದ ಪ್ಲೇಯಿಂಗ್​ ಇಲೆವೆನ್ ಕಾಂಬಿನೇಷನ್​ನಲ್ಲಿ ಬಲಿಷ್ಠವಾಗಿರಲಿದೆ. ಏಕೆಂದರೆ ಈ ಬಾರಿ ಆರ್​ಸಿಬಿ ತಂಡದಲ್ಲಿರುವ 9 ಆಟಗಾರರು ಈ ಕಳೆದ ಸೀಸನ್​ನಲ್ಲೂ ತಂಡದಲ್ಲಿದ್ದವರೇ ಎಂಬುದು ವಿಶೇಷ. ಇದರಿಂದ ತಂಡದ ಹೊಂದಣಿಕೆಯು ಹೆಚ್ಚಿನ ಸಮತೋಲನದಿಂದ ಕೂಡಿರಲಿದೆ.

ಅದರಂತೆ ವಿರಾಟ್ ಕೊಹ್ಲಿ, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಸುಯಶ್ ಪ್ರಭುದೇಸಾಯಿ…ಇವರೆಲ್ಲರೂ ಕಳೆದ ಎರಡು ಸೀಸನ್​ಗಳಲ್ಲಿ ತಂಡದಲ್ಲಿದ್ದರು. ಹೀಗಾಗಿ ಈ ಆಟಗಾರರ ನಡುವೆ ಹೆಚ್ಚಿನ ಹೊಂದಾಣಿಕೆ ಇರಲಿದೆ. ಹೀಗಾಗಿ ಇಲ್ಲಿ ಯಾರ ಸಾಮರ್ಥ್ಯ ಏನೆಂಬುದು ಕೂಡ ಕೋಚಿಂಗ್ ಸಿಬ್ಬಂದಿಗಳಿಗೂ ಗೊತ್ತಿರುತ್ತದೆ.

ಇನ್ನು ಪ್ಲೇಯಿಂಗ್ 11 ರೂಪಿಸುವುದಾದರೂ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಶಹಬಾಜ್ ಅಹ್ಮದ್​​ಗೆ ಸ್ಥಾನ ಖಚಿತ. ಹಾಗೆಯೇ ಮತ್ತೊಬ್ಬರನ್ನು ಆಯ್ಕೆ ಮಾಡಿದರೆ ಫಿನ್ ಅಲೆನ್ ಅಥವಾ ವನಿಂದು ಹಸರಂಗ ಸ್ಥಾನ ಪಡೆಯಬಹುದು. ಅಂದರೆ ಇಲ್ಲಿ ಪ್ಲೇಯಿಂಗ್ 11 ನಲ್ಲಿ 6 ಮಂದಿ ಈಗಾಗಲೇ ಆರ್​ಸಿಬಿ ತಂಡದಲ್ಲಿ ಇದ್ದವರೇ ಎಂಬುದು ಗಮನಿಸಬೇಕಾದ ಅಂಶ. ಇಲ್ಲಿ ಉಳಿದ 5 ಮಂದಿ ಮಾತ್ರ ಹೊಸಬರು ಬರಲಿದ್ದಾರೆ. ಈ ಐದು ಮಂದಿಯಲ್ಲಿ ಫಾಫ್ ಡುಪ್ಲೆಸಿಸ್​ ಸ್ಥಾನ ಪಡೆಯಬಹುದು.

ಡುಪ್ಲೆಸಿಸ್ ಈಗಾಗಲೇ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಕಾರಣ ತಂಡದಲ್ಲಿ ಬೇಗನೆ ಹೊಂದಿಕೊಳ್ಳಲಿದ್ದಾರೆ. ಹಾಗೆಯೇ ಜೋಶ್ ಹ್ಯಾಝಲ್​ವುಡ್​ ಅವರಿಗೆ ಮ್ಯಾಕ್ಸ್​ವೆಲ್ ಆತ್ಮೀಯ. ಇನ್ನು ಕೊಹ್ಲಿಯನ್ನೂ ಕೂಡ ಹತ್ತಿರದಿಂದ ಬಲ್ಲವರು. ಫಾಫ್ ಹಾಗೂ ಹ್ಯಾಝಲ್​ವುಡ್ ಕೂಡ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಬಹುದು. ಹಾಗೆಯೇ ದಿನೇಶ್ ಕಾರ್ತಿಕ್ ಕೊಹ್ಲಿ ಹಾಗೂ ಟೀಮ್ ಇಂಡಿಯಾದ ಇತರೆ ಆಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಂತೆ ಆರ್​ಸಿಬಿ ಉತ್ತಮ ಹೊಂದಾಣಿಕೆಯ ಪ್ಲೇಯಿಂಗ್ 11 ಅನ್ನು ರೂಪಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಒಂದು ತಂಡದಲ್ಲಿ ಉತ್ತಮ ಆಟಗಾರರಿದ್ದರೆ ಮಾತ್ರ ಸಾಕಾಗುವುದಿಲ್ಲ, ಬದಲಾಗಿ ಹೊಂದಾಣಿಕೆ ಕೂಡ ಇರಬೇಕಾಗುತ್ತದೆ.

ಅಷ್ಟೇ ಯಾಕೆ ಆರ್​ಸಿಬಿ ತಂಡದಲ್ಲಿ 9 ಆಲ್​ರೌಂಡರ್​ಗಳಿದ್ದಾರೆ. ಇವರಲ್ಲಿ ಐವರು ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿದ್ದಾರೆ. ಇಲ್ಲಿ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಮೆಗಾ ಹರಾಜಿನಲ್ಲಿ ತಂಡದ ಹೊಂದಾಣಿಕೆಗೆ ಹೆಚ್ಚಿನ ಒತ್ತು ನೀಡಿದೆ. ಅಷ್ಟೇ ಅಲ್ಲದೆ ಆಯಾ ಕ್ರಮಾಂಕಕ್ಕೆ ಅನುಗುಣವಾಗಿ ಆಟಗಾರರ ಬಿಡ್ಡಿಂಗ್ ನಡೆಸಿರುವುದು ಸ್ಪಷ್ಟ. ಹೀಗಾಗಿ ಆರ್​ಸಿಬಿ ತಂಡವು ಪ್ಲೇಯಿಂಗ್ 11 ಆಯ್ಕೆಯ ಮೂಲಕ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ವಿದೇಶಿ ಬ್ಯಾಟರ್ಸ್​: ಫಾಫ್ ಡು ಪ್ಲೆಸಿಸ್ ಮತ್ತು ಫಿನ್ ಅಲೆನ್

ಭಾರತೀಯ ಬ್ಯಾಟರ್: ವಿರಾಟ್ ಕೊಹ್ಲಿ

ಭಾರತೀಯ ವಿಕೆಟ್ ಕೀಪರ್‌ಗಳು: ಅನುಜ್ ರಾವತ್, ದಿನೇಶ್ ಕಾರ್ತಿಕ್ ಮತ್ತು ಲುವ್ನಿತ್ ಸಿಸೋಡಿಯಾ

ವಿದೇಶಿ ಆಲ್‌ರೌಂಡರ್‌ಗಳು: ಡೇವಿಡ್ ವಿಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶೆರ್ಫೇನ್ ರುದರ್‌ಫೋರ್ಡ್ ಮತ್ತು ವನಿಂದು ಹಸರಂಗ

ಭಾರತದ ಆಲ್‌ರೌಂಡರ್‌ಗಳು: ಅನೀಶ್ವರ್ ಗೌತಮ್, ಹರ್ಷಲ್ ಪಟೇಲ್, ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ

ವಿದೇಶಿ ವೇಗದ ಬೌಲರ್‌ಗಳು: ಜೋಶ್ ಹ್ಯಾಝಲ್‌ವುಡ್, ಜೇಸನ್ ಬೆಹ್ರೆನ್‌ಡಾರ್ಫ್

ಭಾರತದ ವೇಗದ ಬೌಲರ್‌ಗಳು: ಆಕಾಶ್ ದೀಪ್, ಚಮ ಮಿಲಿಂದ್, ಮೊಹಮ್ಮದ್ ಸಿರಾಜ್ ಮತ್ತು ಸಿದ್ಧಾರ್ಥ್ ಕೌಲ್

ಭಾರತದ ಸ್ಪಿನ್ನರ್: ಕರ್ಣ್ ಶರ್ಮಾ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(IPL Auction 2022, RCB analysis)

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ