AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs CSK Highlights, IPL 2025: ಚೆನ್ನೈ ವಿರುದ್ಧ 18 ರನ್​ಗಳಿಂದ ಗೆದ್ದ ಪಂಜಾಬ್

ಪೃಥ್ವಿಶಂಕರ
|

Updated on:Apr 08, 2025 | 11:22 PM

Punjab Kings vs Chennai Super Kings Highlights in Kannada: ಐಪಿಎಲ್ 2025 ರ 22 ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಂಜಾಬ್ ಚೆನ್ನೈಗೆ 220 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ಚೆನ್ನೈ ತಂಡ 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಲಷ್ಟೇ ಶಕ್ತವಾಯಿತು.

PBKS vs CSK Highlights, IPL 2025: ಚೆನ್ನೈ ವಿರುದ್ಧ 18 ರನ್​ಗಳಿಂದ ಗೆದ್ದ ಪಂಜಾಬ್
Punjab

ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ತವರಿನಲ್ಲಿ ಮೊದಲ ಗೆಲುವು ಸಾಧಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್, ಕಳೆದ ಪಂದ್ಯದ ಸೋಲಿನ ನಂತರ ಬಲಿಷ್ಠ ಪುನರಾಗಮನ ಮಾಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 18 ರನ್‌ಗಳಿಂದ ಸೋಲಿಸಿತು. ಏಪ್ರಿಲ್ 8 ರ ಭಾನುವಾರ ಮುಲ್ಲನ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ, 24 ವರ್ಷದ ಯುವ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಸ್ಫೋಟಕ ಶತಕ ಗಳಿಸುವ ಮೂಲಕ ಪಂಜಾಬ್ ತಂಡವನ್ನು 219 ರನ್‌ಗಳ ಬೃಹತ್​ ಸ್ಕೋರ್​ಗೆ ಕೊಂಡೊಯ್ದರು. ಈ ಗುರಿ ಬೆನ್ನಟ್ಟಿದ ತಂಡವು ಕೇವಲ 201 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಚೆನ್ನೈ ತಂಡ ಸತತ ನಾಲ್ಕನೇ ಸೋಲನ್ನು ಎದುರಿಸಿದೆ.

LIVE NEWS & UPDATES

The liveblog has ended.
  • 08 Apr 2025 11:22 PM (IST)

    ಪಂಜಾಬ್​ಗೆ 18 ರನ್‌ ಜಯ

    ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್ ತಂಡವು ಚೆನ್ನೈ ತಂಡವನ್ನು 18 ರನ್‌ಗಳಿಂದ ಸೋಲಿಸಿತು. ಈ ಮೂಲಕ ಪಂಜಾಬ್ 3ನೇ ಜಯ ಸಾಧಿಸಿದರೆ, ಸಿಎಸ್​ಕೆ ಸತತ 4ನೇ ಪಂದ್ಯದಲ್ಲಿ ಸೋಲು ಕಂಡಿತು.

  • 08 Apr 2025 11:13 PM (IST)

    ಧೋನಿ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಎಂಎಸ್ ಧೋನಿ ಔಟ್ ಆಗಿದ್ದಾರೆ. ಅವರು 12 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು. ಚೆನ್ನೈ ಗೆಲುವಿಗೆ 5 ಎಸೆತಗಳಲ್ಲಿ 28 ರನ್ ಗಳ ಅವಶ್ಯಕತೆ ಇದೆ.

  • 08 Apr 2025 11:07 PM (IST)

    12 ಎಸೆತಗಳಲ್ಲಿ 43 ರನ್ ಬೇಕು

    ಚೆನ್ನೈ ತಂಡ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದೆ. ಈಗ ಗೆಲ್ಲಲು 12 ಎಸೆತಗಳಲ್ಲಿ 43 ರನ್‌ಗಳು ಬೇಕಾಗಿವೆ.

  • 08 Apr 2025 10:57 PM (IST)

    24 ಎಸೆತಗಳಲ್ಲಿ 68 ರನ್ ಬೇಕು

    16 ಓವರ್‌ಗಳಲ್ಲಿ ಚೆನ್ನೈ 3 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದೆ. ಈಗ ಗೆಲ್ಲಲು 24 ಎಸೆತಗಳಲ್ಲಿ 68 ರನ್‌ಗಳು ಬೇಕಾಗಿವೆ.

  • 08 Apr 2025 10:57 PM (IST)

    ಮೂರನೇ ವಿಕೆಟ್

    ಚೆನ್ನೈ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದೆ. ಶಿವಂ ದುಬೆ 27 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಲಾಕಿ ಫರ್ಗುಸನ್‌ಗೆ ಬಲಿಯಾದರು.

  • 08 Apr 2025 10:56 PM (IST)

    ಕಾನ್ವೇ ಅರ್ಧಶತಕ

    ಡೆವೊನ್ ಕಾನ್ವೇ ಅರ್ಧಶತಕ ಗಳಿಸಿದ್ದಾರೆ. ಇದಕ್ಕಾಗಿ ಅವರು 37 ಎಸೆತಗಳನ್ನು ಎದುರಿಸಿದರು.

  • 08 Apr 2025 10:25 PM (IST)

    60 ಎಸೆತಗಳಲ್ಲಿ 129 ರನ್ ಬೇಕಾಗಿದೆ

    10 ಓವರ್‌ಗಳ ಆಟ ಮುಗಿದಿದೆ. ಚೆನ್ನೈ ತಂಡ 2 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದೆ. ಈಗ ಗೆಲ್ಲಲು 60 ಎಸೆತಗಳಲ್ಲಿ 129 ರನ್‌ಗಳ ಅವಶ್ಯಕತೆಯಿದೆ.

  • 08 Apr 2025 10:24 PM (IST)

    ಎರಡನೇ ವಿಕೆಟ್ ಪತನ

    ರಚಿನ್ ರವೀಂದ್ರ ನಂತರ, ರುತುರಾಜ್ ಗಾಯಕ್ವಾಡ್ ಕೂಡ ವಿಕೆಟ್ ಒಪ್ಪಿಸಿದ್ದಾರೆ. ಲಾಕಿ ಫರ್ಗುಸನ್ ಅವರ ವಿಕೆಟ್ ಪಡೆದರು. ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ವಿಕೆಟ್ ಕಳೆದುಕೊಂಡಿದೆ.

  • 08 Apr 2025 10:04 PM (IST)

    ಚೆನ್ನೈಗೆ ಮೊದಲ ಹೊಡೆತ

    ಚೆನ್ನೈ ತಂಡ ಮೊದಲ ವಿಕೆಟ್ ಕಳೆದುಕೊಂಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ರಚಿನ್ ರವೀಂದ್ರ ಅವರ ವಿಕೆಟ್ ಪಡೆದರು. 7 ಓವರ್‌ಗಳು ಮುಗಿಯುವ ವೇಳೆಗೆ ಚೆನ್ನೈ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ.

  • 08 Apr 2025 10:04 PM (IST)

    50 ರನ್ ದಾಟಿದ ಚೆನ್ನೈ

    ಇಂದಿನ ಪವರ್‌ಪ್ಲೇನಲ್ಲಿ ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಉತ್ತಮ ಆರಂಭವನ್ನು ಮಾಡಿದ್ದಾರೆ. 6 ಓವರ್‌ಗಳ ಅಂತ್ಯಕ್ಕೆ ಚೆನ್ನೈ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿದೆ. ಕಾನ್ವೇ 16 ಎಸೆತಗಳಲ್ಲಿ 22 ರನ್ ಮತ್ತು ರಚಿನ್ 21 ಎಸೆತಗಳಲ್ಲಿ 35 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 08 Apr 2025 09:50 PM (IST)

    ಓವರ್‌ನಲ್ಲಿ 4 ಬೌಂಡರಿ

    ನಾಲ್ಕನೇ ಓವರ್‌ನಲ್ಲಿ ಯಶ್ ಠಾಕೂರ್ 4 ಬೌಂಡರಿಗಳನ್ನು ಹೊಡೆಸಿಕೊಂಡರು. ಡೆವೊನ್ ಕಾನ್ವೇ 1 ಬೌಂಡರಿ ಮತ್ತು ರಚಿನ್ ರವೀಂದ್ರ 3 ಬೌಂಡರಿ ಬಾರಿಸಿ 17 ರನ್ ಗಳಿಸಿದರು. ಚೆನ್ನೈ ತಂಡ 4 ಓವರ್‌ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 39 ರನ್ ಗಳಿಸಿದೆ.

  • 08 Apr 2025 09:50 PM (IST)

    ಚೆನ್ನೈ ನಿಧಾನಗತಿಯ ಆರಂಭ

    220 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ ನಿಧಾನಗತಿಯ ಆರಂಭ ಪಡೆದುಕೊಂಡಿತು. ಮೊದಲ 3 ಓವರ್‌ಗಳಲ್ಲಿ ಅವರು ಕೇವಲ 22 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

  • 08 Apr 2025 09:14 PM (IST)

    ಚೆನ್ನೈಗೆ 220 ರನ್‌ಗಳ ಗುರಿ

    ಪ್ರಿಯಾಂಶ್ ಆರ್ಯ ಅವರ ಶತಕ ಮತ್ತು ಶಶಾಂಕ್ ಸಿಂಗ್ ಅವರ ಅರ್ಧಶತಕದ ನೆರವಿನಿಂದ, ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಮುಂದೆ 220 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಸಿಎಸ್‌ಕೆ ಪರ ಖಲೀಲ್ ಅಹ್ಮದ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಎರಡು ವಿಕೆಟ್ ಪಡೆದರೆ, ಮುಖೇಶ್ ಚೌಧರಿ 1 ವಿಕೆಟ್ ಪಡೆದರು.

  • 08 Apr 2025 09:14 PM (IST)

    200 ರನ್ ದಾಟಿದ ಪಂಜಾಬ್

    ಶಶಾಂಕ್ ಸಿಂಗ್ ಮತ್ತು ಮಾರ್ಕೊ ಯಾನ್ಸೆನ್ 19ನೇ ಓವರ್‌ನಲ್ಲಿ ಇಬ್ಬರೂ ಸೇರಿ 14 ರನ್ ಗಳಿಸಿದರು. ಪಂಜಾಬ್ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ.

  • 08 Apr 2025 09:03 PM (IST)

    ಶಶಾಂಕ್​ಗೆ ಜೀವದಾನ

    17ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಶಶಾಂಕ್ ಸಿಂಗ್ ಅವರ ಸುಲಭ ಕ್ಯಾಚ್ ಅನ್ನು ರಚಿನ್ ರವೀಂದ್ರ ಕೈಬಿಟ್ಟರು. ಈ ಓವರ್‌ನಲ್ಲಿ 12 ರನ್‌ಗಳು ಬಂದವು ಮತ್ತು ಪಂಜಾಬ್ 6 ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳನ್ನು ಗಳಿಸಿತು.

  • 08 Apr 2025 08:45 PM (IST)

    ಪ್ರಿಯಾಂಶ್ ಆರ್ಯ ಔಟ್

    ಪ್ರಿಯಾಂಶ್ ಆರ್ಯ ಭರ್ಜರಿ ಶತಕ ಬಾರಿಸಿ ಔಟಾದರು. ಪ್ರಿಯಾಂಶ್ 42 ಎಸೆತಗಳಲ್ಲಿ 103 ರನ್ ಗಳಿಸಿದರು. ಪಂಜಾಬ್ 14 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದೆ.

  • 08 Apr 2025 08:45 PM (IST)

    39 ಎಸೆತಗಳಲ್ಲಿ ಶತಕ

    ಪ್ರಿಯಾಂಶ್ ಆರ್ಯ ಕೇವಲ 39 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ನಾಲ್ಕನೇ ವೇಗದ ಶತಕವಾಗಿದೆ.

  • 08 Apr 2025 08:32 PM (IST)

    100 ರನ್ ದಾಟಿದ ಪಂಜಾಬ್

    14ನೇ ಓವರ್‌ನಲ್ಲಿ ನೂರ್ ಅಹ್ಮದ್ 14 ರನ್ ನೀಡಿದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದೆ. ಪ್ರಿಯಾಂಶ್ ಆರ್ಯ 32 ಎಸೆತಗಳಲ್ಲಿ 67 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ಶಶಾಂಕ್ ಸಿಂಗ್ 11 ಎಸೆತಗಳಲ್ಲಿ 15 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 08 Apr 2025 08:26 PM (IST)

    ಮ್ಯಾಕ್ಸ್​ವೆಲ್ ಮತ್ತೆ ಫೇಲ್

    8ನೇ ಓವರ್‌ನಲ್ಲಿ ಅಶ್ವಿನ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ಅವರು ಎರಡು ವಿಕೆಟ್‌ಗಳನ್ನು ಪಡೆದರು. ಮೊದಲು ನೆಹಾಲ್ ವಧೇರಾ ಅವರನ್ನು ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

  • 08 Apr 2025 08:23 PM (IST)

    ನಾಲ್ಕನೇ ವಿಕೆಟ್

    ಆರ್ ಅಶ್ವಿನ್ ನೆಹಾಲ್ ವಧೇರಾ ಅವರ ವಿಕೆಟ್ ಪಡೆದರು. ಅವರು 7 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಪಂಜಾಬ್ 4 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ.

  • 08 Apr 2025 08:23 PM (IST)

    ಪ್ರಿಯಾಂಶ್ ಬಿರುಸಿನ ಅರ್ಧ ಶತಕ

    ಪ್ರಿಯಾಂಶ್ ಆರ್ಯ ಭರ್ಜರಿ ಅರ್ಧಶತಕ ಗಳಿಸಿದ್ದಾರೆ. ಅವರು ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಇದು ಈ ಋತುವಿನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ ಒಬ್ಬರಿಂದ ದಾಖಲಾದ ಅತ್ಯಂತ ವೇಗದ ಅರ್ಧಶತಕವಾಗಿದೆ.

  • 08 Apr 2025 08:22 PM (IST)

    ಮೂರನೇ ವಿಕೆಟ್

    ಖಲೀಲ್ ಅಹ್ಮದ್ ಮಾರ್ಕಸ್ ಸ್ಟೊಯಿನಿಸ್ ವಿಕೆಟ್ ಪಡೆದರು. ಪಂಜಾಬ್ ಕಿಂಗ್ಸ್ ತಂಡ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದೆ. ಖಲೀಲ್ ಮೂರೂ ವಿಕೆಟ್‌ಗಳನ್ನು ಕಬಳಿಸಿದ್ದಾರೆ. 5 ಓವರ್‌ಗಳು ಮುಗಿಯುವ ವೇಳೆಗೆ ಪಂಜಾಬ್ 3 ವಿಕೆಟ್‌ಗಳ ನಷ್ಟಕ್ಕೆ 54 ರನ್ ಗಳಿಸಿದೆ.

  • 08 Apr 2025 08:22 PM (IST)

    ಪ್ರಿಯಾಂಶ್ ಬ್ಯಾಟಿಂಗ್

    ಪ್ರಿಯಾಂಶ್ ಆರ್ಯ ಅಮೋಘ ಬ್ಯಾಟಿಂಗ್ ಮಾಡಿದ್ದಾರೆ. 3 ಬೌಂಡರಿಗಳನ್ನು ಬಾರಿಸಿ ಒಟ್ಟು 14 ರನ್ ಗಳಿಸಿದರು. ಇದರೊಂದಿಗೆ ಅವರು 13 ಎಸೆತಗಳಲ್ಲಿ 35 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರ ತಂಡವು 4 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 46 ರನ್‌ಗಳನ್ನು ಗಳಿಸಿದೆ.

  • 08 Apr 2025 08:21 PM (IST)

    ಅಯ್ಯರ್ ಮತ್ತೆ ವಿಫಲ

    ಶ್ರೇಯಸ್ ಅಯ್ಯರ್ ವಿಕೆಟ್ ಪಡೆಯುವ ಮೂಲಕ ಖಲೀಲ್ ಅಹ್ಮದ್ ಪಂಜಾಬ್‌ಗೆ ಮತ್ತೊಂದು ಹೊಡೆತ ನೀಡಿದ್ದಾರೆ. ಅಯ್ಯರ್ 7 ಎಸೆತಗಳಲ್ಲಿ 9 ರನ್ ಗಳಿಸಿದರು. 3 ಓವರ್‌ಗಳ ಅಂತ್ಯಕ್ಕೆ ಪಂಜಾಬ್ 2 ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದೆ.

  • 08 Apr 2025 07:45 PM (IST)

    ಮೊದಲ ವಿಕೆಟ್ ಪತನ

    ಪಂಜಾಬ್ ಕಿಂಗ್ಸ್ ತಂಡವು ಮೊದಲ ವಿಕೆಟ್ ಕಳೆದುಕೊಂಡಿದೆ. ಎರಡನೇ ಓವರ್‌ನಲ್ಲಿ ಪ್ರಭ್‌ಸಿಮ್ರಾನ್ ಸಿಂಗ್ (0) ಬೌಲ್ಡ್ ಆದರು.

  • 08 Apr 2025 07:44 PM (IST)

    ಮೊದಲ ಓವರ್‌ನಲ್ಲಿ 2 ಸಿಕ್ಸರ್‌

    ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಪ್ರಿಯಾಂಶ್, ಆ ಓವರ್‌ನ ಐದನೇ ಎಸೆತದಲ್ಲಿಯೂ ಸಿಕ್ಸರ್ ಬಾರಿಸಿದರು. ಈ ರೀತಿಯಾಗಿ ಮೊದಲ ಓವರ್‌ನಲ್ಲೇ 17 ರನ್‌ಗಳು ಬಂದವು.

  • 08 Apr 2025 07:35 PM (IST)

    ಪಂಜಾಬ್ ಕಿಂಗ್ಸ್

    ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಯಾನ್ಸೆನ್, ಅರ್ಶ್‌ದೀಪ್ ಸಿಂಗ್, ಲಾಕಿ ಫರ್ಗುಸನ್, ಯುಜ್ವೇಂದ್ರ ಚಾಹಲ್.

  • 08 Apr 2025 07:34 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ರಚಿನ್ ರವೀಂದ್ರ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್ (ನಾಯಕ), ವಿಜಯ್ ಶಂಕರ್, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮುಖೇಶ್ ಚೌಧರಿ, ಖಲೀಲ್ ಅಹ್ಮದ್, ಮತಿಶಾ ಪತಿರಾನ.

  • 08 Apr 2025 07:04 PM (IST)

    ಟಾಸ್ ಗೆದ್ದ ಪಂಬಾಜ್

    ಟಾಸ್ ಗೆದ್ದ ಪಂಬಾಜ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Published On - Apr 08,2025 7:03 PM

Follow us
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ