AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಟ್ರೈಲರ್ ಲೀಕ್, ‘ರಾವಣ’ನಾಗಿ ಯಶ್ ಅಬ್ಬರ ಅಬ್ಬಬ್ಬ

Ramayana movie: ‘ರಾಮಾಯಣ’ ಸಿನಿಮಾದ ಟ್ರೈಲರ್ ಅನ್ನು ಈಗಾಗಲೇ ಚಿತ್ರತಂಡವು ಸ್ಯಾಂಡಿಯಾಗೋದ ಕಾಮಿಕಾನ್​​ನಲ್ಲಿ ಪ್ರದರ್ಶಿಸಿದ್ದಾರೆ. ಹಾಗಾಗಿ ಟ್ರೈಲರ್ ಈಗಾಗಲೇ ಲೀಕ್ ಆಗಿದ್ದು, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಟ್ರೈಲರ್​​ನಲ್ಲಿ ಹಲವು ಅಂಶಗಳು ಗಮನ ಸೆಳೆಯುತ್ತಿದ್ದು, ವಿಶೇಷವಾಗಿ ರಾವಣನಾಗಿ ಯಶ್ ಅಬ್ಬರ ಬಲು ಅದ್ಧೂರಿಯಾಗಿರುವುದು ತಿಳಿಯುತ್ತಿದೆ.

‘ರಾಮಾಯಣ’ ಟ್ರೈಲರ್ ಲೀಕ್, ‘ರಾವಣ’ನಾಗಿ ಯಶ್ ಅಬ್ಬರ ಅಬ್ಬಬ್ಬ
Ramayana Yash
ಮಂಜುನಾಥ ಸಿ.
| Edited By: |

Updated on:Jul 30, 2026 | 10:04 AM

Share

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಇನ್ನೂ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾದ ಟ್ರೈಲರ್ ನಾಳೆ (ಜುಲೈ 30) ರಿಲೀಸ್ ಆಗಲಿದೆ. ಆದರೆ ಸಿನಿಮಾದ ಟ್ರೈಲರ್ ಅನ್ನು ಈಗಾಗಲೇ ಚಿತ್ರತಂಡವು ಸ್ಯಾಂಡಿಯಾಗೋದ ಕಾಮಿಕಾನ್​​ನಲ್ಲಿ ಪ್ರದರ್ಶಿಸಿದ್ದಾರೆ. ಹಾಗಾಗಿ ಟ್ರೈಲರ್ ಈಗಾಗಲೇ ಲೀಕ್ ಆಗಿದ್ದು, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಟ್ರೈಲರ್​​ನಲ್ಲಿ ಹಲವು ಅಂಶಗಳು ಗಮನ ಸೆಳೆಯುತ್ತಿದ್ದು, ವಿಶೇಷವಾಗಿ ರಾವಣನಾಗಿ ಯಶ್ ಅಬ್ಬರ ಬಲು ಅದ್ಧೂರಿಯಾಗಿರುವುದು ತಿಳಿಯುತ್ತಿದೆ.

ಈಗ ಲೀಕ್ ಆಗಿರುವ ಟ್ರೈಲರ್ ಒಳ್ಳೆಯ ಗುಣಮಟ್ಟದಲ್ಲಿಲ್ಲ, ಅದರಲ್ಲಿಯೂ ಸಹ ಯಶ್ ಅವರ ಎಂಟ್ರಿ ಹಾಗೂ ಇನ್ನೂ ಕೆಲ ಸೀನ್​​ಗಳು ಸಖತ್ ಗಮನ ಸೆಳೆಯುತ್ತಿವೆ. ಲೀಕ್ ಆಗಿರುವ ಟ್ರೈಲರ್​​ನಲ್ಲಿ ಯಶ್, ಘರ್ಜಿಸುವ ಸಿಂಹದ ಎದುರು ಮರು ಘರ್ಜನೆ ಮಾಡುವ ದೃಶ್ಯ ಸಖತ್ ಆಗಿದೆ. ಘರ್ಜಿಸುತ್ತಿರುವ ಸಿಂಹವನ್ನು ತಮ್ಮ ಆವೇಶದಿಂದಲೇ ಯಶ್ (ರಾವಣ) ಸುಮ್ಮನಾಗಿಸುವ ದೃಶ್ಯ ಟ್ರೈಲರ್​​ನಲ್ಲಿದೆ.

ಮಾತ್ರವಲ್ಲದೆ ಯಶ್ (ರಾವಣ) ಬಾಹುಗಳನ್ನು ಚಾಚಿ ಡೈಲಾಗ್ ಹೇಳುತ್ತಿರುವ ದೃಶ್ಯವೂ ಸಖತ್ ಆಗಿದೆ. ಜೊತೆಗೆ ಟ್ರೈಲರ್​​ನಲ್ಲಿ ರಾಮನ (ರಣ್​​ಬೀರ್ ಕಪೂರ್), ಸಾಯಿ ಪಲ್ಲವಿ, (ಸೀತೆ), ಶೂರ್ಪನಖಿ (ರಕುಲ್ ಪ್ರೀತ್ ಸಿಂಗ್) ಇನ್ನೂ ಹಲವರ ದೃಶ್ಯಗಳು ಇವೆ. ರಾಮ ವನವಾಸಕ್ಎ ಹೋಗುವ ದೃಶ್ಯ, ಶೂರ್ಪನಖಿಯ ಮೂಗು ಕತ್ತರಿಸುವ ದೃಶ್ಯ, ಹನುಮಂತನ ದೃಶ್ಯ, ರಾಮ ಹಾಗೂ ದಶರಥನ ನಡುವಿನ ದೃಶ್ಯ, ಸೀತಾ ಕಲ್ಯಾಣ ಹೀಗೆ ಹಲವು ದೃಶ್ಯಗಳು ಸಿನಿಮಾದ ಟ್ರೈಲರ್​​ನಲ್ಲಿವೆ.

ಇದನ್ನೂ ಓದಿ:ರಣ್​​ಬೀರ್ ಕಪೂರ್ ಸಿನಿಮಾ ಸೆಟ್​​ನಲ್ಲಿ ಸಾವು, ನಿರ್ದೇಶಕನ ವಿರುದ್ಧ ಎಫ್​​ಐಆರ್​​ಗೆ ಆಗ್ರಹ

ಈಗ ಲೀಕ್ ಆಗಿರುವ ಟ್ರೈಲರ್​ ಬಹಳ ಕಡಿಮೆ ಗುಣಮಟ್ಟದ್ದಾಗಿದೆ. ಸ್ಕ್ರೀನ್ ಮೇಲೆ ಪ್ರದರ್ಶನ ಆಗುತ್ತಿರುವ ಟ್ರೈಲರ್​ ಅನ್ನು ಮೊಬೈಲ್ ಅಲ್ಲಿ ಸೆರೆ ಹಿಡಿದು ಅದನ್ನು ಲೀಕ್ ಮಾಡಲಾಗಿದೆ. ಆದರೂ ಸಹ ಸಿನಿಮಾ ಅನ್ನು ರಿಚ್ ಆಗಿ ನಿರ್ಮಾಣ ಮಾಡಿರುವುದು ತಿಳಿಯುತ್ತಿದೆ. ‘ರಾಮಾಯಣ’ ಚಿತ್ರತಂಡವು ಅಧಿಕೃತವಾಗಿ ನಾಳೆ ಅಂದರೆ (ಜುಲೈ 30) ಟ್ರೈಲರ್ ಬಿಡುಗಡೆ ಮಾಡಲಿದೆ. ಜುಲೈ 30ರ ಬೆಳಿಗ್ಗೆ 4:15ಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ.

‘ರಾಮಾಯಣ’ ಸಿನಿಮಾವು ಭಾರತದ ಈ ವರೆಗೆ ಅತ್ಯಂತ ದುಬಾರಿ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ರಣ್​​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಇನ್ನೂ ಕೆಲವು ಜನಪ್ರಿಯ ನಟ-ನಟಿಯರು ನಟಿಸಿದ್ದಾರೆ. ರಾಮಾಯಣ ಕತೆ ಆಧರಿಸಿದ ಈ ಸಿನಿಮಾದ ಎರಡು ಭಾಗಗಳ ಮೇಲೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆಯಂತೆ. ಸಿನಿಮಾವನ್ನು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ಯಶ್ ಅವರು ಈ ಸಿನಿಮಾದ ಸಹ ನಿರ್ಮಾಪಕ ಆಗಿದ್ದಾರೆ. ಸಿನಿಮಾ ಇದೇ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಮುಂದಿನ ಭಾಗ ಮುಂದಿನ ವರ್ಷ ನವೆಂಬರ್​​​ಗೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Wed, 29 July 26

Follow Us
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್