AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cricket Rules 2026: ಟೆಸ್ಟ್ ಹಾಗೂ ಮಹಿಳಾ ಕ್ರಿಕೆಟ್​ನಲ್ಲಿ ನೂತನ ನಿಯಮಗಳು ಜಾರಿಗೆ

Cricket Rules 2026: ಎಂಸಿಸಿ 2026 ರಿಂದ ಟೆಸ್ಟ್, ಮಹಿಳಾ ಮತ್ತು ಜೂನಿಯರ್ ಕ್ರಿಕೆಟ್‌ಗೆ ಹೊಸ ನಿಯಮಗಳನ್ನು ಘೋಷಿಸಿದೆ. ಟೆಸ್ಟ್‌ನಲ್ಲಿ, ದಿನದ ಕೊನೆಯ ಓವರ್‌ನಲ್ಲಿ ವಿಕೆಟ್ ಬಿದ್ದರೆ ಹೊಸ ಬ್ಯಾಟರ್ ತಕ್ಷಣ ಕ್ರೀಸ್‌ಗೆ ಬರಬೇಕು. ಮಹಿಳಾ ಮತ್ತು 13 ವರ್ಷದೊಳಗಿನ ಜೂನಿಯರ್ ಕ್ರಿಕೆಟ್‌ನಲ್ಲಿ ಚೆಂಡಿನ ತೂಕ ಮತ್ತು ಸುತ್ತಳತೆಯನ್ನು ಬದಲಾಯಿಸಲಾಗಿದೆ. ಇದು ಆಟದಲ್ಲಿ ಪಾರದರ್ಶಕತೆ ಮತ್ತು ಉತ್ಸಾಹವನ್ನು ಹೆಚ್ಚಿಸುವ ಗುರಿ ಹೊಂದಿದೆ.

Cricket Rules 2026: ಟೆಸ್ಟ್ ಹಾಗೂ ಮಹಿಳಾ ಕ್ರಿಕೆಟ್​ನಲ್ಲಿ ನೂತನ ನಿಯಮಗಳು ಜಾರಿಗೆ
Test Cricket
ಪೃಥ್ವಿಶಂಕರ
|

Updated on: Feb 03, 2026 | 8:41 PM

Share

ಕ್ರಿಕೆಟ್ ನಿಯಮಗಳನ್ನು ರೂಪಿಸುವ ಸರ್ವೋಚ್ಚ ಸಂಸ್ಥೆಯಾದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC), 2026 ಕ್ಕೆ ಆಟದಲ್ಲಿ ಪಾರದರ್ಶಕತೆ ಮತ್ತು ಉತ್ಸಾಹವನ್ನು ಹೆಚ್ಚಿಸಲು ಟೆಸ್ಟ್ ಕ್ರಿಕೆಟ್ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಹೊಸ ಕಾನೂನುಗಳನ್ನು ಘೋಷಿಸಿದೆ. ಈ ಪ್ರಕಾರ ಟೆಸ್ಟ್ ಕ್ರಿಕೆಟ್​ನಲ್ಲಿ (Test cricket) ಎಂಸಿಸಿ ತಂದಿರುವ ನೂತನ ನಿಯಮ ಬ್ಯಾಟಿಂಗ್ ತಂಡಕ್ಕೆ ಆಘಾತ ನೀಡಿದ್ದರೆ, ಬೌಲಿಂಗ್ ತಂಡಕ್ಕೆ ಮತ್ತೊಂದು ವಿಕೆಟ್ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದೆ. ಇನ್ನು ಮಹಿಳಾ ಕ್ರಿಕೆಟ್ ಹಾಗೂ ಜೂನಿಯರ್ ಕ್ರಿಕೆಟ್‌ನಲ್ಲಿ (13 ವರ್ಷದೊಳಗಿನವರು) ಬಳಸುವ ಚೆಂಡಿನ ತೂಕ ಹಾಗೂ ಸುತ್ತಳತೆಯಲ್ಲೂ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

ಓವರ್ ಪೂರ್ಣಗೊಳ್ಳಲೇಬೇಕು

ಇಲ್ಲಿಯವರೆಗೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಸಂಪ್ರದಾಯವಿತ್ತು. ಅದೆನಂದರೆ, ದಿನದ ಆಟದ ಕೊನೆಯಲ್ಲಿ (ಕೊನೆಯ ಓವರ್‌ನಲ್ಲಿ) ಯಾವುದೇ ವಿಕೆಟ್ ಬಿದ್ದರೆ, ಆ ದಿನದ ಆಟವು ತಕ್ಷಣವೇ ಕೊನೆಗೊಳ್ಳುತ್ತಿತ್ತು. ಇದು ಬ್ಯಾಟಿಂಗ್ ತಂಡಕ್ಕೆ ನೆರವಾಗುತ್ತಿತ್ತು. ಮರುದಿನ ಬೆಳಿಗ್ಗೆ ತಮ್ಮ ತಂತ್ರದ ಪ್ರಕಾರ ಹೊಸ ಬ್ಯಾಟರ್ ಅನ್ನು ಕಳುಹಿಸುತ್ತಿದ್ದವು. ಆದರೆ, ಹೊಸ ಎಂಸಿಸಿ ಕಾನೂನು 12.5.2 ರ ಪ್ರಕಾರ.. ಈಗ ಕೊನೆಯ ಓವರ್‌ನಲ್ಲಿ ವಿಕೆಟ್ ಬಿದ್ದರೂ, ಆ ಓವರ್ ಅನ್ನು ಪೂರ್ಣಗೊಳಿಸಬೇಕು. ಅಂದರೆ, ಹೊಸ ಬ್ಯಾಟರ್ ತಕ್ಷಣ ಕ್ರೀಸ್‌ಗೆ ಬಂದು ಆ ಓವರ್‌ನ ಉಳಿದ ಎಸೆತಗಳನ್ನು ಎದುರಿಸಬೇಕು. ಇದು ಫೀಲ್ಡಿಂಗ್ ತಂಡಕ್ಕೆ ಬ್ಯಾಟರ್ ಮೇಲೆ ಒತ್ತಡವನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತದೆ.

ಚೆಂಡಿನ ತೂಕ ಮತ್ತು ಗಾತ್ರ ಬದಲಾವಣೆ

ಇನ್ನು ಮಹಿಳಾ ಕ್ರಿಕೆಟ್​ಗೆ ಸಂಬಂಧಿಸಿದಂತೆ​ ಎಂಸಿಸಿ ಚೆಂಡಿನ ತೂಕ ಮತ್ತು ಗಾತ್ರವನ್ನು ಬದಲಾಯಿಸಿದೆ. ಇಲ್ಲಿಯವರೆಗೆ, ಮಹಿಳಾ ಕ್ರಿಕೆಟ್‌ನಲ್ಲಿ ಚೆಂಡಿನ ತೂಕ 140 ರಿಂದ 151 ಗ್ರಾಂಗಳ ನಡುವೆ ಇತ್ತು. ಈಗ ಅದನ್ನು 140 ರಿಂದ 149 ಗ್ರಾಂಗಳಿಗೆ ಇಳಿಸಲಾಗಿದೆ. ಚೆಂಡಿನ ಗಾತ್ರವನ್ನು 21.5 ರಿಂದ 22 ಸೆಂಟಿಮೀಟರ್‌ಗಳಿಗೆ ನಿರ್ಧರಿಸಲಾಗಿದೆ. ಇದು ಬೌಲರ್‌ಗಳು ವೇಗವಾಗಿ ಬೌಲಿಂಗ್ ಮಾಡಲು ಮತ್ತು ಬ್ಯಾಟರ್‌ಗಳು ದೊಡ್ಡ ಹೊಡೆತಗಳನ್ನು ಹೊಡೆಯಲು ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೆ, ಜೂನಿಯರ್ ಕ್ರಿಕೆಟ್‌ನಲ್ಲೂ ಬದಲಾವಣೆ ತರಲಾಗಿದೆ. 13 ವರ್ಷದೊಳಗಿನವರ ಜೂನಿಯರ್ ಕ್ರಿಕೆಟ್‌ನಲ್ಲಿ ಬಳಸುವ ಚೆಂಡಿನ ತೂಕವನ್ನು 140-144 ಗ್ರಾಂಗೆ ನಿಗದಿಪಡಿಸಲಾಗಿದೆ. ಇದರ ಗಾತ್ರವನ್ನು 20.5 ರಿಂದ 21 ಸೆಂಟಿಮೀಟರ್‌ಗಳ ನಡುವೆ ಬದಲಾಯಿಸಲಾಗಿದೆ. ಭವಿಷ್ಯದಲ್ಲಿ ಹಿರಿಯರ ಮಟ್ಟಕ್ಕೆ ಹೋದಾಗ ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ಉದಯೋನ್ಮುಖ ಆಟಗಾರರು ಸರಿಯಾದ ತೂಕದ ಚೆಂಡಿನೊಂದಿಗೆ ಅಭ್ಯಾಸ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ನಿಯಮಗಳು ಯಾವಾಗ ಜಾರಿಗೆ ಬರುತ್ತವೆ?

ಹೊಸ ನಿಯಮಗಳು ಜನವರಿ 2026 ರಿಂದ ಪ್ರಪಂಚದಾದ್ಯಂತದ ಎಲ್ಲಾ ಅಧಿಕೃತ ಕ್ರಿಕೆಟ್ ಪಂದ್ಯಗಳಿಗೆ ಅನ್ವಯಿಸುತ್ತವೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ತಂದಿರುವ ನೂತನ ನಿಯಮದಿಂದಾಗಿ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆಗಳಿವೆ. ವಿಶೇಷವಾಗಿ ಡ್ರಾ ಕಡೆಗೆ ಸಾಗುತ್ತಿರುವ ಪಂದ್ಯಗಳಲ್ಲಿ ನಿರ್ದಿಷ್ಟ ಫಲಿತಾಂಶವನ್ನು ನಿರೀಕ್ಷಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು
ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು
ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್
ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್
ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ..
ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ..
ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ: ಕಣ್ಣೀರು ಹಾಕಿದ ಸಂತ್ರಸ್ತರು
ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ: ಕಣ್ಣೀರು ಹಾಕಿದ ಸಂತ್ರಸ್ತರು
ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ
ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ
ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ