
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ… ಐಪಿಎಲ್ನ 58ನೇ ಪಂದ್ಯ. ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಕಣಕ್ಕಿಳಿಯುತ್ತಿರುವ ಮೊದಲ ಪಂದ್ಯ. ಅತ್ತ ಸೋಷಿಯಲ್ ಮೀಡಿಯಾ ಮೂಲಕ ನಿವೃತ್ತಿ ಘೋಷಿಸಿದ್ದರಿಂದ ವಿರಾಟ್ ಕೊಹ್ಲಿ ಅಭಿಮಾನಿಗಳು ತನ್ನ ನೆಚ್ಚಿನ ಆಟಗಾರನಿಗೆ ವಿಶೇಷ ಗೌರವ ಸೂಚಿಸಲು ನಿರ್ಧರಿಸಿದ್ದರು. ಅದಕ್ಕಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಎಲ್ಲರೂ ವೈಟ್ ಟಿ ಶರ್ಟ್ನಲ್ಲಿ ಆಗಮಿಸಬೇಕೆಂದು ಆರ್ಸಿಬಿ ಅಭಿಮಾನಿಗಳು ಮನವಿ ಮಾಡಿದ್ದರು.
ಈ ಮನವಿಗೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಗ್ಯಾಲರಿಯಲ್ಲಿ ವಿರಾಟ್ ಕೊಹ್ಲಿ ಹೆಸರಿನ ವೈಟ್ ಜೆರ್ಸಿಗಳು ರಾರಾಜಿಸಿದವು. ಅನೇಕು ಬಿಳಿ ಬಣ್ಣದ ವಸ್ತ್ರದಲ್ಲಿ ಕಾಣಿಸಿಕೊಂಡರು. ಹೀಗೆ ಟೆಸ್ಟ್ ಕ್ರಿಕೆಟ್ನ ಕಿಂಗ್ಗೆ ಗೌರವಯುತ ವಿದಾಯ ಹೇಳಲು ಅಭಿಮಾನಿಗಳು ಪ್ಲ್ಯಾನ್ ರೂಪಿಸಿದ್ದರು. ಆದರೆ ವಿಧಿಯಾಟ… ಈ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿತು.
ಇದಾಗ್ಯೂ ಪಂದ್ಯ ನಡೆಯಬಹುದು ಎಂಬ ಆಶಾಭಾವನೆಯೊಂದಿಗೆ ಅಭಿಮಾನಿಗಳು ಕಾದು ಕುಳಿತರು. ಆದರೆ ನಿರಂತರ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸದೇ ಬೇರೆ ದಾರಿ ಇರಲಿಲ್ಲ. ಅಂತಿಮವಾಗಿ ಆರ್ಸಿಬಿ-ಕೆಕೆಆರ್ ನಡುವಣ ಪಂದ್ಯವನ್ನು ರದ್ದುಗೊಳಿಸಲಾಯಿತು.
ಇದರ ನಡುವೆ ಎರಡು ಘಟನೆಗಳು ನಡೀತು. ಅಭಿಮಾನಿಗಳು ಶ್ವೇತ ವಸ್ತ್ರದಲ್ಲಿ ಆಗಮಿಸಿದ್ದರು. ಅತ್ತ ಬಿಳಿ ಪಾರಿವಾಳಗಳ ಹಿಂಡು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಾರಾಡುತ್ತಿರುವುದು ಕಂಡು ಬಂತು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಅಲ್ಲದೆ ಇದು ಪ್ರಕೃತಿಯೇ ವಿರಾಟ್ ಕೊಹ್ಲಿಗೆ ಕಾವ್ಯಾತ್ಮಕವಾಗಿ ನೀಡಿದ ಎಂದು ಅನೇಕರು ಬಣ್ಣಿಸಿದ್ದಾರೆ.
ಅಂದರೆ ಒಂದೆಡೆ ಅಭಿಮಾನಿಗಳಿಂದ ವೈಟ್ ಜೆರ್ಸಿ ಗೌರವ ಸಿಕ್ಕರೆ, ಮತ್ತೊಂದೆಡೆ ಚಿನ್ನಸ್ವಾಮಿ ಸ್ಟೇಡಿಯಂ ಮೇಲೆ ಬಿಳಿ ಪಾರಿವಾಳ ಕಾಣಿಸಿಕೊಂಡಿದೆ. ಹೀಗಾಗಿಯೇ ಇದನ್ನು ದೇವರಿಂದ ಕಿಂಗ್ ಕೊಹ್ಲಿಗೆ ಸಿಕ್ಕ ಗೌರವ ಎಂದು ವರ್ಣಿಸಲಾಗುತ್ತಿದೆ.
ಒಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಇನ್ಮುಂದೆ ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಅದು ಕೂಡ ಕೇವಲ 27 ಪಂದ್ಯಗಳಲ್ಲಿ ಮಾತ್ರ. ಅಂದರೆ 2027ರ ಏಕದಿನ ವಿಶ್ವಕಪ್ವರೆಗೆ ಟೀಮ್ ಇಂಡಿಯಾ ಕೇವಲ 27 ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ.
ಇದನ್ನೂ ಓದಿ: IPL 2025: ಇಂದು 2 ತಂಡಗಳು ಗೆದ್ದರೆ RCB ಪ್ಲೇಆಫ್ಗೆ..!
ಈ ಎಲ್ಲಾ ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ ಕಣಕ್ಕಿಳಿದರೆ, ಬ್ಲೂ ಜೆರ್ಸಿಯಲ್ಲಿ ಕಿಂಗ್ ಕೊಹ್ಲಿಯನ್ನು 27 ದಿನಗಳ ಕಾಲ ನೋಡಬಹುದು. ಇಲ್ಲದಿದ್ದರೆ ಪ್ರತಿ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗುವರೆಗೆ ಕಾಯಲೇಬೇಕು.
Published On - 9:04 am, Sun, 18 May 25