IPL 2025: ‘ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು’; ಸೋಲಿಗೆ ಇವರೇ ನೇರ ಹೊಣೆ ಎಂದ ರಿಯಾನ್ ಪರಾಗ್

IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿದೆ. ಪಂದ್ಯದ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಈ ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಕಾರಣ ಎಂದಿದ್ದಾರೆ.

IPL 2025: ‘ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು’; ಸೋಲಿಗೆ ಇವರೇ ನೇರ ಹೊಣೆ ಎಂದ ರಿಯಾನ್ ಪರಾಗ್
Riyan Parag

Updated on: Apr 25, 2025 | 7:08 AM

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 (IPL 2025) ರ 42 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ರಾಜಸ್ಥಾನ್ ರಾಯಲ್ಸ್ (RCB vs RR) ತಂಡವನ್ನು 11 ರನ್​ಗಳಿಂದ ಮಣಿಸಿ ಲೀಗ್​ನಲ್ಲಿ 6ನೇ ಗೆಲುವು ದಾಖಲಿಸಿತು. ಇದಕ್ಕಿಂತ ಮುಖ್ಯವಾಗಿ ತನ್ನ ತವರು ನೆಲದಲ್ಲಿ ಮೊದಲ ಗೆಲುವು ದಾಖಲಿಸಿದ ರಜತ್ ಪಡೆ, ಸತತ ಸೋಲುಗಳ ಸರಣಿಗೆ ಬ್ರೇಕ್ ಹಾಕಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​​ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 205 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ಕೂಡ ಬಲಿಷ್ಠ ಆರಂಭವನ್ನು ಪಡೆಯಿತ್ತಾದರೂ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳ ಕಳಪೆ ಬ್ಯಾಟಿಂಗ್‌ ಹಾಗೂ ಆರ್​ಸಿಬಿಯ ಕರಾರುವಕ್ಕಾದ ದಾಳಿಯಿಂದ ಮತ್ತೊಂದು ಸೋಲಿಗೆ ಕೊರಳೊಡ್ಡಿತು. ಪಂದ್ಯದ ಬಳಿಕ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ (Riyan Parag ) ಕೂಡ ಇದನ್ನೇ ಒತ್ತಿ ಹೇಳಿದರು.

ನಮ್ಮದು ಪವರ್​ಲೆಸ್ ಬ್ಯಾಟಿಂಗ್ ಎಂದ ಪರಾಗ್

ಪಂದ್ಯದ ಸೋಲಿನ ನಂತರ ಪಂದ್ಯ ಪ್ರಸ್ತುತಿಯಲ್ಲಿ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು, ‘ನಾವು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆವು. ಈ ಪಿಚ್​ನಲ್ಲಿ 210 ರಿಂದ 215 ರನ್‌ ಕಲೆಹಾಕಬಹುದು ಎಂದು ನಾವು ಭಾವಿಸಿದ್ದೇವು. ಆದರೆ ನಾವು ಆರ್‌ಸಿಬಿಯನ್ನು 205 ರನ್​​ಗಳಿಗೆ ಕಟ್ಟಿಹಾಕಿದೆವು. ಈ ಗುರಿ ಬೆನ್ನಟ್ಟಿದಾಗ ಪಂದ್ಯದ ಮೊದಲಾರ್ಧದಲ್ಲಿ ನಾವು ಉತ್ತಮ ಸ್ಥಾನದಲ್ಲಿದ್ದೆವು. ಆದರೆ ಆ ನಂತರ ನಮ್ಮ ಬ್ಯಾಟಿಂಗ್‌ ಹಳಿತಪ್ಪಿತು. ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ವಿಶೇಷವಾಗಿ ಸ್ಪಿನ್ ಬೌಲರ್‌ಗಳ ವಿರುದ್ಧ, ನಾವು ಆಕ್ರಮಣಶೀಲತೆಯನ್ನು ತೋರಿಸಲಿಲ್ಲ’ ಎಂದರು.

ಮಾನಸಿಕ ಅಂಶವೂ ಮುಖ್ಯ

ಇನ್ನು ಮಧ್ಯಮ ಕ್ರಮಾಂಕದ ವೈಫಲ್ಯ ಮಾನಸಿಕ ಒತ್ತಡದಿಂದಾಗಿ ಸಂಭವಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಾಗ್, ‘ಹೌದು, ಮಾನಸಿಕ ಅಂಶವೂ ಮುಖ್ಯವಾಗಿದೆ, ಆದರೆ ನಮ್ಮ ಕೋಚ್ ಮತ್ತು ಸಹಾಯಕ ಸಿಬ್ಬಂದಿ ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಈಗ ಆ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸುವುದು ಮತ್ತು ಮುಕ್ತವಾಗಿ ಆಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಪಂದ್ಯಾವಳಿಯಲ್ಲಿ, ನೀವು ಒಂದು ಸಣ್ಣ ತಪ್ಪು ಮಾಡಿದರೂ, ನೀವು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ನಾವು ಒಂದು ತಂಡವಾಗಿ ಬಹಳಷ್ಟು ಮಾತನಾಡುತ್ತೇವೆ ಮತ್ತು ಪ್ರತಿಯೊಬ್ಬರೂ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ತಮಗೆ ಹೇಗೆ ಅನಿಸಿತು ಎಂಬುದನ್ನು ಪ್ರಾಮಾಣಿಕವಾಗಿ ಹೇಳುತ್ತಾರೆ.

ಇದನ್ನೂ ಓದಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ರೋಚಕ ಪಂದ್ಯದಲ್ಲಿ ಗೆದ್ದು 3ನೇ ಸ್ಥಾನಕ್ಕೇರಿದ ಆರ್​ಸಿಬಿ
ಚಿನ್ನಸ್ವಾಮಿಯಲ್ಲಿ ಕೊನೆಗೂ ಅಬ್ಬರಿಸಿದ ವಿರಾಟ್ ಕೊಹ್ಲಿ
ತವರಿನಲ್ಲಿ ಕೊನೆಗೂ ಗೆದ್ದ ಆರ್​ಸಿಬಿ

IPL 2025: ತವರಿನಲ್ಲಿ ಮೊದಲ ಗೆಲುವು ಸಾಧಿಸಿದ ಆರ್​ಸಿಬಿ; ಸಂಭ್ರಮಾಚರಣೆ ಹೇಗಿತ್ತು ಗೊತ್ತಾ? ವಿಡಿಯೋ

ನಾವು ಮೊದಲೇ ಇದೇ ರೀತಿಯ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದೆವು, ಆದರೆ ಇಂದು ನಾವು ಅದನ್ನು ಮೈದಾನದಲ್ಲಿ ಇರಿಸಲು ಸಾಧ್ಯವಾಗಲಿಲ್ಲ. ಈಗ ನಾವು ಗೌರವಕ್ಕಾಗಿ ಆಡಬೇಕಾಗಿದೆ. ನಮ್ಮನ್ನು ಬೆಂಬಲಿಸುವ ಮತ್ತು ನಮಗಾಗಿ ಶ್ರಮಿಸುವ ಅನೇಕ ಜನರಿದ್ದಾರೆ. ನಾವು ಅವರಿಗಾಗಿ ಚೆನ್ನಾಗಿ ಆಡಬೇಕು. ಈ ತಂಡಕ್ಕಾಗಿ ಆಡಲು ನನಗೆ ಹೆಮ್ಮೆಯಿದೆ ಮತ್ತು ಮುಂದಿನ ಬಾರಿ ನಾವು ಮೈದಾನಕ್ಕೆ ಕಾಲಿಟ್ಟಾಗ, ನಾವು ಉತ್ತಮವಾಗಿ ಪ್ರದರ್ಶನ ನೀಡುತ್ತೇವೆ’ ಎಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ