AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravindra Jadeja: ಬಿಸಿಸಿಐ ನಿಯಮ ಉಲ್ಲಂಘಿಸಿದ ರವೀಂದ್ರ ಜಡೇಜಾ: ಮಂಡಳಿಯಿಂದ ನಿಷೇಧ ಸಾಧ್ಯತೆ

England vs India Second Test: ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಜಡೇಜಾ 89 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು ಮತ್ತು ನಾಯಕ ಶುಭ್ಮನ್ ಗಿಲ್ ಅವರೊಂದಿಗೆ ಆರನೇ ವಿಕೆಟ್‌ಗೆ 203 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಎರಡನೇ ದಿನದ ಆಟ ಶುರು ಆಗುವುದಕ್ಕೂ ಮುನ್ನ, ಭಾರತೀಯ ತಂಡವು ತಮ್ಮ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಬರುತ್ತಿದ್ದಾಗ, ಜಡೇಜಾ ಬಿಸಿಸಿಐ ಮಾಡಿದ ನಿಯಮವನ್ನು ನಿರ್ಲಕ್ಷಿಸಿದರು.

Ravindra Jadeja: ಬಿಸಿಸಿಐ ನಿಯಮ ಉಲ್ಲಂಘಿಸಿದ ರವೀಂದ್ರ ಜಡೇಜಾ: ಮಂಡಳಿಯಿಂದ ನಿಷೇಧ ಸಾಧ್ಯತೆ
Ravindra Jadeja
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 16, 2025 | 6:12 PM

Share

ಬೆಂಗಳೂರು (ಜು. 04): ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ, ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ದಿನದ ಆಟ ಆರಂಭವಾಗುವ ಮೊದಲೇ ದೊಡ್ಡ ತಪ್ಪು ಮಾಡಿದರು. ಈ ಟೆಸ್ಟ್ ಪಂದ್ಯದಲ್ಲಿ ಜಡೇಜಾ 89 ರನ್ ಗಳಿಸಿ ತಂಡಕ್ಕೆ ನರವಾದರೂ, ಅವರು ಬಿಸಿಸಿಐ ನಿಯಮವನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ನಂತರ, ಬಿಸಿಸಿಐ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಳಲಾಗಿತ್ತು. ಆದಾಗ್ಯೂ, ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಎರಡನೇ ದಿನದ ಆಟ ಪ್ರಾರಂಭವಾಗುವ ಮೊದಲು, ಜಡೇಜಾ ಒಂದು ದೊಡ್ಡ ನಿಯಮವನ್ನು ಮುರಿದರು, ಇದಕ್ಕಾಗಿ ಮಂಡಳಿಯಿಂದ ಶಿಕ್ಷೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಜಡೇಜಾ 89 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು ಮತ್ತು ನಾಯಕ ಶುಭ್​ಮನ್ ಗಿಲ್ ಅವರೊಂದಿಗೆ ಆರನೇ ವಿಕೆಟ್‌ಗೆ 203 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಎರಡನೇ ದಿನದ ಆಟ ಶುರು ಆಗುವುದಕ್ಕೂ ಮುನ್ನ, ಭಾರತೀಯ ತಂಡವು ತಮ್ಮ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಬರುತ್ತಿದ್ದಾಗ, ಜಡೇಜಾ ಬಿಸಿಸಿಐ ಮಾಡಿದ ನಿಯಮವನ್ನು ನಿರ್ಲಕ್ಷಿಸಿದರು.

ಭಾರತದ 2024-25 ಆಸ್ಟ್ರೇಲಿಯಾ ಪ್ರವಾಸದ ನಂತರ ಜಾರಿಗೆ ತರಲಾದ ಬಿಸಿಸಿಐ ಶಿಷ್ಟಾಚಾರವನ್ನು ರವೀಂದ್ರ ಜಡೇಜಾ ಉಲ್ಲಂಘಿಸಿದರು. ಈ ಶಿಷ್ಟಾಚಾರದ ಪ್ರಕಾರ, ಎಲ್ಲಾ ಆಟಗಾರರು ತಂಡದ ಬಸ್‌ನಲ್ಲಿ ಒಟ್ಟಿಗೆ ಮೈದಾನಕ್ಕೆ ಮತ್ತು ಹೊರಗೆ ಪ್ರಯಾಣಿಸಬೇಕಾಗುತ್ತದೆ, ಇದರಲ್ಲಿ ಯಾವುದೇ ವೈಯಕ್ತಿಕ ಚಲನೆಗೆ ಅವಕಾಶವಿಲ್ಲ, ಆದರೆ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಜಡೇಜಾ ತಂಡದ ಬಸ್‌ನಲ್ಲಿ ಕ್ರೀಡಾಂಗಣವನ್ನು ತಲುಪಲಿಲ್ಲ. ಅವರು ಇಲ್ಲಿಗೆ ಒಬ್ಬಂಟಿಯಾಗಿ ಬಂದ ಮೊದಲಿಗರು. ಅಂತಹ ಪರಿಸ್ಥಿತಿಯಲ್ಲಿ, ಜಡೇಜಾ ಎಸ್‌ಒಪಿಯನ್ನು ಉಲ್ಲಂಘಿಸಿದರು. ಉಳಿದ ಆಟಗಾರರು ಬರುವ ಮೊದಲು ಅವರು ಎಡ್ಜ್‌ಬಾಸ್ಟನ್ ತಲುಪಿದ್ದರು.

ಇದನ್ನೂ ಓದಿ
Image
ಎರಡು ಎಸೆತಗಳಲ್ಲಿ ಇಬ್ಬರು ಬ್ಯಾಟರ್ಸ್ ಅನ್ನು ಪೆವಿಲಿಯನ್​ಗೆ ಅಟ್ಟಿದ ಆಕಾಶ್
Image
ಎಡ್ಜ್‌ಬಾಸ್ಟನ್ ಟೆಸ್ಟ್; ಭಾರತಕ್ಕೆ 2ನೇ ದಿನದ ಗೌರವ
Image
ಭಾರತ ವಿರುದ್ಧದ 3ನೇ ಟಿ20 ಪಂದ್ಯಕ್ಕೆ ಇಂಗ್ಲೆಂಡ್‌ ನಾಯಕಿ ಅಲಭ್ಯ
Image
ಒಂದೇ ಇನ್ನಿಂಗ್ಸ್​ನಲ್ಲಿ ಕೊಹ್ಲಿಯ 4 ಶ್ರೇಷ್ಠ ದಾಖಲೆಗಳನ್ನು ಮುರಿದ ಗಿಲ್

IND vs ENG 2nd Test: ಮೊದಲ ಟೆಸ್ಟ್​ನಲ್ಲಿ ಶತಕ ಸಿಡಿಸಿದ್ದ ಬ್ಯಾಟರ್ಸ್ ಅನ್ನು ಎರಡು ಎಸೆತದಲ್ಲಿ ಪೆವಿಲಿಯನ್​ಗೆ ಅಟ್ಟಿದ ಆಕಾಶ್ ದೀಪ್

ಆದರೆ, ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜಡೇಜಾ ಈ ನಿಯಮವನ್ನು ಮುರಿದಿದ್ದಾರೆ. ಎರಡನೇ ದಿನದ ಆಟ ಮುಗಿದ ನಂತರ, ಟೀಮ್ ಇಂಡಿಯಾ ಪರವಾಗಿ ಜಡೇಜಾ ಪತ್ರಿಕಾಗೋಷ್ಠಿಗೆ ಬಂದು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ”ಚೆಂಡು ಹೊಸದಾಗಿರುವುದರಿಂದ, ನಾನು ಹೆಚ್ಚು ಸಮಯ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡಬೇಕೆಂದು ಭಾವಿಸಿದೆ.. ಏಕೆಂದರೆ ನಾನು ಹೊಸ ಚೆಂಡನ್ನು ಚೆನ್ನಾಗಿ ಆಡಿದರೆ, ಬ್ಯಾಟಿಂಗ್ ಸ್ವಲ್ಪ ಸುಲಭವಾಗುತ್ತದೆ” ಎಂದು ಹೇಳಿದರು. ಹೀಗಾಗಿ ಎರಡನೇ ದಿನ ಬ್ಯಾಟಿಂಗ್ ಮಾಡಲು ಸಹಾಯ ಆಗಲೆಂದು ಒಬ್ಬನೇ ಮೈದಾನಕ್ಕೆ ಬಂದೆ ಎಂದು ಹೇಳಿದ್ದಾರೆ. ಜಡೇಜಾ ಅವರ ಈ ಪ್ಲ್ಯಾನ್ ಯಶಸ್ವಿಯಾಯಿತು ಕೂಡ. ”ಊಟದ ವಿರಾಮದವರೆಗೆ ಬ್ಯಾಟಿಂಗ್ ಮಾಡಬಹುದು ಎಂದು ಯೋಚಿಸಿದ್ದೆ. ನೀವು ಬ್ಯಾಟ್‌ನಿಂದ ತಂಡಕ್ಕೆ ಕೊಡುಗೆ ನೀಡಿದಾಗ, ಅದು ತುಂಬಾ ಒಳ್ಳೆಯದು ಎಂದು ಅನಿಸುತ್ತದೆ. ನಾನು ಬ್ಯಾಟಿಂಗ್ ಮಾಡಲು ಬಂದಾಗ, ತಂಡವು 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು ಮತ್ತು ಅಂತಹ ಪರಿಸ್ಥಿತಿಯಲ್ಲಿ ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು, ಅದು ನನಗೆ ಸಂತೋಷವಾಗಿದೆ” ಎಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:10 am, Fri, 4 July 25