AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PCB: ಆಟಗಾರರ ಸಂಬಳ ಹೆಚ್ಚಿಸಿದ ಪಾಕ್ ಕ್ರಿಕೆಟ್​ ಮಂಡಳಿ; ವಿದೇಶಿ ಲೀಗ್‌ ಆಡದವರಿಗೂ ಸೂಕ್ತ ಬಹುಮಾನ

PCB Central Contract: ಪಿಸಿಬಿಯ ಕೇಂದ್ರ ಒಪ್ಪಂದದ ಹೊಸ ನೀತಿಯ ಅಡಿಯಲ್ಲಿ, ಜುಲೈ 1 ರಿಂದ ಕೆಂಪು ಚೆಂಡು (ಟೆಸ್ಟ್) ಮತ್ತು ಬಿಳಿ ಚೆಂಡಿನ (ODI ಮತ್ತು T20) ಪ್ರತ್ಯೇಕ ಒಪ್ಪಂದಗಳು ಅನ್ವಯವಾಗಲಿವೆ. ಇದರಡಿಯಲ್ಲಿ ಒಪ್ಪಂದದ ಹಣ ಕೂಡ ಹೆಚ್ಚಾಗುತ್ತದೆ.

PCB: ಆಟಗಾರರ ಸಂಬಳ ಹೆಚ್ಚಿಸಿದ ಪಾಕ್ ಕ್ರಿಕೆಟ್​ ಮಂಡಳಿ; ವಿದೇಶಿ ಲೀಗ್‌ ಆಡದವರಿಗೂ ಸೂಕ್ತ ಬಹುಮಾನ
ಸಾಂದರ್ಭೀಕ ಚಿತ್ರ
TV9 Web
| Edited By: |

Updated on: Jun 24, 2022 | 5:24 PM

Share

ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಶುಕ್ರವಾರ ತನ್ನ ಆಟಗಾರರಿಗೆ ಟೆಸ್ಟ್ ಮತ್ತು ಸೀಮಿತ ಓವರ್‌ಗಳಿಗೆ ಪ್ರತ್ಯೇಕ ಕೇಂದ್ರ ಒಪ್ಪಂದಗಳನ್ನು ಪ್ರಕಟಿಸಿದ್ದು, ಇದರಲ್ಲಿ ಆಟಗಾರರ ವೇತನವನ್ನು ಹೆಚ್ಚಿಸಲಾಗಿದೆ. ಆದಾಗ್ಯೂ, ಪಿಸಿಬಿ ತನ್ನ ಅಗ್ರ ಆಟಗಾರರನ್ನು ವಿದೇಶಿ ಲೀಗ್‌ಗಳಲ್ಲಿ ಆಡದಂತೆ ತಡೆಯಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಹೆಚ್ಚುವರಿ ಹಣ ಪಾವತಿಸಲು ಸಹ ಸಿದ್ಧವಾಗಿದೆ. ಬೋರ್ಡ್ ಆಫ್ ಗವರ್ನರ್‌ಗಳ ಸಭೆಯಲ್ಲಿ, 2022-23 ರ ಹಣಕಾಸು ವರ್ಷಕ್ಕೆ 15 ಶತಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್ ಅನ್ನು ಅನುಮೋದಿಸಲಾಗಿದೆ. ಇದರಲ್ಲಿ 78 ಪ್ರತಿಶತವನ್ನು ಕ್ರಿಕೆಟ್ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ ಎಂದು ಪಿಸಿಬಿ ಹೇಳಿದೆ. “ನಮ್ಮ ಅಗ್ರ ಕ್ರಿಕೆಟಿಗರನ್ನು ಪ್ರೋತ್ಸಾಹಿಸಲು ಮತ್ತು ಇತರ ದೇಶಗಳ ಆಟಗಾರರಿಗೆ ಹೋಲಿಸಿದರೆ ವೇತನದ ಅಂತರವನ್ನು ಕಡಿಮೆ ಮಾಡಲು ಅದರ ಕಾರ್ಯತಂತ್ರದ ಭಾಗವಾಗಿ, ಪುರುಷರ ಕೇಂದ್ರ ಒಪ್ಪಂದದ ರಚನೆಯಲ್ಲಿ ಬದಲಾವಣೆಗಳನ್ನು ಆಡಳಿತ ಮಂಡಳಿಯು ಅನುಮೋದಿಸಿದೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಪಿಸಿಬಿಯ ಕೇಂದ್ರ ಒಪ್ಪಂದದಲ್ಲಿ ಬದಲಾವಣೆಗಳು

ಪಿಸಿಬಿಯ ಕೇಂದ್ರ ಒಪ್ಪಂದದ ಹೊಸ ನೀತಿಯ ಅಡಿಯಲ್ಲಿ, ಜುಲೈ 1 ರಿಂದ ಕೆಂಪು ಚೆಂಡು (ಟೆಸ್ಟ್) ಮತ್ತು ಬಿಳಿ ಚೆಂಡಿನ (ODI ಮತ್ತು T20) ಪ್ರತ್ಯೇಕ ಒಪ್ಪಂದಗಳು ಅನ್ವಯವಾಗಲಿವೆ. ಇದರಡಿಯಲ್ಲಿ ಒಪ್ಪಂದದ ಹಣ ಕೂಡ ಹೆಚ್ಚಾಗುತ್ತದೆ. ಇಷ್ಟೇ ಅಲ್ಲ, ಕೇಂದ್ರೀಯ ಗುತ್ತಿಗೆ ಆಟಗಾರರ ಸಂಖ್ಯೆಯನ್ನು 20 ರಿಂದ 33 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೇ, ಪಿಸಿಬಿ ಎಲ್ಲಾ ಮಾದರಿಗಳಲ್ಲಿ ಪಂದ್ಯ ಶುಲ್ಕದಲ್ಲಿ 10 ಪ್ರತಿಶತ ಹೆಚ್ಚಳ ಮತ್ತು ಸಹಾಯಕ ಸಿಬ್ಬಂದಿ ಸದಸ್ಯರ ಪಂದ್ಯ ಶುಲ್ಕದಲ್ಲಿ 50 ರಿಂದ 70 ರಷ್ಟು ಹೆಚ್ಚಳವನ್ನು ಘೋಷಿಸಿದೆ. ನಾಯಕನ ಹೆಚ್ಚುವರಿ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಭತ್ಯೆಯನ್ನೂ ಆರಂಭಿಸಲಾಗಿದೆ.

ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವುದನ್ನು ನಿಲ್ಲಿಸಬೇಕು; ಪಿಸಿಬಿ

ಲಾಹೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಮಾತನಾಡಿ, ವಿದೇಶಿ ಲೀಗ್‌ಗಳಲ್ಲಿ ಆಡಲು ಕೊಡುಗೆಗಳನ್ನು ಪಡೆಯುವ ಪ್ರಸ್ತುತ ಆಟಗಾರರಿಗೆ ಮಂಡಳಿಯು ವಿಶೇಷ ನಿಧಿಯನ್ನು ಸ್ಥಾಪಿಸಿದೆ ಎಂದು ಘೋಷಿಸಿದರು. ನಮ್ಮ ಆಟಗಾರರು ದೇಶದ ಹೊರಗೆ, ವಿದೇಶಿ ಲೀಗ್​ಗಳಲ್ಲಿ ಆಡುವುದನ್ನು ತಪ್ಪಿಸಲು ನಾವು ಬಯಸುತ್ತೇವೆ. ಜೊತೆಗೆ ಆಟಗಾರರು ಈ ಲೀಗ್‌ಗಳಲ್ಲಿ ಆಡದಿರುವುದು ಉತ್ತಮ ಎಂದು ನಾವು ಭಾವಿಸುತ್ತೇವೆ. ಅಗತ್ಯವಿದ್ದರೆ ಅವರಿಗೆ ಗುತ್ತಿಗೆ ಮೊತ್ತದ ಶೇ.50-60ರಷ್ಟು ಹಣ ನೀಡಲು ಸಿದ್ಧರಿದ್ದೇವೆ ಎಂದಿದ್ದಾರೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ