AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಪಂಜಾಬ್​ ಕಿಂಗ್ಸ್​ಗೆ ಬಿಗ್ ಶಾಕ್; ಸ್ಟಾರ್ ಓಪನರ್​ ಔಟ್! ಮತ್ತಿಬ್ಬರಿಗೆ ಗ್ರೀನ್ ಸಿಗ್ನಲ್

IPL 2023: ಒಂದೆಡೆ, ಜಾನಿ ಬೈರ್‌ಸ್ಟೋಗೆ ಎನ್‌ಒಸಿ ನೀಡದಿದ್ದರೂ ಇಸಿಬಿ ಐಪಿಎಲ್‌ನಲ್ಲಿ ಆಡಲು ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಸ್ಯಾಮ್ ಕರನ್​ಗೆ ಗ್ರೀನ್ ಸಿಗ್ನಲ್ ನೀಡಿದೆ.

IPL 2023: ಪಂಜಾಬ್​ ಕಿಂಗ್ಸ್​ಗೆ ಬಿಗ್ ಶಾಕ್; ಸ್ಟಾರ್ ಓಪನರ್​ ಔಟ್! ಮತ್ತಿಬ್ಬರಿಗೆ ಗ್ರೀನ್ ಸಿಗ್ನಲ್
ಪಂಜಾಬ್​ ಕಿಂಗ್ಸ್ ತಂಡ
ಪೃಥ್ವಿಶಂಕರ
|

Updated on:Mar 23, 2023 | 3:13 PM

Share

ಐಪಿಎಲ್ (IPL 2023) ಆರಂಭಕ್ಕೆ ದಿನಗಣನೆ ಆರಂಭವಾದಂತೆ ಕೆಲವು ಐಪಿಎಲ್ ತಂಡಗಳಿಗೆ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಇಡೀ ಆವೃತ್ತಿಯಿಂದ ಹೊರಬಿದ್ದರೆ, ಇನ್ನು ಕೆಲವು ಆಟಗಾರರು ಇಂಜುರಿಯಿಂದ ಗುಣಮುಖರಾಗಿದ್ದರೂ ಕೂಡ ತಮ್ಮ ಮಂಡಳಿಗಳಿಂದ ಎನ್​ಒಸಿ ಪಡೆಯಲಾಗದೆ ಐಪಿಎಲ್​ಗೆ ಅಲಭ್ಯರಾಗುತ್ತಿದ್ದಾರೆ. ಈಗ ಅಂತಹವರ ಪಟ್ಟಿಗೆ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜಾನಿ ಬೈರ್‌ಸ್ಟೋ (Jonny Bairstow) ಸೇರಿಕೊಂಡಿದ್ದಾರೆ. ಕೆಲವು ತಿಂಗಳುಗಳಿಂದ ಇಂಜುರಿಯಿಂದ ತಂಡದಿಂದ ಹೊರಗುಳಿದಿರುವ ಜಾನಿ ಬೈರ್‌ಸ್ಟೋ ಸದ್ಯ ಇಂಜುರಿಯಿಂದ ಚೇತರಿಸಿಕೊಂಡಿದ್ದಾರೆ. ಆದರೆ ಭವಿಷ್ಯದ ಸರಣಿಯ ಸಲುವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬೈರ್​ಸ್ಟೋಗೆ ಐಪಿಎಲ್ ಆಡಲು ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಜಾನಿ ಬೈರ್‌ಸ್ಟೋ ಭಾಗಶಃ ಐಪಿಎಲ್​ನಿಂದ ಹೊರಬೀಳುವ ಸಾಧ್ಯತೆ ಇದೆ. ಆದರೆ ಇದೇ ಇಂಗ್ಲೆಂಡ್ ಮಂಡಳಿ ಮತ್ತಿಬ್ಬರು ಆಟಗಾರರಾದ ಲಿಯಾಮ್ ಲಿವಿಂಗ್​ಸ್ಟನ್ (Liam Livingstone) ಹಾಗೂ ಐಪಿಎಲ್​ನ ಅತ್ಯಂತ ದುಬಾರಿ ಆಟಗಾರ ಸ್ಯಾಮ್ ಕರನ್​ಗೆ (Sam Curran) ಐಪಿಎಲ್ ಆಡಲು ಗ್ರೀನ್ ಸಿಗ್ನಲ್ ನಿಡಿದೆ.

ವಾಸ್ತವವಾಗಿ, 2022 ರಲ್ಲಿ ಗಾಲ್ಫ್ ಆಡುವಾಗ ಜಾನಿ ಬೈರ್‌ಸ್ಟೋ ಕಾಲು ಮುರಿತಕ್ಕೆ ಒಳಗಾಗಿದ್ದರು. ಹೀಗಾಗಿ ಬೈರ್​ಸ್ಟೋ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಸದ್ಯ ಇಂಜುರಿಯಿಂದ ಚೇತರಿಸಿಕೊಂಡಿರುವ ಬೈರ್​ಸ್ಟೋ ಅಖಾಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಾತ್ರ ಬೈರ್​ಸ್ಟೋಗೆ ಐಪಿಎಲ್ ಆಡಲು ಅನುಮತಿ ನೀಡಿಲ್ಲ. ವಾಸ್ತವವಾಗಿ ಈ ವರ್ಷ ಜೂನ್ 16 ರಿಂದ ಆ್ಯಶಸ್ ಸರಣಿ ಪ್ರಾರಂಭವಾಗುತ್ತಿದೆ. ಹೀಗಾಗಿ ಈ ಸರಣಿಯಲ್ಲಿ ಬೈರ್‌ಸ್ಟೋ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿರುವುದರಿಂದ ಇಸಿಬಿ, ಎನ್‌ಒಸಿ ನೀಡಿಲ್ಲ.

IPL 2023: ಶ್ರೇಯಸ್ ಔಟ್! ಯಾರಿಗೆ ಸಿಗಲಿದೆ ಕೆಕೆಆರ್ ನಾಯಕತ್ವ? ರೇಸ್​ನಲ್ಲಿ 3 ಆಟಗಾರರು

ಲಿವಿಂಗ್‌ಸ್ಟನ್- ಕರನ್​ಗೆ ಗ್ರೀನ್ ಸಿಗ್ನಲ್

ಒಂದೆಡೆ, ಜಾನಿ ಬೈರ್‌ಸ್ಟೋಗೆ ಎನ್‌ಒಸಿ ನೀಡದಿದ್ದರೂ ಇಸಿಬಿ ಐಪಿಎಲ್‌ನಲ್ಲಿ ಆಡಲು ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಸ್ಯಾಮ್ ಕರನ್​ಗೆ ಗ್ರೀನ್ ಸಿಗ್ನಲ್ ನೀಡಿದೆ. ಎಡಗೈ ವೇಗದ ಬೌಲಿಂಗ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಐಪಿಎಲ್-2023 ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 18.5 ಕೋಟಿ ನೀಡಿ ಖರೀದಿಸಿತ್ತು. ಅಲ್ಲದೆ ಸ್ಫೋಟಕ ಬ್ಯಾಟರ್ ಲಿವಿಂಗ್​ಸ್ಟನ್ ಲಭ್ಯತೆಯೂ ಪಂಜಾಬ್​ಗೆ ಕೊಂಚ ನಿರಾಳತೆ ತಂದಿದೆ.

ಡಿಸೆಂಬರ್ 2022 ರಲ್ಲಿ ರಾವಲ್ಪಿಂಡಿ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಇಂಜುರಿಗೊಂಡು ತಂಡದಿಂದ ಹೊರಗುಳಿದಿದ್ದರು. ಆದರೆ ಈಗ ಫಿಟ್ ಆಗಿರುವ ಲಿವಿಂಗ್​ಸ್ಟನ್, ಇತ್ತೀಚೆಗೆ ದುಬೈನಲ್ಲಿ ಕೌಂಟಿ ಕ್ರಿಕೆಟ್ ಕ್ಲಬ್‌ನ ಆಫ್-ಸೀಸನ್ ತರಬೇತಿಗೆ ಹಾಜರಾಗಿದ್ದರು. ಇದೀಗ ಲಿವಿಂಗ್​ಸ್ಟನ್ ಫಿಟ್ ಆಗಿದ್ದು, ಪಂಜಾಬ್ ಶಿಬಿರ ಸೇರಲು ಸಿದ್ಧರಾಗಿದ್ದಾರೆ.

ಪಂಜಾಬ್ ಕಿಂಗ್ಸ್ ಸ್ಕ್ವಾಡ್: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಬಲ್ತೇಜ್ ಸಿಂಗ್, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹರ್, ಸ್ಯಾಮ್ ಕರನ್, ಸಿಕಂದರ್ ರಜಾ, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್, ಮತ್ತು ಮೋಹಿತ್ ರಾಥೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Thu, 23 March 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ