AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ‘ಅಮ್ಮ ಈಗ ಏನ್ ಹೇಳ್ತಿಯಾ’?; ತಾಯಿಯೊಂದಿಗೆ ಯಶ್ ದಯಾಳ್ ಭಾವುಕ ಮಾತು

IPL 2024: ಆರ್​ಸಿಬಿಯನ್ನು ಪ್ಲೇಆಫ್‌ನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ಇದೇ ಯಶ್ ದಯಾಳ್ ಒಂದು ವರ್ಷದ ಹಿಂದೆ ಒಂದು ಓವರ್​ನಲ್ಲಿ ಸತತ 5 ಸಿಕ್ಸರ್ ಹೊಡೆಸಿಕೊಂಡು ತಮ್ಮ ವೃತ್ತಿಜೀವನಕ್ಕೆ ಅಪಾಯ ತಂದುಕೊಂಡಿದ್ದರು. ಆ 5 ಸಿಕ್ಸರ್​​ಗಳ ಬಳಿಕ ಯಶ್ ದಯಾಳ್ ಹಾಗೂ ಅವರ ಕುಟುಂಬ ಅನುಭವಿಸಿದ್ದು ಅಷ್ಟಿಷ್ಟಲ್ಲ.

IPL 2024: ‘ಅಮ್ಮ ಈಗ ಏನ್ ಹೇಳ್ತಿಯಾ’?; ತಾಯಿಯೊಂದಿಗೆ ಯಶ್ ದಯಾಳ್ ಭಾವುಕ ಮಾತು
ಯಶ್ ದಯಾಳ್
ಪೃಥ್ವಿಶಂಕರ
|

Updated on: May 19, 2024 | 10:14 PM

Share

ಯಶ್ ದಯಾಳ್ (Yash Dayal).. ಸದ್ಯ ಐಪಿಎಲ್ (IPL) ಲೋಕದಲ್ಲಿ ಸಖತ್ ಚರ್ಚೆಯಲ್ಲಿರುವ ಹೆಸರಿದು. ಕಳೆದ ಐಪಿಎಲ್​ನಲ್ಲೂ ಇದೇ ಹೆಸರು ವಿಶ್ವ ಕ್ರಿಕೆಟ್​ನಲ್ಲಿ ಸದ್ದು ಮಾಡಿತ್ತು. ಆದರೆ ಕಳೆದ ಬಾರಿ ಯಶ್ ದಯಾಳ್ ಚರ್ಚೆಗೊಳಗಾಗಿದ್ದು, ಅವರ ವೃತ್ತಿಜೀವನಕ್ಕೆ ಅಂತ್ಯಹಾಡುವಂತಿತ್ತು. ಆದರೆ ಈ ಬಾರಿ ಯಶ್ ದಯಾಳ್ ಚರ್ಚೆಗೆ ಬಂದಿರುವುದು ಅವರ ವೃತ್ತಿಬದುಕಿಗೆ ಹೊಸ ಆಯಾಮ ನೀಡಲಿದೆ. ಸಿಎಸ್​ಕೆ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್​ಸಿಬಿಯ (RCB) ಗೆಲುವಿನ ಹೀರೋ ಎನಿಸಿಕೊಂಡಿರುವ ಯಶ್ ದಯಾಳ್, ಧೋನಿ ಹಾಗೂ ರವೀಂದ್ರ ಜಡೇಜಾರಂತಹ ಸ್ಫೋಟಕ ಬ್ಯಾಟರ್​​ಗಳು ಕೊನೆಯ ಓವರ್​ನಲ್ಲಿ 17 ರನ್​ಗಳನ್ನು ಕಲೆಹಾಕದಂತೆ ತಡೆದರು. ಈ ಮೂಲಕ ಆರ್​ಸಿಬಿಯನ್ನು ಪ್ಲೇಆಫ್‌ನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಇದೇ ಯಶ್ ದಯಾಳ್ ಒಂದು ವರ್ಷದ ಹಿಂದೆ ಒಂದು ಓವರ್​ನಲ್ಲಿ ಸತತ 5 ಸಿಕ್ಸರ್ ಹೊಡೆಸಿಕೊಂಡು ತಮ್ಮ ವೃತ್ತಿಜೀವನಕ್ಕೆ ಅಪಾಯ ತಂದುಕೊಂಡಿದ್ದರು. ಆ 5 ಸಿಕ್ಸರ್​​ಗಳ ಬಳಿಕ ಯಶ್ ದಯಾಳ್ ಹಾಗೂ ಅವರ ಕುಟುಂಬ ಅನುಭವಿಸಿದ್ದು ಅಷ್ಟಿಷ್ಟಲ್ಲ.

ಗೆಲುವಿನ ಹೀರೋ ದಯಾಳ್

ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್​ನಲ್ಲಿ ಸಿಎಸ್​ಕೆ ಗೆಲುವಿಗೆ 17 ರನ್​ಗಳ ಅಗತ್ಯವಿತ್ತು. ಈ ವೇಳೆ ಎದುರಿಗಿದಿದ್ದು ಗೇಮ್ ಫಿನಿಶರ್​ಗೆ ಇನ್ನೊಂದು ಹೆಸರೆನಿಸಿಕೊಂಡಿರುವ ಎಂಎಸ್ ಧೋನಿ. ನಿರೀಕ್ಷೆಯಂತೆ ಧೋನಿ ಮೊದಲ ಎಸೆತವನ್ನು ಸಿಕ್ಸರ್​ಗಟ್ಟುವಲ್ಲಿ ಯಶಸ್ವಿಯಾದರು. ಈ ವೇಳೆ ಮತ್ತೊಮ್ಮೆ ಕಳೆದ ವರ್ಷದಂತೆ ಈ ವರ್ಷವೂ ತಂಡದ ಸೋಲಿಗೆ ನಾನು ಕಾರಣನಾಗುವೆನೆಂಬ ಆತಂಕ ದಯಾಳ್ ಮನದಲ್ಲಿ ಮೂಡಿದ್ದು ಉಂಟು. ಆದರೆ ಆ ಬಳಿಕ ಎಚ್ಚೆತ್ತುಕೊಂಡ ದಯಾಳ್ ನಂತರದ ಎಸೆತದಲ್ಲಿ ಧೋನಿ ವಿಕೆಟ್ ಕಬಳಿಸಿದರು. ಉಳಿದ 4 ಎಸೆತಗಳಲ್ಲಿ ಕೇವಲ 1 ರನ್ ನೀಡಿ ಆರ್​ಸಿಬಿಯ ಗೆಲುವಿನ ಹೀರೋ ಎನಿಸಿಕೊಂಡರು.

ತಾಯಿಯೊಂದಿಗೆ ವಿಡಿಯೋ ಕಾಲ್

ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ ಯಶ್ ದಯಾಳ್, ಪಂದ್ಯದ ನಂತರ ತಮ್ಮ ಸಂತಸದ ಕ್ಷಣಗಳನ್ನು ವಿಡಿಯೋ ಕಾಲ್ ಮೂಲಕ ತಮ್ಮ ತಾಯಿಯೊಂದಿಗೆ ಹಂಚಿಕೊಂಡಿದ್ದಾರೆ. ಈ ವೇಳೆ ದಯಾಳ್, ತಮ್ಮ ತಾಯಿಗೆ ‘ಅಮ್ಮ ಇವತ್ತಿನ ನನ್ನ ಪ್ರದರ್ಶನ ಹೇಗಿತ್ತು?’ ಎಂದು ತಮ್ಮ ತಾಯಿಯ ಬಳಿ ಕೇಳಿದ್ದಾರೆ. ವಾಸ್ತವವಾಗಿ ದಯಾಳ್ ಈ ರೀತಿಯಾಗಿ ಅವರ ತಾಯಿಯನ್ನು ಕೇಳಲು ಬಲವಾದ ಕಾರಣವೂ ಇದೆ. ಇಂದಿಗೆ ಸರಿಯಾಗಿ 405 ದಿನಗಳ ಹಿಂದೆ ಗುಜರಾತ್ ಟೈಟಾನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಗೆಲುವಿಗೆ ಕೊನೆಯ ಓವರ್​ನಲ್ಲಿ 29 ರನ್​​ಗಳ ಅಗತ್ಯವಿತ್ತು.

5 ಎಸೆತಗಳಲ್ಲಿ 5 ಸಿಕ್ಸರ್

ಹೀಗಾಗಿ ಎಲ್ಲರೂ ಈ ಪಂದ್ಯವನ್ನು ಗುಜರಾತ್ ಗೆಲ್ಲುತ್ತದೆ ಎಂದು ಭಾವಿಸಿದ್ದರು. ಆದರೆ ಅಲ್ಲಿ ನಡೆದಿದ್ದೆ ಬೇರೆ. ಕೆಕೆಆರ್​ನ ಯುವ ಬ್ಯಾಟರ್ ರಿಂಕು ಸಿಂಗ್, ಯಶ್ ದಯಾಳ್ ಬೌಲ್ ಮಾಡಿದ ಕೊನೆಯ ಓವರ್​ನ 5 ಎಸೆತಗಳಲ್ಲಿ ಸತತ 5 ಸಿಕ್ಸರ್ಗಳನ್ನು ಸಿಡಿಸಿ ತಂಡಕ್ಕೆ ಗೆಲುವ ತಂದುಕೊಟ್ಟಿದ್ದರು. ಇತ್ತ ಗೆಲ್ಲುವ ಪಂದ್ಯದ ಸೋಲಿಗೆ ಕಾರಣರಾಗಿದ್ದ ದಯಾಳ್ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಅಷ್ಟು ಮಾತ್ರವಲ್ಲ ಈ ಪಂದ್ಯದ ನಂತರ ಗುಜರಾತ್ ತಂಡದಿಂದ ಹೊರಬಿದ್ದಿದ್ದ ದಯಾಳ್, ಒಂದೇ ಒಂದು ಪಂದ್ಯವನ್ನು ಆಡಲಿಲ್ಲ.

ಅನಾರೋಗ್ಯಕ್ಕೆ ತುತ್ತಾಗಿದ್ದ ದಯಾಳ್ ತಾಯಿ

ಆ ಐದು ಸಿಕ್ಸರ್​ಗಳು ಯಶ್ ದಯಾಳ್ ವೃತ್ತಿಬದುಕನ್ನು ಎಷ್ಟರಮಟ್ಟಿಗೆ ದುಸ್ಥಿತಿಗೆ ತಳ್ಳಿತ್ತೆಂದರೆ, ಈ ಆಘಾತದಿಂದ ಹೊರಬರಲಾಗದೆ ದಯಾಳ್ ಖಿನ್ನತೆಗೆ ಒಳಗಾದರು. ಇದೇ ಯೋಚನೆಯಲ್ಲಿ ಇದಕ್ಕಿದಂತೆ ತಮ್ಮ ದೇಹದ ತೂಕವನ್ನು ಕಳೆದುಕೊಂಡರು. ಇತ್ತ ಮಗನ ಈ ಸ್ಥಿತಿಯನ್ನು ಕಂಡು ದಯಾಳ್ ಅವರ ಹೆತ್ತವರು ಕೂಡ ಚಿಂತೆಗೊಳಗಾಗಿದ್ದರು. ಅದರಲ್ಲೂ ಮಗನ ವೃತ್ತಿಜೀವನ ಅಂತ್ಯವಾಗುವ ಆತಂಕದಲ್ಲಿ ದಯಾಳ್ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಘಟನೆಯಿಂದ ಹೊರಬರಲು ದಯಾಳ್ ಕುಟುಂಬ ಪಟ್ಟ ಪಾಡು ಅಷ್ಟಿಷ್ಟಲ್ಲ.

ಮರುಜನ್ಮ ನೀಡಿದ ಆರ್​ಸಿಬಿ

ವಾಸ್ತವವಾಗಿ ಕಳೆದ ಆವೃತ್ತಿಯಲ್ಲೂ ದಯಾಳ್ ಪ್ರದರ್ಶನ ಅದ್ಭುತವಾಗಿತ್ತು. ಆದರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ದಯಾಳ್ 5 ಎಸೆತಗಳಲ್ಲಿ 5 ಸಿಕ್ಸರ್ ಹೊಡೆಸಿಕೊಂಡಿದ್ದು, ಸಾಕಷ್ಟು ಹೈಲೇಟ್ ಆಯಿತು. ಇದಾದ ಬಳಿಕ ದಯಾಳ್​ರನ್ನು ಗುಜರಾತ್ ಫ್ರಾಂಚೈಸಿ ತಂಡದಿಂದ ಹೊರಹಾಕಿತ್ತು. ಆ ಬಳಿಕ ದಯಾಳ್​ ಅವರಲ್ಲಿರುವ ಪ್ರತಿಭೆ ಗಮನಿಸಿದ್ದ ಆರ್​ಸಿಬಿ ಫ್ರಾಂಚೈಸಿ ಮಿನಿ ಹರಾಜಿನಲ್ಲಿ ಅವರನ್ನು ಖರೀದಿಸಿತ್ತು. ಇದೀಗ ಆರ್​ಸಿಬಿ ನಂಬಿಕೆಯನ್ನು ಉಳಿಸಿಕೊಂಡಿರುವ ದಯಾಳ್ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ರೂವಾರಿ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ