AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PCB: ಆಟಗಾರರ ಸಂಬಳ ಹೆಚ್ಚಿಸಿದ ಪಾಕ್ ಕ್ರಿಕೆಟ್​ ಮಂಡಳಿ; ವಿದೇಶಿ ಲೀಗ್‌ ಆಡದವರಿಗೂ ಸೂಕ್ತ ಬಹುಮಾನ

PCB Central Contract: ಪಿಸಿಬಿಯ ಕೇಂದ್ರ ಒಪ್ಪಂದದ ಹೊಸ ನೀತಿಯ ಅಡಿಯಲ್ಲಿ, ಜುಲೈ 1 ರಿಂದ ಕೆಂಪು ಚೆಂಡು (ಟೆಸ್ಟ್) ಮತ್ತು ಬಿಳಿ ಚೆಂಡಿನ (ODI ಮತ್ತು T20) ಪ್ರತ್ಯೇಕ ಒಪ್ಪಂದಗಳು ಅನ್ವಯವಾಗಲಿವೆ. ಇದರಡಿಯಲ್ಲಿ ಒಪ್ಪಂದದ ಹಣ ಕೂಡ ಹೆಚ್ಚಾಗುತ್ತದೆ.

PCB: ಆಟಗಾರರ ಸಂಬಳ ಹೆಚ್ಚಿಸಿದ ಪಾಕ್ ಕ್ರಿಕೆಟ್​ ಮಂಡಳಿ; ವಿದೇಶಿ ಲೀಗ್‌ ಆಡದವರಿಗೂ ಸೂಕ್ತ ಬಹುಮಾನ
ಸಾಂದರ್ಭೀಕ ಚಿತ್ರ
TV9 Web
| Edited By: |

Updated on: Jun 24, 2022 | 5:24 PM

Share

ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಶುಕ್ರವಾರ ತನ್ನ ಆಟಗಾರರಿಗೆ ಟೆಸ್ಟ್ ಮತ್ತು ಸೀಮಿತ ಓವರ್‌ಗಳಿಗೆ ಪ್ರತ್ಯೇಕ ಕೇಂದ್ರ ಒಪ್ಪಂದಗಳನ್ನು ಪ್ರಕಟಿಸಿದ್ದು, ಇದರಲ್ಲಿ ಆಟಗಾರರ ವೇತನವನ್ನು ಹೆಚ್ಚಿಸಲಾಗಿದೆ. ಆದಾಗ್ಯೂ, ಪಿಸಿಬಿ ತನ್ನ ಅಗ್ರ ಆಟಗಾರರನ್ನು ವಿದೇಶಿ ಲೀಗ್‌ಗಳಲ್ಲಿ ಆಡದಂತೆ ತಡೆಯಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಹೆಚ್ಚುವರಿ ಹಣ ಪಾವತಿಸಲು ಸಹ ಸಿದ್ಧವಾಗಿದೆ. ಬೋರ್ಡ್ ಆಫ್ ಗವರ್ನರ್‌ಗಳ ಸಭೆಯಲ್ಲಿ, 2022-23 ರ ಹಣಕಾಸು ವರ್ಷಕ್ಕೆ 15 ಶತಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್ ಅನ್ನು ಅನುಮೋದಿಸಲಾಗಿದೆ. ಇದರಲ್ಲಿ 78 ಪ್ರತಿಶತವನ್ನು ಕ್ರಿಕೆಟ್ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ ಎಂದು ಪಿಸಿಬಿ ಹೇಳಿದೆ. “ನಮ್ಮ ಅಗ್ರ ಕ್ರಿಕೆಟಿಗರನ್ನು ಪ್ರೋತ್ಸಾಹಿಸಲು ಮತ್ತು ಇತರ ದೇಶಗಳ ಆಟಗಾರರಿಗೆ ಹೋಲಿಸಿದರೆ ವೇತನದ ಅಂತರವನ್ನು ಕಡಿಮೆ ಮಾಡಲು ಅದರ ಕಾರ್ಯತಂತ್ರದ ಭಾಗವಾಗಿ, ಪುರುಷರ ಕೇಂದ್ರ ಒಪ್ಪಂದದ ರಚನೆಯಲ್ಲಿ ಬದಲಾವಣೆಗಳನ್ನು ಆಡಳಿತ ಮಂಡಳಿಯು ಅನುಮೋದಿಸಿದೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಪಿಸಿಬಿಯ ಕೇಂದ್ರ ಒಪ್ಪಂದದಲ್ಲಿ ಬದಲಾವಣೆಗಳು

ಪಿಸಿಬಿಯ ಕೇಂದ್ರ ಒಪ್ಪಂದದ ಹೊಸ ನೀತಿಯ ಅಡಿಯಲ್ಲಿ, ಜುಲೈ 1 ರಿಂದ ಕೆಂಪು ಚೆಂಡು (ಟೆಸ್ಟ್) ಮತ್ತು ಬಿಳಿ ಚೆಂಡಿನ (ODI ಮತ್ತು T20) ಪ್ರತ್ಯೇಕ ಒಪ್ಪಂದಗಳು ಅನ್ವಯವಾಗಲಿವೆ. ಇದರಡಿಯಲ್ಲಿ ಒಪ್ಪಂದದ ಹಣ ಕೂಡ ಹೆಚ್ಚಾಗುತ್ತದೆ. ಇಷ್ಟೇ ಅಲ್ಲ, ಕೇಂದ್ರೀಯ ಗುತ್ತಿಗೆ ಆಟಗಾರರ ಸಂಖ್ಯೆಯನ್ನು 20 ರಿಂದ 33 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೇ, ಪಿಸಿಬಿ ಎಲ್ಲಾ ಮಾದರಿಗಳಲ್ಲಿ ಪಂದ್ಯ ಶುಲ್ಕದಲ್ಲಿ 10 ಪ್ರತಿಶತ ಹೆಚ್ಚಳ ಮತ್ತು ಸಹಾಯಕ ಸಿಬ್ಬಂದಿ ಸದಸ್ಯರ ಪಂದ್ಯ ಶುಲ್ಕದಲ್ಲಿ 50 ರಿಂದ 70 ರಷ್ಟು ಹೆಚ್ಚಳವನ್ನು ಘೋಷಿಸಿದೆ. ನಾಯಕನ ಹೆಚ್ಚುವರಿ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಭತ್ಯೆಯನ್ನೂ ಆರಂಭಿಸಲಾಗಿದೆ.

ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವುದನ್ನು ನಿಲ್ಲಿಸಬೇಕು; ಪಿಸಿಬಿ

ಲಾಹೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಮಾತನಾಡಿ, ವಿದೇಶಿ ಲೀಗ್‌ಗಳಲ್ಲಿ ಆಡಲು ಕೊಡುಗೆಗಳನ್ನು ಪಡೆಯುವ ಪ್ರಸ್ತುತ ಆಟಗಾರರಿಗೆ ಮಂಡಳಿಯು ವಿಶೇಷ ನಿಧಿಯನ್ನು ಸ್ಥಾಪಿಸಿದೆ ಎಂದು ಘೋಷಿಸಿದರು. ನಮ್ಮ ಆಟಗಾರರು ದೇಶದ ಹೊರಗೆ, ವಿದೇಶಿ ಲೀಗ್​ಗಳಲ್ಲಿ ಆಡುವುದನ್ನು ತಪ್ಪಿಸಲು ನಾವು ಬಯಸುತ್ತೇವೆ. ಜೊತೆಗೆ ಆಟಗಾರರು ಈ ಲೀಗ್‌ಗಳಲ್ಲಿ ಆಡದಿರುವುದು ಉತ್ತಮ ಎಂದು ನಾವು ಭಾವಿಸುತ್ತೇವೆ. ಅಗತ್ಯವಿದ್ದರೆ ಅವರಿಗೆ ಗುತ್ತಿಗೆ ಮೊತ್ತದ ಶೇ.50-60ರಷ್ಟು ಹಣ ನೀಡಲು ಸಿದ್ಧರಿದ್ದೇವೆ ಎಂದಿದ್ದಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ