AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ishan Kishan: ಬಿಸಿಸಿಐ ನಿಯಮಕ್ಕೆ ಡೋಂಟ್ ಕೇರ್: ಇಶಾನ್ ಕಿಶನ್​ರಿಂದ​ ಮತ್ತೊಂದು ದೊಡ್ಡ ತಪ್ಪು

DY Patil T20 Tournament: ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಕಣಕ್ಕಿಳಿದಿರುವ ಕಿಶನ್ ಮತ್ತೊಂದು ದೊಡ್ಡ ತಪ್ಪು ಮಾಡಿದ್ದು, ಇದಕ್ಕಾಗಿ ಶಿಕ್ಷೆಗೆ ಒಳಗಾಗುವ ಸಂಭವವಿದೆ.

Ishan Kishan: ಬಿಸಿಸಿಐ ನಿಯಮಕ್ಕೆ ಡೋಂಟ್ ಕೇರ್: ಇಶಾನ್ ಕಿಶನ್​ರಿಂದ​ ಮತ್ತೊಂದು ದೊಡ್ಡ ತಪ್ಪು
Ishan Kishan
Vinay Bhat
|

Updated on: Mar 01, 2024 | 7:39 AM

Share

ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ಈಗ ಎಷ್ಟೇ ಸಣ್ಣ ತಪ್ಪು ಮಾಡಿದರು ಅದು ದೊಡ್ಡದರಂತೆ ಕಾಣುತ್ತಿದೆ. ಅಂಥ ಪರಿಸ್ಥಿತಿಯಲ್ಲಿ ಈಗ ಇವರಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭ ಭಾರತ ತಂಡದಿಂದ ವಿಶ್ರಾಂತಿ ಕೇಳಿದ ಬಳಿಕ ಕಿಶನ್ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ. ಕೋಚ್ ರಾಹುಲ್ ದ್ರಾವಿಡ್ ಮಾತನ್ನು ನಿರ್ಲಕ್ಷಿಸಿದ ಅವರು, ಬಿಸಿಸಿಐ ಆದೇಶವನ್ನೂ ಪಾಲಿಸದೆ ಇದೀಗ ಕೇಂದ್ರ ಗುತ್ತಿಗೆಯಿಂದ ಹೊರ ಬಿದ್ದಿದ್ದಾರೆ. ಇವೆಲ್ಲದರ ನಡುವೆ ಇವರ ಮತ್ತೊಂದು ತಪ್ಪು ಬೆಳಕಿಗೆ ಬಂದಿದ್ದು, ಮತ್ತೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಲಿದ್ದಾರೆ.

ಡಿಸೆಂಬರ್ 2023 ರಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಇಶಾನ್ ಕಿಶನ್ ಇತ್ತೀಚಿನ ರಣಜಿ ಟ್ರೋಫಿ ಪಂದ್ಯಗಳಿಂದ ಕೂಡ ದೂರ ಉಳಿದಿದ್ದರು. ಇದೀಗ ಮುಂಬೈನಲ್ಲಿ ನಡೆಯುತ್ತಿರುವ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಆದರೆ, ಇವರ ಪುನರಾಗಮನವು ಉತ್ತಮವಾಗಿಲ್ಲ. ಬಿಸಿಸಿಐನ ಪ್ರಮುಖ ನಿಯಮವನ್ನು ನಿರ್ಲಕ್ಷಿಸಿದ್ದು, ಇದಕ್ಕಾಗಿ ಶಿಕ್ಷೆಗೆ ಒಳಗಾಗುವ ಸಂಭವವಿದೆ.

ಪ್ರಥಮ ಸೋಲು: ದಿಢೀರ್ ಎರಡನೇ ಸ್ಥಾನಕ್ಕೆ ಕುಸಿದ ಆರ್​ಸಿಬಿ

ಇಶಾನ್ ಕಿಶನ್ ನಿಯಮ ಉಲ್ಲಂಘನೆ

ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ, ಇಶಾನ್ ಕಿಶನ್ ರಿಲಯನ್ಸ್ 1 ತಂಡದ ಪರ ಆಡುತ್ತಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಾಗ ಅವರ ಬ್ಯಾಟಿಂಗ್‌ಗಿಂತ ಹೆಲ್ಮೆಟ್ ಎಲ್ಲರ ಗಮನ ಸೆಳೆಯಿತು. ಇಶಾನ್ ಅವರ ಹೆಲ್ಮೆಟ್ ಮೇಲೆ ಬಿಸಿಸಿಐ ಲಾಂಛನವನ್ನು ಮುದ್ರಿಸಲಾಗಿತ್ತು. ಈ ಮೂಲಕ ದೊಡ್ಡ ನಿಯಮವನ್ನು ಮುರಿದಿದ್ದಾರೆ. ಬಿಸಿಸಿಐ ಆಟಗಾರರಿಗೆ ಕಟ್ಟುನಿಟ್ಟಾದ ನಿಯಮವನ್ನು ಮಾಡಿದೆ, ಆಟಗಾರರು ದೇಶೀಯ ಮಟ್ಟದಲ್ಲಿ ಯಾವುದೇ ರೀತಿಯ ಪಂದ್ಯವನ್ನು ಆಡುವಾಗ ಹೆಲ್ಮೆಟ್‌ಗಳು, ಜೆರ್ಸಿಗಳು ಅಥವಾ ಯಾವುದೇ ಸಲಕರಣೆಗಳ ಮೇಲೆ ಬಿಸಿಸಿಐ ಲೋಗೋವನ್ನು ಬಳಸುವಂತಿಲ್ಲ.

ಬಿಸಿಸಿಐ ಲೋಗೋ ಹೆಲ್ಮೆಟ್ ಧರಿಸಿರುವ ಇಶಾನ್ ಕಿಶನ್:

ಈ ಹಿಂದೆ ಟೀಮ್ ಇಂಡಿಯಾ ಪರ ಆಡುವ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ತಂಡಗಳಿಗೆ ಆಡುವಾಗ ಇದನ್ನು ಬಳಸುತ್ತಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ, ಬಿಸಿಸಿಐ ಲೋಗೋವನ್ನು ಬಳಸುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶಿಸಿತ್ತು, ನಂತರ ಅಂತಹ ಹೆಲ್ಮೆಟ್‌ಗಳನ್ನು ಧರಿಸಿದ ಆಟಗಾರರು ಬಿಸಿಸಿಐ ಲಾಂಛನದ ಮೇಲೆ ಟೇಪ್ ಹಾಕುವ ಮೂಲಕ ಅವುಗಳನ್ನು ಮರೆಮಾಡುತ್ತಿದ್ದಾರೆ. ಆದರೆ ಕಿಶನ್ ಹಾಗೆ ಮಾಡದೆ ಬೋರ್ಡ್ ಲಾಂಛನವಿರುವ ಹೆಲ್ಮೆಟ್ ಧರಿಸಿ ಆಟವಾಡಿದ್ದಾರೆ. ಇದೀಗ ಬಿಸಿಸಿಐ ಇವರಿಗೆ ದಂಡ ವಿಧಿಸುವ ಸಂಭವವಿದೆ.

ಸ್ಮೃತಿ ಏಕಾಂಗಿ ಹೋರಾಟ ವ್ಯರ್ಥ; ಲೀಗ್​ನಲ್ಲಿ ಮೊದಲ ಸೋಲನುಭವಿಸಿದ ಆರ್​ಸಿಬಿ

ಎರಡು ದಿನಗಳ ಹಿಣದೆಯಷ್ಟೆ, ಬಿಸಿಸಿಐ ಈ ವರ್ಷದ ಕೇಂದ್ರ ಒಪ್ಪಂದಗಳಿಂದ ಇಶಾನ್ ಅವರನ್ನು ಹೊರಗಿಟ್ಟಿತ್ತು. ಟೀಮ್ ಇಂಡಿಯಾದಿಂದ ವಿರಾಮ ತೆಗೆದುಕೊಂಡ ನಂತರ, ಕಮ್​ಬ್ಯಾಕ್​ಗಾಗಿ ದೇಶೀಯ ಕ್ರಿಕೆಟ್ ಆಡಲು ಅವರ ಬಳಿ ಹೇಳಿತ್ತು. ಟೀಮ್ ಇಂಡಿಯಾದಿಂದ ಹೊರಗಿರುವ ಆಟಗಾರರು ರಣಜಿ ಟ್ರೋಫಿಯಲ್ಲಿ ಆಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆದೇಶ ನೀಡಿದ್ದರು. ಆದರೆ ಇಶಾನ್ ಈ ಯಾವುದೇ ಮಾತನ್ನು ಕೇಳಿರಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ