IPL 2025: ಐಪಿಎಲ್ 2025 ಭವಿಷ್ಯ ಇಂದು ನಿರ್ಧಾರ: ಟೂರ್ನಿ ಮುಂದುವರೆಯುತ್ತ ಅಥವಾ ಅರ್ಧಕ್ಕೆ ನಿಲ್ಲುತ್ತ?
IPL 2025 Suspended: ಬಿಸಿಸಿಐ ಐಪಿಎಲ್ 2025 ಪಂದ್ಯಾವಳಿಯನ್ನು ನಿಲ್ಲಿಸುವ ಅಥವಾ ವೇಳಾಪಟ್ಟಿಯನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದೆ. ಭದ್ರತಾ ಕಾರಣಗಳಿಂದಾಗಿ ಧರ್ಮಶಾಲಾ ಪಂದ್ಯವನ್ನು ನಿಲ್ಲಿಸಲಾಯಿತು. ಆಟಗಾರರನ್ನು ತಕ್ಷಣವೇ ಹೋಟೆಲ್ಗೆ ವಾಪಸ್ ಕಳುಹಿಸಲಾಯಿತು. ಈ ಪ್ರದೇಶದಲ್ಲಿ ವಿಮಾನ ನಿಲ್ದಾಣಗಳು ಮುಚ್ಚಿರುವುದರಿಂದ, ಬಿಸಿಸಿಐ ತಂಡಗಳನ್ನು ರೈಲಿನ ಮೂಲಕ ದೆಹಲಿಗೆ ಸಾಗಿಸಲು ಪ್ರಯತ್ನಿಸುತ್ತಿದೆ.

ಬೆಂಗಳೂರು (ಮೇ. 09): ಬ್ಯಾಕ್ ಔಟ್ ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ 2025 (India Premier League) ಟೂರ್ನಿ ಸಂಕಷ್ಟದಲ್ಲಿದೆ. ನಿನ್ನೆ (ಗುರುವಾರ) ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರಾತ್ರಿ 9:35 ಕ್ಕೆ ನಿಲ್ಲಿಸಲಾಯಿತು. ಈ ಸ್ಥಳವು ಪಠಾಣ್ಕೋಟ್ನಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದೆ. ಪಠಾಣ್ಕೋಟ್ನಲ್ಲಿ ಗಡಿಯಾಚೆಯಿಂದ ವಾಯುದಾಳಿಗಳು ನಡೆದವು. 10.1 ಓವರ್ಗಳ ನಂತರ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರ ನಂತರ, ಐಪಿಎಲ್ 2025 ಪಂದ್ಯಾವಳಿಯ ಭವಿಷ್ಯವನ್ನು ಪರಿಗಣಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಭೆ ನಡೆಸಿತು.
ಐಪಿಎಲ್ ಬಗ್ಗೆ ಇಂದು ಫೈನಲ್ ನಿರ್ಧಾರ:
ಬಿಸಿಸಿಐ ಕೂಡ ಪಂದ್ಯಾವಳಿಯನ್ನು ನಿಲ್ಲಿಸುವ ಅಥವಾ ವೇಳಾಪಟ್ಟಿಯನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದೆ. ಭದ್ರತಾ ಕಾರಣಗಳಿಂದಾಗಿ ಧರ್ಮಶಾಲಾ ಪಂದ್ಯವನ್ನು ನಿಲ್ಲಿಸಲಾಯಿತು. ಆಟಗಾರರನ್ನು ತಕ್ಷಣವೇ ಹೋಟೆಲ್ಗೆ ವಾಪಸ್ ಕಳುಹಿಸಲಾಯಿತು. ಈ ಪ್ರದೇಶದಲ್ಲಿ ವಿಮಾನ ನಿಲ್ದಾಣಗಳು ಮುಚ್ಚಿರುವುದರಿಂದ, ಬಿಸಿಸಿಐ ತಂಡಗಳನ್ನು ರೈಲಿನ ಮೂಲಕ ದೆಹಲಿಗೆ ಸಾಗಿಸಲು ಪ್ರಯತ್ನಿಸುತ್ತಿದೆ. “ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ, ಸರ್ಕಾರದೊಂದಿಗೆ ಸಮಾಲೋಚಿಸುತ್ತಿದ್ದೇವೆ ಮತ್ತು ನಾಳೆ (ಇಂದು) ಐಪಿಎಲ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ. ಪರಿಸ್ಥಿತಿ ದಿನೇ ದಿನೇ ಬದಲಾಗುತ್ತಿದೆ. ನಮಗೆ ಏನು ಹೇಳುತ್ತಾರೋ ಅದನ್ನು ನಾವು ಮಾಡುತ್ತೇವೆ ಮತ್ತು ಎಲ್ಲಾ ಫ್ರಾಂಚೈಸಿಗೆ ತಿಳಿಸುತ್ತೇವೆ. ಈ ಸಮಯದಲ್ಲಿ ನಮ್ಮ ಆದ್ಯತೆ ಎಲ್ಲಾ ಆಟಗಾರರು, ಅಭಿಮಾನಿಗಳು ಮತ್ತು ಫ್ರಾಂಚೈಸಿಯ ಸುರಕ್ಷತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಧರ್ಮಶಾಲಾದಲ್ಲಿ ಪಂದ್ಯವನ್ನು ನಿಲ್ಲಿಸುವ ನಿರ್ಧಾರವನ್ನು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ತೆಗೆದುಕೊಂಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಅವರಿಗೆ ಹಿರಿಯ ಕ್ರಿಕೆಟ್ ಅಧಿಕಾರಿಯಿಂದ ಕರೆ ಬಂತು. ಕರೆಯ ನಂತರ, ಕ್ರೀಡಾಂಗಣದ ಲೈಟ್ಗಳನ್ನು ಆಫ್ ಮಾಡಲಾಯಿತು. ಮೈದಾನದಲ್ಲಿ ಕತ್ತಲೆ ಆವರಿಸಿತು. ಪ್ರೇಕ್ಷಕರನ್ನು ತಕ್ಷಣವೇ ಹೊರಹೋಗುವಂತೆ ಕೇಳಲಾಯಿತು. ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಬೌಂಡರಿಯ ಬಳಿ ಅಭಿಮಾನಿಗಳಿಗೆ ಕ್ರೀಡಾಂಗಣದಿಂದ ಹೊರಹೋಗುವಂತೆ ಸೂಚಿಸುತ್ತಿದ್ದರು. ಎರಡೂ ತಂಡಗಳ ಆಟಗಾರರನ್ನು ಬಸ್ ಹತ್ತಿ ಹೋಟೆಲ್ಗೆ ಹೋಗಲು ಕೇಳಲಾಯಿತು.
LSG vs RCB, IPL 2025: ಇಂದು ಆರ್ಸಿಬಿ- ಲಕ್ನೋ ಪಂದ್ಯ ನಡೆಯುತ್ತ, ಇಲ್ವಾ?, ಇಲ್ಲಿದೆ ನೋಡಿ ಮಾಹಿತಿ
ಆಟಗಾರರು ಪ್ಯಾಡ್ ಧರಿಸಿ ಹೋಟೆಲ್ ತಲುಪಿದರು:
ಆಟಗಾರರನ್ನು ಎಷ್ಟು ಅವಸರದಲ್ಲಿ ಸ್ಥಳಾಂತರಿಸಲಾಯಿತೆಂದರೆ, ಅನೇಕರು ಪ್ಯಾಡ್ಗಳನ್ನು ಧರಿಸಿ ಹೋಟೆಲ್ಗೆ ತಲುಪಿದರು. ಹತ್ತಿರದ ಪಠಾಣ್ಕೋಟ್ನಲ್ಲಿ ನಡೆದ ದಾಳಿಯ ಬಗ್ಗೆ ತಮಗೆ ತಿಳಿಸಲಾಗಿತ್ತು ಎಂದು ಒರ್ವ ಆಟಗಾರ ಹೇಳಿದ್ದಾರೆ. ಅವರನ್ನು ತಕ್ಷಣ ಹೋಟೆಲ್ಗೆ ಹಿಂತಿರುಗಲು ಕೇಳಲಾಯಿತು. ಪಂಜಾಬ್ ತಂಡದ ಬಸ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಕುಳಿತಿದ್ದರು. ಆ ಜಾಗ ತುಂಬಾ ಜನದಟ್ಟಣೆಯಿಂದ ಕೂಡಿತ್ತು. ವಿದೇಶಿ ಆಟಗಾರರು ಚಿಂತಿತರಾಗಿದ್ದರು. ಅವರಲ್ಲಿ ಹಲವರು ಮನೆಗೆ ಹಿಂತಿರುಗಲು ಬಯಸಿದ್ದರಂತೆ.
ಈ ಪ್ರದೇಶದಲ್ಲಿ ವಿಮಾನ ನಿಲ್ದಾಣ ಮುಚ್ಚಿದ ಕಾರಣ, ಬಿಸಿಸಿಐ ಮತ್ತೊಂದು ಯೋಜನೆಯನ್ನು ರೂಪಿಸುತ್ತಿದೆ. ತಂಡಗಳನ್ನು ರೈಲಿನ ಮೂಲಕ ದೆಹಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಶುಕ್ಲಾ ಹೇಳಿದರು. ಎಲ್ಲರನ್ನೂ ಸುರಕ್ಷಿತವಾಗಿಡಲು ಬಿಸಿಸಿಐ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಫ್ರಾಂಚೈಸಿಗಳು ವಿದೇಶಿ ಆಟಗಾರರಿಗೆ ಪರಿಸ್ಥಿತಿಯ ಬಗ್ಗೆ ತಿಳಿಸುತ್ತಿವೆ ಎಂದು ತಿಳಿದುಬಂದಿದೆ. ಅವರು ಹೋಗಲು ಬಯಸಿದರೆ, ಅವರ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದು ಅವರಿಗೆ ಭರವಸೆ ನೀಡಲಾಗಿದೆ. ಬಿಸಿಸಿಐ ಇತರ ಮಂಡಳಿಗಳಿಗೂ ಪರಿಸ್ಥಿತಿಯ ಬಗ್ಗೆ ತಿಳಿಸಲಿದೆ. ಅವರು ತಮ್ಮ ಆಟಗಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.
ಇದಕ್ಕೂ ಮೊದಲು, ಜೈಪುರದ SMS ಕ್ರೀಡಾಂಗಣಕ್ಕೆ ಒಂದು ವಾರದ ನಂತರ ನಡೆಯಲಿರುವ ಪಂದ್ಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಎಫ್ಐಆರ್ ದಾಖಲಿಸಲಾಗಿದೆ ಎಂದು ಜೈಪುರ ನಗರ ಡಿಸಿಪಿ ದಕ್ಷಿಣ ಬಲರಾಮ್ ತಿಳಿಸಿದ್ದಾರೆ. ಪೊಲೀಸರು ಇಮೇಲ್ ಕಳುಹಿಸಿದವರನ್ನು ಹುಡುಕುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ